Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಸಿಡಿಟಿಗೆ ಮಾತ್ರೆ ನುಂಗುವುದನ್ನು ನಿಲ್ಲಿಸಿ-ಮನೆಮದ್ದು ಪ್ರಯತ್ನಿಸಿ
ಅಸಿಡಿಟಿ ಅಥವಾ ಹೊಟ್ಟೆಯಲ್ಲಿ ಹುಳಿ ಹುಳಿಯಾದಂತಾಗುವ ಅನುಭವವು ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಬಾರಿ ಕಾಟ ನೀಡಿರುತ್ತದೆ. ಸಾಮಾನ್ಯವಾಗಿ ಮಿತಿ ಮೀರಿ ತಿಂದಾಗ ಈ ಸಮಸ್ಯೆ ಕಾಡುವುದು ಸಹಜ.
ಏನೇ ತಿಂದರೂ ಆಗದು. ಬಾಯಿಯಲ್ಲಿ ತೇಗು ಬಂದಂತೆ ಆಗುತ್ತದೆ. ಹುಳಿ, ಖಾರ ತಿಂದರೆ ಇದು ಜಾಸ್ತಿ ಎಂದು ಹೆಚ್ಚಿನವರು ಹೇಳುವುದುಂಟು. ಇನ್ನು ಕೆಲವರು ಇದನ್ನು ನೇರವಾಗಿ ಅಸಿಡಿಟಿ ಎಂದು ಕರೆಯುತ್ತಾರೆ. ಅದರಲ್ಲೂ ಇತ್ತೀಚಿನ ಪ್ರತಿಯೊಬ್ಬರಲ್ಲೂ ಅಸಿಡಿಟಿ ಎನ್ನುವುದು ಸಾಮಾನ್ಯವಾಗುತ್ತಾ ಇದೆ. ಯಾಕೆಂದರೆ ಇಂದಿನ ಜೀವನಶೈಲಿಯೇ ಇದಕ್ಕೆ ಕಾರಣವಾಗಿಬಿಟ್ಟಿದೆ. ಅಸಿಡಿಟಿ ಕಡಿಮೆ ಮಾಡಲು ಗ್ರೀನ್ ಜ್ಯೂಸ್
ಒತ್ತಡದ ಜೀವನದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವುದು, ಅದು ಕೂಡ ಫಾಸ್ಟ್ ಫುಡ್ ಸೇವಿಸುವುದರಿಂದ ಅಸಿಡಿಟಿ ಸಾಮಾನ್ಯವಾಗುತ್ತದೆ. ಜೀರ್ಣಕ್ರಿಯೆಯ ಆಮ್ಲದ ಅಸಮತೋಲನದಿಂದಾಗಿ ಅಸಿಡಿಟಿ ಉಂಟಾಗುತ್ತದೆ. ಜೀರ್ಣಕ್ರಿಯೆಯ ವ್ಯವಸ್ಥೆಯಲ್ಲಿ ಆಮ್ಲವು ಹಿಮ್ಮುಖ ಹರಿವನ್ನು ಉಂಟು ಮಾಡಿದರೆ ಹೊಟ್ಟೆ ಉರಿಯಂತಹ ಅಸಿಡಿಟಿ ಸಮಸ್ಯೆಗಳು ಕಾಣಿಸುತ್ತದೆ. ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು
ಹೊಟ್ಟೆಯಲ್ಲಿ ನೋವು, ಅತಿಯಾದ ವಾಯು, ಕೆಟ್ಟ ಉಸಿರು, ವಾಕರಿಕೆ, ಬಾಯಿ ರುಚಿಸದೆ ಇರುವುದು, ಹೊಟ್ಟೆಉಬ್ಬರ, ಬಿಕ್ಕಳಿಕೆ, ಉದಾಸೀನ ಇದು ಅಸಿಡಿಟಿಯ ಇನ್ನಿತರ ಲಕ್ಷಣಗಳಾಗಿವೆ. ಅಸಿಡಿಟಿಯನ್ನು ಮನೆಮದ್ದಿನ ಮೂಲಕವೇ ನಿವಾರಣೆ ಮಾಡುವುದು ಸುಲಭ. ಈ ಲೇಖನದಲ್ಲಿ ಮನೆಮದ್ದಿನ ಮೂಲಕ ಅಸಿಡಿಟಿ ನಿವಾರಣೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳುವ.....

