Latest Updates
-
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ! -
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ: ಸಂಗಾತಿಯೊಂದಿಗೆ ಟೆನ್ಷನ್ ಇಲ್ಲದೆ ಪ್ರಯಾಣಿಸುವುದು ಹೇಗೆ?
ಮೆಹೆಂದಿ -ಕೇವಲ ಅಲಂಕಾರಿಕವಲ್ಲ, ಆರೋಗ್ಯಕರವೂ ಕೂಡಾ
ಸಾವಿರಾರು ವರ್ಷಗಳಿಂದ ಮದರಂಗಿ ಅಥವಾ ಮೆಹೆಂದಿ ಒಂದು ಪ್ರಸಾಧನವಾಗಿ ಬಳಸಲ್ಪಡುತ್ತಾ ಬಂದಿದೆ. ಇದರ ಆರೋಗ್ಯಕರ ಗುಣಗಳನ್ನು ಕಂಡ ಬಳಿಕ ಅಲಂಕಾರದ ಹೊರತಾಗಿ ಔಷಧಿಯಾಗಿಯೂ ಬಳಸಲ್ಪಡಲಾಗುತ್ತಿದೆ. ಇದೊಂದು ನೈಸರ್ಗಿಕ ತಂಪುಕಾರಕ ಮತ್ತು ನೈಸರ್ಗಿಕ ಬಣ್ಣನೀಡುವ ಪ್ರಸಾಧನವಾಗಿದೆ.

ಮೂಲತಃ ಅರೇಬಿಯಾದದ್ದಾದರೂ ಭಾರತದ ಸಂಸ್ಕೃತಿಯಲ್ಲಿ ಮದರಂಗಿಯ ಮಹತ್ವದ ಪಾತ್ರವಿದೆ. ಮದುವೆ, ಹಬ್ಬ ಮೊದಲಾದ ಶುಭಸಂದರ್ಭಗಳಲ್ಲಿ ಮದರಂಗಿಯಿಂದ ಅಲಂಕರಿಸುವ ಪದ್ದತಿ ಸರಿಸುಮಾರು ಭಾರತದ ಎಲ್ಲಾ ಧರ್ಮಗಳಲ್ಲಿ ಹಾಸುಹೊಕ್ಕಾಗಿದೆ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ!
ಬಿಳಿಯಾದ ತಲೆಗೂದಲಿಗೆ ಕೆಂಚು ಬಣ್ಣವನ್ನು ನೀಡುವ ಮದರಂಗಿ ತಲೆಯನ್ನು ತಂಪಾಗಿರಿಸಲು ನೆರವಾಗುತ್ತದೆ. ಇದರ ಹೊರತಾಗಿ ಮದರಂಗಿ ಇನ್ನೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಬನ್ನಿ, ಇದರ ಔಷಧೀಯ ಗುಣಗಳ ಬಗ್ಗೆ ಕೊಂಚ ಅರಿಯೋಣ: ನಂಬುತ್ತೀರೋ ಬಿಡುತ್ತೀರೋ 'ಮೆಹೆಂದಿಯ' ಹಿಂದೆಯೂ ಕಟ್ಟುಕಥೆ ಇದೆ!
ತಲೆಗೂದಲು ಉದುರುವುದನ್ನು ತಡೆಗಟ್ಟಲು
ಕೊಂಚ ಮದರಂಗಿಯ ಹಸಿ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಸುಮಾರು ಹತ್ತು ನಿಮಿಷ ಕಾಲ ಕುದಿಸಿ ತಣಿಸಿ. ಈ ಎಣ್ಣೆಯನ್ನು ತಲೆಗೂದಲಿಗೆ ಹಚ್ಚಿಕೊಂಡರೆ ತಲೆಗೂದಲು ಉದುರುವುದು ನಿಲ್ಲುವುದರ ಜೊತೆಗೇ ಕಳೆದುಕೊಂಡಿದ್ದ ಕೂದಲು ಮತ್ತೆ ಹುಟ್ಟಲು ನೆರವಾಗುತ್ತದೆ.
