Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಂಗಳೂರಿನಲ್ಲಿ ಥೇಟ್ ಸಿನಿಮಾ ಸ್ಟೈಲ್ನಲ್ಲಿ KSRTC ಬಸ್ನ ಹಿಮ್ಮೆಟ್ಟಿಸಿದ ವೀಡಿಯೋ ವೈರಲ್
ಮಂಗಳೂರಿನಲ್ಲಿ ಒಬ್ಬರು ಕೆಎಸ್ ಆರ್ಟಿಸಿ ಡ್ರೈವರ್ಗೆ ತಕ್ಕ ಪಾಠ ಕಲಿಸುವ ಮೂಲಕ ಹೀರೋ ಆಗಿದ್ದಾರೆ. ರೋಡ್ನಲ್ಲಿ ಕುರ್ಚಿ ಹಾಕಿ ಕೂತು KSRTC ಬಸ್ ಅನ್ನು ಹಿಮ್ಮೆಟ್ಟಿಸುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಅವರು ಈ ರೀತಿ ವರ್ತಿಸಿದ್ದು ಅವರಿಗಾಗಿ ಅಲ್ಲ ಜನರ ಕಷ್ಟವನ್ನು ನೀಗಿಸಲು ಏಕಾಂಗಿಯಾಗಿ ಹೋರಾಡಿದ್ದಾರೆ, ಈ ದೃಶ್ಯ ನೋಡುತ್ತಿದ್ದಾರೆ ನಾವೆಲ್ಲಾ ಹೀಗಿರಬೇಕು, ಸಮಸ್ಯೆ ಅಂತ ಕೂರುವ ಬದಲು ಎದುರಿಸಬೇಕು ಎಂದನಿಸದೆ ಇರಲ್ಲ..

ವಿಷಯ ಏನಪ್ಪಾ ಅಂದರೆ ಮಂಗಳೂರು ಕಾಸರಗೋಡು ಹೋಗುವ KSRTC ಬಸ್ ಸರ್ವೀಸ್ ರೋಡ್ನಲ್ಲಿ ಬರದೆ ಹೆದ್ದಾರಿಯಲ್ಲಿ ಹೋಗಿ ಬಿಡುತ್ತಿತ್ತು, ಆಗಾಗ ಈ ರೀತಿ ಆಗುತ್ತಿದ್ದರಿಂದ ಬಸ್ನಲ್ಲಿ ಓಡಾಡುವವರಿಗೆ ತೊಂದರೆಯಾಗುತ್ತಿತ್ತು.ಈ ಕುರಿತು ಜನರು ತಮ್ಮ ಅಸಮಧಾನ ಹಲವು ಬಾರಿ ತೋಡಿಕೊಂಡಿದ್ದರೂ KSRTC ಬಸ್ನವರು ಮಾತ್ರ ಹೆದ್ದಾರಿಯಲ್ಲಿಯೇ ಹೋಗುತ್ತಿದ್ದರು. ಸರ್ವೀಸ್ ರೋಡ್ನಲ್ಲಿ ಬಸ್ಗಾಗಿ ಕಾಯುತ್ತಿದ್ದವರು ಬಸ್ ಬಂದಿಲ್ಲ ಅಂತ ಗೊಣಗುತ್ತಾ ನಿಲ್ಲುವ ಪರಿಸ್ಥಿತಿ ಇತ್ತು.
ಬಸ್ ಡ್ರೈವರ್ಗಳು ಈ ರೀತಿ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದನ್ನು ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಹಸೈನಾರ್ ಎಂಬವರು ಗಮನಿಸಿದ್ದರು, ಬಸ್ನವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತಿರ್ಮಾನಿಸಿ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ.
ಬಸ್ ಬರುತ್ತಿದ್ದಾಗ ರಸ್ತೆ ಮಧ್ಯ ಸ್ಟೂಲ್ ಹಾಕಿ ಕೂತು ಬಸ್ನ ಮಾರ್ಗ ತಡೆದಿದ್ದಾರೆ. ಬಸ್ನವರಿಗೆ ಬೇರೆ ವಿಧಿ ಕಾಣದೆ ಬಸ್ ಅನ್ನು ರಿವರ್ಸ್ ತೆಗೆದುಕೊಂಡಾಗಿ ಸರ್ವೀಸ್ ರೋಡ್ನಲ್ಲಿ ಹೋಗಬೇಕಾಯ್ತು. ಈ ದೃಶ್ಯ ಮಾತ್ರ ಥೀಟ್ ಸಿನಿಮಾ ಶೈಲಿಯಂತೆಯೇ ಇದೆ. ಬಸ್ ರಿವರ್ಸ್ನಲ್ಲಿ ಹೋಗುತ್ತಿದ್ದಾಗ ಅವರು ಮುಂದೆ ಮುಂದೆ ಹೋಗುತ್ತಿದ್ದರು. ಈ ದೃಶ್ಯ ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ಜನರು ಸಮಸ್ಯೆ ಬಗೆಹರಿಯಲಿ ಎಂದು ಕೂತರೆ ಆಗಲ್ಲ, ತಪ್ಪು ಕಂಡಲ್ಲಿ ಪ್ರತಿಭಟಿಸಿದರೆ ಮಾತ್ರ ಸರಿಯಾಗುವುದು.
ಈ ವಿಷಯಕ್ಕೆ ಹಸೈನಾರ್ ಅವರಿಗೆ ಮೆಚ್ಚುಗೆ ಸೂಚಿಸಲೇಬೇಕು, KSRTC ಎಂಬ ಸಾರ್ವಜನಿಕ ಬಸ್ ಇರುವುದು ಜನರಿಗಾಗಿ ಅದು ಸಾಮಾನ್ಯ ಜನರಿಗಾಗಿ. ಅಂಥ ಬಸ್ ಸರ್ವೀಸ್ ರೋಡ್ನಲ್ಲಿ ಹೋಗದೆ ಹೆದ್ದಾರಿಯಲ್ಲಿ ಹೋದರೆ ಜನಸಾಮಾನ್ಯರು ಏನು ಮಾಡಬೇಕು? ಸರಿಯಾಗಿಯೇ ಪಾಠ ಕಲಿಸಿದ್ದಾರೆ ಅಲ್ವಾ?



Click it and Unblock the Notifications