Latest Updates
-
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ!
ಬಾಳೆ ಹಣ್ಣಿನ ಆಯ್ಕೆಯ ಗೊಂದಲದಲ್ಲಿದ್ದೀರಾ? ಹಾಗಾದರೆ ಇದನ್ನು ಓದಿ...
ಭಾರತೀಯರ ದೈನಂದಿನ ಆಹಾರದಲ್ಲಿ ಬಾಳೆಹಣ್ಣು ಸಹ ಒಂದು. ಇದರಲ್ಲಿ ಇರುವ ವಿವಿಧತೆ ಅಪಾರ. ಒಬ್ಬಬ್ಬರಿಗೆ ಒಂದೊಂದು ಬಗೆಯ ಹಣ್ಣು ಇಷ್ಟವಾಗುತ್ತದೆ. ಅಂತೆಯೇ ಕೆಲವರು ಮಾಗಿದ ಹಣ್ಣನ್ನು ಇಷ್ಟಪಟ್ಟರೆ ಇನ್ನು ಕೆಲವರು ಹಸಿರಾಗಿರುವ (ಸ್ವಲ್ಪ ಕಾಯಂತೆ ಇರುವ ಬಾಳೆ ಹಣ್ಣು) ಹಣ್ಣನ್ನು ಇಷ್ಟಪಡುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಎನ್ನುವುದು ತಿಳಿದಿಲ್ಲ.
ಎಲ್ಲಾ ಬಗೆಯ ಬಾಳೆ ಹಣ್ಣಿನಲ್ಲೂ ಫಾಸ್ಪರಸ್, ವಿಟಮಿನ್ಗಳು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ಗಳು ಇರುತ್ತವೆ. ಇದರಲ್ಲಿ ನಾರಿನಂಶವೂ ಸಮೃದ್ಧವಾಗಿದೆ. ಬಾಳೆಹಣ್ಣಿನ ಸೇವನೆಯಿಂದ ವಿವಿಧ ಕ್ಯಾನ್ಸರ್ಗಳನ್ನೂ ತಡೆಗಟ್ಟಬಹುದು ಎಂದು ಕೆಲವು ಅಧ್ಯಯನಗಳು ದೃಢ ಪಡಿಸಿವೆ. ಹಾಗಾದರೆ ಮಾಗಿದ ಬಾಳೆಹಣ್ಣು ಒಳ್ಳೆಯದಾ? ಬಲಿಯದ ಬಾಳೆಹಣ್ಣು ಒಳ್ಳೆಯದಾ? ಎನ್ನುವುದನ್ನು ತಿಳಿಯೋಣ....

ಬಲಿಯದ ಬಾಳೆಹಣ್ಣು
ಇದು ದೇಹಕ್ಕೆ ಸೂಕ್ತವಾದ ಕ್ಯಾಲ್ಸಿಯಂ ನೀಡುತ್ತದೆ. ಅತಿಸಾರದಿಂದ ಬಳಲುತಿದ್ದರೆ ಬಲಿಯದ ಬಾಳೆಹಣ್ಣನ್ನು ಸೇವಿಸಬೇಕು. ಇದು ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುವುದು. ಇದರಿಂದ ದೇಹದ ಕೊಲೊನ್ ಆರೋಗ್ಯವನ್ನು ಹೆಚ್ಚಿಸುತ್ತದೆ.

ತುಂಬಾ ಹಣ್ಣಾಗದ ಬಾಳೆಹಣ್ಣು ಮಧುಮೇಹಿಗಳಿಗೆ ಒಳ್ಳೆಯದು
ಹಣ್ಣಾಗದ ಬಾಳೆಹಣ್ಣು ಎರಡನೇ ಬಗೆಯ ಮಧುಮೇಹಿಗಳಿಗೆ ಉತ್ತಮವಾದದ್ದು. ಇದರಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಗುಣ ಅಧಿಕವಾಗಿರುತ್ತದೆ.

ಬಲಿತ ಬಾಳೆ ಹಣ್ಣು ಅಥವಾ ಹಣ್ಣಾದ ಬಾಳೆಹಣ್ಣು
ಬಲಿಯದ ಬಾಳೆ ಹಣ್ಣಿಗೆ ಹೋಲಿಸಿದರೆ ಬಲಿತ ಬಾಳೆಹಣ್ಣು (ಹಳದಿ ಬಣ್ಣದ ಬಾಳೆ ಹಣ್ಣು) ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತದೆ.

ಗ್ಯಾಸ್ ಉಂಟಾಗದು
ಬಲಿತ ಬಾಳೆ ಹಣ್ಣಿನ ಸೇವನೆಯಿಂದ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ ಸಮಸ್ಯೆ ಉಂಟಾಗದು. ಹಸಿರು ಬಾಳೆ ಹಣ್ಣಿನಿಂದ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಉಂಟಾಗುವ ಸಾಧ್ಯತೆ ಇರುತ್ತದೆ.

ಜೀರ್ಣವಾಗುವುದು
ಬಲಿತ ಮತ್ತು ಹಸಿರಾದ ಬಾಳೆ ಹಣ್ಣಿನ ಉಪಯೋಗಗಳನ್ನು ಲೆಕ್ಕ ಹಾಕಿದರೆ ಬಲಿತ ಬಾಳೆ ಹಣ್ಣು ಬಹು ಬೇಗ ಜೀರ್ಣವಾಗುವುದು.

ಮಧುಮೇಹಿಗಳಿಗಲ್ಲ
ಬಲಿತ ಬಾಳೆಹಣ್ಣಿನಲ್ಲಿ ಗ್ಲೈಸೆಮಿಕ್ ಸೂಚಿಯು ಅಧಿಕವಾಗಿರುತ್ತವೆ. ಇವು ಮಧುಮೇಹಿಗಳಿಗೆ ಒಳ್ಳೆಯದಲ್ಲ.

ಸೂಕ್ಷ್ಮ ಪೋಷಕಾಂಶಗಳು
ಬಾಳೆ ಹಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳು ಇರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಹಣ್ಣು ಹೆಚ್ಚು ಬಲಿತಂತೆ ಸೂಕ್ಷ್ಮ ಪೋಷಕಾಂಶಗಳು ಕಡಿಮೆಯಾಗುತ್ತವೆ.

ಸಣ್ಣ ಕರುಳಿಗೆ ಒಳ್ಳೆಯದು
ಹಸಿರು ಬಾಳೆ ಹಣ್ಣಿನಲ್ಲಿ ಫ್ಯಾಟಿ ಆಸಿಡ್ಸ್ ಹೆಚ್ಚಿರುತ್ತವೆ. ಇವು ಸಣ್ಣ ಕರುಳಿಗೆ ಉತ್ತಮವಾದದ್ದು. ಬಲಿತ ಹಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ.
ಈ ರೀತಿಯಲ್ಲಿ ಬಲಿತ ಮತ್ತು ಕಾಯಾಗಿರುವ ಬಾಳೆ ಹಣ್ಣಿನ ಪ್ರಯೋಜನಗಳಿವೆ. ಇವುಗಳಲ್ಲಿ ಯಾವುದು ನಿಮಗೆ ಅಗತ್ಯ ಎನ್ನುವುದನ್ನು ನಿರ್ಧರಿಸಿ ಬಾಳೆ ಹಣ್ಣನ್ನು ಸವಿಯಿರಿ.



Click it and Unblock the Notifications