Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ವೈರಲ್ ಜ್ವರ ಬಂದರೆ ಮಾತ್ರೆ ಬದಲು ಹೀಗೆ ಮಾಡಿ

ಆದ್ದರಿಂದ ಜ್ವರ ಕಾಣಿಸಿಕೊಂಡ ಸಮಯದಲ್ಲಿ ಅಥವಾ ಮುಂಜಾಗ್ರತಾ ಕ್ರಮವಾಗಿ ಕೆಲವು ನಿಯಮವನ್ನು ಅನುಸರಿಸಿದರೆ ವೈರಲ್ ಜ್ವರದಿಂದ ಬೇಗನೆ ಹೊರಬರಬಹುದು.
ವೈರಲ್ ಜ್ವರದ ನಿವಾರಣೆ ಹೇಗೆ?
* ರಸಂ ಜೊತೆ ಅನ್ನ: ಜ್ವರ ಬಂದ ಸಮಯದಲ್ಲಿ ಬಿಸಿ ಅನ್ನದೊಂದಿಗೆ ಮೆಣಸು, ಜೀರಿಗೆ, ಕೊತ್ತಂಬರಿ ತಿಳಿ ನೀರನ್ನು (ರಸಂ) ಚೆನ್ನಾಗಿ ಮೆತ್ತಗೆ ಮಾಡಿ ತಿಂದರೆ ಗಂಟಲಿನ ನೋವು ಮತ್ತು ಕೆಮ್ಮಿಗೆ ತಕ್ಷಣವೇ ಉಪಶಮನ ದೊರೆಯುತ್ತೆ. ರಾಗಿ ಗಂಜಿ ಕುಡಿಯುವುದರಿಂದಲೂ ವೈರಲ್ ಜ್ವರಕ್ಕೆ ಒಳಗಾದವರು ಬೇಗನೆ ಚೇತರಿಸಿಕೊಳ್ಳುತ್ತಾರೆ.
ಈ ಸಮಯದಲ್ಲಿ ದೇಹದಲ್ಲಿ ಶಕ್ತಿ ಕುಂದಿರುವುದರಿಂದ ಅನ್ನದೊಂದಿಗೆ ಹಾಲು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಮೆತ್ತಗೆ ಮಾಡಿ ತಿಂದರೆ ದೇಹಕ್ಕೆ ಅಧಿಕ ಶಕ್ತಿ ದೊರೆಯುತ್ತದೆ. ಇದರಲ್ಲಿ ಕಾರ್ಬೊ ಹೈಡ್ರೇಟ್ ಮತ್ತು ಗ್ಲೂಕೋಸ್ ಅಂಶ ಶಕ್ತಿಯನ್ನು ಅಧಿಕವಾಗಿ ಹೆಚ್ಚಿಸುತ್ತದೆ.
* ಟೀ ಸೇವನೆ: ಟೀ ಸೇವನೆ, ಅದರಲ್ಲೂ ತುಳಸಿ, ಶುಂಠಿ, ಮತ್ತು ಪುದೀನಾ ಅಂಶವಿರುವ ಟೀ ಸೇವನೆ ಈ ಕಾಲಕ್ಕೆ ತುಂಬಾ ಉಪಯುಕ್ತ. ಇವುಗಳಲ್ಲಿ ಔಷಧೀಯ ಅಂಶ ಹೇರಳವಾಗಿರುವುದರಿಂದ ಜ್ವರವನ್ನು ಬೇಗನೆ ನಿವಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
* ಹಣ್ಣಿನ ಜ್ಯೂಸ್: ಕಿತ್ತಳೆ ಮತ್ತು ನಿಂಬೆ ಜ್ಯೂಸ್ ವೈರಲ್ ಜ್ವರ ತಡೆಯಲು ಸಹಕಾರಿ. ಈ ಸಿಟ್ರಸ್ ಹಣ್ಣುಗಳು ದೇಹವನ್ನು ಶುದ್ಧಗೊಳಿಸಿ ವಿಷಕಾರಿ ಅಂಶವನ್ನು ಹೊರ ದಬ್ಬುತ್ತದೆ. ಒಂದು ಲೋಟ ಬಿಸಿ ನೀರಿಗೆ ನಿಂಬೆರಸ ಮತ್ತು ಜೇನು ಸೇರಿಸಿ ಕುಡಿದರೆ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿ ರೋಗದ ವಿರುದ್ಧ ಹೋರಾಡಲು ನೆರವಾಗುತ್ತದೆ.
* ನೀಲಗಿರಿ ತೈಲ: ಬಿಸಿ ನೀರಿನಲ್ಲಿ ಗಂಟಲು ಮುಕ್ಕಳಿಸುವುದು ಮತ್ತು ನೀರು ಹಾಗು ನೀಲಗಿರಿ ತೈಲ ಬೆರೆಸಿದ ನೀರಿನಿಂದ ಆವಿ ತೆಗೆದುಕೊಳ್ಳುವುದರಿಂದ ಗಂಟಲು ಮತ್ತು ಉಸಿರಾಟ ಹಾಗೂ ಮೂಗಿನ ತೊಂದರೆ ಬೇಗನೆ ನಿವಾರಣೆಯಾಗುತ್ತದೆ.
* ಲಘು ಮತ್ತು ಮಸಾಲೆ ರಹಿತ ಆಹಾರ: ಜ್ವರ ಬಂದಿರುವಾಗ ಹೆಚ್ಚು ಮಸಾಲೆ ಪದಾರ್ಥವನ್ನು ಸೇವಿಸದಿದ್ದರೆ ಒಳಿತು. ದ್ರವಾಹಾರವೇ ಜ್ವರಕ್ಕೆ ಹೆಚ್ಚು ಸೂಕ್ತ. ಹೆಚ್ಚು ಜ್ವರವಿದ್ದರೆ ತಲೆ ಮೇಲೆ ತೇವದ ಬಟ್ಟೆ ಇಟ್ಟು ಮಲಗಿ ರಿಲ್ಯಾಕ್ಸ್ ಆಗಬೇಕು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications