Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಮನೆಯಲ್ಲಿ ಕಣಜ ಗೂಡು ಕಟ್ಟುವುದೇಕೆ..? ಶುಭವೋ ಅಶುಭವೋ..!
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಹುಳು, ಕೀಟಗಳ ಕಾಟ ಇದ್ದೇ ಇರುತ್ತದೆ. ಅದರಲ್ಲೂ ಇರುವೆ, ಹಲ್ಲಿ, ನೊಣಗಳ ಕಾಟವಂತು ಸರ್ವೇ ಸಾಮಾನ್ಯ ಆದ್ರೆ ಕೆಲವೊಂದು ಮನೆಯಲ್ಲಿ ಜೇನು ಹುಳು, ಕಣಜ ಎಂದು ಕರೆಯುವ ಅಪಾಯಕಾರಿ ಹುಳುಗಳು ಸಹ ಕಾಣಸಿಗುತ್ತವೆ.
ಆದ್ರೆ ಮನೆಯಲ್ಲಿ ಜೇನು ಹುಳು, ಕಣಜ ಗೂಡು ಕಟ್ಟುವುದು ಶುಭ ಸಂಕೇತವೇ ಅಥವಾ ಅಶುಭವೇ ಎಂಬುದು ಜನರ ಮನದಲ್ಲಿ ಇರುವ ಪ್ರಶ್ನೆಯಾಗಿರುತ್ತೆ. ಆದ್ರೆ ಜೇನು ಹುಳುಗಳು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಗೂಡು ಕಟ್ಟುವುದಿಲ್ಲ. ಆದ್ರೆ ಗೂಡು ಕಟ್ಟಿದರೆ ಹುಳುಗಳನ್ನು ಓಡಿಸುವುದು ಬಹಳ ಕಷ್ಟವಾಗುತ್ತದೆ.

ಹಾಗಾದ್ರೆ ಮನೆಯಲ್ಲಿ ಕಣಜದ ಹುಳು ಅಥವಾ ಜೇನು ಹುಳು ಗೂಡು ಕಟ್ಟುವುದೇಕೆ? ಇದು ಶುಭ ಸಂಕೇತವೋ ಅಥವಾ ಅಶುಭವೋ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಣಜ ಗೂಡ ಕಟ್ಟಿದರೆ ಒಳ್ಳೆಯದು
ಮನೆಯಲ್ಲಿ ಕಣಜ ಗೂಡು ಕಟ್ಟುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇವು ಎಲ್ಲರ ಮನೆಯಲ್ಲೂ ಗೂಡು ಕಟ್ಟುವುದಿಲ್ಲ. ಇವು ಸಂತಾನೋತ್ಪತ್ತಿಯ ಕಾರಣದಿಂದಾಗಿ ಮಾತ್ರ ಇವು ಗೂಡು ಕಟ್ಟುತ್ತವೆ. ಹೀಗಾಗಿ ಇವು ಗೂಡು ಕಟ್ಟಿದ ಮನೆಯಲ್ಲಿ ಅವಿವಾಹಿತರಿದ್ದರೆ ಶೀಘ್ರ ವಿವಾಹವಾಗುತ್ತಾರೆ ಎಂಬ ನಂಬಿಕೆ ಇದೆ. ಇವು ಗೂಡು ಕಟ್ಟಲು ಬಳಸುವ ಮಣ್ಣು ಬಹಳ ಶುದ್ಧವಾಗಿರುತ್ತದೆ ಎನ್ನಲಾಗಿದೆ. ಹೀಗಾಗಿ ಮನೆಯ ಪರಿಸ್ಥಿತಿ ಉತ್ತಮವಿದ್ದರೆ ಮಾತ್ರವೆ ಇವು ಗೂಡು ಕಟ್ಟಲಿದೆಯಂತೆ. ಮನೆ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವಿದ್ದಾಗ ಮಾತ್ರ ಅವು ಗೂಡು ಕಟ್ಟುತ್ತವೆಯಂತೆ.
ಆರ್ಥಿಕ ಲಾಭದ ಸೂಚನೆ
ಮನೆಯಲ್ಲಿ ಸಣ್ಣ ಕಣಜ ಗೂಡು ಕಟ್ಟಿದ್ದರೆ ಅದು ಆರ್ಥಿಕ ಸ್ವಾವಲಂಬನೆ ಅಥವಾ ಧನಲಾಭದ ಸಂಕೇತವಂತೆ. ನೀವು ಸಾಲ ಮಾಡಿದ್ದರೆ ಅದರ ಮರುಪಾವತಿ ಹಾಗೂ ಸಾಲ ನೀಡಿದ್ದರೆ ಹಣ ಬರುವ ಸಂಭವ ಹೆಚ್ಚಾಗುತ್ತದೆಯಂತೆ. ಜೊತೆಗೆ ಮನೆಯ ಆರ್ಥಿಕ ವಿಚಾರಗಳು ಧನಾತ್ಮಕ ರೀತಿಯಲ್ಲಿ ಬದಲಾಗುತ್ತದೆ ಎಂದು ನಂಬಲಾಗುದೆ.
