Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಂಚ ರಾಜ್ಯ ಚುನಾವಣೆ ಫಲಿತಾಂಶ 2023: ಈ 5 ರಾಜ್ಯಗಳ ಕುರಿತ ತುಂಬಾ ಆಸಕ್ತಿಕರವಾದ ಸಂಗತಿಗಳಿವು
ಭಾರತದಲ್ಲಿ ಇದೀಗ ಚುನಾವಣೆಯ ಕಾವೇರಿದೆ. ಭಾರತದ ಪಂಚ ರಾಜ್ಯಗಳೆಂದು ಗುರುತಿಸಲ್ಪಟ್ಟಿರುವ ತೆಲಂಗಾಣ, ರಾಜಾಸ್ಥಾನ, ಛತ್ತೀಸ್ಗಢ, ಮಿಜೋರಾಂ, ಮಧ್ಯಪ್ರದೇಶದಲ್ಲಿ ಇಂದು ಚುನಾವಣೆಯ ಫಲಿತಾಂಶದ ದಿನ. ನಾವಿಲ್ಲಿ ಈ ಪಂಚ ರಾಜ್ಯಗಳ ಕುರಿತ ಆಸಕ್ತಿಕರ ಸಂಗತಿಗಳಿವು ನೋಡಿ:

ಮಿಜೋರಾಂನ ಆಸಕ್ತಿಕರ ಸಂಗತಿಗಳು
* ಮಿಜೋರಾಂನಲ್ಲಿ ವಿವಿಧ ವರ್ಗದ ಬುಡಕಟ್ಟಿನ ಜನರು ವಾಸ ಮಾಡುತ್ತಿದ್ದಾರೆ.
* ಬಿದಿರಿನ ಡ್ಯಾನ್ಸ್ (ಚೆರಾ ನೃತ್ಯ) ಅವರ ಸಾಂಪ್ರದಾಯಕ ನೃತ್ಯವಾಗಿದೆ.
* ಕೇರಳದ ನಂತರ ಅತೀ ಹೆಚ್ಚು ವಿದ್ಯಾವಂತರಿರುವ ರಾಜ್ಯವಾಗಿದೆ. ಇಲ್ಲಿ ವಿದ್ಯಾಭ್ಯಾಸಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುವುದು.
* ಮಿಜೋರಾಂ ಎಂಬುವುದು ಮೊದಲು ಅಸ್ಸಾಂಗೆ ಸೇರಿದ ಜಿಲ್ಲೆಯಾಗಿತ್ತು, ನಂತರ ಅದು ರಾಜ್ಯವಾಯ್ತು.
* ಕೇವ್ಸ್ ಆಫ್ ಡೆಡ್ (ಸತ್ತವರ)ಎಂಬ ಗುಹೆ ಇಲ್ಲಿದೆ. ಈ ಗುಗೆಯಲ್ಲಿ ಮನುಷ್ಯರ ಮೂಳೆಗಳೇ ಕಾಣಸಿಗುವುದಂತೆ.
* ಇಲ್ಲಿ ಹುಡುಗ ಮದುವೆಯಾಗಬೇಕಾದರೆ ವಧು ಮನೆಯವರಿಗೆ ವಧು ದಕ್ಷಿಣೆ ಕೊಡಬೇಕು.
ರಾಜಾಸ್ಥಾನದ ಕುರಿತ ಆಸಕ್ತಿಕರ ಸಂಗತಿಗಳು
* ಭೌಗೋಳಿಕವಾಗಿ ಭಾರತದ ದೊಡ್ಡ ರಾಜ್ಯವಾಗಿದೆ
* ರಾಜಾಸ್ಥಾನ ಪ್ರವಾಸ ತಾಣವಾಗಿಯೂ ಗುರುತಿಸಿಕೊಂಡಿದೆ
* ಇಲ್ಲಿ ಭಾಂಗ್ಗರ್ ಎಂಬ ಅಗೋಚರ ಶಕ್ತಿಯ ಕಟ್ಟಡವಿದೆ, ಇಲ್ಲಿಗೆ ಹೋಗಲು ಜನ ಭಯ ಪಡುತ್ತಾರೆ
* ವಿಶ್ವದ 9ನೇ ದೊಡ್ಡ ಮರುಭೂಮಿ ಪ್ರದೇಶವೆಂದರೆ ಅದು ರಾಜಾಸ್ಥಾನ.
