ಇವು ಅಂತಿಂಥ ಮನೆಮದ್ದುಗಳಲ್ಲ, ಆರೋಗ್ಯದ ಕೀಲಿ ಕೈ

ಆಧುನೀಕತೆ ನಮಗೆ ಹೊಸದಾದ ಪ್ರಪಂಚದ ಪರಿಚಯವನ್ನು ಮಾಡಿಕೊಟ್ಟಿದೆ. ನಮ್ಮ ದೈನಂದಿನ ಜೀವನ ಈ ತೆರನಾಗಿ ಮಾರ್ಪಾಡನ್ನು ಪಡೆದುಕೊಳ್ಳುತ್ತಿದ್ದು ಆಧುನಿಕವಾಗಿ ನಾವು ಬದಲಾಗುತ್ತಿದ್ದೇವೆ. ಆದರೆ ಈ ಲೋಕ ನಮಗೆ ಅನುಕೂಲಕರವಾಗಿ ಹೇಗೆ ಪ್ರತಿಕ್ರಿಯಿಸುತ್ತದೆಯೋ ಅಂತೆಯೇ ಅನಾನುಕೂಲವಾಗಿ ಕೂಡ ಕಾರ್ಯನಿರ್ವಹಿಸುತ್ತದೆ. ಅತಿಯಾದ ಮಾರ್ಪಾಡಿನ ಪರಿಣಾಮ ಎಂಬಂತೆ ಸೋಮಾರಿತನ ನಮ್ಮನ್ನು ಬಹುವಾಗಿ ಆವರಿಸಿಕೊಳ್ಳುತ್ತಿದೆ.

ಎಲ್ಲಾ ಕೆಲಸವನ್ನು ಯಂತ್ರಗಳನ್ನು ಅವಲಂಬಿಸಿ ನಾವು ಮಾಡಿಕೊಳ್ಳುತ್ತಿರುವುದರಿಂದ ಯಾಂತ್ರಿಕ ಜೀವನ ನಮ್ಮ ಪಾಲಿಗೆ ಮುಳುವಾಗಿಬಿಟ್ಟಿದೆ. ಇದರಿಂದಾಗಿ ರೋಗ ರುಜಿನಗಳ ಗೂಡು ನಾವಾಗಿ ಬಿಟ್ಟಿದ್ದೇವೆ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲಾರದಷ್ಟು ಕಂಗಾಲಾಗಿ ನಾವು ಬದಲಾಗುತ್ತಿದ್ದೇವೆ. ಇದರಿಂದಾಗಿ ಸಣ್ಣ ಕಾಯಿಲೆಗಳಿಗೂ ದುಬಾರಿ ಬೆಲೆಯ ಔಷಧವನ್ನು ಪಡೆದುಕೊಳ್ಳುವ ಸ್ಥಿತಿ ಬಂದೊದಗಿಬಿಟ್ಟಿದೆ. ಆದರೂ ಇನ್ನೂ ಕಾಲಮಿಂಚಿಲ್ಲ. ಇಂಗ್ಲೀಷ್ ಔಷಧಕ್ಕೆ ತಿಲಾಂಜಲಿ ಇಟ್ಟು ಹಿತ್ತಲ ಮದ್ದನ್ನೇ ಸರ್ವರೋಗಕ್ಕೂ ರಾಮಬಾಣವಾಗಿ ಬಳಬಹುದಾಗಿದೆ.

