Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಪ್ರತಿದಿನ 30 ನಿಮಿಷ ಯೋಗಕ್ಕಾಗಿ ಮೀಸಲಿಡಿ
ಪ್ರಶ್ನೆ : ನೀವು ನಡೆಸುವ ಯೋಗ ಶ್ರೀ ರಕ್ಷ ಶಿಬಿರದಲ್ಲಿ ಯಾವ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ್ದೀರಿ ಮತ್ತು ಯಾವ ರೀತಿಯ ಬದಲಾವಣೆಯನ್ನು ಕಂಡಿದ್ದೀರಿ?
ಡಾ.ವಿವೇಕ : 2 ವರ್ಷಗಳಿಂದ ಯೋಗ ಶ್ರೀ ರಕ್ಷ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗಿದೆ. ಮುಖ್ಯವಾಗಿ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆರಂಭಗೊಂಡು, ತಾಲೂಕು ಮಟ್ಟಗಳನ್ನು ತಲುಪಿ ಈಗ 5 ತಿಂಗಳಿಂದ ಪ್ರತಿ ಗ್ರಾಮಗಳಲ್ಲಿಯೂ ಸಹ ಈ ಸರಳ ಯೋಗ ಕ್ರಮದ ಜಾಗೃತಿಯನ್ನು ಮೂಡಿಸಿ ಪ್ರತಿಯೊಬ್ಬರಲ್ಲಿಯೂ ಕೂಡ ಆರೋಗ್ಯದೆಡೆಗಿನ ಶಿಕ್ಷಣ ಮತ್ತು ರಕ್ಷಣೆಯನ್ನು ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಸುಮಾರು 12 ಸಾವಿರ ರೋಗಿಗಳ ತಪಾಸಣೆಯನ್ನು ಉಚಿತವಾಗಿ ಕರ್ನಾಟಕದಾದ್ಯಂತ ಮಾಡುತ್ತಿದ್ದೇವೆ.
ಈ ಸಂದರ್ಭದಲ್ಲಿ ನಾವು ಅತಿ ಹೆಚ್ಚಾಗಿ ಗಮನಿಸಿದ ಕಾಯಿಲೆಗಳೆಂದರೆ ನೋವಿಗೆ ಸಂಬಂಧಪಟ್ಟಂತಹ ತಲೆನೋವು, ಸೊಂಟನೋವು, ಕಾಲುನೋವು, ಮಂಡಿನೋವು ಮುಖ್ಯವಾದುವು. ಇವುಗಳಲ್ಲದೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆ, ಅಧಿಕ ಬೊಜ್ಜು, ಮಾನಸಿಕ ಖಿನ್ನತೆ, ಅಧಿಕ ಒತ್ತಡ, ಉದ್ವೇಗ, ತಳಮಳ, ನಿದ್ದೆಯ ಸಮಸ್ಯೆಗಳು ಪ್ರಮುಖವಾದುವು. ಎಲ್ಲಾ ಕಾಯಿಲೆಗಳಿಗೂ ಕಾರಣವೆಂದರೆ ಆಹಾರದಲ್ಲಿನ ಏರು-ಪೇರು, ವಿಶ್ರಾಂತಿಯ ಕೊರತೆ, ಪೈಪೋಟಿ ಜೀವನ, ನಂಬಿಕೆಯ ಕೊರತೆ, ಆಲಸ್ಯ ಮತ್ತು ಉದ್ವೇಗ. ಯೋಗ ಶ್ರೀ ರಕ್ಷ ಸರಳಕ್ರಮದ ಮೂಲಕ ಆಹಾರ ಮತ್ತು ಯೋಗಕ್ರಮಗಳನ್ನು ತಿಳಿಸಿ ಯೋಗ ಮತ್ತು ಆಹಾರ ಶಿಕ್ಷಣದ ಮೂಲಕ ಆರೋಗ್ಯದ ಜಾಗೃತಿಯನ್ನು ಮಾಡಿ ತನ್ಮೂಲಕ ಜನ,ಮನೆ ಸಮಾಜದ ಮೂಲಕ ರಾಷ್ಟ್ರದ ಉದ್ದಾರವೆ ನಮ್ಮ ಮುಖ್ಯ ಗುರಿ ಮತ್ತು ನಮ್ಮಯ ಆದರ್ಶಸೂತ್ರ.
ಪ್ರಶ್ನೆ: ಸಿಂಗಪುರದಲ್ಲಿನ ಜೀವನಶೈಲಿ ನಿಮಗೆ ಈಗ ಸ್ವಲ್ಪ ಪರಿಚಯವಾಗಿರಬಹುದು, ಇಲ್ಲಿ ನಾವು ಯಾವ ರೀತಿಯ ಯೋಗಭ್ಯಾಸವನ್ನು ಮಾಡಬಹುದು? ದಿನಕ್ಕೆ ಎಷ್ಟು ಸಮಯ ಅಭ್ಯಾಸವನ್ನು ಮಾಡಬೇಕಾಗುತ್ತದೆ?
ಡಾ.ವಿವೇಕ : ಇದು ನನ್ನ ಪ್ರಥಮ ಸಿಂಗಪುರದ ಬೇಟಿ, ನಾನು ಗಮನಿಸಿದಂತೆ ಇಲ್ಲಿಯೂ ಕೂಡ ಪೈಪೋಟಿಯ, ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ನಾನು ಮಾಧ್ಯಮಗಳ ಮೂಲಕ ಮತ್ತು ಬಲ್ಲವರಿಂದ ಇಲ್ಲಿಯೂ ಕೂಡ ವಿಶ್ರಾಂತಿಯ ಅಭಾವ, ಸರಿಯಾದ ಆಹಾರ ಕ್ರಮದ ಅವಕಾಶದ ಅಭಾವ ಮತ್ತು ಸಮಯಕ್ಕೆ ಸರಿಯಾಗಿ ನಿದ್ದೆಯ ಕೊರತೆಯಿದೆ ಎಂದು ತಿಳಿದಿದ್ದೇನೆ. ಒಂದು ದೃಷ್ಟಿಯಲ್ಲಿ ಒಬ್ಬ ವೈದ್ಯನಾಗಿ, ಯೋಗ ಚಿಕಿತ್ಸಕನಾಗಿ ಹೇಳಬೇಕೆಂದರೆ ಇಲ್ಲಿಯೂ ಕೂಡ ಯೋಗಕ್ಕೆ ಗಮನಕೊಟ್ಟು ಪ್ರತಿದಿನ ಅಭ್ಯಾಸವನ್ನು ನಡೆಸಿದರೆ ನೆಮ್ಮದಿಯ ಆರೋಗ್ಯಕರ ಜೀವನವನ್ನು ನಡೆಸಬಹುದು. ಇಲ್ಲಿಯ ವೇಗಯುತವಾದ ಜೀವನದಲ್ಲಿ ಇಂತಿಷ್ಟೇ ಸಮಯವೆಂದು ಹೇಳಲಾಗುವುದಿಲ್ಲವಾದರೂ, ಕೊನೇಪಕ್ಷ ಪ್ರತಿದಿನ 20-30 ನಿಮಿಷಗಳ ಕಾಲವನ್ನು ಯೋಗಕ್ಕಾಗಿ ಮೀಸಲಿಡುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications