Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಸ್ತು ಟಿಪ್ಸ್: ನೆಮ್ಮದಿ ಬೇಕೆಂದರೆ ಈ ವಸ್ತುಗಳನ್ನು ಮನೆಯಿಂದ ಮೊದಲು ಹೊರಹಾಕಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಲೇಬಾರದು, ಅವು ಮನೆಯಲ್ಲಿದ್ದರೆ ಒಂದೆಲ್ಲಾ ಒಂದು ಸಮಸ್ಯೆ ಬರುತ್ತಲೇ ಇರುತ್ತದೆ. ಗಂಡ-ಹೆಂಡತಿ ನಡುವೆ ಸಮಸ್ಯೆ, ಮನೆಯವರಿಗೆ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಹೀಗೆ ನಾನಾ ಬಗೆಯ ತೊಂದರೆಗಳು ಬರುತ್ತಲೇ ಇರುತ್ತದೆ.

ನಿಮ್ಮ ಮನೆಯಲ್ಲಿ ಈ ಬಗೆಯ ವಸ್ತುಗಳಿದ್ದರೆ ಅವುಗಳನ್ನು ಮನೆಯಿಂದ ಮೊದಲು ಹೊರಹಾಕಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಯಾವೆಲ್ಲಾ ವಸ್ತುಗಳು ಮನೆಯಲ್ಲಿ ಇರಲೇಬಾರದು ನೋಡೋಣ ಬನ್ನಿ:
1. ನಿಮ್ಮ ಮನೆ ಗಡಿಯಾರ ಕೆಲಸ ಮಾಡುತ್ತಿಲ್ಲ ಎಂದಾದರೆ ಹಾಗೆಯೇ ಇಡಬೇಡಿ, ಇದರಿಂದ ಮನೆಯಲ್ಲಿ ಸಾವು ಸಂಭವಿಸುವುದು ಹಾಗೂ ಆರ್ಥಿಕ ತೊಂದರೆ ತರುವುದು. ಆದ್ದರಿಂದ ಅಂಥ ಗಡಿಯಾರ ಮನೆಯೊಳಗಡೆ ಇಡಲೇಬೇಡಿ.
2. ಮುರಿದ ವಸ್ತುಗಳನ್ನು ಮನೆಯೊಳಗಡೆ ಇಡಬೇಡಿ, ಇದರಿಂದ ಕೆಡಕು ಉಂಟಾಗುವುದು
3. ಒಣಗಿದ ಹೂಗಳು, ಕಪ್ಪೆ ಚಿಪ್ಪು ಇವುಗಳನ್ನು ಮನೆಯೊಳಗಡೆ ಇಡಬಾರದು.
4. ಮನೆಯೊಳಗಡೆ ಕೊಡಲಿ ಇತರಬಾರದು, ಮನೆಯೊಳಗಡೆ ಕೊಡಲಿ ಇಟ್ಟರೆ ಮನೆಯಲ್ಲಿ ಸದಸ್ಯರಲ್ಲಿ ಸಾವು ಬರುತ್ತದೆ ಎಂದು ಹೇಳಲಾಗುವುದು.
5. ಮನೆ ನವೀಕರಿಸಿದಾಗ ಮನೆಯಲ್ಲಿದ್ದ ಹಳೆಯ ಪೊರಕೆ ಬಿಸಾಡಿ, ಇಲ್ಲದಿದ್ದರೆ ಈ ಹಳೆ ಪೊರಕೆ ಹೊಸ ಮನೆ ಅಥವಾ ನವೀಕರಿಸಿದ ಮನೆಯ ಅದೃಷ್ಟ ಗುಡಿಸುತ್ತದೆ ಎಂದು ಹೇಳಲಾಗುವುದು.
6. ವಿಕ್ಟೋರಿಯನ್ ನಂಬಿಕೆ ಪ್ರಕಾರ ಹೂದಾನಿಯಲ್ಲಿ ಕೆಂಪು ಬಿಳಿ ಹೂಗಳನ್ನು ಇಡಬಾರದು ಎಂದು ಹೇಳಲಾಗುವುದು, ಹೀಗಿಟ್ಟರೆ ಮನೆಗೆ ಕೆಡಕು ಉಂಟಾಗುವುದು.
7. ನಿಮ್ಮ ಮನೆಯ ಕಿಟಕಿಯೊಳಗಿನಿಂದ ಪಕ್ಷಿ ಹಾರಬಾರದು, ಅದು ನೀವು ಸಾಕಿದ ಪಕ್ಷಿಯೇ ಆಗಿರಲಿ ಕಿಟಕಿಯೊಳಗಡೆಯಿಂದ ಹಾರಬಾರದು ಎಂದು ಹೇಳಲಾಗುವುದು.
8. ತಾಜ್ ಮಹಲ್ ಪ್ರೇಮದ ಸಂಕೇತ ಎಂದು ಕೆಲವರು ಮನೆಯೊಳಗಡೆ ಇಡುತ್ತಾರೆ ಆದರೆ ವಾಸ್ತು ಶಾಸ್ತ್ರ ಪ್ರಕಾರ ತಾಜ್ಮಹಲ್ ಫೋಟೋವಾಗಲಿ ಅದರ ಮಾದರಿಯಾಗಲಿ ಮನೆಯೊಳಗಡೆ ಇಡಬಾರದು.
9. ಮನೆಯಲ್ಲಿ ಕಳ್ಳಿ ಗಿಡ ಅಥವಾ ಕ್ಯಾಕ್ಟಸ್ ಗಿಡ ಇರಬಾರದು, ಇವುಗಳನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ಸಮಸ್ಯೆ ಹೆಚ್ಚಾಗುವುದು ಎಂದು ಹೇಳಲಾಗುವುದು.
10. ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದರೆ ಅದರಲ್ಲಿ ನಿಮ್ಮ ಮಂಚದ ಪ್ರತಿಬಿಂಬ ಬೀಳಬಾರದು, ಆ ರೀತಿ ಇಡಬೇಕು ಇಲ್ಲದಿದ್ದರೆ ಪತಿ-ಪತ್ನಿ ನಡುವೆ ವಿರಸ ಉಂಟಾಗುವುದು.
11. ಮನೆಯಲ್ಲಿ ಒಡೆದ ಗ್ಲಾಸ್ ಇದ್ದರೆ ಅವುಗಳನ್ನು ಹೊರಹಾಕಿ, ಇಲ್ಲ ಅವು ಋಣಾತ್ಮಕ ಶಕ್ತಿಯನ್ನು ಸೆಳೆಯುತ್ತದೆ, ಇದರಿಂದ ಮನೆಗೆ ಕೆಡಕು ಉಂಟಾಗುವುದು.
ಸೂಚನೆ: ಇಲ್ಲಿ ನೀಡಿರುವ ಅಂಶಗಳು ಒಂದು ನಂಬಿಕೆಯಷ್ಟೆ, ಈ ಬಗೆಯ ನಂಬಿಕೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನಿಮಗೆ ಯಾವುದು ಸರಿ ಅನಿಸುತ್ತೋ ಅವುಗಳನ್ನೇ ಮಾಡಿ.



Click it and Unblock the Notifications