ಇವು ತೊಂದರೆಯನ್ನು ನಿವಾರಿಸುವುದು ಮಾತ್ರವಲ್ಲ, ಜೀವನದಲ್ಲಿ ಮುಂದೆ ಇದೇ ತೊಂದರೆ ಎದುರಾದರೆ ಎದುರಿಸಲು ಶಕ್ತವಾಗುವಂತೆ ದೇಹದ ರೋಗನಿರೋಧಕ ವ್ಯವಸ್ಥೆಯನ್ನೂ ಬಲಪಡಿಸುತ್ತವೆ. ಅದರಲ್ಲೂ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಆರು ಪ್ರಮುಖ ವಿಧಾನಗಳು ಸಾಮಾನ್ಯವಾಗಿ ಎಲ್ಲರೂ ಎದುರಿಸುವ ತೊಂದರೆಗಳನ್ನು ಹತ್ತಿಕ್ಕುತ್ತವೆ. ಇವು ಯಾವುವು ಎಂಬುದನ್ನು ಮುಂದೆ ಓದಿ..

ಬಾಯಿಯೊಳಗಣ ಹುಣ್ಣುಗಳಿಗೆ

ಬಾಯಿಯೊಳಗಣ ಹುಣ್ಣುಗಳಿಗೆ

ಬಾಯಿಯೊಳಗೆ, ಅದರಲ್ಲೂ ವಿಶೇಷವಾಗಿ ಕೆನ್ನೆ, ತುಟಿಗಳ ಒಳಭಾಗದಲ್ಲಿ ವೃತ್ತಾಕಾರದ ಹುಣ್ಣು ಆಗಿದ್ದರೆ ಚೆನ್ನಾಗಿ ಕಳಿತ ಬಾಳೆಹಣ್ಣನ್ನು ತಿನ್ನುವುದರಿಂದ ಕೂಡಲೇ ಗುಣವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಬಾಳೆಹಣ್ಣನ್ನು ಕಿವುಚಿ ಇದರ ಲೇಪನವನ್ನು ಹುಣ್ಣು ಇರುವ ಭಾಗಕ್ಕೆ ಹಚ್ಚುವುದು ಉತ್ತಮ. ರಾತ್ರಿ ಮಲಗುವ ಕೊಂಚ ಮೊದಲು ತೆಳುವಾಗಿ ಹಚ್ಚಿ ಮಲಗುವುದರಿಂದ ಉರಿ ಶೀಘ್ರವೇ ಕಡಿಮೆಯಾಗುತ್ತದೆ.

ಕೂದಲು ಬೇಗನೇ ನೆರೆಯತೊಡಗಿದಾಗ

ಕೂದಲು ಬೇಗನೇ ನೆರೆಯತೊಡಗಿದಾಗ

ಮೂವತ್ತು ದಾಟುತ್ತಿದ್ದಂತೆಯೇ ಕೂದಲುಗಳು ಅಲ್ಲಲ್ಲಿ ನೆರೆಯಲು ತೊಡಗಿದ್ದರೆ ಆತಂಕ ಎದುರಾಗುತ್ತದೆ. ಇದನ್ನು ನಿವಾರಿಸಲು ಕೆಲವು ಒಣ ನೆಲ್ಲಿಕಾಯಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ. ಚೆನ್ನಾಗಿ ಕುದಿದ ಬಳಿಕ ತಣಿಸಿ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ.

ಅಧಿಕ ರಕ್ತದೊತ್ತಡಕ್ಕೆ

ಅಧಿಕ ರಕ್ತದೊತ್ತಡಕ್ಕೆ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಹಾಲಿನೊಂದಿಗೆ ಒಂದು ನೆಲ್ಲಿಕಾಯಿಯನ್ನು ನಿತ್ಯವೂ ಸೇವಿಸಿ. ಇದರಿಂದ ರಕ್ತದೊತ್ತಡ ಶೀಘ್ರವೇ ಸಾಮಾನ್ಯಗತಿಗೆ ಬರುತ್ತದೆ. ಉತ್ತಮ ಪರಿಣಾಮಕ್ಕಾಗಿ ಬೆಳಗ್ಗಿನ ಹೊತ್ತಿನಲ್ಲಿ ಸೇವಿಸಿ.

