Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟದ ತಟ್ಟೆಯ ಪಕ್ಕ ಇರಲಿ, ಒಂದು ತುಂಡು ಸೌತೆಕಾಯಿ
ಕೆಲವರಿಗೆ ಊಟದ ನಡುವೆ ಹಸಿ ಸೌತೆಯ ತುಂಡುಗಳನ್ನು ಜಗಿಯುವ ಅಭ್ಯಾಸವಿರುತ್ತದೆ. ಇನ್ನೂ ಕೆಲವರಿಗೆ ಕ್ಯಾರೆಟ್ ಈರುಳ್ಳಿಗಳನ್ನು ಜಗಿಯುವ ಅಭ್ಯಾಸವಿರುತ್ತದೆ. ಹಲವರಿಗೆ ವಿವಿಧ ತರಕಾರಿಗಳ ಮಿಶ್ರಣವನ್ನು ಜಗಿಯುವ ಅಭ್ಯಾಸವಿರುತ್ತದೆ. ಆದರೆ ಇವೆಲ್ಲದರ ಹೊರತಾಗಿ ಸೌತೆಕಾಯಿಯನ್ನು ನಿತ್ಯವೂ ಸೇವಿಸುವುದರಿಂದ ಇದರಲ್ಲಿರುವ ವಿವಿಧ ಪೋಷಕಾಂಶಗಳು ದೇಹಕ್ಕೆ ವಿವಿಧ ರೀತಿಯಲ್ಲಿ ಉಪಕಾರವನ್ನು ಮಾಡುತ್ತವೆ. ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!
ವಿಶೇಷವಾಗಿ ಚರ್ಮಕ್ಕೆ ಇದು ನೀಡುವ ಪೋಷಣೆಯ ಕಾರಣದಿಂದ ಸೌಂದರ್ಯವರ್ಧನೆಗಾಗಿ ಲೇಪನದಂತೆ ಬಳಸುವ ಜೊತೆಗೇ ಆಹಾರದ ಮೂಲಕ ಸೇವಿಸುವುದರಿಂದ ಚರ್ಮಕ್ಕೆ ಒಳಗಿನಿಂದ ಹೆಚ್ಚಿನ ಪೋಷಣೆ ಲಭ್ಯವಾಗುತ್ತದೆ. ಚರ್ಮಕ್ಕೆ ಸಹಜವರ್ಣ ದೊರಕುವ ಜೊತೆಗೇ ಕೂದಲಿಗೂ ಉತ್ತಮ ಪೋಷಣೆ ದೊರಕುತ್ತದೆ. ಇದೇ ಕಾರಣಕ್ಕೆ ಪ್ರತಿದಿನ ಸೌತೆಕಾಯಿಯನ್ನು ನಿತ್ಯವೂ ಸಾಲಾಡ್ ರೂಪದಲ್ಲಿ ಸೇವಿಸುವುದು ಅಗತ್ಯವಾಗಿದೆ. ದೇಹಕ್ಕೆ ತಂಪುಣಿಸುವ ಸೌತೆಕಾಯಿ ಜ್ಯೂಸ್ನ ಕರಾಮತ್ತೇನು?
ಇದರ ಪರಿಣಾಮವನ್ನು ಪಡೆಯಲು ಹಸಿಯಾಗಿ ತಿನ್ನುವುದು ಉತ್ತಮವಾದರೂ ಜ್ಯೂಸ್ ಮಾಡಿಕೊಂಡೂ ಕುಡಿಯಬಹುದು. ಬನ್ನಿ, ಸೌತೆಯ ನಿಯಮಿತ ಮತ್ತು ನಿತ್ಯದ ಸೇವನೆಯಿಂದ ಆರೋಗ್ಯಕ್ಕೆ ಯಾವ ಯಾವ ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ
ಬಾಯಿಯಲ್ಲಿ ದುರ್ವಾಸನೆಯಿದ್ದರೆ ಒಂದು ಎಳೆಸೌತೆಯ ಬಿಲ್ಲೆಯನ್ನು ನಾಲಿಗೆಯ ಮೇಲಿಟ್ಟು ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಇದನ್ನು ಉಗಿದು ಬಾಯಿಯನ್ನು ತಣ್ಣೀರಿನಿಂದ ಮುಕ್ಕಳಿಸಿ. ಇದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.

