Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಸುಡು ಬಿಸಿಲಿಗೆ ಕಾಡುವ ಒಣ ಕೆಮ್ಮಿಗೆ ಕಾರಣ ತಿಳಿದುಕೊಳ್ಳಿ
ಬೇಸಿಗೆ ಸುಡುತ್ತಲಿದೆ. ಈ ಕಾಲದಲ್ಲಿ ನಾವು ಕರೆಯದಿದ್ದರು ಕಾಯಿಲೆಗಳು ನಮ್ಮ ಮನೆಯೊಳಗೆ ನುಗ್ಗಿ, ನಮ್ಮಲ್ಲಿಯು ನೆಲೆಗೊಂಡು ಬಿಡುತ್ತದೆ. ಅದರಲ್ಲಿಯೂ ಈ ಅವಧಿಯಲ್ಲಿ ಒಣ ಹವೆಯಿಂದಾಗಿ ನಮಗೆ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪ್ರಮುಖ ಕಾರಣಗಳು ನಾವು ಬೇಸಿಗೆಯಲ್ಲಿ ಹಲವಾರು ಅಲರ್ಜಿಗಳಿಗೆ ಗುರಿಯಾಗುತ್ತೇವೆ. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು
ಇದರ ಜೊತೆಗೆ, ಕೆಲವೊಂದು ಅಭ್ಯಾಸಗಳು ಮತ್ತು ರಾಸಾಯನಿಕಗಳು ಸಹ ಕೆಮ್ಮಿಗೆ ಕಾರಣವಾಗುತ್ತ ಇರುತ್ತವೆ. ನಮ್ಮಲ್ಲಿ ಬಹುತೇಕ ಮಂದಿ ಈ ಅವಧಿಯಲ್ಲಿ ಸನ್ಸ್ಕ್ರೀನ್ ಲೋಷನ್ ಕ್ರೀಮ್ಗಳನ್ನು ಸಿದ್ಧಪಡಿಸಿಕೊಂಡು ಇರುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಬೇಸಿಗೆಯ ತಿಂಗಳುಗಳಲ್ಲಿ, ಒಣ ಕೆಮ್ಮು ಅಧಿಕವಾಗಿ ಕಾಡುತ್ತದೆಯಂತೆ.
ಈ ಅವಧಿಯಲ್ಲಿ ನೀವು ಈಜಾಡಲು ಹೋದರೆ, ಮನೆಗೆ ಬಂದ ತಕ್ಷಣ ಕೈಗಳನ್ನು ತೊಳೆದುಕೊಂಡು ಬನ್ನಿ. ಇದರಿಂದ ಕೀಟಾಣುಗಳು ಮತ್ತಷ್ಟು ಹರಡುವುದನ್ನು ತಪ್ಪಿಸಬಹುದು. ಜೊತೆಗೆ ಇತರರ ಜೊತೆಗೆ ಪಾನೀಯಗಳನ್ನು ಹಂಚಿಕೊಳ್ಳಬೇಡಿ. ಬನ್ನಿ ಈ ಬೇಸಿಗೆಯಲ್ಲಿ ಕೆಮ್ಮು ಬರಲು ಇರುವ ಕಾರಣಗಳ ಕುರಿತು ತಿಳಿದುಕೊಳ್ಳೋಣ.

ಅಲರ್ಜಿ
ಅಲರ್ಜಿಯು ಕೆಮ್ಮು, ಸೀನು ಮತ್ತು ಮೂಗು ಕಟ್ಟುವಿಕೆಯನ್ನು ಉಂಟು ಮಾಡುತ್ತದೆ. ಬೇಸಿಗೆಯಲ್ಲಿ ಒಣ ಹವೆಯಿಂದಾಗಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಪರಾಗ ರೇಣುಗಳ ಅಲರ್ಜಿ ಇರುವವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಿರುತ್ತದೆ.

ಆಸಿಡ್ ರಿಫ್ಲಕ್ಸ್
ಬೇಸಿಗೆ ಕಾಲದಲ್ಲಿ ಆಲ್ಕೋಹಾಲ್ನಿಂದ ದೂರವಿರುವುದು ಒಳ್ಳೆಯದು. ಇದು ಈ ಅವಧಿಯಲ್ಲಿ ನಮ್ಮ ದೇಹದಲ್ಲಿ ಆಸಿಡ್ ರಿಫ್ಲಕ್ಸ್ ಉಂಟು ಮಾಡುತ್ತದೆ. ನಿಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಲು ನೀರನ್ನು ಕುಡಿಯಿರಿ.

ಮಾಲಿನ್ಯ
ಮಾಲಿನ್ಯದಿಂದ ನಮಗೆ ಒಣ ಕೆಮ್ಮು ಬರುತ್ತದೆ ಎಂದು ಬಹುತೇಕರು ಅರ್ಥ ಮಾಡಿಕೊಳ್ಳುವುದಿಲ್ಲ. ನೀವು ದ್ವಿಚಕ್ರ ವಾಹನದಲ್ಲಿ ಸಾಗುವಾಗ, ಮಾಲಿನ್ಯಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಟ್ರಾಫಿಕ್ನಲ್ಲಿ ನಿಂತಾಗ, ಬಸ್ಸಿನಲ್ಲಿ ಬರುವಾಗ ಹೀಗೆ ಮಾಲಿನ್ಯವು ಸರ್ವಂತರ್ಯಾಮಿಯಾಗಿ ನಿಮ್ಮನ್ನು ಕಾಡುತ್ತದೆ. ಇಂತಹ ಮಾಲಿನ್ಯಯುತವಾದ ಗಾಳಿಯನ್ನು ಸೇವಿಸದೆ ಇರಲು ಮಾಸ್ಕ್ ಧರಿಸಲು ಮರೆಯಬೇಡಿ.

ಶೀತ
ನಿಮ್ಮ ಕೈಗಳನ್ನು ಹೊರಗಿನಿಂದ ಮನೆಗೆ ಬಂದ ಕೂಡಲೆ ತೊಳೆಯಿರಿ. ಶೀತಕ್ಕೆ ಬೇಸಿಗೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಈ ಅವಧಿಯಲ್ಲಿ ನೆಗಡಿ ಬಂದರೆ, ಅದರ ಹಿಂದೆ ಒಣ ಕೆಮ್ಮು ಬರುತ್ತದೆ. ಇದಕ್ಕಾಗಿ ನೀವು ಇನ್ಫೆಕ್ಷನ್ನಿಂದ ದೂರ ಇರುವ ಪ್ರಯತ್ನ ಮಾಡಿ.

ಸೈನಸೈಟಿಸ್
ಒಂದು ವೇಳೆ ನೀವು ಸೈನಸೈಟಿಸ್ನಿಂದ ಬಳಲುತ್ತಿದ್ದಲ್ಲಿ, ಬೇಸಿಗೆಯಲ್ಲಿ ನಿಮಗೆ ತಲೆನೋವು ಕಾಡಬಹುದು. ಅದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. ಅಗತ್ಯಬಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.



Click it and Unblock the Notifications