Just In
- 14 min ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- 52 min ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
- 1 hr ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 2 hrs ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
Don't Miss
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- News ಗೃಹ ಸಚಿವ ಡಾ. ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹ: ಕಾರಣವೇನು?
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರಿಕಿರಿ ನೀಡುವ ಶೀತದ ಸಮಸ್ಯೆಗೆ 'ಆಹಾರ ಪಥ್ಯ' ಹೀಗಿರಲಿ...
ಬಿಟ್ಟು, ಬಿಡದೆ ಕಾಡುವ ಶೀತಕ್ಕೆ ಮನೆ ಮದ್ದು ಮಾಡುವುದೇ ಒಳ್ಳೆಯದು. ಶೀತವನ್ನು ತಕ್ಷಣ ಶಮನ ಮಾಡುವ ಪರಿಣಾಮಕಾರಿಯಾದ ಮನೆ ಮದ್ದು ಏನು ಎಂದು ಮೊದಲಿಗೆ ನೋಡೋಣ ಬನ್ನಿ....
ದೇಹಕ್ಕೆ ಸಣ್ಣ ಸಮಸ್ಯೆಯಾದರೂ ಅದರಿಂದ ಕಿರಿಕಿರಿ ಉಂಟಾಗುವುದು ಸಹಜ. ಅದರಲ್ಲೂ ಶೀತ ಹಾಗೂ ಕೆಮ್ಮು ಇದ್ದರೆ ಆಗ ಹೆಚ್ಚಿನ ಸಮಸ್ಯೆಯಾಗುತ್ತದೆ. ಯಾಕೆಂದರೆ ಶೀತವಿದ್ದರೆ ಗಂಟಲು ನೋವು ಇದ್ದೇ ಇರುತ್ತದೆ. ಗಂಟಲು ನೋವು ಇರುವುದರಿಂದ ದ್ರವ ಹಾಗೂ ಘನ ಆಹಾರ ಸೇವನೆ ಕಷ್ಟವಾಗುತ್ತದೆ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು
ಶೀತವಿದ್ದರೆ ಮೂಗು ಕಟ್ಟಿದ್ದರೆ ಆಥವಾ ಮೂಗಿನಿಂದ ಸಿಂಬಳ ಸುರಿಯುತ್ತಾ ಇದ್ದರೆ ಅದು ದೊಡ್ಡ ಕಿರಕಿರಿಯುಂಟು ಮಾಡುವುದು. ಶೀತವಿದ್ದಾಗ ಹಸಿವು ಕೂಡ ಕಡಿಮೆಯಿರುತ್ತದೆ. ಶೀತ ಭಾದಿಸುವಾಗ ಹಸಿವನ್ನು ಹೆಚ್ಚಿಸಿಕೊಂಡು ಯಾವ ರೀತಿಯ ಆಹಾರವನ್ನು ಸೇವಿಸಬಹುದು ಎಂದು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಸುವಾಸನೆಯಿರುವಂತಹ ಆಹಾರವನ್ನು ಸೇವಿಸಿ. ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?
ಯಾಕೆಂದರೆ ಸುವಾಸನೆಯಿಂದ ನಿಮಗೆ ಹಸಿವು ಹೆಚ್ಚಾಗುವುದು. ಸುವಾಸನೆಯಿಂದ ಆಹಾರ ಹಾಗೂ ಪಾನೀಯವನ್ನು ಸೇವಿಸಬಹುದು. ಇದರಿಂದ ಹಸಿವು ಹೆಚ್ಚಾಗುವ ಸಾಧ್ಯತೆಯಿದೆ... ಮುಂದೆ ಓದಿ...
