Just In
Don't Miss
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೈಪ್-2 ಮಧುಮೇಹಿ ಸಮಸ್ಯೆ ಇರುವವರು, ಬೆಳಗ್ಗಿನ ಬ್ರೇಕ್ಫಾಸ್ಟ್ಗೆ ಮೊಟ್ಟೆ ತಿನ್ನಬೇಕಂತೆ
ಮಧುಮೇಹಿಗಳು ತಮ್ಮಆಹಾರ ಕ್ರಮದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವರಿಗೆ ಇನ್ನು ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವು ಮಧುಮೇಹಿಗಳಿಗೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎನ್ನುವ ಬಗ್ಗೆ ತುಂಬಾ ಗೊಂದಲವು ಇರುವುದು. ಹೀಗಾಗಿ ಅವರು ಕೆಲವೊಂದು ಆಹಾರಗಳನ್ನು ಸೇವಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಬಹುದು. ಟೈಪ್-2 ಮಧುಮೇಹಿಗಳಲ್ಲಿ ಇನ್ಸುಲಿನ್ ಉತ್ಪತ್ತಿ ಆಗುವುದು.
ಆದರೆ
ದೇಹವು
ಈ
ಇನ್ಸುಲಿನ್
ನ್ನು
ಉಪಯೋಗಿಸಲು
ಸಾಧ್ಯವಾಗುವುದಿಲ್ಲ.
ಇದನ್ನು
ಇನ್ಸುಲಿನ್
ಪ್ರತಿರೋಧಕತೆ
ಎಂದು
ಕರೆಯಲಾಗುತ್ತದೆ.
ಇತ್ತೀಚೆಗೆ
ನಡೆಸಿರುವಂತಹ
ಒಂದು
ಸಂಶೋಧನೆಯ
ಪ್ರಕಾರ
ಟೈಪ್-2
ಮಧುಮೇಹಿಗಳು
ಬೆಳಗ್ಗಿನ
ಉಪಾಹಾರಕ್ಕೆ
ಮೊಟ್ಟೆ
ಸೇವಿಸಬೇಕು.
ಅಧಿಕ
ಕೊಬ್ಬು,
ಕಡಿಮೆ
ಕಾರ್ಬ್
ಇರುವಂತಹ
ಉಪಾಹಾರವು
ಮಧುಮೇಹಿಗಳಿಗೆ
ತುಂಬಾ
ಒಳ್ಳೆಯದು
ಎಂದು
ಸಂಶೋಧನೆಯು
ಕಂಡುಕೊಂಡಿದೆ.
ಇದು
ದಿನವಿಡಿ
ರಕ್ತದಲ್ಲಿನ
ಸಕ್ಕರೆ
ಮಟ್ಟವನ್ನು
ಕಾಪಾಡುವಲ್ಲಿ
ಪ್ರಮುಖ
ಪಾತ್ರ
ವಹಿಸುವುದು.
ಈ
ಅಧ್ಯಯನ
ವರದಿಯು
ಅಮೆರಿಕನ್
ಜರ್ನಲ್
ಆಫ್
ಕ್ಲಿನಿಕಲ್
ನ್ಯೂಟ್ರಿಷನ್
ನಲ್ಲಿ
ಪ್ರಕಟವಾಗಿದೆ.
ಬೆಳಗ್ಗಿನ
ಉಪಾಹಾರದ
ಬಳಿಕ
ಕೆಲವು
ಜನರಲ್ಲಿ
ರಕ್ತದಲ್ಲಿನ
ಸಕ್ಕರೆ
ಮಟ್ಟವು
ಎಚ್ಚಾಗುವುದು.
ಟೈಪ್
2
ಮಧುಮೇಹಿಗಳಲ್ಲಿ
ಬೆಳಗ್ಗಿನ
ಅವಧಿಯಲ್ಲಿ
ಇನ್ಸುಲಿನ್
ಪ್ರತಿರೋಧಕವು
ಕೂಡ
ಇರುವುದು.
ಇದಕ್ಕೆ
ಮುಖ್ಯ
ಕಾರಣವೆಂದರೆ
ಕೆಲವೊಂದು
ಉಪಾಹಾರಗಳಾಗಿರುವಂತಹ
ಸೀರಲ್,
ಓಟ್
ಮೀಲ್,
ಟೋಸ್ಟ್
ಮತ್ತು
ಹಣ್ಣುಗಳು.