* ಕುಂಬಲಗರ್ ಫೋರ್ಟ್ ಎಂಬುವುದಿದೆ. ಇದು ವಿಶ್ವದಲ್ಲಿಯೇ ಉದ್ದವಾದ ಗೋಡೆ ಇದಾಗಿದೆ.
* ಇಲ್ಲಿ ಮತ್ತೊಂದು ವಿಶೇಷವೆಂದರೆ ಇಲ್ಲಿಯ ಸಿಟಿಗಳಲ್ಲಿ ಕಲರ್ಕೋಡ್ ಕಾಣಬಹುದು.
* ಕುಲ್ದ್ಹರ ಎಂಬ ಗ್ರಾಮದಲ್ಲಿ ಒಂದು ನರಪಿಳ್ಳೆಯೂ ಇಲ್ಲ.
* ಬ್ರಹ್ಮನ ದೇವಾಲಯವಿರುವ ಏಕೈಕ ಸ್ಥಳವೆಂದರೆ ಅದು ರಾಜಾಸ್ಥಾನದಲ್ಲಿದೆ.
* ಮೊದಲ ನ್ಯೂಕ್ಲಿಯರ್ ಪರೀಕ್ಷೆಯನ್ನು ಇಲ್ಲಿಯೇ ಮಾಡಲಾಯಿತು
* ಇಲ್ಲಿ ಇಲಿಗಳಿಗಾಗಿಯೇ ದೇವಾಲಯವಿದೆ. ಈ ದೇವಾಲಯದಲ್ಲಿ 25, 000ಕ್ಕೂ ಅಧಿಕ ಇಲಿಗಳಿವೆಯಂತೆ
* ಇಲ್ಲಿ ಪೂರ್ವದಲ್ಲಿ ಯಾವುದೇ ಬೆಳೆ ಬೆಳೆಯಲ್ಲ, ಅದೇ ದಕ್ಷಿಣ ಭಾಗದಲ್ಲಿ ಬೆಳೆಗಳು ಬೆಳೆಯುತ್ತವೆ
* ಜಗತ್ಪ್ರಸಿದ್ಧ ಜಂತರ್-ಮಂತರ್ ಕೂಡ ಇರುವುದು ರಾಜಾಸ್ಥಾನದಲ್ಲಿಯೇ
* ತಾಜ್ಮಹಲ್ಗೆ ಬಿಳಿ ಕಲ್ಲುಗಳನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗಿ ತಾಜ್ ಮಹಲ್ ನಿರ್ಮಿಸಿದ್ದು.
ಮಧ್ಯಪ್ರದೇಶದ ಕುರಿತ ಆಸಕ್ತಿಕರ ಸಂಗತಿಗಳು
* ರಾಜಾಸ್ಥಾನದ ಬಳಿಕ ಮಧ್ಯಪ್ರದೇಶ ಭೌಗೋಳಿಕವಾಗಿ 2ನೇ ದೊಡ್ಡ ರಾಜ್ಯವಾಗಿದೆ.
* ಚಾಂದೇರಿ ಸ್ಯಾರಿ ನಮ್ಮ ಇಲ್ಲಿಯ ಮೈಸೂರು ಸ್ಯಾರಿಯಂತೆ ಪ್ರಸಿದ್ಧ ಸೀರೆಯಾಗಿದೆ.
* ಅತೀ ಪುರಾತನವಾದ ಗುಹೆಗಳು ಈ ರಾಜ್ಯದಲ್ಲಿದೆ.
