Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಡಯಾಲಿಸಿಸ್ ಬಗ್ಗೆ 6 ತಪ್ಪು ಕಲ್ಪನೆಗಳು: ಮೂತ್ರಪಿಂಡ ತಜ್ಞರಿಂದ ಉಪಯುಕ್ತ ಮಾಹಿತಿ
ಮೂತ್ರಪಿಂಡದ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನವರನ್ನು ಕಾಡುತ್ತಿದೆ. ಡಯಾಲಿಸಿಸ್ ಮಾಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ.
ಸಿಸ್ಟಮ್ಯಾಟಿಕ್ ಆನಲಿಸಿಸ್ ಫಾರ್ ದಿ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 2017ರ ಪ್ರಕಾರ 1990-2017ರ ನಡುವೆ ಮೂತ್ರಪಿಂಡದ ವೈಫಲ್ಯದಿಂದ ಸಾವನ್ನಪ್ಪಿರುವ ಸಂಖ್ಯೆ ಸೇ, 38ರಷ್ಟು ಹೆಚ್ಚಾಗಿದೆ. ಮೂತ್ರಪಿಂಡದ ಸಮಸ್ಯೆ ಉಂಟಾದರೆ ಡಯಾಲಿಸಿಸ್ ಮಾಡಬೇಕು.

ಆದರೆ ಈ ಡಯಾಲಿಸಿಸ್ ಬಗ್ಗೆ ತಪ್ಪು ಕಲ್ಪನೆ ಇದೆ, ಇದರ ಬಗ್ಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಖ್ಯಾತ ಮೂತ್ರಪಿಂಡ ತಜ್ಞರಾದ ಡಾ. ಶ್ರೀನಿಧಿ ಚಂದ್ರಶೇಖರ್ ಪ್ರಮುಖವಾದ ಮಾಹಿತಿ ನಮ್ಮ ಓದುಗರ ಜೊತೆ ಹಂಚಿಕೊಂಡಿದ್ದು ಡಯಾಲಿಸಿಸ್ ಕುರಿತು ಇರುವ ತಪ್ಪು ಕಲ್ಪನೆಗಳೇನು ಎಂದು ನೋಡೋಣ:
ತಪ್ಪುಕಲ್ಪನೆ 1: ಮೂತ್ರಪಿಂಡದ ಸಮಸ್ಯೆ ಹಿರಿಯರಲ್ಲಿ ಮಾತ್ರ ಕಂಡು ಬರುತ್ತದೆ
ಸತ್ಯಾಂಶ: ಈ ಮೂತ್ರಪಿಂಡದ ಸಮಸ್ಯೆಗೆ ಇದೇ ವಯಸ್ಸು ಎಂಬುವುದು ಇಲ್ಲ, ಎಲ್ಲಾ ವಯಸ್ಸಿನವರಲ್ಲಿಯೂ ಕಂಡು ಬರುವುದು. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (1996-2017) ನಡೆಸಿದ ಅಧ್ಯಯನದ ಪ್ರಕಾರ, ದೀರ್ಘ ಕಾಲದಿಂದ ಮೂತ್ರಪಿಂಡದ ಸಮಸ್ಯೆ ಹೊಂದಿರುವವರ ಸಂಖ್ಯೆ 83.5% ರಷ್ಟು ಹೆಚ್ಚಾಗಿದೆ. ಮೂತ್ರಪಿಂಡದ ಸಮಸ್ಯೆಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಚೇತರಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ತಪ್ಪುಕಲ್ಪನೆ 2: ಮೂತ್ರಪಿಂಡ ವೈಫಲ್ಯವಾದರೆ ಮೂತ್ರಪಿಂಡದ ಕಸಿ ಮಾಡಿದರೆ ಮಾತ್ರ ಬದುಕಿಳಿಯಲು ಸಾಧ್ಯ
ಮೂತ್ರಪಿಂಡದ ಸಮಸ್ಯೆ ಉಂಟಾದರೆ ಮೂತ್ರ ಪಿಂಡದ ಕಸಿ ಮಾಡದಿದ್ದರೆ ಕಷ್ಟ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ.ಆದರೆ ಮೂತ್ರಪಿಂಡದ ಸಮಸ್ಯೆಗೆ ಮೂತ್ರಪಿಂಡದ ಕಸಿಯೊಂದೇ ಪರಿಹಾರವಲ್ಲ, ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಮೂತ್ರಪಿಂಡದ ಸಮಸ್ಯೆಯಿಂದ ಗುಣಮುಖರಾಗಬಹುದು, ಮೂತ್ರಪಿಂಡದ ಕಸಿ ಎಂಬುವುದು ಚಿಕಿತ್ಸೆಯ ಕೊನೆಯ ಹಂತವಾಗಿದೆ.
