Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ತಲೆನೋವಿಗೂ ಜ್ಯೋತಿಷ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ?

ತಲೆ ಮಧ್ಯದಲ್ಲಿ, ಕಣ್ಣುಗಳ ಮೇಲೆ ಮತ್ತು ಕಿವಿಗಳ ಪಕ್ಕ ಹಾಗೂ ತಲೆಯ ಹಿಂದೆ ಮತ್ತು ಕತ್ತಿನ ಭಾಗದಲ್ಲಿ ಸೂಕ್ಷ್ಮ ನೋವು ಕಾಣಿಸಿಕೊಳ್ಳುತ್ತದೆ.
ಎಚ್ಚರಿಕೆ ಅತ್ಯಗತ್ಯ:
ನಿಮಗೆ ಇದ್ದಕ್ಕಿದ್ದಂತೆ ತಲೆನೋವು ಕಾಣಿಸಿಕೊಂಡರೆ, ಶಬ್ಧದಿಂದ ತಲೆ ನೋವು ಉಂಟಾದರೆ, ಗಂಟಲಿನಲ್ಲಿ ತೊಂದರೆ ಕಾಣಿಸಿಕೊಂಡರೆ, ಜ್ವರ ಮತ್ತು ಏಕಾಗ್ರತೆ ಕಳೆದುಕೊಂಡಿದ್ದರೆ ಕಿವಿ, ಕಣ್ಣಿನಲ್ಲಿ ನೋವಿದ್ದರೆ ಇದು ಗಂಭೀರ ಸಮಸ್ಯೆ ಎಂದು ಪರಿಗಣಿಸಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು.
ಜ್ಯೋತಿಷ್ಯ ತಲೆ ನೋವನ್ನು ಹೇಗೆ ಪರಿಹರಿಸುತ್ತೆ?
ಪರಿಣಿತ ಜ್ಯೋತಿಷ್ಯ ವಿಶ್ಲೇಷಕರು ಒಬ್ಬ ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಮತ್ತು ವ್ಯಕ್ತಿ ಯಾವ ರೀತಿಯ ಪ್ರತ್ಯೇಕ ಆರೋಗ್ಯ ಸಮಸ್ಯೆ ಅನುಭವಿಸುತ್ತಾನೆ ಎಂಬುದನ್ನು ಮುನ್ನವೇ ತಿಳಿಸುತ್ತಾರೆ. ಹಿಂದಿನ ಕಾಲದಲ್ಲಿ ಪ್ರಸಿದ್ಧ ವೈದ್ಯ ಹಿಪೊಕ್ರೇಟಿಸ್ ಕೂಡ ಮೊದಲು ಮನುಷ್ಯನ ಜಾತಕ ನೋಡಿ ನಂತರ ಚಿಕಿತ್ಸೆ ನೀಡುತ್ತಿದ್ದರಂತೆ.
ವ್ಯಕ್ತಿಯ ರೋಗಗಳು ಆತನ ಭಾವ ಅಥವಾ ರಾಶಿಯ ಮೇಲೆ ಅವಲಂಬಿತವಾಗಿರುತ್ತದೆ. ಜನ್ಮ ಕುಂಡಲಿಯಲ್ಲಿ ಅಶುಭ ತರುವ ಕೆಲವು ಗ್ರಹಗಳೊಂದಿಗೆ ರಾಶಿ ಸೇರಿ ಈ ರೀತಿ ಸಮಸ್ಯೆಗಳು ಉದ್ಭವವಾಗುತ್ತದೆ. ಯಾಕೆಂದರೆ ಒಂದೊಂದು ರಾಶಿಗಳೂ ಕೂಡ ಒಂದೊಂದು ದೇಹದ ಭಾಗಕ್ಕೆ ಸಂಬಂಧ ಹೊಂದಿರುತ್ತದೆ.
ಒಂದೊಂದು ಗ್ರಹಗಳೂ ವಾಯು, ಅಗ್ನಿ, ನೀರು ಮತ್ತು ಪ್ರಕೃತಿ ಮೇಲೆ ಅವಲಂಬಿತವಾಗಿದೆ. ಆಯುರ್ವೇದದಲ್ಲಿ ಇದನ್ನು ವಾತ, ಪಿತ್ತ ಮತ್ತು ಕಫ ಎಂದು ಕರೆಯುತ್ತಾರೆ. ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ಯಾವ ಗ್ರಹ ಹೆಚ್ಚು ಪ್ರಭಾವ ಹೊಂದಿದೆ ಎಂಬುದರ ಮೇಲೆ ಆತನ ಆರೋಗ್ಯ ಸ್ಥಿತಿಯೂ ಅವಲಂಬಿತವಾಗಿರುತ್ತದೆ.
ಮೇಷ ರಾಶಿ ತಲೆ, ಮೆದುಳು, ಕಣ್ಣು, ಅದರಲ್ಲೂ ತಲೆಯ ಮುಂಭಾಗ, ಕಣ್ಣಿನ ಕೆಳಭಾಗ ಮತ್ತು ತಲೆಯ ಹಿಂಭಾಗದಿಂದ ಬುರುಡೆಯ ತಳಭಾಗವನ್ನು ನಿಯಂತ್ರಿಸುತ್ತದೆ. ಇದು ಮಂಗಳ ಗ್ರಹವನ್ನು ಪ್ರತಿಫಲಿಸುವುದರಿಂದ ತಲೆಯಲ್ಲಿ ಅಗ್ನಿ ಶಕ್ತಿ ಇರುತ್ತದೆ. ಆದ್ದರಿಂದ ಮೇಷ ರಾಶಿ ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ಸೂರ್ಯ, ಚಂದ್ರ ಮತ್ತು ಇನ್ನಿತರ ಗ್ರಹಗಳು ಸೇರಿಕೊಂಡರೆ ಮೇಷ ರಾಶಿಯವರು ತಲೆನೋವಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಸೂರ್ಯನು ಜಾತಕ ಕುಂಡಲಿಯ 1, 2 ಅಥವಾ 12 ನೇ ಮನೆಯಲ್ಲಿದ್ದರೆ ಅಥವಾ ಮಂಗಳ ಗ್ರಹ ತುಂಬಾ ವಕ್ರನಾಗಿದ್ದರೆ ಅಥವಾ ಮಂಗಳ ಗ್ರಹ ಚಂದ್ರನೊಂದಿಗೆ ಸೇರಿಕೊಂಡಿದ್ದರೆ ಇಂತಹ ಜನರು ಮೈಗ್ರೇನ್ ತಲೆನೋವಿನಿಂದ ಬಳಲುವ ಸಾಧ್ಯತೆ ತುಂಬಾ ಹೆಚ್ಚು. ಸೂರ್ಯನು ಜಾತಕದಲ್ಲಿ ಪೀಡಕನಾಗಿದ್ದರೆ ಅಥವಾ 6ನೇ ಮನೆಯಲ್ಲಿ ಮಂಗಳ ಇದ್ದರೆ (6-ಜಾತಕ ಕುಂಡಲಿಯಲ್ಲಿ ರೋಗದ ಬಗ್ಗೆ ಮಾಹಿತಿ ನೀಡುವ ಕುಂಡಲಿ) ತಲೆನೋವಿಗೆ ಒಳಗಾಗುತ್ತಾನೆ.
ರಾಶಿಯ ಅಧಿಪತಿ ದುರ್ಬಲವಾಗಿದ್ದರೆ ಸುಸ್ತು, ತಲೆನೋವು ಉಂಟಾಗುತ್ತದೆ. ಚೈತನ್ಯ ಮತ್ತು ಶಕ್ತಿಯ ಸಂಕೇತವಾಗಿರುವ ಸೂರ್ಯ ಮತ್ತು ಮಂಗಳ ಕುಂಡಲಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದರೆ ಈ ರೀತಿಯ ತೊಂದರೆಯಿಂದ ರಕ್ತಣೆ ಪಡೆಯಬಹುದು.
ವೇದದ ಸಲಹೆ:
ಆರೋಗ್ಯ ಸಮಸ್ಯೆಗೆ ಸುಲಭ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ಸೂರ್ಯ ನಮಸ್ಕಾರ ಅಥವಾ ಗಾಯತ್ರಿ ಮಂತ್ರ ಪಠಣ ಅಥವಾ ಓಂ ಆದಿತ್ಯಾಯ ನಮಃ ಅಥವಾ ಓಂ ಸೂರ್ಯಾಯ ನಮಃ ಎಂಬ ಮಂತ್ರ. 42 ದಿನ ಬೆಳಗ್ಗಿನ ಜಾವ ಸೂರ್ಯನನ್ನು ನೋಡುತ್ತಾ 3, 11,21, 51, 108 ಬಾರಿ ಜಪಿಸಬೇಕು.
ಧನ್ವಂತರಿ ಹೋಮ ಮತ್ತು ಮಂಗಳ ಹೋಮವನ್ನು ಮಾಡಿದರೆ ಅಶುಭ ಗ್ರಹಗಳನ್ನು ಪ್ರಭಾವವನ್ನು ತಡೆದು ತಲೆನೋವಿನಿಂದ ನಿಮ್ಮನ್ನುದೂರವಿಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











