Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
ಕೆಲವೊಂದು ಆಹಾರಗಳನ್ನು ಒಟ್ಟಿಗೆ ತಿನ್ನಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಅವುಗಳು ಆರೋಗ್ಯಕರವಾದ ಆಹಾರಗಳೇ ಆಗಿದ್ದರೂ ಒಟ್ಟಿಗೆ ಸೇವಿಸಿದಾಗ ಅದರಿಂದ ಫುಡ್ ಪಾಯಿಸನ್ ಅಥವಾ ಮತ್ತಿತರ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಉದಾಹರಣೆಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ಜೊತೆಗೆ ಸೇವಿಸಬಾರದು. ಈ ಎರಡನ್ನು ಒಟ್ಟಿಗೆ ತಿಂದಾಗ ಕೆಲವರಿಗೆ ಅಸ್ವಸ್ಥತೆ ಉಂಟಾಗಬಹುದು. ಕೆಲವೊಂದು ಆಹಾರಗಳು ಡೆಡ್ಲಿ ಕಾಂಬಿನೇಷನ್ನ ಆಹಾರಗಳಾಗಿವೆ, ಅವುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ ಉಂಟಾಗುವುದು.
ಈ ಲೇಖನದಲ್ಲಿ ಕೆಲವೊಂದು ಡೆಡ್ಲಿಕಾಂಬಿನೇಷನ್ ಆಹಾರಗಳ ಬಗ್ಗೆ ಹೇಳಿದ್ದೇವೆ, ಯಾವುದೇ ಕಾರಣಕ್ಕೆ ಇಂಥ ಆಹಾರಗಳನ್ನು ಸೇವಿಸಲೇಬೇಡಿ:

1. ಹಣ್ಣುಗಳು + ನೀರು
ಕೆಲವರು ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿಯುತ್ತಾರೆ. ಆದರೆ ಹಾಗೆ ಮಾಡಬೇಡಿ, ಏಕೆಂದರೆ ಜೀರ್ಣಕ್ರಿಯೆಗೆ ತೊಮದರೆ ಉಂಟಾಗುವುದು.
ಕಲ್ಲಂಗಡಿ, ಕರ್ಬೂಜ, ಸೌತೆಕಾಯಿ, ಅನಾನಸ್, ಕಿತ್ತಳೆ ಇವುಗಳಲ್ಲಿ ಶೇ. 95ರಷ್ಟು ನೀರಿನಂಶವಿರುತ್ತದೆ, ಆದ್ದರಿಂದ ಇವುಗಳನ್ನು ತಿಂದ ಬಳಿಕ ನೀರು ಕುಡಿದರೆ ಹೊಟ್ಟೆ ಉಬ್ಬುವ ತೊಂದರೆ ಉಂಟಾಗುವುದು.

2. ಜೇನು + ತುಪ್ಪ
ಆಯುರ್ವೇದವು ಜೇನು ಹಾಗೂ ತುಪ್ಪ ಜೊತೆಗೆ ಸೇವಿಸಬೇಡಿ ಎಂದು ಹೇಳುತ್ತದೆ. ಜೇನು ದೇಹವನ್ನು ಬೆಚ್ಚಗಾಗಿಸುತ್ತೆ, ತುಪ್ಪ ಅಥವಾ ದೇಹವನ್ನು ತಂಪಾಗಿಸುತ್ತೆ, ಈ ಎರಡು ಆಹಾರ ಒಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತದೆ.