ತಪ್ಪುಕಲ್ಪನೆ 3: ಡಯಾಲಿಸಿಸ್ ಮಾಡುವುದರಿಂದ ದೊಡ್ಡ ಪ್ರಯೋಜನವಿಲ್ಲ
ಡಯಾಲಿಸಿಸ್ ಎಂಬುವುದು ಕಿಡ್ನಿ ಸಮಸ್ಯೆಗೆ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನವಾಗಿದೆ. ಡಯಾಲಿಸಿಸ್ ಮೂಲಕ ರಕ್ತದಿಂದ ತ್ಯಾಜ್ಯ ಹಾಗೂ ಹೆಚ್ಚುವರಿ ದ್ರವ ಹೊರ ಹಾಕಲಾಗುವುದು, ಇದರಿಂದ ದೇಹದ ಇತರ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಡಯಾಲಿಸಿಸ್ ರೋಗಿಯ ಜೀವನಮಟ್ಟ ಸುಧಾರಿಸುತ್ತದೆ, ರೋಗಿಯ ಆಯುಸ್ಸು ಹೆಚ್ಚಿಸುತ್ತದೆ.
ತಪ್ಪುಕಲ್ಪನೆ 4: ಡಯಾಲಿಸಿಸ್ ಚಿಕಿತ್ಸೆ ಪಡೆಯುವುದರಿಂದ ರೋಗಿಯ ದೇಹ ಮತ್ತಷ್ಟು ದುರ್ಬಲವಾಗುವುದು
ಡಯಾಲಿಸ್ ಮಾಡಿಸಿ ಬಂದ ದಿನ ರೋಗಿಯಲ್ಲಿ ತುಂಬಾ ನೋವು ಕಂಡು ಬರುವುದು, ಆದರೆ ರೋಗಿ ಚಟುವಟಿಕೆಯಿಂದ ಕೆಲಸ ಕಾರ್ಯ ಮಾಡಿಕೊಂಡಲು ಸಹಾಯವಾಗುವುದು. ಆರ್ಥಿಕವಾಗಿ ಹೊರೆಯಾಗುವುದು ನಿಜ. ಆದರೆ ವ್ಯಕ್ತಿಯ ಬದುಕನ್ನು ಸುಧಾರಣೆ ಮಾಡುತ್ತದೆ. ವ್ಯಕ್ತಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು, ತಾನೇ ದುಡಿಯುವ ಸಾಮರ್ಥ್ಯ ಪಡೆಯುತ್ತಾನೆ, ಇದರಿಂದ ಆರ್ಥಿಕ ಹೊರೆಯಾಗುವುದನ್ನು ಕಡಿಮೆ ಮಾಡುವಲ್ಲಿ ಡಯಾಲಿಸಿಸ್ ಸಹಾಯ ಮಾಡುತ್ತದೆ.
ತಪ್ಪುಕಲ್ಪನೆ 5: ಡಯಾಲಿಸಿಸ್ ಮಾಡುವಾಗ ತುಂಬಾನೇ ನೋವುಂಟಾಗುವುದು
ನಿಜಾಂಶ: ಹಿಮೋಡಯಾಲಿಸಿಸ್ ಚಿಕಿತ್ಸೆ ವೇಳೆ ರೋಗಿಯು ಅಸ್ವಸ್ಥತೆಯನ್ನು ಅನುಭವಿಸಬಹುದು. ಆದರೆ ವ್ಯಕ್ತಿ ಮೂತ್ರಪಿಂಡದ ವೈಫಲ್ಯದಿಂದ ಅನುಭವಿಸುವ ಸಮಸ್ಯೆಗಿಂತ ಇದು ದೊಡ್ಡದ್ದು ಅನಿಸಲ್ಲ. ಅಲ್ಲದೆ . ಪೆರಿಟೋನಿಯಲ್ ಡಯಾಲಿಸಿಸ್ ಮಾಡಿದರೆ ಹೆಚ್ಚು ತೊಂದರೆಯಾಗುವುದಿಲ್ಲ, ಅಲ್ಲದೆ ನೋವು ರಹಿತ ಆಧುನಿಕ ಚಿಕಿತ್ಸಾ ವಿಧಾನ ಬಂದಿದೆ.
ತಪ್ಪುಕಲ್ಪನೆ 6: ಡಯಾಲಿಸಿಸ್ ಒಮ್ಮೆ ಮಾಡಿಸಿದ ಮೇಲೆ ಮಾಡಿಸುತ್ತಲೇ ಇರಬೇಕು
ಇದು ತಪ್ಪು ಕಲ್ಪನೆ, ಕೆಲವೊಮ್ಮೆ ಸೋಂಕು ಉಂಟಾದಾಗ ಅಥವಾ ಔಷಧಿಗಳ ಅಡ್ಡಪರಿಣಾಮದಿಂದ, ಅಪಘಾತದಿಂದ ಮೂತ್ರಪಿಂಡದ ವೈಫಲ್ಯ ಉಂಟಾಗುವುದು, ಆವಾಗ ಕೂಡ ಡಯಾಲಿಸಿಸ್ ಮಾಡಲಾಗುವುದು, ಆದರೆ ಮೂತ್ರಪಿಂಡದ ಕಾರ್ಯದಲ್ಲಿ ಸುಧಾರಣೆ ಕಂಡು ಬಂದರೆ ಡಯಾಲಿಸಿಸ್ ಅಗ್ಯತ ಬೀಳುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
