Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಳೆ ಹಣ್ಣಿನ ಆಯ್ಕೆಯ ಗೊಂದಲದಲ್ಲಿದ್ದೀರಾ? ಹಾಗಾದರೆ ಇದನ್ನು ಓದಿ...
ಭಾರತೀಯರ ದೈನಂದಿನ ಆಹಾರದಲ್ಲಿ ಬಾಳೆಹಣ್ಣು ಸಹ ಒಂದು. ಇದರಲ್ಲಿ ಇರುವ ವಿವಿಧತೆ ಅಪಾರ. ಒಬ್ಬಬ್ಬರಿಗೆ ಒಂದೊಂದು ಬಗೆಯ ಹಣ್ಣು ಇಷ್ಟವಾಗುತ್ತದೆ. ಅಂತೆಯೇ ಕೆಲವರು ಮಾಗಿದ ಹಣ್ಣನ್ನು ಇಷ್ಟಪಟ್ಟರೆ ಇನ್ನು ಕೆಲವರು ಹಸಿರಾಗಿರುವ (ಸ್ವಲ್ಪ ಕಾಯಂತೆ ಇರುವ ಬಾಳೆ ಹಣ್ಣು) ಹಣ್ಣನ್ನು ಇಷ್ಟಪಡುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಎನ್ನುವುದು ತಿಳಿದಿಲ್ಲ.
ಎಲ್ಲಾ ಬಗೆಯ ಬಾಳೆ ಹಣ್ಣಿನಲ್ಲೂ ಫಾಸ್ಪರಸ್, ವಿಟಮಿನ್ಗಳು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ಗಳು ಇರುತ್ತವೆ. ಇದರಲ್ಲಿ ನಾರಿನಂಶವೂ ಸಮೃದ್ಧವಾಗಿದೆ. ಬಾಳೆಹಣ್ಣಿನ ಸೇವನೆಯಿಂದ ವಿವಿಧ ಕ್ಯಾನ್ಸರ್ಗಳನ್ನೂ ತಡೆಗಟ್ಟಬಹುದು ಎಂದು ಕೆಲವು ಅಧ್ಯಯನಗಳು ದೃಢ ಪಡಿಸಿವೆ. ಹಾಗಾದರೆ ಮಾಗಿದ ಬಾಳೆಹಣ್ಣು ಒಳ್ಳೆಯದಾ? ಬಲಿಯದ ಬಾಳೆಹಣ್ಣು ಒಳ್ಳೆಯದಾ? ಎನ್ನುವುದನ್ನು ತಿಳಿಯೋಣ....

ಬಲಿಯದ ಬಾಳೆಹಣ್ಣು
ಇದು ದೇಹಕ್ಕೆ ಸೂಕ್ತವಾದ ಕ್ಯಾಲ್ಸಿಯಂ ನೀಡುತ್ತದೆ. ಅತಿಸಾರದಿಂದ ಬಳಲುತಿದ್ದರೆ ಬಲಿಯದ ಬಾಳೆಹಣ್ಣನ್ನು ಸೇವಿಸಬೇಕು. ಇದು ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುವುದು. ಇದರಿಂದ ದೇಹದ ಕೊಲೊನ್ ಆರೋಗ್ಯವನ್ನು ಹೆಚ್ಚಿಸುತ್ತದೆ.

ತುಂಬಾ ಹಣ್ಣಾಗದ ಬಾಳೆಹಣ್ಣು ಮಧುಮೇಹಿಗಳಿಗೆ ಒಳ್ಳೆಯದು
ಹಣ್ಣಾಗದ ಬಾಳೆಹಣ್ಣು ಎರಡನೇ ಬಗೆಯ ಮಧುಮೇಹಿಗಳಿಗೆ ಉತ್ತಮವಾದದ್ದು. ಇದರಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಗುಣ ಅಧಿಕವಾಗಿರುತ್ತದೆ.

ಬಲಿತ ಬಾಳೆ ಹಣ್ಣು ಅಥವಾ ಹಣ್ಣಾದ ಬಾಳೆಹಣ್ಣು
ಬಲಿಯದ ಬಾಳೆ ಹಣ್ಣಿಗೆ ಹೋಲಿಸಿದರೆ ಬಲಿತ ಬಾಳೆಹಣ್ಣು (ಹಳದಿ ಬಣ್ಣದ ಬಾಳೆ ಹಣ್ಣು) ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತದೆ.

ಗ್ಯಾಸ್ ಉಂಟಾಗದು
ಬಲಿತ ಬಾಳೆ ಹಣ್ಣಿನ ಸೇವನೆಯಿಂದ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ ಸಮಸ್ಯೆ ಉಂಟಾಗದು. ಹಸಿರು ಬಾಳೆ ಹಣ್ಣಿನಿಂದ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಉಂಟಾಗುವ ಸಾಧ್ಯತೆ ಇರುತ್ತದೆ.

ಜೀರ್ಣವಾಗುವುದು
ಬಲಿತ ಮತ್ತು ಹಸಿರಾದ ಬಾಳೆ ಹಣ್ಣಿನ ಉಪಯೋಗಗಳನ್ನು ಲೆಕ್ಕ ಹಾಕಿದರೆ ಬಲಿತ ಬಾಳೆ ಹಣ್ಣು ಬಹು ಬೇಗ ಜೀರ್ಣವಾಗುವುದು.

ಮಧುಮೇಹಿಗಳಿಗಲ್ಲ
ಬಲಿತ ಬಾಳೆಹಣ್ಣಿನಲ್ಲಿ ಗ್ಲೈಸೆಮಿಕ್ ಸೂಚಿಯು ಅಧಿಕವಾಗಿರುತ್ತವೆ. ಇವು ಮಧುಮೇಹಿಗಳಿಗೆ ಒಳ್ಳೆಯದಲ್ಲ.

ಸೂಕ್ಷ್ಮ ಪೋಷಕಾಂಶಗಳು
ಬಾಳೆ ಹಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳು ಇರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಹಣ್ಣು ಹೆಚ್ಚು ಬಲಿತಂತೆ ಸೂಕ್ಷ್ಮ ಪೋಷಕಾಂಶಗಳು ಕಡಿಮೆಯಾಗುತ್ತವೆ.

ಸಣ್ಣ ಕರುಳಿಗೆ ಒಳ್ಳೆಯದು
ಹಸಿರು ಬಾಳೆ ಹಣ್ಣಿನಲ್ಲಿ ಫ್ಯಾಟಿ ಆಸಿಡ್ಸ್ ಹೆಚ್ಚಿರುತ್ತವೆ. ಇವು ಸಣ್ಣ ಕರುಳಿಗೆ ಉತ್ತಮವಾದದ್ದು. ಬಲಿತ ಹಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ.
ಈ ರೀತಿಯಲ್ಲಿ ಬಲಿತ ಮತ್ತು ಕಾಯಾಗಿರುವ ಬಾಳೆ ಹಣ್ಣಿನ ಪ್ರಯೋಜನಗಳಿವೆ. ಇವುಗಳಲ್ಲಿ ಯಾವುದು ನಿಮಗೆ ಅಗತ್ಯ ಎನ್ನುವುದನ್ನು ನಿರ್ಧರಿಸಿ ಬಾಳೆ ಹಣ್ಣನ್ನು ಸವಿಯಿರಿ.



Click it and Unblock the Notifications











