Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿ ಕಣಜ ಗೂಡು ಕಟ್ಟುವುದೇಕೆ..? ಶುಭವೋ ಅಶುಭವೋ..!
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಹುಳು, ಕೀಟಗಳ ಕಾಟ ಇದ್ದೇ ಇರುತ್ತದೆ. ಅದರಲ್ಲೂ ಇರುವೆ, ಹಲ್ಲಿ, ನೊಣಗಳ ಕಾಟವಂತು ಸರ್ವೇ ಸಾಮಾನ್ಯ ಆದ್ರೆ ಕೆಲವೊಂದು ಮನೆಯಲ್ಲಿ ಜೇನು ಹುಳು, ಕಣಜ ಎಂದು ಕರೆಯುವ ಅಪಾಯಕಾರಿ ಹುಳುಗಳು ಸಹ ಕಾಣಸಿಗುತ್ತವೆ.
ಆದ್ರೆ ಮನೆಯಲ್ಲಿ ಜೇನು ಹುಳು, ಕಣಜ ಗೂಡು ಕಟ್ಟುವುದು ಶುಭ ಸಂಕೇತವೇ ಅಥವಾ ಅಶುಭವೇ ಎಂಬುದು ಜನರ ಮನದಲ್ಲಿ ಇರುವ ಪ್ರಶ್ನೆಯಾಗಿರುತ್ತೆ. ಆದ್ರೆ ಜೇನು ಹುಳುಗಳು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಗೂಡು ಕಟ್ಟುವುದಿಲ್ಲ. ಆದ್ರೆ ಗೂಡು ಕಟ್ಟಿದರೆ ಹುಳುಗಳನ್ನು ಓಡಿಸುವುದು ಬಹಳ ಕಷ್ಟವಾಗುತ್ತದೆ.

ಹಾಗಾದ್ರೆ ಮನೆಯಲ್ಲಿ ಕಣಜದ ಹುಳು ಅಥವಾ ಜೇನು ಹುಳು ಗೂಡು ಕಟ್ಟುವುದೇಕೆ? ಇದು ಶುಭ ಸಂಕೇತವೋ ಅಥವಾ ಅಶುಭವೋ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಣಜ ಗೂಡ ಕಟ್ಟಿದರೆ ಒಳ್ಳೆಯದು
ಮನೆಯಲ್ಲಿ ಕಣಜ ಗೂಡು ಕಟ್ಟುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇವು ಎಲ್ಲರ ಮನೆಯಲ್ಲೂ ಗೂಡು ಕಟ್ಟುವುದಿಲ್ಲ. ಇವು ಸಂತಾನೋತ್ಪತ್ತಿಯ ಕಾರಣದಿಂದಾಗಿ ಮಾತ್ರ ಇವು ಗೂಡು ಕಟ್ಟುತ್ತವೆ. ಹೀಗಾಗಿ ಇವು ಗೂಡು ಕಟ್ಟಿದ ಮನೆಯಲ್ಲಿ ಅವಿವಾಹಿತರಿದ್ದರೆ ಶೀಘ್ರ ವಿವಾಹವಾಗುತ್ತಾರೆ ಎಂಬ ನಂಬಿಕೆ ಇದೆ. ಇವು ಗೂಡು ಕಟ್ಟಲು ಬಳಸುವ ಮಣ್ಣು ಬಹಳ ಶುದ್ಧವಾಗಿರುತ್ತದೆ ಎನ್ನಲಾಗಿದೆ. ಹೀಗಾಗಿ ಮನೆಯ ಪರಿಸ್ಥಿತಿ ಉತ್ತಮವಿದ್ದರೆ ಮಾತ್ರವೆ ಇವು ಗೂಡು ಕಟ್ಟಲಿದೆಯಂತೆ. ಮನೆ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವಿದ್ದಾಗ ಮಾತ್ರ ಅವು ಗೂಡು ಕಟ್ಟುತ್ತವೆಯಂತೆ.
ಆರ್ಥಿಕ ಲಾಭದ ಸೂಚನೆ
ಮನೆಯಲ್ಲಿ ಸಣ್ಣ ಕಣಜ ಗೂಡು ಕಟ್ಟಿದ್ದರೆ ಅದು ಆರ್ಥಿಕ ಸ್ವಾವಲಂಬನೆ ಅಥವಾ ಧನಲಾಭದ ಸಂಕೇತವಂತೆ. ನೀವು ಸಾಲ ಮಾಡಿದ್ದರೆ ಅದರ ಮರುಪಾವತಿ ಹಾಗೂ ಸಾಲ ನೀಡಿದ್ದರೆ ಹಣ ಬರುವ ಸಂಭವ ಹೆಚ್ಚಾಗುತ್ತದೆಯಂತೆ. ಜೊತೆಗೆ ಮನೆಯ ಆರ್ಥಿಕ ವಿಚಾರಗಳು ಧನಾತ್ಮಕ ರೀತಿಯಲ್ಲಿ ಬದಲಾಗುತ್ತದೆ ಎಂದು ನಂಬಲಾಗುದೆ.
