Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸುಡು ಬಿಸಿಲಿಗೆ ಕಾಡುವ ಒಣ ಕೆಮ್ಮಿಗೆ ಕಾರಣ ತಿಳಿದುಕೊಳ್ಳಿ
ಬೇಸಿಗೆ ಸುಡುತ್ತಲಿದೆ. ಈ ಕಾಲದಲ್ಲಿ ನಾವು ಕರೆಯದಿದ್ದರು ಕಾಯಿಲೆಗಳು ನಮ್ಮ ಮನೆಯೊಳಗೆ ನುಗ್ಗಿ, ನಮ್ಮಲ್ಲಿಯು ನೆಲೆಗೊಂಡು ಬಿಡುತ್ತದೆ. ಅದರಲ್ಲಿಯೂ ಈ ಅವಧಿಯಲ್ಲಿ ಒಣ ಹವೆಯಿಂದಾಗಿ ನಮಗೆ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪ್ರಮುಖ ಕಾರಣಗಳು ನಾವು ಬೇಸಿಗೆಯಲ್ಲಿ ಹಲವಾರು ಅಲರ್ಜಿಗಳಿಗೆ ಗುರಿಯಾಗುತ್ತೇವೆ. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು
ಇದರ ಜೊತೆಗೆ, ಕೆಲವೊಂದು ಅಭ್ಯಾಸಗಳು ಮತ್ತು ರಾಸಾಯನಿಕಗಳು ಸಹ ಕೆಮ್ಮಿಗೆ ಕಾರಣವಾಗುತ್ತ ಇರುತ್ತವೆ. ನಮ್ಮಲ್ಲಿ ಬಹುತೇಕ ಮಂದಿ ಈ ಅವಧಿಯಲ್ಲಿ ಸನ್ಸ್ಕ್ರೀನ್ ಲೋಷನ್ ಕ್ರೀಮ್ಗಳನ್ನು ಸಿದ್ಧಪಡಿಸಿಕೊಂಡು ಇರುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಬೇಸಿಗೆಯ ತಿಂಗಳುಗಳಲ್ಲಿ, ಒಣ ಕೆಮ್ಮು ಅಧಿಕವಾಗಿ ಕಾಡುತ್ತದೆಯಂತೆ.
ಈ ಅವಧಿಯಲ್ಲಿ ನೀವು ಈಜಾಡಲು ಹೋದರೆ, ಮನೆಗೆ ಬಂದ ತಕ್ಷಣ ಕೈಗಳನ್ನು ತೊಳೆದುಕೊಂಡು ಬನ್ನಿ. ಇದರಿಂದ ಕೀಟಾಣುಗಳು ಮತ್ತಷ್ಟು ಹರಡುವುದನ್ನು ತಪ್ಪಿಸಬಹುದು. ಜೊತೆಗೆ ಇತರರ ಜೊತೆಗೆ ಪಾನೀಯಗಳನ್ನು ಹಂಚಿಕೊಳ್ಳಬೇಡಿ. ಬನ್ನಿ ಈ ಬೇಸಿಗೆಯಲ್ಲಿ ಕೆಮ್ಮು ಬರಲು ಇರುವ ಕಾರಣಗಳ ಕುರಿತು ತಿಳಿದುಕೊಳ್ಳೋಣ.

ಅಲರ್ಜಿ
ಅಲರ್ಜಿಯು ಕೆಮ್ಮು, ಸೀನು ಮತ್ತು ಮೂಗು ಕಟ್ಟುವಿಕೆಯನ್ನು ಉಂಟು ಮಾಡುತ್ತದೆ. ಬೇಸಿಗೆಯಲ್ಲಿ ಒಣ ಹವೆಯಿಂದಾಗಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಪರಾಗ ರೇಣುಗಳ ಅಲರ್ಜಿ ಇರುವವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಿರುತ್ತದೆ.

ಆಸಿಡ್ ರಿಫ್ಲಕ್ಸ್
ಬೇಸಿಗೆ ಕಾಲದಲ್ಲಿ ಆಲ್ಕೋಹಾಲ್ನಿಂದ ದೂರವಿರುವುದು ಒಳ್ಳೆಯದು. ಇದು ಈ ಅವಧಿಯಲ್ಲಿ ನಮ್ಮ ದೇಹದಲ್ಲಿ ಆಸಿಡ್ ರಿಫ್ಲಕ್ಸ್ ಉಂಟು ಮಾಡುತ್ತದೆ. ನಿಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಲು ನೀರನ್ನು ಕುಡಿಯಿರಿ.

ಮಾಲಿನ್ಯ
ಮಾಲಿನ್ಯದಿಂದ ನಮಗೆ ಒಣ ಕೆಮ್ಮು ಬರುತ್ತದೆ ಎಂದು ಬಹುತೇಕರು ಅರ್ಥ ಮಾಡಿಕೊಳ್ಳುವುದಿಲ್ಲ. ನೀವು ದ್ವಿಚಕ್ರ ವಾಹನದಲ್ಲಿ ಸಾಗುವಾಗ, ಮಾಲಿನ್ಯಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಟ್ರಾಫಿಕ್ನಲ್ಲಿ ನಿಂತಾಗ, ಬಸ್ಸಿನಲ್ಲಿ ಬರುವಾಗ ಹೀಗೆ ಮಾಲಿನ್ಯವು ಸರ್ವಂತರ್ಯಾಮಿಯಾಗಿ ನಿಮ್ಮನ್ನು ಕಾಡುತ್ತದೆ. ಇಂತಹ ಮಾಲಿನ್ಯಯುತವಾದ ಗಾಳಿಯನ್ನು ಸೇವಿಸದೆ ಇರಲು ಮಾಸ್ಕ್ ಧರಿಸಲು ಮರೆಯಬೇಡಿ.

ಶೀತ
ನಿಮ್ಮ ಕೈಗಳನ್ನು ಹೊರಗಿನಿಂದ ಮನೆಗೆ ಬಂದ ಕೂಡಲೆ ತೊಳೆಯಿರಿ. ಶೀತಕ್ಕೆ ಬೇಸಿಗೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಈ ಅವಧಿಯಲ್ಲಿ ನೆಗಡಿ ಬಂದರೆ, ಅದರ ಹಿಂದೆ ಒಣ ಕೆಮ್ಮು ಬರುತ್ತದೆ. ಇದಕ್ಕಾಗಿ ನೀವು ಇನ್ಫೆಕ್ಷನ್ನಿಂದ ದೂರ ಇರುವ ಪ್ರಯತ್ನ ಮಾಡಿ.

ಸೈನಸೈಟಿಸ್
ಒಂದು ವೇಳೆ ನೀವು ಸೈನಸೈಟಿಸ್ನಿಂದ ಬಳಲುತ್ತಿದ್ದಲ್ಲಿ, ಬೇಸಿಗೆಯಲ್ಲಿ ನಿಮಗೆ ತಲೆನೋವು ಕಾಡಬಹುದು. ಅದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. ಅಗತ್ಯಬಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.



Click it and Unblock the Notifications