ಹೊಸ ಗೂಡಿನಲ್ಲಿ ಕಣಜ ಇಲ್ಲದಿದ್ದರೆ?
ಕೆಲವೊಮ್ಮೆ ಹೊಸದಾಗಿ ಗೂಡು ಕಟ್ಟಿದ ಕಣಜ ಆ ಗೂಡು ಬಿಟ್ಟು ತೆರಳುತ್ತದೆ, ಅಲ್ಲಿ ಸಂತಾನೋತ್ಪತ್ತಿಗೆ ಅದು ಮುಂದಾಗುವುದಿಲ್ಲ. ಹೀಗಾದರೆ ಆ ಮನೆಯಲ್ಲಿ ಏನಾದರು ದೋಷವಿದೆ ಎಂದರ್ಥವಾಗುತ್ತದೆ. ಅವು ಗೂಡು ಬಿಟ್ಟು ತೆರಳಿದರೆ ಅಶುಭ ಎಂದು ಪರಿಗಣಿಸಲಾಗುತ್ತದೆ, ಆದರೆ ಒಮ್ಮೆ ಅವು ಸಂತಾನೋತ್ಪತ್ತಿ ಕೈಗೊಂಡು ಗೂಡು ಖಾಲಿ ಮಾಡಿದ ಬಳಿಕ ಹಳೆಯ ಗೂಡಿಗೆ ನೀರು ಹಾಕಿ ಅದನ್ನು ಒಂದು ಪೇಪರ್ನಲ್ಲಿ ಸುತ್ತಿ ಎಸೆಯಬೇಕಂತೆ.
ದೇವರ ಕೋಣೆಯಲ್ಲಿ ಗೂಡು ಕಟ್ಟಿದ್ದರೆ ಶುಭ
ಇತ್ತ ಕಣಜವು ದೇವರ ಕೋಣೆಯಲ್ಲಿ ಹೆಚ್ಚಾಗಿ ಗೂಡು ಕಟ್ಟುತ್ತವೆ. ನೀವು ದೇವರ ಕೋಣೆಯ ಮೂಲೆಯಲ್ಲಿ ನೋಡಿದರೆ ಒಂದು ಮಣ್ಣಿನ ಗೂಡು ಕಾಣಿಸಬಹುದು, ಇದು ಶುಭ ಸಂಕೇತವಂತೆ. ಅದರಲ್ಲೂ ಈಶಾನ್ಯ ಮೂಲೆಯಲ್ಲಿ ಗೂಡು ಕಟ್ಟಿದರೆ ತುಂಬಾನೆ ಒಳ್ಳೆಯದು. ದೇವರ ಕೋಣೆಯಲ್ಲಿ ಕಣಜನ ಗೂಡು ಇದ್ದರೆ ಅದನ್ನು ತೆಗೆಯುವುದು, ಒಡೆದು ಹಾಕುವುದು ಮಾಡಬಾರದಂತೆ. ಅವುಗಳು ತಮಗೆ ಯೋಗ್ಯ ಸ್ಥಳ ಆಯ್ದುಕೊಂಡು ಗೂಡು ಕಟ್ಟಿರುತ್ತವೆ. ಅಲ್ಲದೆ ಇವು ಗೂಡು ಕಟ್ಟುವುದು ಶುಭ ಸೂಚನೆಯಾಗಿದೆ.
ದ್ವಾರ ಬಾಗಿಲಿಗೆ ಗೂಡು ಕಟ್ಟಿದರೆ
ಬಾಗಿಲ ಮೇಲೆ ಗೂಡು ಕಟ್ಟಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ವಾಸವಿದ್ದಾಳೆ ಎಂದರ್ಥ. ಆದರೆ ಅಗ್ನಿ ಮೂಲೆ ಅಥವಾ ಅಡುಗೆ ಮನೆಯಲ್ಲಿ ಗೂಡು ಕಟ್ಟಿದರೆ ಮನೆಯಲ್ಲಿ ಖರ್ಚು ಹೆಚ್ಚಾಗುತ್ತಿದೆ ಎಂದರ್ಥವಂತೆ. ದ್ವಾರ ಬಾಗಿಲ ಮೇಲೆ ಕಟ್ಟಿದರೆ ಮನೆಯಲ್ಲಿರುವ ಸದಸ್ಯರ ಆರೋಗ್ಯ ವೃದ್ಧಿ, ಧನ, ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗಿದೆ. ಇಂತಹ ಮನೆಯಲ್ಲಿ ಧಾನ್ಯ ಸಂಪತ್ತು ವೃದ್ಧಿಯಾಗುತ್ತೆ ಎನ್ನಲಾಗಿದೆ.



Click it and Unblock the Notifications