3. ಮೀನು +ಮೊಸರು/ಹಾಲು
ಮೀನಿನ ಆಹಾರ ಸೇವಿಸಿದ ಬಳಿಕ ಸ್ವಲ್ಪ ಹೊತ್ತಿನವರೆಗೆ ಹಾಲು ಅಥವಾ ಮೊಸರು ಕುಡಿಯದಿರುವುದು ಒಳ್ಳೆಯದು.
ಆಯುರ್ವೇದದ ಪ್ರಕಾರ ನಮ್ಮ ದೇಹವು ಸತ್ತ್ವ, ರಜ, ತಾಮ ಗುಣಗಳಿಂದ ಮಾಡಲ್ಪಟ್ಟಿರುತ್ತದೆ. ಮೀನಿನ ಜೊತೆ ಮೊಸರು ಅಥವಾ ಹಾಲು ಸೇವಿಸಿದಾಗ ದೇಹದ ತಮಸ ಗುಣದಲ್ಲಿ ವ್ಯತ್ಯಾಸ ಉಂಟಾಗಿ ಬೇಧಿ, ಹೊಟ್ಟೆ ಉಬ್ಬುವುದು, ಅಜೀರ್ಣ ಈ ಬಗೆಯ ಸಮಸ್ಯೆ ಕಂಡು ಬರುವುದು.

4. ಜೇನು + ಕುದಿಯುವ ನೀರು
ಕುದಿಯುವ ನೀರಿಗೆ ಜೇನು ಹಾಕಿ ಕುಡಿಯುವ ಅಭ್ಯಾಸ ಹಲವರಿಗಿದೆ. ಆದರೆ ಈ ಎರಡು ಕಾಂಬಿನೇಷನ್ ಒಳ್ಳೆಯದಲ್ಲ. ಈ ಎರಡನ್ನು ಮಿಶ್ರ ಮಾಡಿ ಸೇವಿಸಿದಾಗ ಇದು HMF ಲೆವಲ್ ಅಥವಾ ಹೈಡ್ರಾಕ್ಸಿಮಿಥೈಲ್ ಫರ್ಫುರಾಲ್ಡಿಹೈಡ್ ಹೆಚ್ಚಿಸುತ್ತೆ, ಇದರಿಂದ ಕಶ್ಮಲ ಹೆಚ್ಚಾಗುವುದು.

5. ದ್ರವ ಹಾಗೂ ಘನ ಆಹಾರ
ಪಿಜ್ಜಾ, ಬರ್ಗರ್ ಮುಂತಾದ ಆಹಾರ ಸೇವಿಸುವಾಗ ಸ್ಮೂತಿ, ತಾಜಾ ಜ್ಯೂಸ್ ಇವುಗಳನ್ನು ಕುಡಿಯುವುದು. ದ್ರವಾಹಾರ ಬೇಗನೆ ಜೀರ್ಣವಾದರೆ, ಘನಾಹಾರ ನಿಧಾನಕ್ಕೆ ಜೀರ್ಣವಾಗುವುದು. ಎರಡನ್ನೂ ಜೊತೆಗೆ ಸೇವಿಸಿದಾಗ ಜೀರ್ಣಕ್ರಿಯೆಗೆ ತೊಂದರೆಯಾಗುವುದು.

6. ಮದ್ಯ+ ಪ್ಯಾರಾಸಿಟಮೋಲ್
ಈ ಎರಡನ್ನು ಒಟ್ಟಿಗೆ ಸೇವಿಸುವುದು ತುಂಬಾನೇ ಅಪಾಯಕಾರಿ. ಯಾವುದಾದರು ನೋವು ನಿವಾರಕ ಅಥವಾ ಪ್ಯಾರಾಸಿಟಮೋಲ್ ಅನ್ನು ಸೇವಿಸಿದಾಗ ಮದ್ಯ ಸೇವಿಸಿದರೆ ಪ್ರಾಣಕ್ಕೆ ಕೂಡ ಅಪಾಯ ಉಂಟಾಗಬಹುದು.

7. ಮಾಂಸಾಹಾರ ಮತ್ತು ಹಾಲಿನ ಉತ್ಪನ್ನಗಳು
ಮಾಂಸಾಹಾರ ಸೇವಿಸಿ ಬಳಿಕ ಹಾಲು ಹಾಕಿದ ಟೀ ಕುಡಿಯಬೇಡಿ. ಇವೆರಡನ್ನು ಜೊತೆಗೆ ಸೇವಿಸಿದರೆ ದೇಹದಲ್ಲಿ ಅಗ್ನ ತತ್ತ್ವದ ಅಸಮತೋಲನ ಉಂಟಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುವುದು.

