Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಊಟದ ನಂತರ ಮಜ್ಜಿಗೆ ಸೇವಿಸುವುದರಿಂದ ಇಷ್ಟೆಲ್ಲಾ ಲಾಭಗಳಿದ್ಯಾ?
ಮಜ್ಜಿಗೆ ಬಡವರ ಅಮೃತ ಇದ್ದ ಹಾಗೆ. ಹಿಂದಿನ ಕಾಲದಲ್ಲಿ ಜನ ಊಟದ ನಂತರ ಕಡ್ಡಾಯವಾಗಿ ಮಜ್ಜಿಗೆಯನ್ನು ಕುಡಿಯುತ್ತಿದ್ದರು. ಈಗಿನ ಕಾಲದ ಮಕ್ಕಳ ರೀತಿ ಬಣ್ಣ ಬಣ್ಣದ ಪಾನೀಯನ್ನು ಸೇವಿಸುತ್ತಿರಲಿಲ್ಲ.

ಬಹುಶಃ ಮಜ್ಜಿಗೆಗೆ ಸರಿಸಾಟಿಯಾದ ಪಾನೀಯ ಮತ್ತೊಂದಿಲ್ಲ ಅನ್ನಿಸುತ್ತೆ. ಮಜ್ಜಿಗೆಯನ್ನು ಇದೇ ರೀತಿ ಸೇವಿಸಬೇಕೆಂದೇನಿಲ್ಲ. ಅನೇಕರು ಉಪ್ಪು ಸೇರಿಸದೇ ಬರೀ ಮಜ್ಜಿಯನ್ನು ಸೇವಿಸುತ್ತಾರೆ. ಆದರೆ ಇನ್ನೂ ಕೆಲವರು ಮಜ್ಜಿಗೆಗೆ ಉಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿಯನ್ನೆಲ್ಲಾ ಸೇರಿಸಿ ನಂತರ ಕುಡಿಯುತ್ತಾರೆ. ನಿಮಗೊತ್ತಾ ಊಟದ ನಂತರ ಮಜ್ಜಿಗೆ ಸೇವಿಸುವುದರಿಂದ ಏನೆಲ್ಲಾ ಉಪಯೋಗಗಳಿದೆ ಅಂತ. ಅಷ್ಟಕ್ಕು ಮಜ್ಜಿಗೆ ನಮ್ಮ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನಕಾರಿಯಾಗಲಿದೆ ಅನ್ನೋದನ್ನು ನೋಡೋಣ.

1. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಪ್ರತಿನಿತ್ಯ ಊಟದ ನಂತರ ಮಜ್ಜಿಗೆ ಸೇವಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರು ನಿತ್ಯ ಮಜ್ಜಿಗೆ ಸೇವನೆ ಮಾಡಬಹುದು. ಶೀತಾ, ಕೆಮ್ಮು ಇದ್ದ ಸಂದರ್ಭದಲ್ಲಿ ಮಜ್ಜಿಗೆ ಕುಡಿಯುವುದನ್ನು ನಿಲ್ಲಿಸಿ ಬೇರೆ ಸಮಯದಲ್ಲಿ ನಿತ್ಯ ಮಜ್ಜಿಗೆ ಸೇವನೆ ಮಾಡಬಹುದು.

2. ಆಸಿಡಿಟಿ ಕಡಿಮೆ ಮಾಡುತ್ತದೆ
ಎಣ್ಣೆಯುಕ್ತ ಹಾಗೂ ಅತೀ ಖಾರವಾದ ಆಹಾರ ಸೇವಿಸುವುದರಿಂದ ಹೊಟ್ಟೆಯೊಳಗಡೆ ಆಮ್ಲೀಯತೆ ಹೆಚ್ಚಾಗುತ್ತದೆ ಹಾಗೂ ಎದೆಯುರಿ ಕಾಣಿಸಿಕೊಳ್ಳುತ್ತದೆ. ಊಟದ ನಂತರ ಮಜ್ಜಿಗೆಗೆ ಕರಿಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸುವುದರಿಂದ ಅದು ವೇಗವಾಗಿ ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ.

3. ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ
ಊಟದ ನಂತರ ಮಜ್ಜಿಗೆ ಯಾವ ಕಾರಣಕ್ಕೆ ಸೇವಿಸಬೇಕು ಎಂದರೆ ಇದು ಜೀರ್ಣಕ್ರಿಯೆ ಹೇಳಿಮಾಡಿಸಿದ ಪಾನೀಯ ಅಂದ್ರೆ ತಪ್ಪಾಗೋದಿಲ್ಲ. ಮಜ್ಜಿಗೆಯಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ಮತ್ತು ಲ್ಯಾಕ್ಟಿಕ್ ಆಸೀಡ್ ಚಯಾಪಚಯಕ್ರಿಯೆ ವೇಗವಾಗಿ ನಡೆಯುವಲ್ಲಿ ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.

4. ನಿರ್ಜಲೀಕರಣವನ್ನು ತಡೆಗಟ್ಟುತ್ತದೆ
ಮಜ್ಜಿಗೆಯನ್ನು ನೀರು ಹಾಗೂ ಮೊಸರು ಸೇರಿಸಿ ತಯಾರಿಸಲಾಗುತ್ತದೆ. ಮಜ್ಜಿಗೆಯಲ್ಲಿ ಶೇಕಡಾ ಹತ್ತರಷ್ಟು ಮಾತ್ರ ಮೊಸರಿದ್ದು ತೊಂಬತ್ತರಷ್ಟು ನೀರನ್ನು ಹೊಂದಿರುತ್ತದೆ. ಊಟದ ನಂತರ ಮಜ್ಜಿಗೆ ಯಾಕೆ ಸೇವಿಸಬೇಕು ಅಂದರೆ ಸಾಮಾನ್ಯವಾಗಿ ಊಟದ ನಂತರ ನಿದ್ದೆಗೆ ಜಾರುತ್ತೇವೆ. ಹೊಟ್ಟೆತುಂಬಾ ಮೊಸರು ಕುಡಿದಿದ್ದರೆ ಇದು ನಮ್ಮ ದೇಹದಲ್ಲಿ ನೀರಿನ ಅಂಶವನ್ನು ರಾತ್ರಿಯಿಡೀ ಕಾಪಾಡುತ್ತದೆ.

5. ತೂಕ ಕಡಿಮೆಗೊಳಿಸಲು ಸಹಕರಿಸುತ್ತದೆ
ಮಜ್ಜಿಗೆಯಲ್ಲಿ ಕ್ಯಾಲರಿ ಮತ್ತು ಕೊಬ್ಬಿನ ಅಂಶ ಕಡಿಮೆ ಇದ್ದು ಪ್ರೋಟಿನ್ ಮತ್ತು ವಿಟಮಿನ್ ಅಧಿಕ ಪ್ರಮಾಣದಲ್ಲಿದೆ. ಮಜ್ಜಿಗೆ ಕುಡಿಯುವುದರಿಂದ ಶಕ್ತಿಯುತವಾಗಿರಬಹುದು ಮತ್ತು ದೇಹದಲ್ಲಿ ನೀರಿನ ಅಂಶ ಕಾಪಾಡಲು ನೆರವಾಗುತ್ತದೆ. ಹಾಗೆಯೇ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇದರಿಂದ ಹೊರಗಿನ ಜಂಕ್ ಆಹಾರಗಳನ್ನು ತಿನ್ನುವುದನ್ನು ಕಡಿಮೆ ಮಾಡುತ್ತೇವೆ. ತೂಕ ಇಳಿಸಬೇಕು ಅನ್ನುವವರಿಗೆ ಅಂಗಡಿಯಲ್ಲಿ ದೊರೆಯುವ ಬಣ್ಣ ಬಣ್ಣದ ಪಾನೀಯಗಳಿಗಿಂತ ಮಜ್ಜಿಗೆ ಉತ್ತಮ ಪಾನೀಯ.
ಮಧ್ಯಾಹ್ನ ಅಥವಾ ರಾತ್ರಿಯೇ ಆಗಲಿ ಊಟದ ನಂತರ ಮಜ್ಜಿಗೆ ಕುಡಿಯುವ ಅಭ್ಯಾಸ ಬೆಳೆಸಿ ಇದು ಉತ್ತಮ ಅಭ್ಯಾಸ. ಆರೋಗ್ಯಕ್ಕೆ ಒಳ್ಳೆಯದು ಅನ್ನುವ ಯಾವ ಅಭ್ಯಾಸಗಳನ್ನು ಖಂಡಿತ ಬಿಡಲೇಬಾರದು.



Click it and Unblock the Notifications