ಸೂಪ್ ಸೇವಿಸಿ
ಟೊಮೆಟೋದಂತಹ ತರಕಾರಿ ಸೂಪ್ ಅಥವಾ ಕೋಳಿಯ ಸೂಪ್ ಶೀತದಿಂದ ಪರಿಹಾರ ಪಡೆಯಲು ತುಂಬಾ ಒಳ್ಳೆಯದು. ಉಸಿರಾಟದ ನಾಳಗಳಲ್ಲಿ ಅಂಟಿಕೊಂಡಿರುವ ಕಫವನ್ನು ತೆಗೆಯಲು ಇದು ತುಂಬಾ ಸಹಕಾರಿ. ಬಿಸಿಯಾಗಿರುವ ಸೂಪ್ ಕಫವನ್ನು ತೆಳುವಾಗಿಸಿ ಮೂಗಿನಿಂದ ಹೊರಹೋಗಲು ನೆರವಾಗುವುದು. ಶೀತ, ಕೆಮ್ಮು, ಜ್ವರಕ್ಕೆಲ್ಲಾ ರಾಮಬಾಣ- ಬಿಸಿ ಬಿಸಿಯಾದ ಸೂಪ್!
ಬಿಸಿ ನೀರು ಕುಡಿಯಿರಿ
ಶೀತವಿದ್ದಾಗ ನೀರು ಕುಡಿಯಲು ನೀವು ಹಿಂಜರಿಯಬಹುದು. ಆದರೆ ದಿನವಿಡಿ ಬಿಸಿನೀರನ್ನು ಕುಡಿಯುತ್ತಾ ಇರಿ. ಯಾಕೆಂದರೆ ಶೀತ ಹಾಗೂ ಕೆಮ್ಮು ದೇಹದಲ್ಲಿ ನಿರ್ಜಲೀಕರಣವನ್ನು ಉಂಟು ಮಾಡುತ್ತದೆ. ಜೇನುತುಪ್ಪ ಮತ್ತು ಲಿಂಬೆರಸವನ್ನು ಬಿಸಿನೀರಿಗೆ ಹಾಕಿ ಕುಡಿಯುತ್ತಾ ಇರಿ. ಜೇನುತುಪ್ಪವು ಗಂಟಲಿಗೆ ಒಳ್ಳೆಯದು. ಲಿಂಬೆರಸದಲ್ಲಿರುವ ವಿಟಮಿನ್ ಸಿ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು. ಆರೋಗ್ಯದ ದೃಷ್ಟಿಯಿಂದ, ದಿನನಿತ್ಯ ಬಿಸಿ ನೀರು ಸೇವಿಸಿ
ಎಳೆ ನೀರು
ಎಳೆ ನೀರನ್ನು ಯಾವಾಗಲೂ ಕುಡಿಯುತ್ತಾ ಇರಿ. ಇದು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು. ನೀವು ಕಾಯಿಲೆಗೆ ಬಿದ್ದಾಗ ಕಳೆದುಕೊಂಡಿರುವ ಪೋಷಕಾಂಶಗಳನ್ನು ಇದು ದೇಹಕ್ಕೆ ಒದಗಿಸುವುದು. ಅಲ್ಲದೇ ಹಸಿರು ಟೀ, ಕಪ್ಪು ಟೀ, ಶುಂಠಿ ಚಹಾ ಕುಡಿಯಿರಿ. ಇದು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ ಮತ್ತು ಜ್ವರದ ವಿರುದ್ಧ ಹೋರಾಡುತ್ತದೆ. ಬೆಳ್ಳಂ ಬೆಳಿಗ್ಗೆ ಎದ್ದು ಎಳೆ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ
ಮೊಟ್ಟೆ, ಕೋಳಿ
ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಪ್ರೋಟೀನ್ನಿಂದ ಸಮೃದ್ಧವಾಗಿರುವ ಮೊಟ್ಟೆ, ಕೋಳಿ ಸೇವಿಸಿ. ಗೆಣಸು, ಹೂಕೋಸು, ಓಟ್ಸ್ ಮತ್ತು ಮೊಸರನ್ನು ಸೇವಿಸಿ. ಇದು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿ ಉರಿಯೂತದ ವಿರುದ್ಧ ಹೋರಾಡುವುದು. ಹೊಸ ರುಚಿಯಲ್ಲಿ 6 ಬಗೆಯ ಮೊಟ್ಟೆಯ ರೆಸಿಪಿ