Latest Updates
-
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ!
ಮೆಹೆಂದಿ -ಕೇವಲ ಅಲಂಕಾರಿಕವಲ್ಲ, ಆರೋಗ್ಯಕರವೂ ಕೂಡಾ
ಸಾವಿರಾರು ವರ್ಷಗಳಿಂದ ಮದರಂಗಿ ಅಥವಾ ಮೆಹೆಂದಿ ಒಂದು ಪ್ರಸಾಧನವಾಗಿ ಬಳಸಲ್ಪಡುತ್ತಾ ಬಂದಿದೆ. ಇದರ ಆರೋಗ್ಯಕರ ಗುಣಗಳನ್ನು ಕಂಡ ಬಳಿಕ ಅಲಂಕಾರದ ಹೊರತಾಗಿ ಔಷಧಿಯಾಗಿಯೂ ಬಳಸಲ್ಪಡಲಾಗುತ್ತಿದೆ. ಇದೊಂದು ನೈಸರ್ಗಿಕ ತಂಪುಕಾರಕ ಮತ್ತು ನೈಸರ್ಗಿಕ ಬಣ್ಣನೀಡುವ ಪ್ರಸಾಧನವಾಗಿದೆ.

ಮೂಲತಃ ಅರೇಬಿಯಾದದ್ದಾದರೂ ಭಾರತದ ಸಂಸ್ಕೃತಿಯಲ್ಲಿ ಮದರಂಗಿಯ ಮಹತ್ವದ ಪಾತ್ರವಿದೆ. ಮದುವೆ, ಹಬ್ಬ ಮೊದಲಾದ ಶುಭಸಂದರ್ಭಗಳಲ್ಲಿ ಮದರಂಗಿಯಿಂದ ಅಲಂಕರಿಸುವ ಪದ್ದತಿ ಸರಿಸುಮಾರು ಭಾರತದ ಎಲ್ಲಾ ಧರ್ಮಗಳಲ್ಲಿ ಹಾಸುಹೊಕ್ಕಾಗಿದೆ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ!
ಬಿಳಿಯಾದ ತಲೆಗೂದಲಿಗೆ ಕೆಂಚು ಬಣ್ಣವನ್ನು ನೀಡುವ ಮದರಂಗಿ ತಲೆಯನ್ನು ತಂಪಾಗಿರಿಸಲು ನೆರವಾಗುತ್ತದೆ. ಇದರ ಹೊರತಾಗಿ ಮದರಂಗಿ ಇನ್ನೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಬನ್ನಿ, ಇದರ ಔಷಧೀಯ ಗುಣಗಳ ಬಗ್ಗೆ ಕೊಂಚ ಅರಿಯೋಣ: ನಂಬುತ್ತೀರೋ ಬಿಡುತ್ತೀರೋ 'ಮೆಹೆಂದಿಯ' ಹಿಂದೆಯೂ ಕಟ್ಟುಕಥೆ ಇದೆ!
ತಲೆಗೂದಲು ಉದುರುವುದನ್ನು ತಡೆಗಟ್ಟಲು
ಕೊಂಚ ಮದರಂಗಿಯ ಹಸಿ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಸುಮಾರು ಹತ್ತು ನಿಮಿಷ ಕಾಲ ಕುದಿಸಿ ತಣಿಸಿ. ಈ ಎಣ್ಣೆಯನ್ನು ತಲೆಗೂದಲಿಗೆ ಹಚ್ಚಿಕೊಂಡರೆ ತಲೆಗೂದಲು ಉದುರುವುದು ನಿಲ್ಲುವುದರ ಜೊತೆಗೇ ಕಳೆದುಕೊಂಡಿದ್ದ ಕೂದಲು ಮತ್ತೆ ಹುಟ್ಟಲು ನೆರವಾಗುತ್ತದೆ.
ಆಮಶಂಕೆ ನಿವಾರಣೆಗೆ
ಆಮಶಂಕೆಯಾಗಿದ್ದರೆ ಮದರಂಗಿಯ ಹೂವಿನ ಬೀಜಗಳು ಅತ್ಯುತ್ತಮವಾದ ಪರಿಹಾರ ನೀಡುತ್ತದೆ. ಇದರ ಬೀಜದ ಪುಡಿಯನ್ನು ಕೊಂಚ ತುಪ್ಪದೊಂದಿಗೆ ಮಿಶ್ರಣ ಮಾಡಿ ಚಿಕ್ಕ ಚಿಕ್ಕ ಗೋಲಿಗಳನ್ನಾಗಿಸಿ ಕೊಂಚ ನೀರಿನೊಂದಿಗೆ ಸೇವಿಸಿ.
ಕಾಮಾಲೆ ಕಾಯಿಲೆಗೆ
ಕಾಮಾಲೆ ಕಾಯಿಲೆಗೆ ಮದರಂಗಿ ಗಿಡದ ಕಾಂಡವನ್ನು ಬಳಸಬಹುದು. ಕಾಮಾಲೆ ಮತ್ತು ಇದರ ಮೂಲಕ ಯಕೃತ್ ನ ಕ್ಷಮತೆ ಉಡುಗಿದ್ದರೆ ಕಾಂಡದ ಚಿಕ್ಕ ಚಿಕ್ಕ ತುಂಡುಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಕುದಿಸಿ ದಿನಕ್ಕೆ ಎರಡು ಬಾರಿ ಕುಡಿಯುವ ಮೂಲಕ ಶೀಘ್ರ ಪರಿಹಾರ ಪಡೆಯಬಹುದು.
ಗಂಟಲ ಬೇನೆಗೆ
ಗಂಟಲ ಬೇನೆ, ಕೆರೆತ, ಕೆಮ್ಮು, ಕಫ ಕಟ್ಟಿರುವುದು ಮೊದಲಾದವುಗಳಿಗೆ ಮದರಂಗಿ ಪುಡಿಯನ್ನು ಟೀಪುಡಿಯಂತೆ ಉಪಯೋಗಿಸಿ ಒಂದೆರಡು ನಿಮಿಷ ಕುದಿಸಿ ಸೋಸಿ ಕುಡಿಯಬೇಕು. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!
ಬೆವರುಸಾಲೆಗೆ
ಸೆಖೆಯಿಂದ ಮೂಡಿರುವ ಬೆವರುಸಾಲೆಯಿಂದ ಪರಿಹಾರ ಪಡೆಯಲು ಕೊಂಚ ಮದರಂಗಿಯ ಹಸಿ ಎಲೆಗಳನ್ನು ನೀರಿನೊಂದಿಗೆ ಅರೆದು ಬೆವರುಸಾಲೆ ಇರುವ ಚರ್ಮದ ಮೇಲೆಲ್ಲಾ ತೆಳುವಾಗಿ ಹಚ್ಚಿ. ಸುಮಾರು ಹತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ಸುಟ್ಟ ಗಾಯಗಳಿಗೆ
ಗಾಯದಿಂದ ಸುಟ್ಟ ಚರ್ಮವನ್ನು ತಣ್ಣೀರಿನ ಅಡಿ ಇರಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಎದುರಾಗುವ ಗುಳ್ಳೆ ಶೀಘ್ರವಾಗಿ ಒಡೆಯಲು ಮತ್ತು ಹೊಸಚರ್ಮ ಮೂಡಲು ಮದರಂಗಿಯ ಹಸಿ ಎಲೆಗಳನ್ನು ಅರೆದು ಹಚ್ಚಬೇಕು. ಸುಟ್ಟಗಾಯ ಶೀಘ್ರವಾಗಿ ಸಾಂತ್ವನ ನೀಡುವ ಸರಳ ಮನೆಮದ್ದುಗಳು
ತಲೆನೋವಿಗೆ
ಅರೆತಲೆನೋವು ಮತ್ತು ಒಂದು ಬದಿಯ ತಲೆನೋವಿದ್ದರೆ ಕೊಂಚ ಮದರಂಗಿ ಪುಡಿಯನ್ನು ಶಿರ್ಕಾದೊಂದಿಗೆ ಬೆರೆಸಿ ಲೇಪನ ತಯಾರಿಸಿ ಹಣೆಗೆ ಹಚ್ಚಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


