Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಆಲೂಗಡ್ಡೆಯನ್ನು ಮೊದಲು ಪರಿಶೀಲಿಸಿ, ಆಮೇಲೆ ಸಾಂಬಾರ್ಗೆ ಬಳಸಿ!
ತರಕಾರಿಯಲ್ಲಿ ತುಂಬಾ ಜನಪ್ರಿಯವಾಗಿರುವಂತಹ ಆಲೂಗಡ್ಡೆಯಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಆಲೂಗಡ್ಡೆ ಉತ್ತರ ಭಾರತೀಯರಿಗೆ ನೆಚ್ಚಿನ ಆಹಾರ. ದಕ್ಷಿಣ ಭಾರತೀಯರು ಕೂಡ ಮಸಾಲೆ ದೋಸೆಗಳಲ್ಲಿ ಇದನ್ನು ಬಳಸುತ್ತಾರೆ. ತುಂಬಾ ರುಚಿಕರ ಹಾಗೂ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಆಲೂಗಡ್ಡೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕೆಂದು ಇರುವವರು ಇದನ್ನು ಸೇವಿಸಬೇಕು.
ಇದರಲ್ಲಿ ಇರುವಂತಹ ಉನ್ನತ ಮಟ್ಟದ ಕಾರ್ಬೋಹೈಡ್ರೇಟ್ಸ್ ಅನ್ನು ದೇಹವು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಲಭ್ಯವಾಗುತ್ತದೆ. ಇಂತಹ ಆಹಾರವನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಆದರೆ ಇದರಿಂದ ಕೂಡ ಕೆಲವೊಂದು ಸಲ ದೂರವಿರಬೇಕಾಗುತ್ತದೆ...! ಆಲೂಗಡ್ಡೆ ಚಿಪ್ಸ್: ಹಣ ಕೊಟ್ಟು ಕಾಯಿಲೆ ಖರೀದಿಸಬೇಡಿ!
ಇದರಲ್ಲಿರುವ ಸೊಲಾನಿನ್ ಎನ್ನುವ ನ್ಯೂರೋಟಾಕ್ಸಿನ್ ತುಂಬಾ ಹಾನಿಕಾರಕ. ಅತಿಯಾದರೆ ಅಮೃತವು ವಿಷವೆನ್ನುತ್ತಾರೆ. ಅದೇ ರೀತಿ ಆಲೂಗಡ್ಡೆಯನ್ನು ಅತಿಯಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಯಾವಾಗ ಇದನ್ನು ಬಳಸಬಾರದು ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಿ...

ಆಲೂಗಡ್ಡೆಯ ಬಳಸುವ ಮುನ್....
ಆಲೂಗಡ್ಡೆಯನ್ನು ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ತರುವುದು ನಮಗೆ ಅಭ್ಯಾಸ ಮತ್ತು ದೀರ್ಘ ಕಾಲದ ತನಕ ಅದನ್ನು ಬಳಸುತ್ತೇವೆ. ಅಲ್ಲದೆ ಇದನ್ನು ದೀರ್ಘ ಕಾಲದ ತನಕ ಇಟ್ಟರೆ ಅದರಿಂದ ದೇಹಕ್ಕೆ ವಿಷವಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ತುಂಬಾ ಸಮಯ ಅಡುಗೆಗೆ ಬಳಸದೆ ಇದನ್ನು ಇಟ್ಟಾಗ ಅದರಲ್ಲಿ ಸುಕ್ಕು ಹಾಗೂ ಮೆತ್ತಗಿನ ಪದರ ನಿರ್ಮಾಣವಾಗುತ್ತದೆ. ಅಷ್ಟೇ ಅಲ್ಲದೆ ಇದನ್ನು ಬಿಸಿಲಿಗೆ ಇಟ್ಟರೆ ಸೋಲಾನಿನ್ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ಮತ್ತಷ್ಟು ಕೆಟ್ಟ ಪರಿಣಾಮ ಉಂಟಾಗುವುದು.

ಮೊಳಕೆ ಬರುವುದು ಯಾವಾಗ..
ಆಲೂಗಡ್ಡೆಯಲ್ಲಿ ಮೊಳಕೆ ಬಂದರೆ ಅದನ್ನು ಬಳಸಬೇಕೇ ಅಥವಾ ಬಿಸಾಕಬೇಕೇ ಎನ್ನುವ ಸಂಶಯ ಈಗಲೂ ಜನರಲ್ಲಿ ಇದೆ. ಮೊಳಕೆಯಲ್ಲಿ ಉನ್ನತ ಮಟ್ಟದ ಸೊಲಾನಿನ್ ಮತ್ತು ಚಾಕೊನಿನ್ ಇದ್ದು, ಇದು ನರವ್ಯವಸ್ಥೆಗೆ ತುಂಬಾ ಹಾನಿ ಉಂಟು ಮಾಡಲಿದೆ. ಸಾವಯವವಾಗಿ ಬೆಳೆಸಿರುವ ಆಲೂಗಡ್ಡೆಯಲ್ಲಿ ರಾಸಾಯನಿಕಗಳನ್ನು ಬಳಸಿದ ಆಲೂಗಡ್ಡೆಯಿಂದ ಬೇಗನೆ ಮೊಳಕೆ ಬೆಳೆಯುತ್ತದೆ.
ಆಲೂಗಡ್ಡೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!

ಗಟ್ಟಿಯಾಗಿರುವ ಆಲೂಗಡ್ಡೆ...
ಆಲೂಗಡ್ಡೆ ಗಟ್ಟಿಯಾಗಿದ್ದಾಗ ಆಥವಾ ಸುಕ್ಕು ಹಾಗೂ ಮೆತ್ತಗೆ ಇರುವಾಗ ಮೊಳಕೆ ಬರುವುದು. ಗಟ್ಟಿಯಾಗಿರುವ ಆಲೂಗಡ್ಡೆಯಲ್ಲಿ ಮೊಳಕೆ ಬಂದರೆ ಆಗ ಮೊಳಕೆಯನ್ನು ಕತ್ತರಿಸಿ ತೆಗೆದು ಬಳಸಬಹುದು. ಯಾಕೆಂದರೆ ಅದರಲ್ಲಿರುವ ಪೋಷಕಾಂಶಗಳು ಹಾಗೆ ಉಳಿದುಕೊಂಡಿರುತ್ತದೆ. ಒಂದು ವೇಳೆ ಆಲೂಗಡ್ಡೆ ಸುಕ್ಕು ಕಟ್ಟಿದ್ದರೆ ಆಗ ಇದನ್ನು ಬಿಸಾಕಿ.
ಆಲೂಗಡ್ಡೆಯ ಸಿಪ್ಪೆಯ ಪವರ್ಗೆ ಶಭಾಷ್ ಎನ್ನಲೇಬೇಕು!

ಹಸಿರಾಗುವುದು ಯಾವಾಗ
ಬಿಸಿಲಿಗೆ ಅತಿಯಾಗಿ ಒಡ್ಡಲ್ಪಟ್ಟಿರುವ ಆಲೂಗಡ್ಡೆಯಲ್ಲಿ ಸೊಲಾನಿನ್ ಅಂಶವು ಹೆಚ್ಚಾಗಿ ಅದು ಹಸಿರಾಗುವುದು. ಹೀಗೆ ಆಗಿದ್ದರೆ ಹಸಿರು ಭಾಗವನ್ನು ಕತ್ತರಿಸಿಕೊಂಡು ಉಳಿದ ಭಾಗವನ್ನು ಸೇವಿಸಬಹುದಾಗಿದೆ.



Click it and Unblock the Notifications