ಆಮಶಂಕೆ ನಿವಾರಣೆಗೆ
ಆಮಶಂಕೆಯಾಗಿದ್ದರೆ ಮದರಂಗಿಯ ಹೂವಿನ ಬೀಜಗಳು ಅತ್ಯುತ್ತಮವಾದ ಪರಿಹಾರ ನೀಡುತ್ತದೆ. ಇದರ ಬೀಜದ ಪುಡಿಯನ್ನು ಕೊಂಚ ತುಪ್ಪದೊಂದಿಗೆ ಮಿಶ್ರಣ ಮಾಡಿ ಚಿಕ್ಕ ಚಿಕ್ಕ ಗೋಲಿಗಳನ್ನಾಗಿಸಿ ಕೊಂಚ ನೀರಿನೊಂದಿಗೆ ಸೇವಿಸಿ.
ಕಾಮಾಲೆ ಕಾಯಿಲೆಗೆ
ಕಾಮಾಲೆ ಕಾಯಿಲೆಗೆ ಮದರಂಗಿ ಗಿಡದ ಕಾಂಡವನ್ನು ಬಳಸಬಹುದು. ಕಾಮಾಲೆ ಮತ್ತು ಇದರ ಮೂಲಕ ಯಕೃತ್ ನ ಕ್ಷಮತೆ ಉಡುಗಿದ್ದರೆ ಕಾಂಡದ ಚಿಕ್ಕ ಚಿಕ್ಕ ತುಂಡುಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಕುದಿಸಿ ದಿನಕ್ಕೆ ಎರಡು ಬಾರಿ ಕುಡಿಯುವ ಮೂಲಕ ಶೀಘ್ರ ಪರಿಹಾರ ಪಡೆಯಬಹುದು.
ಗಂಟಲ ಬೇನೆಗೆ
ಗಂಟಲ ಬೇನೆ, ಕೆರೆತ, ಕೆಮ್ಮು, ಕಫ ಕಟ್ಟಿರುವುದು ಮೊದಲಾದವುಗಳಿಗೆ ಮದರಂಗಿ ಪುಡಿಯನ್ನು ಟೀಪುಡಿಯಂತೆ ಉಪಯೋಗಿಸಿ ಒಂದೆರಡು ನಿಮಿಷ ಕುದಿಸಿ ಸೋಸಿ ಕುಡಿಯಬೇಕು. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!
ಬೆವರುಸಾಲೆಗೆ
ಸೆಖೆಯಿಂದ ಮೂಡಿರುವ ಬೆವರುಸಾಲೆಯಿಂದ ಪರಿಹಾರ ಪಡೆಯಲು ಕೊಂಚ ಮದರಂಗಿಯ ಹಸಿ ಎಲೆಗಳನ್ನು ನೀರಿನೊಂದಿಗೆ ಅರೆದು ಬೆವರುಸಾಲೆ ಇರುವ ಚರ್ಮದ ಮೇಲೆಲ್ಲಾ ತೆಳುವಾಗಿ ಹಚ್ಚಿ. ಸುಮಾರು ಹತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ಸುಟ್ಟ ಗಾಯಗಳಿಗೆ
ಗಾಯದಿಂದ ಸುಟ್ಟ ಚರ್ಮವನ್ನು ತಣ್ಣೀರಿನ ಅಡಿ ಇರಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಎದುರಾಗುವ ಗುಳ್ಳೆ ಶೀಘ್ರವಾಗಿ ಒಡೆಯಲು ಮತ್ತು ಹೊಸಚರ್ಮ ಮೂಡಲು ಮದರಂಗಿಯ ಹಸಿ ಎಲೆಗಳನ್ನು ಅರೆದು ಹಚ್ಚಬೇಕು. ಸುಟ್ಟಗಾಯ ಶೀಘ್ರವಾಗಿ ಸಾಂತ್ವನ ನೀಡುವ ಸರಳ ಮನೆಮದ್ದುಗಳು
ತಲೆನೋವಿಗೆ
ಅರೆತಲೆನೋವು ಮತ್ತು ಒಂದು ಬದಿಯ ತಲೆನೋವಿದ್ದರೆ ಕೊಂಚ ಮದರಂಗಿ ಪುಡಿಯನ್ನು ಶಿರ್ಕಾದೊಂದಿಗೆ ಬೆರೆಸಿ ಲೇಪನ ತಯಾರಿಸಿ ಹಣೆಗೆ ಹಚ್ಚಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


