Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉಪ್ಪುನೀರಿನಿಂದ ಗಳಗಳ ಮಾಡಿದರೆ ಕೆಮ್ಮು-ಶೀತ ಮಾಯ!
ಮಕ್ಕಳು ಕೆಮ್ಮಿದರೆ, ಗರಗರ ಶಬ್ಧ ಮಾಡಿದರೆ ತಕ್ಷಣ ಹಿರಿಯರು 'ಉಪ್ಪುನೀರಿನಿಂದ ಬಾಯಿಯನ್ನು ಮುಕ್ಕಳಿಸಿ ಚೆನ್ನಾಗಿ ಗಳಗಳ ಮಾಡು' ಎಂದು ತಕ್ಷಣ ಸಲಹೆ ನೀಡುತ್ತಾರೆ. ಏಕೆಂದರೆ ಶೀತ ಕೆಮ್ಮಿಗೆ ಇದರಿಂದ ತಕ್ಷಣದ ಪರಿಣಾಮ ಬೀರಲು ಸಾಧ್ಯ ಎಂಬುದನ್ನು ಅವರು ಅನುಭವದಿಂದ ಕಂಡುಕೊಂಡಿದ್ದಾರೆ. ಆದರೆ ವಾಸ್ತವವಾಗಿ ಈ ವಿಧಾನ ಎಷ್ಟು ಪರಿಣಾಮಕಾರಿ?

ಗಂಟಲ ಬೇನೆ ಇದ್ದರೆ ಇದಕ್ಕೆ ಗಂಟಲಿನ ಒಳಭಾಗದ ಉರಿಯೂತ ಕಾರಣವಾಗಿರಬಹುದು. ಇದರ ಪರಿಣಾಮವಾಗಿ ಒಳಭಾಗದಲ್ಲಿ ಕೊಂಚ ಊದಿಕೊಂಡಿದ್ದು ಒಳಗೆ ದ್ರವರೂಪದ ಸೋಂಕು ಸಂಗ್ರಹವಾಗಿರುತ್ತದೆ. ಈ ಸ್ಥಿತಿಗೆ edema ಎಂದು ಕರೆಯುತ್ತಾರೆ.
ಈ ಕಾರಣದಿಂದ ಕೆಮ್ಮು ಉಂಟಾಗಿದ್ದರೆ ಉಪ್ಪುನೀರಿನ ಗಳಗಳ ಕೆಲಸಕ್ಕೆ ಬರುತ್ತದೆ. ಉಪ್ಪುನೀರು ಬಾಯಿಯ ಒಳಗಣ ಮತ್ತು ಮೇಲ್ಭಾಗ, ಕಿರುನಾಲಿಗೆ ಮೊದಲಾದ ಕಡೆ ಅಂಟಿಕೊಂಡಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಬಲ್ಲುದು. ಅಲ್ಲದೇ ಸೋಂಕಿಗೊಳಗಾದ ಚರ್ಮದ ಮೇಲೆ ಉಪ್ಪುನೀರಿನಿಂದ ಗಳಗಳ ಮಾಡಿದಾಗ ಇದು ಸೋಂಕು ಉಂಟಾಗಿದ್ದ ಚರ್ಮದ ಹೊರಗೂ ಪ್ರಚೋದನೆ ನೀಡಿ ಇಲ್ಲಿಂದ ಒಳಗಣ ಸೋಂಕು ಹೊರಬರುವಂತೆ ಮಾಡುತ್ತದೆ. ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!
ಇದಕ್ಕಾಗಿ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಿರುವುದು ಅಗತ್ಯ. ಏಕೆಂದರೆ ಉಪ್ಪು ಹೆಚ್ಚಾಗಿದ್ದಷ್ಟೂ ಸೋಂಕಿರುವ ಚರ್ಮದ ಈ ಭಾಗದಲ್ಲಿ ಉಪ್ಪಿನ ಸಾಂದ್ರತೆ ಹೆಚ್ಚಾಗಿ ಒಳಗಡೆ ಇರುವ ಕಡಿಮೆ ಸಾಂದ್ರತೆಯ ಸೋಂಕು ಚರ್ಮದ ಸೂಕ್ಷ್ಮರಂಧ್ರದಿಂದ ಹೊರಬರಲು ಸಾಧ್ಯವಾಗುತ್ತದೆ. ತನ್ಮೂಲಕ ಸೋಂಕನ್ನು ಕಡಿಮೆಯಾಗಲು ಮತ್ತು ತಾತ್ಕಾಲಿಕವಾಗಿ ನೋವಿನಿಂದ ಶಮನ ಪಡೆಯಲು ಸಾಧ್ಯವಾಗುತ್ತದೆ.
