Just In
- 2 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 2 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 3 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 3 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯ ಟಿಪ್ಸ್: ಹುಲ್ಲಿನ ಮೇಲಿನ ನಡಿಗೆ, ಆರೋಗ್ಯದ ಕಡೆಗೆ...
ವಾರಾಂತ್ಯ ಬಂದರೆ ಸಾಕು ಪ್ರತಿಯೊಬ್ಬರು ಒಂದೆರಡು ದಿನಗಳ ಕಾಲ ನಗರದ ಜಂಜಾಟದಿಂದ ದೂರ ಹೋಗಿ ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕೆಂದು ಬಯಸುತ್ತಾರೆ. ನಗರದ ಟ್ರಾಫಿಕ್, ಕಲುಷಿತ ವಾತಾವರಣ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಪ್ರತೀದಿನ ಸ್ವಲ್ಪ ದೂರ ನಡೆಯಬೇಕೆಂದು ಪ್ರತಿಯೊಬ್ಬರೂ ಹೇಳುತ್ತಾರೆ. ನಡುಗೆಯೇನು ಸಾಮಾನ್ಯ ಅಂದುಕೊಂಡಿರಾ?
ಇದು ನಿಜವಾದರೂ ಕೇವಲ ನಡೆದಾಡುವುದರಿಂದ ಮಾತ್ರ ಸಂಪೂರ್ಣ ಆರೋಗ್ಯ ಬರುವುದಿಲ್ಲ. ಗ್ರಾಮೀಣ ಭಾಗದಲ್ಲಿರುವ ವಯಸ್ಸಾದ ಜನರನ್ನು ನೋಡಿದರೆ ಅವರು ನಗರ ಪ್ರದೇಶದ ಯುವಕರಿಗಿಂತ ಕಟ್ಟುಮಸ್ತಾಗಿ ಆರೋಗ್ಯವಾಗಿರುತ್ತಾರೆ. ಬರಿಗಾಲಿನ ನಡಿಗೆಯಲ್ಲಿದೆ ಬಹುಪಯೋಗ
ಇದಕ್ಕೆಲ್ಲಾ ಕಾರಣ ಪ್ರಕೃತಿ. ಹೌದು, ಪ್ರಕೃತಿ ಜತೆಯಲ್ಲೇ ಇರುವುದು ಗ್ರಾಮೀಣ ಭಾಗದವರ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ ಹುಲ್ಲಿನಲ್ಲಿ ನಡೆಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಇವೆ ಎಂದು ಹೇಳಿವೆ. ಯಾವೆಲ್ಲಾ ಲಾಭಗಳು ನಮಗೆ ಸಿಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....
ಮೂಳೆಗಳ ಆರೋಗ್ಯಕ್ಕಾಗಿ
ಹುಲ್ಲಿನಲ್ಲಿ ನಡೆದಾಡುವುದರಿಂದ ಮೂಳೆಗಳ ಆರೋಗ್ಯವು ಉತ್ತಮವಾಗುವುದು. ಸಂಧಿವಾತದಂತಹ ಸಮಸ್ಯೆಯನ್ನು ಇದು ತಡೆಯುವುದು. ಬೆಳಿಗ್ಗೆ ನೀವು ಹುಲ್ಲಿನಲ್ಲಿ ನಡೆದಾಡುವಾಗ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ಡಿ ದೇಹಕ್ಕೆ ಸೇರಿಕೊಳ್ಳುತ್ತದೆ. ಇದು ಆರೋಗ್ಯಕರ ಮೂಳೆಗಳಿಗೆ ತುಂಬಾ ಒಳ್ಳೆಯದು.
