Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಪ್ರತಿದಿನ 30 ನಿಮಿಷ ಯೋಗಕ್ಕಾಗಿ ಮೀಸಲಿಡಿ
ಪ್ರಶ್ನೆ : ನೀವು ನಡೆಸುವ ಯೋಗ ಶ್ರೀ ರಕ್ಷ ಶಿಬಿರದಲ್ಲಿ ಯಾವ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ್ದೀರಿ ಮತ್ತು ಯಾವ ರೀತಿಯ ಬದಲಾವಣೆಯನ್ನು ಕಂಡಿದ್ದೀರಿ?
ಡಾ.ವಿವೇಕ : 2 ವರ್ಷಗಳಿಂದ ಯೋಗ ಶ್ರೀ ರಕ್ಷ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗಿದೆ. ಮುಖ್ಯವಾಗಿ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆರಂಭಗೊಂಡು, ತಾಲೂಕು ಮಟ್ಟಗಳನ್ನು ತಲುಪಿ ಈಗ 5 ತಿಂಗಳಿಂದ ಪ್ರತಿ ಗ್ರಾಮಗಳಲ್ಲಿಯೂ ಸಹ ಈ ಸರಳ ಯೋಗ ಕ್ರಮದ ಜಾಗೃತಿಯನ್ನು ಮೂಡಿಸಿ ಪ್ರತಿಯೊಬ್ಬರಲ್ಲಿಯೂ ಕೂಡ ಆರೋಗ್ಯದೆಡೆಗಿನ ಶಿಕ್ಷಣ ಮತ್ತು ರಕ್ಷಣೆಯನ್ನು ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಸುಮಾರು 12 ಸಾವಿರ ರೋಗಿಗಳ ತಪಾಸಣೆಯನ್ನು ಉಚಿತವಾಗಿ ಕರ್ನಾಟಕದಾದ್ಯಂತ ಮಾಡುತ್ತಿದ್ದೇವೆ.
ಈ ಸಂದರ್ಭದಲ್ಲಿ ನಾವು ಅತಿ ಹೆಚ್ಚಾಗಿ ಗಮನಿಸಿದ ಕಾಯಿಲೆಗಳೆಂದರೆ ನೋವಿಗೆ ಸಂಬಂಧಪಟ್ಟಂತಹ ತಲೆನೋವು, ಸೊಂಟನೋವು, ಕಾಲುನೋವು, ಮಂಡಿನೋವು ಮುಖ್ಯವಾದುವು. ಇವುಗಳಲ್ಲದೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆ, ಅಧಿಕ ಬೊಜ್ಜು, ಮಾನಸಿಕ ಖಿನ್ನತೆ, ಅಧಿಕ ಒತ್ತಡ, ಉದ್ವೇಗ, ತಳಮಳ, ನಿದ್ದೆಯ ಸಮಸ್ಯೆಗಳು ಪ್ರಮುಖವಾದುವು. ಎಲ್ಲಾ ಕಾಯಿಲೆಗಳಿಗೂ ಕಾರಣವೆಂದರೆ ಆಹಾರದಲ್ಲಿನ ಏರು-ಪೇರು, ವಿಶ್ರಾಂತಿಯ ಕೊರತೆ, ಪೈಪೋಟಿ ಜೀವನ, ನಂಬಿಕೆಯ ಕೊರತೆ, ಆಲಸ್ಯ ಮತ್ತು ಉದ್ವೇಗ. ಯೋಗ ಶ್ರೀ ರಕ್ಷ ಸರಳಕ್ರಮದ ಮೂಲಕ ಆಹಾರ ಮತ್ತು ಯೋಗಕ್ರಮಗಳನ್ನು ತಿಳಿಸಿ ಯೋಗ ಮತ್ತು ಆಹಾರ ಶಿಕ್ಷಣದ ಮೂಲಕ ಆರೋಗ್ಯದ ಜಾಗೃತಿಯನ್ನು ಮಾಡಿ ತನ್ಮೂಲಕ ಜನ,ಮನೆ ಸಮಾಜದ ಮೂಲಕ ರಾಷ್ಟ್ರದ ಉದ್ದಾರವೆ ನಮ್ಮ ಮುಖ್ಯ ಗುರಿ ಮತ್ತು ನಮ್ಮಯ ಆದರ್ಶಸೂತ್ರ.
ಪ್ರಶ್ನೆ: ಸಿಂಗಪುರದಲ್ಲಿನ ಜೀವನಶೈಲಿ ನಿಮಗೆ ಈಗ ಸ್ವಲ್ಪ ಪರಿಚಯವಾಗಿರಬಹುದು, ಇಲ್ಲಿ ನಾವು ಯಾವ ರೀತಿಯ ಯೋಗಭ್ಯಾಸವನ್ನು ಮಾಡಬಹುದು? ದಿನಕ್ಕೆ ಎಷ್ಟು ಸಮಯ ಅಭ್ಯಾಸವನ್ನು ಮಾಡಬೇಕಾಗುತ್ತದೆ?
ಡಾ.ವಿವೇಕ : ಇದು ನನ್ನ ಪ್ರಥಮ ಸಿಂಗಪುರದ ಬೇಟಿ, ನಾನು ಗಮನಿಸಿದಂತೆ ಇಲ್ಲಿಯೂ ಕೂಡ ಪೈಪೋಟಿಯ, ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ನಾನು ಮಾಧ್ಯಮಗಳ ಮೂಲಕ ಮತ್ತು ಬಲ್ಲವರಿಂದ ಇಲ್ಲಿಯೂ ಕೂಡ ವಿಶ್ರಾಂತಿಯ ಅಭಾವ, ಸರಿಯಾದ ಆಹಾರ ಕ್ರಮದ ಅವಕಾಶದ ಅಭಾವ ಮತ್ತು ಸಮಯಕ್ಕೆ ಸರಿಯಾಗಿ ನಿದ್ದೆಯ ಕೊರತೆಯಿದೆ ಎಂದು ತಿಳಿದಿದ್ದೇನೆ. ಒಂದು ದೃಷ್ಟಿಯಲ್ಲಿ ಒಬ್ಬ ವೈದ್ಯನಾಗಿ, ಯೋಗ ಚಿಕಿತ್ಸಕನಾಗಿ ಹೇಳಬೇಕೆಂದರೆ ಇಲ್ಲಿಯೂ ಕೂಡ ಯೋಗಕ್ಕೆ ಗಮನಕೊಟ್ಟು ಪ್ರತಿದಿನ ಅಭ್ಯಾಸವನ್ನು ನಡೆಸಿದರೆ ನೆಮ್ಮದಿಯ ಆರೋಗ್ಯಕರ ಜೀವನವನ್ನು ನಡೆಸಬಹುದು. ಇಲ್ಲಿಯ ವೇಗಯುತವಾದ ಜೀವನದಲ್ಲಿ ಇಂತಿಷ್ಟೇ ಸಮಯವೆಂದು ಹೇಳಲಾಗುವುದಿಲ್ಲವಾದರೂ, ಕೊನೇಪಕ್ಷ ಪ್ರತಿದಿನ 20-30 ನಿಮಿಷಗಳ ಕಾಲವನ್ನು ಯೋಗಕ್ಕಾಗಿ ಮೀಸಲಿಡುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











