Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಮಂಗಳೂರಿನಲ್ಲಿ ಥೇಟ್ ಸಿನಿಮಾ ಸ್ಟೈಲ್ನಲ್ಲಿ KSRTC ಬಸ್ನ ಹಿಮ್ಮೆಟ್ಟಿಸಿದ ವೀಡಿಯೋ ವೈರಲ್
ಮಂಗಳೂರಿನಲ್ಲಿ ಒಬ್ಬರು ಕೆಎಸ್ ಆರ್ಟಿಸಿ ಡ್ರೈವರ್ಗೆ ತಕ್ಕ ಪಾಠ ಕಲಿಸುವ ಮೂಲಕ ಹೀರೋ ಆಗಿದ್ದಾರೆ. ರೋಡ್ನಲ್ಲಿ ಕುರ್ಚಿ ಹಾಕಿ ಕೂತು KSRTC ಬಸ್ ಅನ್ನು ಹಿಮ್ಮೆಟ್ಟಿಸುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಅವರು ಈ ರೀತಿ ವರ್ತಿಸಿದ್ದು ಅವರಿಗಾಗಿ ಅಲ್ಲ ಜನರ ಕಷ್ಟವನ್ನು ನೀಗಿಸಲು ಏಕಾಂಗಿಯಾಗಿ ಹೋರಾಡಿದ್ದಾರೆ, ಈ ದೃಶ್ಯ ನೋಡುತ್ತಿದ್ದಾರೆ ನಾವೆಲ್ಲಾ ಹೀಗಿರಬೇಕು, ಸಮಸ್ಯೆ ಅಂತ ಕೂರುವ ಬದಲು ಎದುರಿಸಬೇಕು ಎಂದನಿಸದೆ ಇರಲ್ಲ..

ವಿಷಯ ಏನಪ್ಪಾ ಅಂದರೆ ಮಂಗಳೂರು ಕಾಸರಗೋಡು ಹೋಗುವ KSRTC ಬಸ್ ಸರ್ವೀಸ್ ರೋಡ್ನಲ್ಲಿ ಬರದೆ ಹೆದ್ದಾರಿಯಲ್ಲಿ ಹೋಗಿ ಬಿಡುತ್ತಿತ್ತು, ಆಗಾಗ ಈ ರೀತಿ ಆಗುತ್ತಿದ್ದರಿಂದ ಬಸ್ನಲ್ಲಿ ಓಡಾಡುವವರಿಗೆ ತೊಂದರೆಯಾಗುತ್ತಿತ್ತು.ಈ ಕುರಿತು ಜನರು ತಮ್ಮ ಅಸಮಧಾನ ಹಲವು ಬಾರಿ ತೋಡಿಕೊಂಡಿದ್ದರೂ KSRTC ಬಸ್ನವರು ಮಾತ್ರ ಹೆದ್ದಾರಿಯಲ್ಲಿಯೇ ಹೋಗುತ್ತಿದ್ದರು. ಸರ್ವೀಸ್ ರೋಡ್ನಲ್ಲಿ ಬಸ್ಗಾಗಿ ಕಾಯುತ್ತಿದ್ದವರು ಬಸ್ ಬಂದಿಲ್ಲ ಅಂತ ಗೊಣಗುತ್ತಾ ನಿಲ್ಲುವ ಪರಿಸ್ಥಿತಿ ಇತ್ತು.
ಬಸ್ ಡ್ರೈವರ್ಗಳು ಈ ರೀತಿ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದನ್ನು ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಹಸೈನಾರ್ ಎಂಬವರು ಗಮನಿಸಿದ್ದರು, ಬಸ್ನವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತಿರ್ಮಾನಿಸಿ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ.
ಬಸ್ ಬರುತ್ತಿದ್ದಾಗ ರಸ್ತೆ ಮಧ್ಯ ಸ್ಟೂಲ್ ಹಾಕಿ ಕೂತು ಬಸ್ನ ಮಾರ್ಗ ತಡೆದಿದ್ದಾರೆ. ಬಸ್ನವರಿಗೆ ಬೇರೆ ವಿಧಿ ಕಾಣದೆ ಬಸ್ ಅನ್ನು ರಿವರ್ಸ್ ತೆಗೆದುಕೊಂಡಾಗಿ ಸರ್ವೀಸ್ ರೋಡ್ನಲ್ಲಿ ಹೋಗಬೇಕಾಯ್ತು. ಈ ದೃಶ್ಯ ಮಾತ್ರ ಥೀಟ್ ಸಿನಿಮಾ ಶೈಲಿಯಂತೆಯೇ ಇದೆ. ಬಸ್ ರಿವರ್ಸ್ನಲ್ಲಿ ಹೋಗುತ್ತಿದ್ದಾಗ ಅವರು ಮುಂದೆ ಮುಂದೆ ಹೋಗುತ್ತಿದ್ದರು. ಈ ದೃಶ್ಯ ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ಜನರು ಸಮಸ್ಯೆ ಬಗೆಹರಿಯಲಿ ಎಂದು ಕೂತರೆ ಆಗಲ್ಲ, ತಪ್ಪು ಕಂಡಲ್ಲಿ ಪ್ರತಿಭಟಿಸಿದರೆ ಮಾತ್ರ ಸರಿಯಾಗುವುದು.
ಈ ವಿಷಯಕ್ಕೆ ಹಸೈನಾರ್ ಅವರಿಗೆ ಮೆಚ್ಚುಗೆ ಸೂಚಿಸಲೇಬೇಕು, KSRTC ಎಂಬ ಸಾರ್ವಜನಿಕ ಬಸ್ ಇರುವುದು ಜನರಿಗಾಗಿ ಅದು ಸಾಮಾನ್ಯ ಜನರಿಗಾಗಿ. ಅಂಥ ಬಸ್ ಸರ್ವೀಸ್ ರೋಡ್ನಲ್ಲಿ ಹೋಗದೆ ಹೆದ್ದಾರಿಯಲ್ಲಿ ಹೋದರೆ ಜನಸಾಮಾನ್ಯರು ಏನು ಮಾಡಬೇಕು? ಸರಿಯಾಗಿಯೇ ಪಾಠ ಕಲಿಸಿದ್ದಾರೆ ಅಲ್ವಾ?



Click it and Unblock the Notifications