Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಯುಗಾದಿ ಪಚಡಿ ಇದರ ವಿಶೇಷತೆ ಗೊತ್ತೇ? ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಹೀಗೆಲ್ಲಾ ಗುಣಗಳಿವೆ
ಯುಗಾದಿಗೆ ಬೇವು-ಬೆಲ್ಲ ಎಷ್ಟು ಸ್ಪೆಷಲೋ, ಪಚಡಿ ಕೂಡ ಅಷ್ಟೇ ಸ್ಪೆಷಲ್. ಈ ದಿನ ಹಬ್ಬದ ಅಡುಗೆಯಲ್ಲಿ ಯುಗಾದಿ ಪಚಡಿ ಮಾಡಲಾಗುವುದು.

ಈ ಯುಗಾದಿ ಪಚಡಿ ವಿಶೇಷತೆ ಏನು, ಇದನ್ನು ತಿನ್ನುವುದರಿಂದ ಸಿಗುವ ಆರೋಗ್ಯಕರ ಗುಣಗಳೇನು, ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಯುಗಾದಿ ಪಚಡಿಗೆ ಬೇಕಾಗುವ ಸಾಮಗ್ರಿಗಳು
ಬೇವಿನ ಸೊಪ್ಪು ಮತ್ತು ಹೂಗಳು
ಮಾವಿನಕಾಯಿ
ಬೆಲ್ಲ
ಕಾಳು ಮೆಣಸು
ಉಪ್ಪು
ಈ ಪ್ರಮುಖ ಸಾಮಗ್ರಿ ಬಳಸಿ ಯುಗಾದಿ ಪಚಡಿ ತಯಾರಿಸಲಾಗುವುದು.
ಯುಗಾದಿ ಪಚಡಿ ತಯಾರಿ ಹೇಗೆ?
* 1 ಚಮಚ ಹುಣಸೆಹಣ್ಣನ್ನು ಒಂದು ಚಿಕ್ಕ ಕಪ್ ಬಿಸಿ ನೀರಿನಲ್ಲಿ ಹಾಕಿಡಿ. ನಂತರ ಅದನ್ನು ಕಿವುಚಿ ಹುಣಸೆ ರಸ ತೆಗಿಯಿರಿ.
* ನಂತರ ಮುಕ್ಕಾಲು ಕಪ್ ನೀರು ಸೇರಿಸಿ
* ಬೆಲ್ಲವನ್ನು ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕಲೆಸಿ.
* ನಂತರ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ ಸೇರಿಸಿ, ಬೇವಿನ ಹೂ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.
* ನಂತರ 1/4 ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಸೇವಿಸಿ.
ಯುಗಾದಿ ಪಚಡಿ ಬಳಸುವುದರಿಂದ ದೊರೆಯುವ ಪ್ರಯೋಜನಗಳು
ಈ ಪಚಡಿ ತಿನ್ನುವುದರಿಂದ ಕಹಿಬೇವಿನ ಎಲೆ, ಬೇವಿನ ಸೊಪ್ಪಿನಿಂದ ದೊರೆಯುವ ಪ್ರಯೋಜನಗಳು
* ಇವುಗಳಲ್ಲಿ ಆ್ಯಂಟಿಆಕ್ಸಿಡೆಂಡ್ ಹೆಚ್ಚಾಗಿ ಇರುವುದರಿಂದ ಇವುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
* ಇವುಗಳು ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ.
* ಇವು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ.
* ಉರಿಯೂತದ ಸಮಸ್ಯೆ ಇರುವವರಿಗೆ ಇದು ತುಂಬಾ ಒಳ್ಳೆಯದು.
ಮಾವಿನಕಾಯಿ ಪ್ರಯೋಜನಗಳು
ಮಾವಿನಕಾಯಿ ಸೀಸನಲ್ ಆಹಾರ, ಯಾವುದೇ ಸೀಸನಲ್ ಆಹಾರ ತಿಂದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬಿಸಿಲಿನಲ್ಲಿ ಕಾಡುವ ಕಾಯಿಲೆ ತಡೆಗಟ್ಟಲು ಮಾವಿನಕಾಯಿ ಸಹಕಾರಿ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
ಬೆಲ್ಲ
ಬೆಲ್ಲ ಕೂಡ ಆರೋಗ್ಯಕ್ಕೆ ಒಳ್ಳೆಯದು. ಬಿಸಿಲಿನಲ್ಲಿ ಬೆಲ್ಲದ ಪಾನೀಯ ತುಂಬಾನೇ ಒಳ್ಳೆಯದು. ಬಿಸಿಲಿನಲ್ಲಿ ಸುಸ್ತನ್ನು ಬೇಗನೆ ನಿವಾರಿಸುತ್ತದೆ.
ಕಾಳು ಮೆಣಸು
ಕಾಳು ಮೆಣಸು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಜೀರ್ಣ, ಖಿನ್ನತೆ, ಕೆಮ್ಮು ಮುಂತಾದ ಕಾಯಿಲೆ ತಡೆಗಟ್ಟುವ ಶಕ್ತಿ ಕರಿಮೆಣಸಿಗೆ ಇದೆ.
ಆದ್ದರಿಂದ ಯುಗಾದಿಯಲ್ಲಿ ತಯಾರಿಸುವ ಪಚಡಿ ತುಂಬಾನೇ ವಿಶೇಷವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