ಉಗುರುಬೆಚ್ಚಗಿನ ನೀರು
ನೀವು ಯಾವಾಗಲೂ ಅಸಿಡಿಟಿಯಿಂದ ಬಳಲುತ್ತಾ ಇದ್ದರೆ ಪ್ರತೀ ದಿನ ಮಲಗುವ ಮೊದಲು ಹಾಗೂ ಬೆಳಿಗ್ಗೆ ಎದ್ದ ಕೂಡಲೇ ಉಗುರುಬೆಚ್ಚಗಿನ ನೀರು ಕುಡಿಯಿರಿ.

ಕಳಿತ ಬಾಳೆಹಣ್ಣು
ಒಳ್ಳೆಯ ಕಳಿತ ಬಾಳೆಹಣ್ಣನ್ನು ತಿನ್ನುವುದರಿಂದ ಅಸಿಡಿಟಿಯನ್ನು ನಿವಾರಣೆ ಮಾಡಬಹುದು. ಯಾಕೆಂದರೆ ಇದರಲ್ಲಿರುವ ಪೊಟಾಶಿಯಂ ಪ್ರತಿವಿಷವನ್ನು ಉಂಟು ಮಾಡುತ್ತದೆ.

ತಣ್ಣಗಿನ ಹಾಲನ್ನು ಕುಡಿಯಿರಿ
ಸಕ್ಕರೆ ಅಥವಾ ಇನ್ನಿತರ ಸಿಹಿಯನ್ನು ಸೇರಿಸದೆ ತಣ್ಣಗಿನ ಹಾಲನ್ನು ಕುಡಿಯಿರಿ. ಒಂದು ಚಮಚ ಬೆಣ್ಣೆಯೊಂದಿಗೆ ಇದನ್ನು ಸೇವಿಸಿದರೆ ಅದು ಅಸಿಡಿಟಿಗೆ ಮತ್ತಷ್ಟು ಒಳ್ಳೆಯದು.

ಜೀರಿಗೆ
ಜೀರಿಗೆ ಆರ್ಯುರ್ವೇದದ ಪ್ರಕಾರ ಅಸಿಡಿಟಿಯನ್ನು ನಿವಾರಿಸಲು ಹಲವಾರು ಪದಾರ್ಥಗಳು ನೆರವಿಗೆ ಬರುತ್ತವೆ. ಜೀರಿಗೆ ಸಹ ಅವುಗಳಲ್ಲಿ ಒಂದು. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾ ರಸವನ್ನು ಹೆಚ್ಚು ಉತ್ಪತ್ತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ, ಅದನ್ನು ಕುಡಿಯುವುದರಿಂದ ಯನ್ನು ನಿವಾರಿಸಿಕೊಳ್ಳಬಹುದು.ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ತುಳಸಿ ಎಲೆ
ತುಳಸಿ ಎಲೆಗಳಲ್ಲಿ ಇರುವಂತಹ ಶಮನಕಾರಿ ಗುಣವು ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ವಾಕರಿಕೆಯಿಂದ ಮುಕ್ತಿಯನ್ನು ನೀಡುವುದು. ತುಳಸಿಯ ಕೆಲವು ಎಲೆಗಳನ್ನು ಜಗಿದು ಬಳಿಕ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ದಿನದಲ್ಲಿ ಹಲವಾರು ಬಾರಿ ಹೀಗೆ ಮಾಡಿದರೆ ಅಸಿಡಿಟಿಯಿಂದ ಮುಕ್ತಿ ಸಿಗುವುದು.



Click it and Unblock the Notifications