ತಲೆನೋವು ಕಡಿಮೆಯಾಗುತ್ತದೆ
ಸಾಮಾನ್ಯವಾಗಿ ರಾತ್ರಿಯ ಪಾರ್ಟಿಯ ಬಳಿಕ ಬೆಳಿಗ್ಗೆದ್ದಾಗ ತಲೆನೋವು ಆವರಿಸುತ್ತಿದ್ದರೆ ಇದಕ್ಕೆ ರಾತ್ರಿಯ ಊಟ ಭಾರಿಯಾಗಿರುವುದು ಕಾರಣವಾಗಿರಬಹುದು. ಆದ್ದರಿಂದ ರಾತ್ರಿ ಊಟದ ಬಳಿಕ ಕೆಲವು ಸೌತೆಕಾಯಿಯ ಬಿಲ್ಲೆಗಳನ್ನು ಅಗಿದು ಮಲಗಿ. ಇದರಿಂದ ಉತ್ತಮ ನಿದ್ದೆ ಬರುವ ಜೊತೆಗೇ ಬೆಳಿಗ್ಗೆದ್ದಾಗ ತಾಜಾತನದಿಂದಿರಲು ನೆರವಾಗುತ್ತದೆ. ಇದರಲ್ಲಿರುವ ಎಲೆಕ್ಟ್ರೋಲೈಟುಗಳು, ವಿಟಮಿನ್ನು ಮತ್ತು ಸಕ್ಕರೆ ಇದಕ್ಕೆ ನೆರವಾಗುತ್ತವೆ.

ತೂಕ ಇಳಿಸಲು ನೆರವಾಗುತ್ತದೆ
ಮುಖದ ಮೇಲೆ ನವಿರಾದ ನೆರಿಗೆಗಳು ಮೂಡಿದ್ದರೆ ಒಂದು ಸೌತೆಯ ಬಿಲ್ಲೆಯನ್ನು ನೆರಿಗೆಗಳಿರುವಲ್ಲಿ ಉಜ್ಜಿ. ಇದರಿಂದ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ. ನಿತ್ಯವೂ ಸೌತೆಯ ಜ್ಯೂಸ್ ಕುಡಿಯುವ ಮೂಲಕ ತೂಕ ಇಳಿಸಲೂ ನೆರವಾಗುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ
ಕೆಲವು ಸಂಶೋಧನೆಗಳ ಮೂಲಕ ಮಲಬದ್ಧತೆಗೆ ಸೌತೆಕಾಯಿ ಉತ್ತಮ ಪರಿಹಾರ ಎಂದು ಕಂಡುಕೊಳ್ಳಲಾಗಿದೆ. ಪ್ರತಿ ಊಟದಲ್ಲಿ ಹಸಿ ಸೌತೆಕಾಯಿಯ ಕೆಲವು ತುಂಡುಗಳನ್ನು ತಿನ್ನುವ ಮೂಲಕ ಮಲಬದ್ಧತೆಯಾಗದಿರುವಂತೆ ನೋಡಿಕೊಳ್ಳಬಹುದು.

ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಸೌತೆಕಾಯಿ ಒಂದು ಔಷಧಿಯಂತಿದೆ. ಈ ತೊಂದರೆ ಇರುವವರು ಊಟದ ನಡುವೆ ಕೊಂಚ ಸೌತೆಬಿಲ್ಲೆಗಳನ್ನು ಸೇವಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು.

ದೇಹದಲ್ಲಿ ಶಕ್ತಿ ಹೆಚ್ಚಿಸುತ್ತದೆ
ಮಧ್ಯಾಹ್ನದ ಬಳಿಕ ಎದುರಾಗುವ ಬಳಲಿಕೆಯಿಂದ ಪಾರಾಗಲು ಕಾಫಿ ಕುಡಿಯುವ ಬದಲು ಒಂದು ಎಳೆ ಸೌತೆಯನ್ನು ಅಗಿದು ತಿನ್ನಿ. ಇದರಲ್ಲಿರುವ ವಿಟಮಿನ್ನುಗಳು ಮತ್ತು ಕಾರ್ಬೋಹೈಡ್ರೇಟುಗಳು ತಕ್ಷಣವೇ ರಕ್ತಕ್ಕೆ ಲಭ್ಯವಾಗಿ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ.



Click it and Unblock the Notifications









