Latest Updates
-
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ!
ತುಂಬಾ ಸುಸ್ತಾದರೆ ತಕ್ಷಣದ ಪರಿಹಾರ ಇಲ್ಲಿದೆ

ಇಂತಹ ಸಮಯದಲ್ಲಿ, ತಕ್ಷಣವೇ ದೇಹಕ್ಕೆ ಶಕ್ತಿ ನೀಡುವ ಕೆಲವು ಆಹಾರ ಸೇವಿಸಿದರೆ, ಸುಸ್ತನ್ನು ತಡೆದು, ಚೈತನ್ಯದಿಂದ ಕೆಲಸ ನಿರ್ವಹಿಸಲು ಸಹಾಯವಾಗುತ್ತದೆ. ಆ ಆಹಾರಗಳು ಯಾವುದು ಎಂದು ಇಲ್ಲಿ ತಿಳಿಯಿರಿ.
ತಕ್ಷಣವೇ ಸುಸ್ತು ನೀಗಿಸುವ 5 ಆಹಾರಗಳು:
* ನಿಂಬೆ ಪಾನಕ: ನಿಂಬೆ ಪಾನಕ ಕೇವಲ ಮಧ್ಯಾಹ್ನದ ಸೋಮಾರಿತನ ನೀಗಿಸಲು ಮಾತ್ರವಲ್ಲ, ಅತಿಬೇಗನೆ ಶಕ್ತಿ ಪಡೆಯುವ ಸುಲಭ ವಿಧಾನ ಕೂಡ. ಪಾನಕದಲ್ಲಿ ಕರಗಿದ ರೂಪದಲ್ಲಿರುವ ಗ್ಲೂಕೋಸ್ ಯಾವುದೇ ಜೀರ್ಣಕ್ರಿಯೆ ಅವಶ್ಯಕತೆಯಿಲ್ಲದೆ ನೇರವಾಗಿ ರಕ್ತದಲ್ಲಿ ಸೇರಿಕೊಂಡು ಶಕ್ತಿ ನೀಡುತ್ತದೆ. ಇದರ ಉಪ್ಪಿನಂಶ, ದೇಹ ಬೆವರಿನ ಮೂಲಕ ಕಳೆದುಕೊಂಡ ಮಿನರಲ್ ಒದಗಿಸುತ್ತದೆ. ವಿಟಮಿನ್ ಸಿ ದೇಹಕ್ಕೆ ಶಕ್ತಿ ನೀಡುತ್ತದೆ.
* ಬಾಳೆಹಣ್ಣು: ಬಾಳೆಹಣ್ಣು ಸುಸ್ತನ್ನು ನೀಗಿಸುವ ಅತಿ ಪರಿಣಾಮಕಾರಿ ಹಣ್ಣು. ಇದರಲ್ಲಿನ ಸಕ್ಕರೆ ಮತ್ತು ಕಾರ್ಬೊಹೈಡ್ರೇಡ್ ಅಂಶ ದೇಹಕ್ಕೆ ಚೈತನ್ಯ ನೀಡುತ್ತದೆ. ರಕ್ತಕ್ಕೆ ಕಬ್ಬಿಣಾಂಶ ನೀಡುತ್ತದೆ. ಹೀಮೊಗ್ಲೋಬಿನ್ ಅಂಶ ಹೆಚ್ಚಿದ್ದಷ್ಟು ಆಮ್ಲಜನಕ ಹೆಚ್ಚುತ್ತದೆ ಮತ್ತು ಇದರಿಂದ ಶಕ್ತಿಯೂ ದೊರಕುತ್ತದೆ.
* ಚೀಸ್: ದೇಹದಲ್ಲಿ ಶಕ್ತಿದಾಯಕ ಹಾರ್ಮೋನ್ ಬಿಡುಗಡೆಮಾಡುವಲ್ಲಿ ಚೀಸ್ ಹೆಚ್ಚು ಸಹಾಯಕ. ಇದು ಸೋಮಾರಿತನ ನೀಗಿಸಿ ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳುತ್ತದೆ.
* ಸ್ಟ್ರಾಬೆರಿ: ನಿಮಗೆ ತಕ್ಷಣವೇ ಶಕ್ತಿ ದೊರೆಯಬೇಕೆಂದರೆ ಸ್ಟ್ರಾಬೆರಿ ಉತ್ತಮ ಆಯ್ಕೆ. ಸ್ಟ್ರಾಬೆರಿಯಲ್ಲಿ ಹೆಚ್ಚಿನ ನಾರಿನಂಶ, ವಿಟಮಿನ್ ಸಿ, ಆಂಟಿಯಾಕ್ಸಿಡಂಟ್ ಇರುವುದರಿಂದ ಜೀವಕೋಶಗಳನ್ನು ಶುದ್ಧಗೊಳಿಸಿ ಪುನಶ್ಚೇತನಗೊಳಿಸುತ್ತದೆ.
* ಗ್ರೀನ್ ಟೀ: ನಿಮ್ಮ ನರಮಂಡಲಕ್ಕೆ ಗ್ರೀನ್ ಟೀ ಸೇವನೆ ಅತ್ಯುತ್ತಮ ರಿಲ್ಯಾಕ್ಸ್ ನೀಡುತ್ತದೆ. ಬಳಲಿಕೆ ನೀಗಿಸಿ ಏಕಾಗ್ರತೆ ಹೆಚ್ಚಿಸುತ್ತದೆ. ಬೇರೆ ಟೀ, ಕಾಫಿಗೆ ಹೋಲಿಸಿದರೆ ಗ್ರೀನ್ ಟೀನಲ್ಲಿ ಹೆಚ್ಚು ಆಂಟಿಯಾಕ್ಸಿಡಂಟ್ ಇರುವುದರಿಂದ, ಇದರ ಸೇವನೆ ತಕ್ಷಣವೇ ಚೈತನ್ಯ ನೀಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications