Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಎಡೆಬಿಡದೆ ಕಾಡುವ ಕೆಮ್ಮಿಗೆ ಶುಂಠಿ-ಉಪ್ಪಿನ ಕಷಾಯ
ಹೊಟ್ಟೆ ಕೆಟ್ಟಿದ್ದಾಗ, ಹುಳಿತೇಗು, ಹೊಟ್ಟೆಯುರಿ, ಅಜೀರ್ಣ ಮೊದಲಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಕಂಡುಬಂದಾಗ ಶುಂಠಿಯ ಕಷಾಯ ಅಥವಾ ಹಸಿಶುಂಠಿಯ ರಸ ಕುಡಿದು ಪರಿಹಾರ ಪಡೆದುಕೊಳ್ಳಬಹುದು. ಆದರೆ ಈ ಅದ್ಭುತ ಮಸಾಲೆವಸ್ತು ಅತ್ಯುತ್ತಮವಾದ ಕೆಮ್ಮು ನಿವಾರಕ ಎಂದು ನಿಮಗೆ ಗೊತ್ತಿತ್ತೇ?

ಹೌದು ಕೆಮ್ಮಿಗೆ ಔಷಧಿಯಾಗಿ ನಮ್ಮ ಹಿರಿಯಲು ಶುಂಠಿಯನ್ನು ನೂರಾರು ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ಹಸಿಶುಂಠಿ ಮತ್ತು ಕೊಂಚ ಉಪ್ಪನ್ನು ಬೆರೆಸಿ ಸೇವಿಸಬೇಕು. ಮುಂದಿನ ಬಾರಿ ಸತತವಾಗಿ ಕಾಡುವ ಕೆಮ್ಮು ಪ್ರಾರಂಭವಾದರೆ ಬೇರೆ ಔಷಧಿಗಳಿಗೆ ಶರಣಾಗುವ ಬದಲು ಈ ಮನೆಮದ್ದನ್ನು ಬಳಸಿ ಶೀಘ್ರವಾಗಿಯೇ ಕೆಮ್ಮಿನಿಂದ ಪಾರಾಗಬಹುದು. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು
ಕೆಮ್ಮಿಗೆ ಕಾರಣವಾದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳನ್ನು ಶುಂಠಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಸದೆಬಡಿಯುತ್ತದೆ. ಸಾಮಾನ್ಯವಾಗಿ ವೈರಸ್ಸುಗಳ ಧಾಳಿಯಿಂದ ನಮ್ಮ ದೇಹ ಅಂಟುಅಂಟಾದ ದ್ರವವನ್ನು ಗಂಟಲ ಒಳಭಾಗದಲ್ಲಿ ಸ್ರವಿಸುತ್ತದೆ. ಇದು ಬ್ಯಾಕ್ಟೀರಿಯಾಗಳನ್ನು ಅಂಟಿಸಿಕೊಂಡು ಕಫವಾಗುತ್ತದೆ.
ಈ ಕಫವನ್ನು ಹೊರಹಾಕುವ ಕ್ರಿಯೆಯೇ ಕೆಮ್ಮು. ಉಪ್ಪು ಬೆರೆಸಿದ ಶುಂಠಿಯ ರಸ ಈ ಕಫವನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ. ಕಫವೇ ಇಲ್ಲದ ಬಳಿಕ ಕೆಮ್ಮು ಎಲ್ಲಿಂದ? ಇದೇ ಈ ವಿಧಾನದ ಸಫಲತೆಯ ಗುಟ್ಟು. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?
ಈ ಔಷಧೀಯ ಬಳಕೆಯ ವಿಧಾನ
*ಕೆಮ್ಮು ಕಡಿಮೆಯಾಗಲು ಅತ್ಯುತ್ತಮ ವಿಧಾನವೆಂದರೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಉಪ್ಪಿನೊಂದಿಗೆ ಜಗಿಯುವುದು. ಆದರೆ ಹಸಿಶುಂಠಿ ಕೊಂಚ ಖಾರವಾದುದರಿಂದ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.
*ಇವರು ಹಸಿಶುಂಠಿಯನ್ನು ಕೊಂಚ ನೀರಿನಲ್ಲಿ ಕುದಿಸಿ ತಣಿಸಿ ಶೋಧಿಸಿದ ಬಳಿಕ ಚಿಟಿಕೆಯಷ್ಟು ಉಪ್ಪು ಸೇರಿಸಿ ಕುಡಿಯಬಹುದು.
ಇನ್ನೊಂದು ವಿಧಾನ:
*ಒಂದು ಚಿಕ್ಕ ತುಂಡು ಹಸಿಶುಂಠಿಯ ಸಿಪ್ಪೆ ಸುಲಿದು ಇದಕ್ಕೆ ಕೊಂಚ ಉಪ್ಪನ್ನು ಸಿಂಪಡಿಸಿ. ಈ ತುಂಡನ್ನು ಜಜ್ಜಿ ನಯವಾಗಿಸಿ ಒಂದು ಚಮಚದಲ್ಲಿ ಲೇಹ್ಯದಂತೆ ನೇರವಾಗಿ ನುಂಗಿಬಿಡುವುದು.
*ಸಾಧ್ಯವಾದರೆ ಕೊಂಚ ಅಗಿದು ರಸವನ್ನು ನುಂಗಬೇಕು. ಇದರ ಖಾರದಿಂದ ರಕ್ಷಣೆ ಪಡೆಯಲು ಈ ತುಂಡನ್ನು ಸೇವಿಸಿದ ಬಳಿಕ ಕೊಂಚ ಜೇನನ್ನು ನೆಕ್ಕುವ ಮೂಲಕ ಉರಿಯಿಂದ ತಪ್ಪಿಸಿಕೊಳ್ಳಬಹುದು. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!
ಶುಂಠಿಯ ಕಷಾಯ
*ಒಂದು ವೇಳೆ ಕೆಮ್ಮಿನೊಂದಿಗೆ ಉಸಿರಾಟದ ತೊಂದರೆಯೂ ಇದ್ದರೆ ಇದಕ್ಕೆ ಶುಂಠಿಯ ಕಷಾಯ ಉತ್ತಮ ಪರಿಹಾರವಾಗಿದೆ. *ಇದಕ್ಕಾಗಿ ಒಂದು ಲೋಟ ನೀರನ್ನು ಕುದಿಸಿ.ಇದಕ್ಕೆ ಕೊಂಚ ಹಸಿಶುಂಠಿಯ ತುಂಡುಗಳು, ಕೊಂಚವೇ ಕಾಳುಮೆಣಸು ಅಥವಾ ಕರಿಮೆಣಸು ಮತ್ತು ಕೊಂಚ ಉಪ್ಪು ಸೇರಿಸಿ ಕುದಿಸಿ.
*ಈ ನೀರು ಅರ್ಧಮಟ್ಟಕ್ಕೆ ಬರುವವರೆಗೂ ಕುದಿಸಿ ಬಳಿಕ ಉರಿ ಆರಿಸಬೇಕು. ನಂತರ ಉಗುರುಬೆಚ್ಚಗಾಗುವಷ್ಟು ತಣಿಸಿ ಸೋಸಿ ಈ ನೀರನ್ನು ಕುಡಿಯಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications





