Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ನಿಮ್ಮ ಮನೆ ಪ್ರವಾಹದಿಂದ ಹಾನಿಗೊಳಗಾಗಿದೆಯೇ? ಶುಚಿಗೊಳಿಸಲು ಇಲ್ಲಿದೆ ಕೆಲವು ಸಲಹೆಗಳು
ಇತ್ತೀಚೆಗೆ ಪ್ರವಾಹ ಎಂಬ ಪದ ಮಳೆ, ಬಿಸಿಲು, ಚಳಿಯಂತೆ ಸಾಮಾನ್ಯ ಎಂಬಂತಾಗಿದೆ. ಕರ್ನಾಟಕ ಸೇರಿದಂತೆ ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ಬಹುತೇಕ ಪ್ರದೇಶಗಳು ನೀರಿನ ಅಬ್ಬರಕ್ಕೆ ನಲುಗಿ ಹೋಗಿದೆ. ಪ್ರವಾಹದ ಸಂದರ್ಭದಲ್ಲಿ ಮನೆಗಳನ್ನು ಬಿಟ್ಟು ನಿರಾಶ್ರಿತರ ತಾಣಗಳಲ್ಲಿ ತಂಗಿರುವ ಜನರು ನೀರಿನ ಹರಿವು ಕಡಿಮೆಯಾದ ಕೂಡಲೇ ತಮ್ಮ ಮನೆಗಳಿಗೆ ಸೇರಲು ಕಾತುರರಾಗಿರುತ್ತಾರೆ.

ಆದರೆ ಇದಕ್ಕೂ ಮುನ್ನ ಪ್ರವಾಹ ನೀರಿನ ಜತೆಗೆ ಹಲವು ಸಾಂಕ್ರಾಮಿಕ ಕಾಯಿಲೆಗಳನ್ನು ಹೊತ್ತು ತಂದಿರುತ್ತದೆ ಎಂಬ ಬಗ್ಗೆ ಜಾಗ್ರತೆ ವಹಿಸುವುದು ಅತ್ಯಗತ್ಯ. ಪ್ರವಾಹ ಉಳಿಸಿ ಹೋಗುವ ಸಾಂಕ್ರಾಮಿಕ ರೋಗಗಳು, ಜಲಜನ್ಯ ಕಾಯಿಲೆಗಳು ಮತ್ತೆ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಿ ಜೀವನವನ್ನೇ ಬಲಿಪಡೆಯಬಹುದು. ಈ ಹಿನ್ನೆಲೆ ಪ್ರವಾಹದ ನಂತರ ಮತ್ತೆ ಮನೆಗೆ ಹೋಗುವ ಮುನ್ನ ಯಾವ ವಿಷಯಗಳ ಬಗ್ಗೆ ಎಚ್ಚರವಹಿಸಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಸಂಪೂರ್ಣ ಮನೆ ಪರಿಶೀಲಿಸಿ
ಪ್ರವಾಹದ ನಂತರ ಕೂಡಲೇ ಮನೆಗೆ ಹೋಗುವ ಮುನ್ನ ಸಂಪೂರ್ಣವಾಗಿ ಮನೆಯ ಸುತ್ತ ಪರಿಶೀಲಿಸಿ. ವಿದ್ಯುತ್ ಸಂಪರ್ಕ, ವಿದ್ಯುತ್ ತಂತಿಗಳು ತುಂಡಾಗಿರುವ ಬಗ್ಗೆ ಇರಲಿ ಎಚ್ಚರ. ಮನೆಗೆ ಪ್ರವೇಶಿಸಿದ ಕೂಡಲೇ ವಿದ್ಯುತ್ ಸ್ವಿಚ್ ಗಳನ್ನು ಆನ್ ಮಾಡಲೇಬೇಡಿ, ವಿದ್ಯುತ್ ಸಂಪರ್ಕದ ಬಗ್ಗೆ ಖಚಿತಪಡಿಸಿಕೊಂಡ ನಂತರ ಬಳಸಿ.

ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಡಿ
ಮನೆ ಪ್ರವೇಶಿದ ಮೊದಲಿಗೆ ಮನೆಯ ಎಲ್ಲಾ ಬಾಗಿಲುಗಳು ಹಾಗೂ ಕಿಟಕಿಗಳನ್ನು ತೆರೆದಿಡಿ. ಇದರಿಂದ ಪ್ರವಾಹದ ವೇಳೆ ಮನೆ ಸೇರಿರುವ ವಿಷಜಂತುಗಳು, ಪ್ರಾಣಿಗಳು, ಹುಳು ಹುಪ್ಪಟೆಗಳು ಮನೆಯಿಂದ ಹೊರಹೋಗಲು ಅನುಕೂಲಕರ. ಮನೆ ಪ್ರವೇಶಿಸುವಾಗ ಸದ್ದು ಮಾಡುತ್ತಾ, ಕೋಲಿನಿಂದ ವಸ್ತುಗಳ ಮೇಲೆ ಬಡಿಯುತ್ತಿರಿ. ಅವಿತುಕೊಂಡಿರುವ ವನ್ಯಮೃಗಗಳು ಸದ್ದಿಗೆ ಎಚ್ಚೆತ್ತು ಹೋಗುತ್ತದೆ.

ಸೋಡಿಯಂ ಪಾಲಿಯಾಕ್ರಿಲೇಟ್ ಮೂಲಕ ನೀರನ್ನು ಆವಿಗೊಳಿಸಿ
ಪ್ರವಾಹದ ನೀರು ಕಡಿಮೆಯಾದ ನಂತರವೂ ಮನೆಯಲ್ಲೇ ಉಳಿದಿರುವ ನೀರನ್ನು ಸೋಡಿಯಂ ಪಾಲಿಯಾಕ್ರಿಲೇಟ್ ಮೂಲಕ ಶುಚಿಗೊಳಿಸಿ. ಸೋಡಿಯಂ ಪಾಲಿಯಾಕ್ರಿಲೇಟ್ ನೀರನ್ನು ಸುಲಭವಾಗಿ ಹೀರಿಕೊಳ್ಳುತ್ತದೆ, ಅಲ್ಲದೇ ಇದು ತನ್ನ ಸಾಮರ್ಥ್ಯಕ್ಕಿಂತ 200-300 ಪಟ್ಟು ಹೆಚ್ಚಾಗಿ ನೀರನ್ನು ಹೀರಿಕೊಳ್ಳುತ್ತದೆ.

ಸೋಂಕುನಿವಾರಕಗಳಿಂದ ಶುಚಿಗೊಳಿಸಿ
ಶೇಕಡಾ 90ರಷ್ಟು ನೀರು ಮತ್ತು ಶೇಕಡಾ 10ರಷ್ಟು ಸೀಮೆಎಣ್ಣೆ ಬಳಸಿ ಮನೆಯ ಸುತ್ತ ಹಾಗೂ ನೆಲವನ್ನು ಶುಚಿಗೊಳಿಸಿ. ಮನೆಯ ಮುಂಭಾಗ, ಅಡುಗೆ ಕೋಣೆಯ ಸಿಂಕ್, ನೀರಿನ ಕೊಳವೆಗಳ ಬಳಿ ಸೀಮೆಎಣ್ಣೆ ಸಿಂಪಡಿಸಿ.

ನೀರಿಗೆ ಬ್ಲೀಚಿಂಗ್ ಪೌಡರ್
ಶೇಖರಿಸಿದ ಅಥವಾ ಯಾವುದೇ ಮೂಲದ ನೀರಿಗೆ ಬ್ಲೀಚಿಂಗ್ ಪೌಡರ್ ಹಾಕಿ ಒಂದು ತಾಸಿನ ನಂತರ ನೀರನ್ನು ಬಳಸಿ. ತಪ್ಪದೇ ಕಾಯಿಸಿ ಆರಿಸಿದ ನೀರನ್ನೇ ಕುಡಿಯಿರಿ.

ಶುಚಿಗೊಳಿಸುವ ವೇಳೆ ಕೈಗವಚ ಧರಿಸಿ
ಮನೆಯನ್ನು ಶುಚಿಗೊಳಿಸುವ ವೇಳೆ ತಪ್ಪದೇ ಕೈಗವಚ ಮತ್ತು ಮಂಡಿಯವರೆಗೆ ಬೂಟು ಧರಿಸಿ. ಕ್ರಿಮಿ, ಕೀಟಗಳು ನಿಮ್ಮ ಕೈ ಮೂಲಕ ದೇಹ ಸೇರಬಹುದು.



Click it and Unblock the Notifications