ಶಕ್ತಿ ಒದಗಿಸುವುದು
ಬೆಳಿಗ್ಗೆ ಹುಲ್ಲಿನಲ್ಲಿ ನಡೆದಾಡುವುದರಿಂದ ಕಾಲಿನ ಭಾಗಗಳು ಒದ್ದೆಯಾಗುವುದು. ಸೂರ್ಯನ ಬೆಳಕಿನಲ್ಲಿರುವ ಕೆಲವೊಂದು ಪ್ರಮುಖ ಅಂಶಗಳು ದೇಹವನ್ನು ಸೇರಿಕೊಳ್ಳುತ್ತದೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ ದಿನವಿಡಿ ನೀವು ಉಲ್ಲಾಸಿತರಾಗಿರುವಂತೆ ಮಾಡುತ್ತದೆ. ಇದು ದೇಹದ ನರ ಹಾಗೂ ಸ್ನಾಯುಗಳನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ದೇಹದಲ್ಲಿರುವ ಕೀಟಾಣುಗಳನ್ನು ಹೊರಹಾಕುತ್ತದೆ.
ಆಯಸ್ಕಾಂತೀಯ ಶಕ್ತಿ!
ಚಪ್ಪಲಿ ಧರಿಸದೆ ಹುಲ್ಲಿನ ಮೇಲೆ ನಡೆದಾಡಿದರೆ ಭೂಮಿಯ ಆಯಸ್ಕಾಂತೀಯ ಶಕ್ತಿಯ
ಸಂಪರ್ಕವಾಗುತ್ತದೆ. ಇದರಿಂದ ದೇಹದಲ್ಲಿನ ವಿದ್ಯುತ್ಕಾಂತೀಯ ಮತ್ತು ಆಯಸ್ಕಾಂತೀಯ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಕೆಲವೊಂದು ರೋಗಗಳಿಗೆ ಕಾರಣವಾಗುವಂತಹ ನಕಾರಾತ್ಮಕ ಅಂಶಗಳನ್ನು ದೂರ ಮಾಡುತ್ತದೆ. ಇದರಿಂದ ದೇಹವು ಸ್ವಚ್ಛವಾಗುವುದು.
ಒತ್ತಡದ ಬಿಂದುಗಳನ್ನು ಉತ್ತೇಜಿಸುವುದು
ಪಾದದ ಅಡಿಯಲ್ಲಿ ಹಲವಾರು ರೀತಿಯ ಒತ್ತಡದ ಬಿಂದುಗಳಿವೆ. ಇದು ಉತ್ತೇಜಿಸಲ್ಪಟ್ಟಾಗ ದೇಹದಲ್ಲಿರುವ ವಿವಿಧ ಅಂಗಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಬೆಳಿಗ್ಗೆ ಚಪ್ಪಲಿ ಹಾಕದೆ ಹುಲ್ಲಿನ ಮೇಲೆ ನಡೆದಾಡಿದರೆ ಒತ್ತಡದ ಬಿಂದುಗಳು ಉತ್ತೇಜಿತವಾಗುತ್ತದೆ. ಇದರಿಂದ ದೇಹದ ವಿವಿಧ ರೋಗಗಳು ನಿವಾರಣೆಯಾಗುವುದು.
ಮನಸ್ಸನ್ನು ಶಾಂತಗೊಳಿಸುವುದು
ಬೆಳಗ್ಗಿನ ಅವಧಿಯಲ್ಲಿ ಪ್ರಕೃತಿಯಲ್ಲಿರುವ ಶಾಂತ ವಾತಾವರಣವು ಮನಸ್ಸನ್ನು ಶಾಂತಗೊಳಿಸಿ ದೇಹವು ಪುನರ್ಚೇತನಗೊಳ್ಳುವಂತೆ ಮಾಡುತ್ತದೆ. ಸೂರ್ಯನ ಬಿಸಿ ಕಿರಣಗಳು, ಸ್ವಚ್ಛ ಗಾಳಿ ಮತ್ತು ಶಾಂತ ವಾತಾವರಣವು ಮನಸ್ಸನ್ನು ಶಾಂತಗೊಳಿಸುವುದು.