Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಆರೋಗ್ಯ ಟಿಪ್ಸ್: ಹುಲ್ಲಿನ ಮೇಲಿನ ನಡಿಗೆ, ಆರೋಗ್ಯದ ಕಡೆಗೆ...
ವಾರಾಂತ್ಯ ಬಂದರೆ ಸಾಕು ಪ್ರತಿಯೊಬ್ಬರು ಒಂದೆರಡು ದಿನಗಳ ಕಾಲ ನಗರದ ಜಂಜಾಟದಿಂದ ದೂರ ಹೋಗಿ ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕೆಂದು ಬಯಸುತ್ತಾರೆ. ನಗರದ ಟ್ರಾಫಿಕ್, ಕಲುಷಿತ ವಾತಾವರಣ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಪ್ರತೀದಿನ ಸ್ವಲ್ಪ ದೂರ ನಡೆಯಬೇಕೆಂದು ಪ್ರತಿಯೊಬ್ಬರೂ ಹೇಳುತ್ತಾರೆ. ನಡುಗೆಯೇನು ಸಾಮಾನ್ಯ ಅಂದುಕೊಂಡಿರಾ?
ಇದು ನಿಜವಾದರೂ ಕೇವಲ ನಡೆದಾಡುವುದರಿಂದ ಮಾತ್ರ ಸಂಪೂರ್ಣ ಆರೋಗ್ಯ ಬರುವುದಿಲ್ಲ. ಗ್ರಾಮೀಣ ಭಾಗದಲ್ಲಿರುವ ವಯಸ್ಸಾದ ಜನರನ್ನು ನೋಡಿದರೆ ಅವರು ನಗರ ಪ್ರದೇಶದ ಯುವಕರಿಗಿಂತ ಕಟ್ಟುಮಸ್ತಾಗಿ ಆರೋಗ್ಯವಾಗಿರುತ್ತಾರೆ. ಬರಿಗಾಲಿನ ನಡಿಗೆಯಲ್ಲಿದೆ ಬಹುಪಯೋಗ
ಇದಕ್ಕೆಲ್ಲಾ ಕಾರಣ ಪ್ರಕೃತಿ. ಹೌದು, ಪ್ರಕೃತಿ ಜತೆಯಲ್ಲೇ ಇರುವುದು ಗ್ರಾಮೀಣ ಭಾಗದವರ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ ಹುಲ್ಲಿನಲ್ಲಿ ನಡೆಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಇವೆ ಎಂದು ಹೇಳಿವೆ. ಯಾವೆಲ್ಲಾ ಲಾಭಗಳು ನಮಗೆ ಸಿಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಮೂಳೆಗಳ ಆರೋಗ್ಯಕ್ಕಾಗಿ
ಹುಲ್ಲಿನಲ್ಲಿ ನಡೆದಾಡುವುದರಿಂದ ಮೂಳೆಗಳ ಆರೋಗ್ಯವು ಉತ್ತಮವಾಗುವುದು. ಸಂಧಿವಾತದಂತಹ ಸಮಸ್ಯೆಯನ್ನು ಇದು ತಡೆಯುವುದು. ಬೆಳಿಗ್ಗೆ ನೀವು ಹುಲ್ಲಿನಲ್ಲಿ ನಡೆದಾಡುವಾಗ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ಡಿ ದೇಹಕ್ಕೆ ಸೇರಿಕೊಳ್ಳುತ್ತದೆ. ಇದು ಆರೋಗ್ಯಕರ ಮೂಳೆಗಳಿಗೆ ತುಂಬಾ ಒಳ್ಳೆಯದು.