ಅಲ್ಲದೇ ಉಪ್ಪುನೀರು ಒಂದು ಉತ್ತಮ ಬ್ಯಾಕ್ಟೀರಿಯಾ ನಿವಾರಕ ಹಾಗೂ ಚರ್ಮಪ್ರಚೋದಕವಾಗಿದ್ದು ಚರ್ಮದ ಮೇಲೆ ಅಂಟಿಕೊಂಡಿರುವ ತೆಳುವಾದ ಪದರವನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ. ಇದರಿಂದ ಈ ಪದರದಲ್ಲಿ ಅಂಟಿಕೊಂಡಿದ್ದ ಬ್ಯಾಕ್ಟೀರಿಯಾ, ವೈರಸ್ಸುಗಳೂ ನಿವಾರಣೆಯಾಗಿ ಇವುಗಳ ಮೂಲಕ ಹರಡಬಹುದಾಗಿದ್ದ ಸೋಂಕು ಸಹಾ ಇಲ್ಲವಾಗುತ್ತದೆ.
ಅಲ್ಲದೇ ಉಪ್ಪುನೀರಿನಲ್ಲಿ ಬ್ಯಾಕ್ಟೀರಿಯಾಗಳು ಮತ್ತು ವೈರಸ್ಸುಗಳು ಉಸಿರಾಡಲಾರವು. ಇದೇ ಕಾರಣದಿಂದ ಉಪ್ಪು ನೀರಿದ್ದೆಡೆ ಕೀಟಾಣುಗಳಿರುವುದಿಲ್ಲ. ನಿಯಮಿತವಾಗಿ ಉಪ್ಪುನೀರಿನಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳುತ್ತಿದ್ದರೆ ಬ್ಯಾಕ್ಟೀರಿಯಾ ವೈರಸ್ಸುಗಳ ಧಾಳಿಯಿಂದ ಸಾಕಷ್ಟು ರಕ್ಷಣೆ ಪಡೆಯಬಹುದು. ಉಪ್ಪು ತಿಂದವರು ನೀರು ಕುಡಿಲೇಬೇಕಾ...?
ಆದರೆ ಈ ವಿಧಾನದಲ್ಲಿಯೂ ಕೆಲವು ಋಣಾತ್ಮಕ ಅಂಶವಿದೆ. ಉಪ್ಪುನೀರಿನಿಂದ ಮುಕ್ಕಳಿಸಿಕೊಂಡ ಬಳಿಕ ಇಲ್ಲಿ ಬ್ಯಾಕ್ಟೀರಿಯಾಗಳು ಇಲ್ಲವಾಗುವ ಜೊತೆಗೇ ಬಾಯಿಯ ಒಳಗಣ ನೀರಿನ ಅಂಶವೂ ಇಲ್ಲವಾಗುತ್ತದೆ. ಇದು ಬಾಯಿಯನ್ನು ಒಣಗಿಸುತ್ತದೆ.
ಉಪ್ಪು ತಿಂದವರು ನೀರು ಕುಡಿಲೇಬೇಕಾ...? ಒಂದು ವೇಳೆ ಗಂಟಲ ಒಳಭಾಗದಲ್ಲಿ ಸೋಂಕು ಇದ್ದರೆ ಅತಿ ಹೆಚ್ಚಿನ ಸಾಂದ್ರತೆಯ ಉಪ್ಪು ಇದನ್ನು ತೀರಾ ಒಣಗಿಸಿ ಮತ್ತೊಮ್ಮೆ ಈ ಸೋಂಕನ್ನು ಹೆಚ್ಚಿಸಬಹುದು. ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು
ಆದ್ದರಿಂದ ಅತಿ ಹೆಚ್ಚಿನ ಉಪ್ಪು ಬಳಸಬಾರದು. ತಜ್ಞರು ಈ ಬಗ್ಗೆ ನೀಡಿರುವ ವಿವರಗಳ ಪ್ರಕಾರ ಒಂದು ಕಪ್ (250 ml) ಉಗುರು ಬೆಚ್ಚನೆಯ ನೀರಿಗೆ ಐದು ಗ್ರಾಂ ಉಪ್ಪು ಸಾಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