8. ಆಹಾರ ಬೇಯಿಸುವಾಗ ಜೇನು ಹಾಕುವುದು
ಜೇನನ್ನು ಬಿಸಿ ಮಾಡಬಾರದು, ಆಹಾರವನ್ನು ಬೇಯಿಸುವಾಗ ಜೇನು ಹಾಕಿ ಬೇಯಿಸಿದರೆ ಅಂಥ ಆಹಾರ ಸೇವಿಸಿದಾಗ ಆರೋಗ್ಯ ಸಮಸ್ಯೆ ಉಂಟಾಗುವುದು.

9. ಹಾಲು ಮತ್ತು ಸಿಟ್ರಸ್ ಆಹಾರ
ಹಾಲು ಹಾಗೂ ಸಿಟ್ರಸ್ ಆಹಾರ ಸೇವಿಸಬೇಡಿ, ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು.

10. ಟೀ + ಮೊಸರು
ಒಸರನ್ನ ತಿಂದ ತಕ್ಷಣ ಹಾಲು ಹಾಕಿದ ಟೀ ಕುಡಿಯಬೇಡಿ, ಈ ಎರಡು ಒಟ್ಟಿಗೆ ಸೇವಿಸಿದರೆ ಚಯಪಚಯ ಕ್ರಿಯೆ ನಿಧಾನವಾಗುವುದು. ಇದರಿಂದ ಹೊಟ್ಟೆ ಉಬ್ಬಿದಂತೆ ಅನಿಸುವುದು.

11. ಹಣ್ಣುಗಳು + ಮೊಸರು
ಹಣ್ಣುಗಳಲ್ಲಿ ಅಸಿಡಿಕ್ (ಆಮ್ಲ) ಇರುತ್ತದೆ, ಮೊಸರು ತಿಂದಾಗ ಅದರಲ್ಲಿರುವ ಅಸಿಡಿಕ್ ಅಂಶ ಸೇರಿ ಅಸಿಡಿಟಿ ಹೆಚ್ಚುವುದು. ಇವುಗಳನ್ನು ಜೀರ್ಣ ಮಾಡಬೇಕದಾದರೆ ದೇಹಕ್ಕೆ ಡಬಲ್ ವರ್ಕ್ ಆಗುತ್ತೆ, ಆದ್ದರಿಂದ ಇವೆರಡನ್ನು ಒಟ್ಟಿಗೆ ಸೇವಿಸಬೇಡಿ.
ಏನು ಮಾಡಬೇಕು? ಏನು ಮಾಡಬಾರದು?
ಏನು ಮಾಡಬೇಕು
* ಆಹಾರದ ಸಮತೋಲನ ಕಾಪಾಡಿ, ಇಂಥ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ.
* ಆಹಾರದ ಜೊತೆ ನೀರು ಕುಇಡಯಬೇಡಿ, ಆಹಾರ ಸೇವಿಸಿ ಅರ್ಧ ಗಂಟೆಯಾದ ಬಳಿಕ ನೀರು ಕುಡಿಯಿರಿ.
ಏನು ಮಾಡಬಾರದು?
* ಆಲೂಗಡ್ಡೆ ಮತ್ತು ಮಾಂಸಾಹಾರ ಜೊತೆಗೆ ಸೇವಿಸಬೇಡಿ.
* ಬೀನ್ಸ್ನೊಂದಿಗೆ ಹಣ್ಣುಗಳು ಹಾಗೂ ಹಾಲನ್ನು ಸೇವಿಸಬೇಡ.
* ಮದ್ಯ ಜೊತೆಗೆ ಸಿಟ್ರಸ್ ಆಹಾರ ಸೇವಿಸಬೇಡಿ.



Click it and Unblock the Notifications