Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಮಂಗಳೂರಿನಲ್ಲಿ ಥೇಟ್ ಸಿನಿಮಾ ಸ್ಟೈಲ್ನಲ್ಲಿ KSRTC ಬಸ್ನ ಹಿಮ್ಮೆಟ್ಟಿಸಿದ ವೀಡಿಯೋ ವೈರಲ್
ಮಂಗಳೂರಿನಲ್ಲಿ ಒಬ್ಬರು ಕೆಎಸ್ ಆರ್ಟಿಸಿ ಡ್ರೈವರ್ಗೆ ತಕ್ಕ ಪಾಠ ಕಲಿಸುವ ಮೂಲಕ ಹೀರೋ ಆಗಿದ್ದಾರೆ. ರೋಡ್ನಲ್ಲಿ ಕುರ್ಚಿ ಹಾಕಿ ಕೂತು KSRTC ಬಸ್ ಅನ್ನು ಹಿಮ್ಮೆಟ್ಟಿಸುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಅವರು ಈ ರೀತಿ ವರ್ತಿಸಿದ್ದು ಅವರಿಗಾಗಿ ಅಲ್ಲ ಜನರ ಕಷ್ಟವನ್ನು ನೀಗಿಸಲು ಏಕಾಂಗಿಯಾಗಿ ಹೋರಾಡಿದ್ದಾರೆ, ಈ ದೃಶ್ಯ ನೋಡುತ್ತಿದ್ದಾರೆ ನಾವೆಲ್ಲಾ ಹೀಗಿರಬೇಕು, ಸಮಸ್ಯೆ ಅಂತ ಕೂರುವ ಬದಲು ಎದುರಿಸಬೇಕು ಎಂದನಿಸದೆ ಇರಲ್ಲ..

ವಿಷಯ ಏನಪ್ಪಾ ಅಂದರೆ ಮಂಗಳೂರು ಕಾಸರಗೋಡು ಹೋಗುವ KSRTC ಬಸ್ ಸರ್ವೀಸ್ ರೋಡ್ನಲ್ಲಿ ಬರದೆ ಹೆದ್ದಾರಿಯಲ್ಲಿ ಹೋಗಿ ಬಿಡುತ್ತಿತ್ತು, ಆಗಾಗ ಈ ರೀತಿ ಆಗುತ್ತಿದ್ದರಿಂದ ಬಸ್ನಲ್ಲಿ ಓಡಾಡುವವರಿಗೆ ತೊಂದರೆಯಾಗುತ್ತಿತ್ತು.ಈ ಕುರಿತು ಜನರು ತಮ್ಮ ಅಸಮಧಾನ ಹಲವು ಬಾರಿ ತೋಡಿಕೊಂಡಿದ್ದರೂ KSRTC ಬಸ್ನವರು ಮಾತ್ರ ಹೆದ್ದಾರಿಯಲ್ಲಿಯೇ ಹೋಗುತ್ತಿದ್ದರು. ಸರ್ವೀಸ್ ರೋಡ್ನಲ್ಲಿ ಬಸ್ಗಾಗಿ ಕಾಯುತ್ತಿದ್ದವರು ಬಸ್ ಬಂದಿಲ್ಲ ಅಂತ ಗೊಣಗುತ್ತಾ ನಿಲ್ಲುವ ಪರಿಸ್ಥಿತಿ ಇತ್ತು.
ಬಸ್ ಡ್ರೈವರ್ಗಳು ಈ ರೀತಿ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದನ್ನು ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಹಸೈನಾರ್ ಎಂಬವರು ಗಮನಿಸಿದ್ದರು, ಬಸ್ನವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತಿರ್ಮಾನಿಸಿ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ.
ಬಸ್ ಬರುತ್ತಿದ್ದಾಗ ರಸ್ತೆ ಮಧ್ಯ ಸ್ಟೂಲ್ ಹಾಕಿ ಕೂತು ಬಸ್ನ ಮಾರ್ಗ ತಡೆದಿದ್ದಾರೆ. ಬಸ್ನವರಿಗೆ ಬೇರೆ ವಿಧಿ ಕಾಣದೆ ಬಸ್ ಅನ್ನು ರಿವರ್ಸ್ ತೆಗೆದುಕೊಂಡಾಗಿ ಸರ್ವೀಸ್ ರೋಡ್ನಲ್ಲಿ ಹೋಗಬೇಕಾಯ್ತು. ಈ ದೃಶ್ಯ ಮಾತ್ರ ಥೀಟ್ ಸಿನಿಮಾ ಶೈಲಿಯಂತೆಯೇ ಇದೆ. ಬಸ್ ರಿವರ್ಸ್ನಲ್ಲಿ ಹೋಗುತ್ತಿದ್ದಾಗ ಅವರು ಮುಂದೆ ಮುಂದೆ ಹೋಗುತ್ತಿದ್ದರು. ಈ ದೃಶ್ಯ ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ಜನರು ಸಮಸ್ಯೆ ಬಗೆಹರಿಯಲಿ ಎಂದು ಕೂತರೆ ಆಗಲ್ಲ, ತಪ್ಪು ಕಂಡಲ್ಲಿ ಪ್ರತಿಭಟಿಸಿದರೆ ಮಾತ್ರ ಸರಿಯಾಗುವುದು.
ಈ ವಿಷಯಕ್ಕೆ ಹಸೈನಾರ್ ಅವರಿಗೆ ಮೆಚ್ಚುಗೆ ಸೂಚಿಸಲೇಬೇಕು, KSRTC ಎಂಬ ಸಾರ್ವಜನಿಕ ಬಸ್ ಇರುವುದು ಜನರಿಗಾಗಿ ಅದು ಸಾಮಾನ್ಯ ಜನರಿಗಾಗಿ. ಅಂಥ ಬಸ್ ಸರ್ವೀಸ್ ರೋಡ್ನಲ್ಲಿ ಹೋಗದೆ ಹೆದ್ದಾರಿಯಲ್ಲಿ ಹೋದರೆ ಜನಸಾಮಾನ್ಯರು ಏನು ಮಾಡಬೇಕು? ಸರಿಯಾಗಿಯೇ ಪಾಠ ಕಲಿಸಿದ್ದಾರೆ ಅಲ್ವಾ?



Click it and Unblock the Notifications