ಗಂಟಲ ಬೇನೆಗಾಗಿ

ಗಂಟಲ ಬೇನೆಗಾಗಿ

ಗಂಟಲ ಒಳಗೆ ಕೆರೆತ, ಕೆಮ್ಮು, ಕಫ ಬಾಧಿಸುತ್ತಿದ್ದರೆ ಕೆಲವು ಪುದಿನಾ ಎಲೆಗಳನ್ನು ಹಸಿಯಾಗಿ ಅಗಿದು ನುಂಗುವುದು ಉತ್ತಮ ಪರಿಹಾರವಾಗಿದೆ. ಬದಲಿಗೆ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕೊಂಚಕಾಲ ಕುದಿಸಿ. ಬಳಿಕ ಸೋಸಿದ ಈ ನೀರು ಉಗುರುಬೆಚ್ಚಗಾಗಿರುವಾಲೇ ಮುಖ ಮೇಲೆತ್ತಿ ಗಂಟಲಿನೊಳಗೆ ಗಲಬರಿಸಿ. (ಗಳಗಳ ಮಾಡಿ)

ಮಹಿಳೆಯರ ಮಾಸಿಕ ದಿನಗಳ ನೋವಿಗಾಗಿ

ಮಹಿಳೆಯರ ಮಾಸಿಕ ದಿನಗಳ ನೋವಿಗಾಗಿ

ಮಹಿಳೆಯರು ಅನುಭವಿಸುವ ಕೆಳಹೊಟ್ಟೆ ನೋವು ಮತ್ತು ಸೆಡೆತವನ್ನು ಕಡಿಮೆಗೊಳಿಸಲು ಒಂದು ಲೋಟ ತಣ್ಣೀರಿನಲ್ಲಿ ಸುಮಾರು ಮೂರು ಲಿಂಬೆಹಣ್ಣುಗಳ ರಸವನ್ನು ಹಿಂಡಿ ಗಟಗಟನೇ ಕುಡಿಯಿರಿ.

ಕಣ್ಣುಗಳ ಕೆಳಭಾಗದ ಕಪ್ಪು ಕಲೆಗಳಿಗಾಗಿ

ಕಣ್ಣುಗಳ ಕೆಳಭಾಗದ ಕಪ್ಪು ಕಲೆಗಳಿಗಾಗಿ

ಕಣ್ಣುಗಳ ಕೆಳಗಿನ ಚರ್ಮ ತೀರಾ ತೆಳುವಾಗಿದ್ದು ಹೊರಚರ್ಮ ಮತ್ತು ಒಳಚರ್ಮದ ಪದರಗಳು ತೀರಾ ಹತ್ತಿರವಿರುವುದರಿಂದ ಈ ಭಾಗ ಸುಲಭವಾಗಿ ಕಪ್ಪಗಾಗುತ್ತದೆ. ಇದಕ್ಕಾಗಿ ಒಂದು ಚಮಚ ಕಿತ್ತಳೆ ಹಣ್ಣಿನ ರಸದಲ್ಲಿ ಕೆಲವು ಹನಿ ಗ್ಲಿಸರಿನ್ ಹಾಕಿ ಮಿಶ್ರಣಮಾಡಿ ಕಣ್ಣುಗಳ ಕೆಳಭಾಗಕ್ಕೆ ಹಚ್ಚಿ. ಸುಮಾರು ಇಪ್ಪತ್ತು ನಿಮಿಷ ಅಥವಾ ಅರ್ಧಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇಂತಹ ಉಪಯುಕ್ತ ಮಾಹಿತಿಗಳು ನಿಮ್ಮಲ್ಲಿದ್ದರೆ ದಯವಿಟ್ಟು ಕೆಳಗಿನ ಕಮೆಂಟ್ (ಅಭಿಪ್ರಾಯ) ಸೂಚಿಸುವ ಸ್ಥಳದಲ್ಲಿ ಬರೆದು ಕಳುಹಿಸಿ.

X
Desktop Bottom Promotion