Latest Updates
-
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ
ವೈರಲ್ ಜ್ವರ ಬಂದರೆ ಮಾತ್ರೆ ಬದಲು ಹೀಗೆ ಮಾಡಿ

ಆದ್ದರಿಂದ ಜ್ವರ ಕಾಣಿಸಿಕೊಂಡ ಸಮಯದಲ್ಲಿ ಅಥವಾ ಮುಂಜಾಗ್ರತಾ ಕ್ರಮವಾಗಿ ಕೆಲವು ನಿಯಮವನ್ನು ಅನುಸರಿಸಿದರೆ ವೈರಲ್ ಜ್ವರದಿಂದ ಬೇಗನೆ ಹೊರಬರಬಹುದು.
ವೈರಲ್ ಜ್ವರದ ನಿವಾರಣೆ ಹೇಗೆ?
* ರಸಂ ಜೊತೆ ಅನ್ನ: ಜ್ವರ ಬಂದ ಸಮಯದಲ್ಲಿ ಬಿಸಿ ಅನ್ನದೊಂದಿಗೆ ಮೆಣಸು, ಜೀರಿಗೆ, ಕೊತ್ತಂಬರಿ ತಿಳಿ ನೀರನ್ನು (ರಸಂ) ಚೆನ್ನಾಗಿ ಮೆತ್ತಗೆ ಮಾಡಿ ತಿಂದರೆ ಗಂಟಲಿನ ನೋವು ಮತ್ತು ಕೆಮ್ಮಿಗೆ ತಕ್ಷಣವೇ ಉಪಶಮನ ದೊರೆಯುತ್ತೆ. ರಾಗಿ ಗಂಜಿ ಕುಡಿಯುವುದರಿಂದಲೂ ವೈರಲ್ ಜ್ವರಕ್ಕೆ ಒಳಗಾದವರು ಬೇಗನೆ ಚೇತರಿಸಿಕೊಳ್ಳುತ್ತಾರೆ.
ಈ ಸಮಯದಲ್ಲಿ ದೇಹದಲ್ಲಿ ಶಕ್ತಿ ಕುಂದಿರುವುದರಿಂದ ಅನ್ನದೊಂದಿಗೆ ಹಾಲು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಮೆತ್ತಗೆ ಮಾಡಿ ತಿಂದರೆ ದೇಹಕ್ಕೆ ಅಧಿಕ ಶಕ್ತಿ ದೊರೆಯುತ್ತದೆ. ಇದರಲ್ಲಿ ಕಾರ್ಬೊ ಹೈಡ್ರೇಟ್ ಮತ್ತು ಗ್ಲೂಕೋಸ್ ಅಂಶ ಶಕ್ತಿಯನ್ನು ಅಧಿಕವಾಗಿ ಹೆಚ್ಚಿಸುತ್ತದೆ.
* ಟೀ ಸೇವನೆ: ಟೀ ಸೇವನೆ, ಅದರಲ್ಲೂ ತುಳಸಿ, ಶುಂಠಿ, ಮತ್ತು ಪುದೀನಾ ಅಂಶವಿರುವ ಟೀ ಸೇವನೆ ಈ ಕಾಲಕ್ಕೆ ತುಂಬಾ ಉಪಯುಕ್ತ. ಇವುಗಳಲ್ಲಿ ಔಷಧೀಯ ಅಂಶ ಹೇರಳವಾಗಿರುವುದರಿಂದ ಜ್ವರವನ್ನು ಬೇಗನೆ ನಿವಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
* ಹಣ್ಣಿನ ಜ್ಯೂಸ್: ಕಿತ್ತಳೆ ಮತ್ತು ನಿಂಬೆ ಜ್ಯೂಸ್ ವೈರಲ್ ಜ್ವರ ತಡೆಯಲು ಸಹಕಾರಿ. ಈ ಸಿಟ್ರಸ್ ಹಣ್ಣುಗಳು ದೇಹವನ್ನು ಶುದ್ಧಗೊಳಿಸಿ ವಿಷಕಾರಿ ಅಂಶವನ್ನು ಹೊರ ದಬ್ಬುತ್ತದೆ. ಒಂದು ಲೋಟ ಬಿಸಿ ನೀರಿಗೆ ನಿಂಬೆರಸ ಮತ್ತು ಜೇನು ಸೇರಿಸಿ ಕುಡಿದರೆ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿ ರೋಗದ ವಿರುದ್ಧ ಹೋರಾಡಲು ನೆರವಾಗುತ್ತದೆ.
* ನೀಲಗಿರಿ ತೈಲ: ಬಿಸಿ ನೀರಿನಲ್ಲಿ ಗಂಟಲು ಮುಕ್ಕಳಿಸುವುದು ಮತ್ತು ನೀರು ಹಾಗು ನೀಲಗಿರಿ ತೈಲ ಬೆರೆಸಿದ ನೀರಿನಿಂದ ಆವಿ ತೆಗೆದುಕೊಳ್ಳುವುದರಿಂದ ಗಂಟಲು ಮತ್ತು ಉಸಿರಾಟ ಹಾಗೂ ಮೂಗಿನ ತೊಂದರೆ ಬೇಗನೆ ನಿವಾರಣೆಯಾಗುತ್ತದೆ.
* ಲಘು ಮತ್ತು ಮಸಾಲೆ ರಹಿತ ಆಹಾರ: ಜ್ವರ ಬಂದಿರುವಾಗ ಹೆಚ್ಚು ಮಸಾಲೆ ಪದಾರ್ಥವನ್ನು ಸೇವಿಸದಿದ್ದರೆ ಒಳಿತು. ದ್ರವಾಹಾರವೇ ಜ್ವರಕ್ಕೆ ಹೆಚ್ಚು ಸೂಕ್ತ. ಹೆಚ್ಚು ಜ್ವರವಿದ್ದರೆ ತಲೆ ಮೇಲೆ ತೇವದ ಬಟ್ಟೆ ಇಟ್ಟು ಮಲಗಿ ರಿಲ್ಯಾಕ್ಸ್ ಆಗಬೇಕು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications