Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾತ ದೋಷ ಎಂದರೇನು? ಇದನ್ನು ಹೇಗೆ ಗುಣಪಡಿಸಬಹುದು?
ವಾತ ಎಂದರೆ ವಾಯು ಎಂದು ಅರ್ಥ. ಆದರೆ ದೇಹದ ವಿಚಾರದದಲ್ಲಿ ವಾತ ಎಂದರೆ ದೇಹದಲ್ಲಾಗುವ ಚಲನೆ ಎಂದರ್ಥ: ದೇಹ ಮತ್ತು ಮನಸ್ಸಿನೊಳಗಿನ ಚಲನೆಯ ಪ್ರಮುಖ ಶಕ್ತಿಯನ್ನೇ ವಾತ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಉಸಿರಾಟ, ರಕ್ತ ಪರಿಚಲನೆ, ಮಾನಸಿಕ ಚಟುವಟಿಕೆಗಳು, ಜೀರ್ಣಾಂಗಗಳ ಮೂಲಕ ಆಹಾರದ ಅಂಗೀಕಾರ ಮತ್ತು ಜಂಟಿ ಚಲನೆಗಳು ಸೇರಿವೆ. ವಾತವು ದೇಹದ ಎಲ್ಲಾ ಜೀವಕೋಶಗಳಲ್ಲಿ ಇರುತ್ತದೆ. ಆಯುರ್ವೇದವು ಈ ದೋಷದ ಪ್ರಮುಖ ಸ್ಥಳಗಳಾದ ದೊಡ್ಡ ಕರುಳು, ಶ್ರೋಣಿಯ ಪ್ರದೇಶ, ಮೊಣಕಾಲುಗಳು, ಚರ್ಮ, ಕಿವಿ ಮತ್ತು ಸೊಂಟದಂತಹ ದೇಹದಲ್ಲಿನ ಕೆಲವು ಸ್ಥಳಗಳನ್ನು ಉಲ್ಲೇಖಿಸಿದೆ.
ದೇಹದಲ್ಲಿನ ವಾತವು ಪರಿಸರದಲ್ಲಿರುವ ನಿಜವಾದ ಗಾಳಿ ಅಥವಾ ಗಾಳಿಯಂತೆಯೇ ಇರುವುದಿಲ್ಲ. ಇದು ಎಲ್ಲಾ ದೇಹದ ಚಲನೆಗಳನ್ನು ನಿಯಂತ್ರಿಸುವ ಸೂಕ್ಷ್ಮ ಶಕ್ತಿಯಾಗಿದೆ. ಅದು ಸಮತೋಲಿತ ಸ್ಥಿತಿಯಲ್ಲಿದ್ದಾಗ, ದೇಹದ ಚಲನೆಗಳು ಆಕರ್ಷಕವಾಗಿರುತ್ತವೆ, ಮೃದುವಾಗಿರುತ್ತವೆ ಮತ್ತು ನಿಯಂತ್ರಿಸಲ್ಪಡುತ್ತವೆ ಅಥಾವ ಮನುಷ್ಯ ಆರೋಗ್ಯವಾಗಿರುತ್ತಾನೆ. ಮನಸ್ಸು ಶಾಂತ, ಸ್ಪಷ್ಟ ಮತ್ತು ಎಚ್ಚರವಾಗಿರುತ್ತದೆ. ಒಬ್ಬ ವ್ಯಕ್ತಿಯು ಸಂತೋಷ, ಉತ್ಸಾಹ, ಶಕ್ತಿಯಿಂದ ತುಂಬಿದ ಮತ್ತು ಕಲಾತ್ಮಕತೆಯನ್ನು ಅನುಭವಿಸುತ್ತಾನೆ.
ಆದರೆ ವಾತವು ಅಸಮೋತಲನದಿಂದ ಕೂಡಿದರೆ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅನಾರೋಗ್ಯದಿಂದ ಮನುಷ್ಯ ಕೂಡಿರುತ್ತಾನೆ. ವಾತ-ಪಿತ್ತ-ಕಫವೂ ಸಮತೋಲನವಾಗಿರಬೇಕು ಎಲ್ಲದರೂ ಅಸಮತೋಲನದಿಂದ ಕೂಡಿದರೆ ರೆಸ್ಟ್ ಲೆಸ್ ನೆಸ್, ಆತಂಕ, ಕೋಪ ಮನುಷ್ಯನನ್ನು ಆವರಿಸುತ್ತೆ. ಆಯುರ್ವೇದದಲ್ಲಿ ವಾತ, ಪಿತ್ತ, ಕಫಕ್ಕೆ ಮಹ್ತ್ವದ ಸ್ಥಾನವಿದೆ.

ವಾತ ದೋಷದ ಲಕ್ಷಣಗಳೇನು?
ಸಾಮಾನ್ಯವಾಗಿ ಎಲ್ಲ ಮನುಷ್ಯನಿಗೂ ವಾತ ಇರುತ್ತದೆ. ಆದರೆ ಅದು ಅಸಮತೋಲನಗೊಂಡಾಗ ಮನುಷ್ಯನಿಗೆ ಅದರ ದೋಷ ಅನುಭವವಾಗುತ್ತದೆ. ವಾತ ದೋಷದಿಂದ ಮನುಷ್ಯನ ಶರೀರ ಹಾಗೂ ಮಾನಸಿಕತೆ ಮೇಲೆ ಸಮಸ್ಯೆ ಉಂಟಾಗುತ್ತದೆ. ಶಾರೀರಿಕವಾಗಿರುವ ಸಮಸ್ಯೆಗಳೆಂದರೆ ಚರ್ಮ ಮತ್ತು ಕೂದಲಿನ ಒರಟುತನ, ಕಿವಿಗಳು, ತುಟಿಗಳು ಅಥವಾ ಕೀಲುಗಳ ಶುಷ್ಕತೆ. ದುರ್ಬಲವಾದ ಜೀರ್ಣಕ್ರಿಯೆಯು ಉಬ್ಬುವುದು, ಅನಿಲಗಳು, ಹೊರಹೋಗಲು ಕಷ್ಟಕರವಾದ ಗಟ್ಟಿಯಾದ ಮಲ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ತೂಕ ಇಳಿಕೆ ಉಂಟಾಗುತ್ತದೆ. ಸಾಮಾನ್ಯವಾಗಿ ದೇಹ-ನೋವು, ದಣಿವು, ನಾಲಗೆಗೆ ರುಚಿ ಶಕ್ತಿ ನಷ್ಟ, ನಿದ್ರೆಯ ಕೊರತೆಯಂತಹ ಸಮಸ್ಯೆಗಳು ಉಂಟಾಗುತ್ತದೆ. ಇನ್ನು ಮಾನಸಿಕ ಸಮಸ್ಯೆಗಳನ್ನು ಗಮನಿಸುವುದಾದದ್ರೆ ವಾತ ದೋಷದಿಂದ ಮನಸ್ಸನ್ನು ಕೇಂದ್ರೀಕರಿಸಲು ಅಸಮರ್ಥತೆ, ಚಡಪಡಿಕೆ, ಆತಂಕ, ತಳಮಳ, ತೀಕ್ಷ್ಣವಾದ ಮಾನಸಿಕ ನೋವು, ಜಾಸ್ತಿ ಮಾತನಾಡುವುದು,ಕೋಪ, ದೂರ ಹೋಗಿ ಉಳಿಯೋಣ ಎನ್ನುವ ರೀತಿ ಯೋಚನೆ. ಈ ರೀತಿಯ ಸಮಸ್ಯೆಗಳು ಮನುಷ್ಯರನ್ನು ವಾತ ದೋಷದಿಂದ ಕಾಡುತ್ತದೆ.

ವಾತಕ್ಕೆ ಕಾರಣವೇನು?
ವಾತಕ್ಕೆ ದೋಷಕ್ಕೆ ಇಂತಹದ್ದೇ ಕಾರಣ ಎಂದು ಇಲ್ಲ. ಮನುಷ್ಯನ ಜೀವನ ಶೈಲಿಯಿಂದ ವಾತ ದೋಷ ಬರಬಹುದು. ವಯಸ್ಸು ಜಾಸ್ತಿಯಾಗುತ್ತಿದ್ದಂತೆ ಸಾಮಾನ್ಯವಾಗಿ ಮನುಷ್ಯನಿಗೆ ವಾತ ದೋಷ ಕಂಡು ಬರುತ್ತದೆ. ಅಲ್ಲದೇ ವಾತದ ಗುಣಗಳೆಂದರೆ ಒಣಗುಣ. ಹಗುರ, ತಂಪು, ಒರಟು, ಸೂಕ್ಷ್ಮ ಹಾಗೂ ಚಲ ಗುಣಗಳಾಗಿವೆ. ನಾವು ಸೇವಿಸುವ ಆಹಾರ ವಿಹಾರಗಳಲ್ಲಿ ಈ ಗುಣಗಳು ಹೆಚ್ಚಾಗಿದ್ದಲ್ಲಿ ಆಗ ವಾತದೋಷ ದೇಹದಲ್ಲಿ ಹೆಚ್ಚಾಗುತ್ತದೆ. ಹೀಗೆ ಹೆಚ್ಚಾದ ವಾತ ಈಗಾಗಲೇ ಹೇಳಿದ ಸಮಸ್ಯೆಗಳನ್ನು ತೋರುತ್ತದೆ. ಅಲ್ಲದೇ ವಾತ ದೇಹವನ್ನು ಡ್ರೈ ಮಾಡುವ ಗುಣವನ್ನು ಹೊಂದಿರುವುದರಿಂದ ದೇಹವನ್ನು ದಿನ ನಿತ್ಯ ಎಣ್ಣೆ ಸ್ನಾನ ಮಾಡದೆ ಇರುವುದು ಕೂಡ ವಯಸ್ಸಾದ ಬಳಿಕ ಸಮಸ್ಯೆ ಕಾಡುತ್ತದೆ ಎನ್ನುತ್ತಾರೆ.

ವಾತ ಸಮತೋಲನದಲ್ಲಿ ಇಡುವುದು ಹೇಗೆ?
ಆಯುರ್ವೇದದ ಪ್ರಕಾರ ವಾತ ಪಿತ್ತ ಮತ್ತು ಕಫವನ್ನು ತ್ರಿದೋಷ ಎಂದು ಕರೆಯುತ್ತಾರೆ. ಅವು ದೀರ್ಘಕಾಲದ ಕಾಯಿಲೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆಯುರ್ವೇದದ ಪ್ರಕಾರ ಕಫ ದೋಷದಲ್ಲಿ 28 ರೋಗಗಳು, ಪಿತ್ತರೋಗ 40 ಮತ್ತು ವಾತ ದೋಷದಲ್ಲಿ 80 ಬಗೆಯ ರೋಗಗಳು ಇವೆ. ಎದೆಯ ಮೇಲ್ಭಾಗದ ಭಾಗದಲ್ಲಿ ಕಫದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿತ್ತದ ಸಮಸ್ಯೆ ಎದೆಯ ಕೆಳಗೆ ಮತ್ತು ಗಂಟಲಿನ ಭಾಗದಲ್ಲಿದೆ. ಇದರ ಜೊತೆಗೆ ಸೊಂಟದ ಕೆಳಭಾಗ ಮತ್ತು ಕೈಗಳಲ್ಲಿ ವಾತದ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಈ ದೋಷವನ್ನು ಬರದಂತೆ ನೋಡಿಕೊಳ್ಳಲು ಅಥಾವ ಸಮತೋಲನ ಕಾಪಾಡಿಕೊಳ್ಳಲು ಇದರ ಬಗ್ಗೆ ತಿಳಿದು ಜೀವನ ಶೈಲಿ ನಡೆಸಬೇಕು. ಅಲ್ಲದೇ ಆಹಾರ ಕ್ರಮಗಳು, ಯೋಗಾಸನದಂತಹ ವಿಚಾರಗಳನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

1. ವಾತ ನಿವಾರಣೆಗೆ ಇವುಗಳನ್ನು ಸೇವಿಸಿ!
ವಾತ ನಿವಾರಣೆಗೆ ಕೆಲವೊಂದು ಆಹಾರಗಳನ್ನು ಸೇವಿಸಿದರೆ ಉತ್ತಮ. ವಾತ ದೋಷ ಇದ್ದರೂ ಕೂಡ ಇಂತಹ ಆಹಾರಗಳನ್ನು ಅದನ್ನು ಸಮತೋಲನವಾಗಿಸುತ್ತದೆ. ಧಾನ್ಯಗಳಾದ ಓಟ್ಸ್, ಅಕ್ಕಿ, ಗೋಧಿ ಸೇವಿಸುವುದು ಉತ್ತಮ. ಇನ್ನು ಎಲ್ಲಾ ರೀತಿಯ ತರಕಾರಿಗಳನ್ನು ಬೇಯಿಸಿ ತಿನ್ನುವುದು ಒಳ್ಳೆಯದು. ಇನ್ನು ಖಾರ ವಸ್ತುಗಳಾದ ಮೆಣಸು, ಅರಶಿನದಂತಹ ಮಸಾಲೆ ಪದಾರ್ಥಗಳನ್ನು ಮಿತವಾಗಿ ಬಳಸಬೇಕು. ಹಣ್ಣು-ಹಂಪಲು, ಡ್ರೈ ಫುರ್ಟ್ಸ್ ಗಳನ್ನು ಸೇವಿಸುವುದು ಒಳ್ಳೆಯದು. ಹಸುವಿನ ಹಾಲು, ಮೊಸರು, ತುಪ್ಪವನ್ನು ನಿಯಮಿತವಾಗಿ ಸೇವಿಸಬೇಕು.

2.ಯೋಗಾಸನದ ಮೂಲಕ ವಾತ ಸಮತೋಲನ!
ಎಲ್ಲ ರೋಗಗಳಂತೆ ವಾತ ನಿವಾರಣೆಗೆ ಯೋಗ ಅತ್ಯುತ್ತಮ. ನಿವಾರಣೆ ಮಾತ್ರವಲ್ಲದೇ ವಾತ ಸಮತೋಲನ ಕಾಪಾಡಿಕೊಳ್ಳಲು ಇದು ಉತ್ತಮ ವಿಧಾನ. ವಾತಕ್ಕೆ ಸಂಬಂಧಪಟ್ಟ ಯೋಗಗಳನ್ನು ದಿನ ನಿತ್ಯ ಮಾಡುವುದರಿಂದ ಸಮತೋಲನ ಕಾಪಾಡಿಕೊಳ್ಳಬಹುದು. ಇನ್ನು ವಾತ ಶಾಂತಗೊಳಿಸುವ ಆಸನಗಳಾದ ಶವಾಸನ ಮತ್ತು ಭ್ರಮರಿ ಪ್ರಾಣಾಯಾಮವು ಒತ್ತಡ, ಆತಂಕವನ್ನು ಕಡಿಮೆ ಮಾಡಲು ಮತ್ತು ಗಮನ ಮತ್ತು ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

3.ಆಯುರ್ವೇದ ಚಿಕಿತ್ಸೆ!
ಆಯುರ್ವೇದವು ವಾತ ದೋಷವನ್ನು ಶಮನಗೊಳಿಸಲು ಅಭ್ಯಂಗ (ಎಣ್ಣೆ ಮಸಾಜ್), ಸ್ವೀಡನ್ (ಸ್ವೇಟ್ ಥೆರಪಿ), ಸ್ನೇಹನ್ (ಒಲೀಯೇಶನ್), ನಾಸ್ಯ (ತುಪ್ಪ ಅಥವಾ ಔಷಧೀಯ ತೈಲಗಳ ಮೂಗಿನ ಆಡಳಿತ), ಮತ್ತು ಬಸ್ತಿ (ಕಷಾಯ ಮತ್ತು ಔಷಧೀಯ ಎಣ್ಣೆಗಳೊಂದಿಗೆ ಎನಿಮಾ) ನಂತಹ ಕೆಲವು ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತದೆ. ಯಾವ ವಿಧಾನವು ನಿಮಗೆ ಸೂಕ್ತವಾಗಿದೆ ಎಂಬುದನ್ನು ಪರಿಶೀಲಿಸಲು ನೀವು ನಿಮ್ಮ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬೇಕು.



Click it and Unblock the Notifications