ಶಕ್ತಿ ಒದಗಿಸುವುದು
ಬೆಳಿಗ್ಗೆ ಹುಲ್ಲಿನಲ್ಲಿ ನಡೆದಾಡುವುದರಿಂದ ಕಾಲಿನ ಭಾಗಗಳು ಒದ್ದೆಯಾಗುವುದು. ಸೂರ್ಯನ ಬೆಳಕಿನಲ್ಲಿರುವ ಕೆಲವೊಂದು ಪ್ರಮುಖ ಅಂಶಗಳು ದೇಹವನ್ನು ಸೇರಿಕೊಳ್ಳುತ್ತದೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ ದಿನವಿಡಿ ನೀವು ಉಲ್ಲಾಸಿತರಾಗಿರುವಂತೆ ಮಾಡುತ್ತದೆ. ಇದು ದೇಹದ ನರ ಹಾಗೂ ಸ್ನಾಯುಗಳನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ದೇಹದಲ್ಲಿರುವ ಕೀಟಾಣುಗಳನ್ನು ಹೊರಹಾಕುತ್ತದೆ.

ಆಯಸ್ಕಾಂತೀಯ ಶಕ್ತಿ!
ಚಪ್ಪಲಿ ಧರಿಸದೆ ಹುಲ್ಲಿನ ಮೇಲೆ ನಡೆದಾಡಿದರೆ ಭೂಮಿಯ ಆಯಸ್ಕಾಂತೀಯ ಶಕ್ತಿಯ
ಸಂಪರ್ಕವಾಗುತ್ತದೆ. ಇದರಿಂದ ದೇಹದಲ್ಲಿನ ವಿದ್ಯುತ್ಕಾಂತೀಯ ಮತ್ತು ಆಯಸ್ಕಾಂತೀಯ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಕೆಲವೊಂದು ರೋಗಗಳಿಗೆ ಕಾರಣವಾಗುವಂತಹ ನಕಾರಾತ್ಮಕ ಅಂಶಗಳನ್ನು ದೂರ ಮಾಡುತ್ತದೆ. ಇದರಿಂದ ದೇಹವು ಸ್ವಚ್ಛವಾಗುವುದು.

ಒತ್ತಡದ ಬಿಂದುಗಳನ್ನು ಉತ್ತೇಜಿಸುವುದು
ಪಾದದ ಅಡಿಯಲ್ಲಿ ಹಲವಾರು ರೀತಿಯ ಒತ್ತಡದ ಬಿಂದುಗಳಿವೆ. ಇದು ಉತ್ತೇಜಿಸಲ್ಪಟ್ಟಾಗ ದೇಹದಲ್ಲಿರುವ ವಿವಿಧ ಅಂಗಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಬೆಳಿಗ್ಗೆ ಚಪ್ಪಲಿ ಹಾಕದೆ ಹುಲ್ಲಿನ ಮೇಲೆ ನಡೆದಾಡಿದರೆ ಒತ್ತಡದ ಬಿಂದುಗಳು ಉತ್ತೇಜಿತವಾಗುತ್ತದೆ. ಇದರಿಂದ ದೇಹದ ವಿವಿಧ ರೋಗಗಳು ನಿವಾರಣೆಯಾಗುವುದು.

ಮನಸ್ಸನ್ನು ಶಾಂತಗೊಳಿಸುವುದು
ಬೆಳಗ್ಗಿನ ಅವಧಿಯಲ್ಲಿ ಪ್ರಕೃತಿಯಲ್ಲಿರುವ ಶಾಂತ ವಾತಾವರಣವು ಮನಸ್ಸನ್ನು ಶಾಂತಗೊಳಿಸಿ ದೇಹವು ಪುನರ್ಚೇತನಗೊಳ್ಳುವಂತೆ ಮಾಡುತ್ತದೆ. ಸೂರ್ಯನ ಬಿಸಿ ಕಿರಣಗಳು, ಸ್ವಚ್ಛ ಗಾಳಿ ಮತ್ತು ಶಾಂತ ವಾತಾವರಣವು ಮನಸ್ಸನ್ನು ಶಾಂತಗೊಳಿಸುವುದು.



Click it and Unblock the Notifications