ಯಾಕೆಂದರೆ
ಇದರಲ್ಲಿ
ಉನ್ನತ
ಮಟ್ಟದ
ಕಾರ್ಬೋಹೈಡ್ರೇಟ್ಸ್
ಗಳು
ಇರುತ್ತದೆ
ಎಂದು
ಅಧ್ಯಯನ
ಲೇಖಕ
ಜೊನಾಥನ್
ಲಿಟ್ಲ್
ತಿಳಿಸಿರುವರು.
ಉಪಾಹಾರದ ವೇಳೆ ಹೆಚ್ಚಾಗಿ ದೇಹಕ್ಕೆ ಸಕ್ಕರೆಯು ಸೇರಿಕೊಳ್ಳುವುದು. ಇದರಿಂದಾಗಿ ಟೈಪ್ 2 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಅಧಿಕವಾಗುವುದು. ಮಧುಮೇಹಿಯೊಬ್ಬ ಕಡಿಮೆ ಕಾರ್ಬ್ ಮತ್ತು ಅಧಿಕ ಕೊಬ್ಬನ್ನು ಉಪಾಹಾರಕ್ಕೆ ಸೇವನೆ ಮಾಡಿದರೆ, ಆಗ ದಿನವಿಡಿ ಹೆಚ್ಚುವರಿಯಾಗಿ ಸಕ್ಕರೆ ಸೇವನೆ ಪ್ರಮಾಣವು ತಗ್ಗುವುದು ಎಂದು ಜೊನಾಥನ್ ಅವರು ಹೇಳಿದ್ದಾರೆ. ಉಪಾಹಾರಕ್ಕೆ ಮೊಟ್ಟೆ ಸೇವಿಸಿದರೆ ಆಗ ಮಧುಮೇಹದ ಇತರ ಕೆಲವೊಂದು ಸಮಸ್ಯೆಗಳು ಕೂಡ ನಿವಾರಣೆ ಆಗುವುದು.
ಈ
ಸಂಶೋಧನೆಗಾಗಿ
ಟೈಪ್
2
ಮಧುಮೇಹವನ್ನು
ನಿಯಂತ್ರಣದಲ್ಲಿ
ಇಟ್ಟುಕೊಂಡಿರುವ
ಜನರನ್ನು
ಪರೀಕ್ಷೆಗೆ
ಒಳಪಡಿಸಲಾಯಿತು.
ಮೊದಲ
ದಿನ
ಅವರಿಗೆ
ಉಪಾಹಾರಕ್ಕೆ
ಆಮ್ಲೆಟ್
ನೀಡಲಾಯಿತು.
ಮರುದಿನ
ಉಪಾಹಾರಕ್ಕೆ
ಅವರಿಗೆ
ಓಟ್
ಮೀಲ್
ಮತ್ತು
ಹಣ್ಣುಗಳನ್ನು
ನೀಡಲಾಯಿತು.
ಇದರ
ಬಳಿಕ
ಸಾಮಾನ್ಯವಾದ
ಮಧ್ಯಾಹ್ನದ
ಹಾಗೂ
ರಾತ್ರಿ
ಊಟ
ನೀಡಲಾಯಿತು.
ಸಣ್ಣ
ಸಾಧನವನ್ನು
ರೋಗಿಗಳ
ಹೊಟ್ಟೆಗೆ
ಅಳವಡಿಸಲಾಗಿತ್ತು.
ಇದರಿಂದ ಪ್ರತೀ ಐದು ನಿಮಿಷಕ್ಕೆ ಅವರ ಸಕ್ಕರೆ ಪ್ರಮಾಣವು ತಿಳಿದುಬರುತ್ತಿತ್ತು. ಇದರೊಂದಿಗೆ ಕೆಲವು ಇತರ ಸಮಸ್ಯೆಗಳು ಆಗಿರುವಂತಹ ಹಸಿವು, ಹೊಟ್ಟೆ ತುಂಬಿದಂತೆ ಆಗುವುದು ಮತ್ತು ಸಿಹಿ ತಿನ್ನಬೇಕು ಎನ್ನುವ ಬಯಕೆ ಬಗ್ಗೆ ಕೂಡ ಪರೀಕ್ಷೆ ಮಾಡಲಾಯಿತು. ಕಡಿಮೆ ಕಾರ್ಬ್ ಮತ್ತು ಅಧಿಕ ಕೊಬ್ಬು ಇರುವಂತಹ ಉಪಾಹಾರ ಸೇವನೆಯಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗುವುದು ತಗ್ಗುವುದು ಮತ್ತು ದಿನವಿಡಿ ಸಕ್ಕರೆ ಪ್ರಮಾಣ ಕಡಿಮೆ ಸೇವನೆ ಮಾಡುವಂತೆ ಆಗುವುದು.