* ಕಜುರಾರೋ ದೇವಾಲಯ ಇಲ್ಲಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು
* ಅಟಲ್ ಬಿಹಾರಿ ವಾಜಪೇಯಿ, ಲತಾ ಮಂಗೇಶ್ಕರ್, ಕಿಶೋರ್ ಕುಮಾರ್, ಜಯ ಬಚ್ಚನ್, ಮಾನ್ಸೂರ್ ಅಲಿ ಪಟೌಡಿ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಜನ್ಮ ಸ್ಥಳವಿದು
* ಈ ರಾಜ್ಯದಲ್ಲಿ ಖನಿಜಾಂಶಗಳು ಅಧಿಕವಿದೆ.
* ಭಾರತದಲ್ಲಿ ಅತ್ಯಧಿಕ ಬುಡಕಟ್ಟು ಜನರಿರುವ ರಾಜ್ಯ ಇದಾಗಿದೆ.
* ಇಲ್ಲಿ ಪ್ರಸಿದ್ಧ ಉಜ್ವೈನ್ ದೇವಾಲಯವಿದೆ.
* ಇಲ್ಲಿ ಅಕ್ಷರಸ್ಥರ ಸಂಖ್ಯೆಗಿಂತ ಅನಕ್ಷರಸ್ಥರ ಸಂಖ್ಯೆ ಅಧಿಕವಿದೆ.
* ಭಾರತದಲ್ಲಿ ಅತ್ಯಧಿಕ ವಜ್ರ ನಿಕ್ಷೇಪ ಇರುವ ಪ್ರದೇಶ ಇದಾಗಿದೆ.
ಛತ್ತೀಸ್ಗಢ
* ಕೋಸಾ ಸಿಲ್ಕ್ ಇಲ್ಲಿಗೆ ಸೇರಿದ್ದು
* ಇಲ್ಲಿ ತುಂಬಾ ಬುಡಕಟ್ಟು ಜನಾಂಗದವರಿದ್ದಾರೆ.
* ಗುಡ್ಡಗಾಡಿನ ಪ್ರದೇಶದಲ್ಲಿ ಜನರ ಜೀವ ರಕ್ಷಣೆಗೆ ಬೈಕ್ ಆಂಬ್ಯೂಲೆನ್ಸ್ ಬಳಸಲಾಗುವುದು
* ಪ್ರಸಿದ್ಧ ಚಿತ್ರಕೂಡ ಜಲಪಾತವಿದೆ. ಇದನ್ನು ಭಾರತದ ನಯಾಗ್ರ ಫಾಲ್ಸ್ ಎಂದು ಕರೆಯಲಾಗುವುದು.
* ಅತೀ ಹೆಚ್ಚು ಸ್ಟೀಲ್ ಉತ್ಪಾದನೆಯಾಗುವುದು ಇಲ್ಲಿ.
ತೆಲಂಗಾಣದ ಕುರಿತ ಆಸಕ್ತಿಕರ ಸಂಗತಿಗಳು
ಭಾರತದ ರಾಜ್ಯಗಳಲ್ಲಿ ಹೊಸದಾಗಿ ಹುಟ್ಟಿಕೊಂಡ ರಾಜ್ಯವಿದು
* ಈ ರಾಜ್ಯ 1.14 ಲಕ್ಷ ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಭಾರತದ 12ನೇ ದೊಡ್ಡ ರಾಜ್ಯ ಇದಾಗದೆ.
* 17 ಲೋಕ ಸಭಾ ಸೀಟು, 119 ವಿಧಾನ ಸಭಾ ಸೀಟುಗಳನ್ನು ಹೊಂದಿರುವ ರಾಜ್ಯ
* ಇಲ್ಲಿಗೆ ನವೆಂಬರ್-ಫೆಬ್ರವರಿಗೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ.



Click it and Unblock the Notifications