ಹೊಸ ಗೂಡಿನಲ್ಲಿ ಕಣಜ ಇಲ್ಲದಿದ್ದರೆ?
ಕೆಲವೊಮ್ಮೆ ಹೊಸದಾಗಿ ಗೂಡು ಕಟ್ಟಿದ ಕಣಜ ಆ ಗೂಡು ಬಿಟ್ಟು ತೆರಳುತ್ತದೆ, ಅಲ್ಲಿ ಸಂತಾನೋತ್ಪತ್ತಿಗೆ ಅದು ಮುಂದಾಗುವುದಿಲ್ಲ. ಹೀಗಾದರೆ ಆ ಮನೆಯಲ್ಲಿ ಏನಾದರು ದೋಷವಿದೆ ಎಂದರ್ಥವಾಗುತ್ತದೆ. ಅವು ಗೂಡು ಬಿಟ್ಟು ತೆರಳಿದರೆ ಅಶುಭ ಎಂದು ಪರಿಗಣಿಸಲಾಗುತ್ತದೆ, ಆದರೆ ಒಮ್ಮೆ ಅವು ಸಂತಾನೋತ್ಪತ್ತಿ ಕೈಗೊಂಡು ಗೂಡು ಖಾಲಿ ಮಾಡಿದ ಬಳಿಕ ಹಳೆಯ ಗೂಡಿಗೆ ನೀರು ಹಾಕಿ ಅದನ್ನು ಒಂದು ಪೇಪರ್ನಲ್ಲಿ ಸುತ್ತಿ ಎಸೆಯಬೇಕಂತೆ.
ದೇವರ ಕೋಣೆಯಲ್ಲಿ ಗೂಡು ಕಟ್ಟಿದ್ದರೆ ಶುಭ
ಇತ್ತ ಕಣಜವು ದೇವರ ಕೋಣೆಯಲ್ಲಿ ಹೆಚ್ಚಾಗಿ ಗೂಡು ಕಟ್ಟುತ್ತವೆ. ನೀವು ದೇವರ ಕೋಣೆಯ ಮೂಲೆಯಲ್ಲಿ ನೋಡಿದರೆ ಒಂದು ಮಣ್ಣಿನ ಗೂಡು ಕಾಣಿಸಬಹುದು, ಇದು ಶುಭ ಸಂಕೇತವಂತೆ. ಅದರಲ್ಲೂ ಈಶಾನ್ಯ ಮೂಲೆಯಲ್ಲಿ ಗೂಡು ಕಟ್ಟಿದರೆ ತುಂಬಾನೆ ಒಳ್ಳೆಯದು. ದೇವರ ಕೋಣೆಯಲ್ಲಿ ಕಣಜನ ಗೂಡು ಇದ್ದರೆ ಅದನ್ನು ತೆಗೆಯುವುದು, ಒಡೆದು ಹಾಕುವುದು ಮಾಡಬಾರದಂತೆ. ಅವುಗಳು ತಮಗೆ ಯೋಗ್ಯ ಸ್ಥಳ ಆಯ್ದುಕೊಂಡು ಗೂಡು ಕಟ್ಟಿರುತ್ತವೆ. ಅಲ್ಲದೆ ಇವು ಗೂಡು ಕಟ್ಟುವುದು ಶುಭ ಸೂಚನೆಯಾಗಿದೆ.
ದ್ವಾರ ಬಾಗಿಲಿಗೆ ಗೂಡು ಕಟ್ಟಿದರೆ
ಬಾಗಿಲ ಮೇಲೆ ಗೂಡು ಕಟ್ಟಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ವಾಸವಿದ್ದಾಳೆ ಎಂದರ್ಥ. ಆದರೆ ಅಗ್ನಿ ಮೂಲೆ ಅಥವಾ ಅಡುಗೆ ಮನೆಯಲ್ಲಿ ಗೂಡು ಕಟ್ಟಿದರೆ ಮನೆಯಲ್ಲಿ ಖರ್ಚು ಹೆಚ್ಚಾಗುತ್ತಿದೆ ಎಂದರ್ಥವಂತೆ. ದ್ವಾರ ಬಾಗಿಲ ಮೇಲೆ ಕಟ್ಟಿದರೆ ಮನೆಯಲ್ಲಿರುವ ಸದಸ್ಯರ ಆರೋಗ್ಯ ವೃದ್ಧಿ, ಧನ, ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗಿದೆ. ಇಂತಹ ಮನೆಯಲ್ಲಿ ಧಾನ್ಯ ಸಂಪತ್ತು ವೃದ್ಧಿಯಾಗುತ್ತೆ ಎನ್ನಲಾಗಿದೆ.



Click it and Unblock the Notifications