Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಬದನೆಯೆಂಬ ಬಹುಗುಣಿ ತರಕಾರಿಯಲ್ಲಿದೆ ಅತಿ ರಹಸ್ಯ ಪ್ರಯೋಜನಗಳು
ಬಿಳಿ ಬದನೆ ಕಾಯಿ, ಗುಂಡು ಬದನೆಕಾಯಿ, ಬ್ರಿಂಜಲ್ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ತರಕಾರಿ ಯಾರಿಗೆ ತಾನೇ ಗೊತ್ತಿಲ್ಲ. ಇದರ ಸಸ್ಯಶಾಸ್ತ್ರೀಯ ಹೆಸರು ಸೊಲನಮ್ ಮೆಲೊಂಜೆನ ಎಂದು ಇದು ನೈಟ್ಶೇಡ್ ಅಥವಾ ಸೊಲನೇಸ್ ಕುಟುಂಬದ ಸದಸ್ಯ ತರಕಾರಿ. ಇದೇ ಕುಟುಂಬಕ್ಕೆ ಸೇರಿದ ಮತ್ತಿತರ ತರಕಾರಿಗಳು ಎಂದರೆ ಟೊಮೇಟೊ, ಸಿಹಿ ಮೆಣಸು ಮತ್ತು ಆಲೂಗಡ್ಡೆ. ಬೆಳೆಯುವ ವಿಧಾನವನ್ನು ಅವಲಂಬಿಸಿ ಬದನೆಕಾಯಿಯಲ್ಲಿ ನಾನಾ ವಿಧದ ಆಕಾರ ಮತ್ತು ಬಣ್ಣಗಳು ಕಂಡು ಬರುತ್ತವೆ. ಬನ್ನಿ ಇವುಗಳ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಕಾಲು ಅಲ್ಲಾಡಿಸುವ ದುರಭ್ಯಾಸಕ್ಕೆ ಮ೦ಗಳ ಹಾಡುವುದು ಹೇಗೆ?

ಕಫ ನಿವಾರಿಸಲು
ಬೆಂಕಿಯಲ್ಲಿ ಸುಟ್ಟು, ಅದಕ್ಕೆ ಉಪ್ಪನ್ನು ಹಾಕಿದ ಬದನೆಕಾಯಿಯನ್ನು ತಿನ್ನುವುದರಿಂದ ನಮ್ಮ ಗಂಟಲಿನಲ್ಲಿ ತೊಂದರೆ ಕೊಡುವ ಅಧಿಕ ಕಫವನ್ನು ತೆಗೆಯಬಹುದು ಮತ್ತು ಉಸಿರಾಟ ಹಾಗು ಕೆಮ್ಮನ್ನು ಸಹ ಸುಧಾರಿಸಬಹುದು. ಇದು ಕಫ ತೆಗೆಯಲು ಬಳಸುವ ತುಂಬಾ ಪ್ರಾಚೀನ ವಿಧಾನವಾಗಿದೆ.
ವಿಟಮಿನ್ಗಳು ಮತ್ತು ಖನಿಜಗಳ ಗಣಿ
ಬದನೆಕಾಯಿಯಲ್ಲಿ ತಕ್ಕ ಮಟ್ಟಿಗೆ ಪ್ರೋಟಿನ್, ವಿಟಮಿನ್ ಸಿ ಮತ್ತು ಕಬ್ಬಿಣಾಂಶಗಳು ಇರುತ್ತವೆ. ಇದರ ಜೊತೆಗೆ ಕ್ಯಾಲ್ಶಿಯಂ, ಪೊಟಾಶಿಯಂ, ಫಾಸ್ಪರಸ್, ಫೊಲಿಕ್ ಆಮ್ಲ ಮತ್ತು ಬೀಟಾ ಕೆರೊಟಿನ್ಗಳು ಸಹ ಇರುತ್ತವೆ. ಸೂಕ್ತ ಆಹಾರ ಪದ್ಧತಿಯೇ ಎಲ್ಲಾ ರೋಗಕ್ಕೂ ರಾಮಬಾಣ!
ಒಡೆದ ತ್ವಚೆಗೆ ಪರಿಹಾರ ನೀಡುತ್ತದೆ
ಒಡೆದ ಹಿಮ್ಮಡಿ ಮತ್ತು ಸೀಳು ಬಿಟ್ಟ ಬೆರಳುಗಳಿಗೆ ಹಣ್ಣಾದ ಬದನೆಕಾಯಿಯನ್ನು ಪೆಟ್ರೋಲಿಯಂ ಜೆಲ್ಲಿ ಜೊತೆಗೆ ಬೆರೆಸಿ ಬಳಸುವುದರಿಂದ ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು. ಅರ್ಧ ಕತ್ತರಿಸಿದ ಬದನೆಕಾಯಿಗೆ ಸ್ವಲ್ಪ ಅರಿಶಿಣ ಪುಡಿಯನ್ನು ಚಿಮುಕಿಸಿ ಫ್ರೈ ಪ್ಯಾನ್ ಮೇಲೆ ಕೆಲವು ಸೆಕೆಂಡುಗಳ ಕಾಲ ಉರಿದು ಅದನ್ನು ಕೀಲು ನೋವು, ಬಾವು ಮತ್ತು ಗಾಯಗಳ ಮೇಲೆ ಇಡುವುದರಿಂದ ಬಾವು ಮತ್ತು ನೋವು ಶಮನಗೊಳ್ಳುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
