Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಲಿ ಕಚ್ಚಿದರೆ ಈ ಗಿಡವೇ ಮದ್ದು..! ಎಕ್ಕದ ಗಿಡದ ಲಾಭವೇನು ಗೊತ್ತಾ?
ನಾವು ಇತ್ತೀಚಿಗೆ ಇಲಿ ಜ್ವರದ ಕುರಿತು ಕೇಳಿದ್ದೇವೆ. ಇಲಿ ಜ್ವರ ಮಾರಾಣಾಂತಿಕವಾಗಿ ಕಾಡುತ್ತದೆ ಎಂಬುದು ಗೊತ್ತಿದೆ. ಹಲವು ಬಾರಿ ಭಾರತದಲ್ಲಿ ಇಲಿ ಜ್ವರದ ಭೀತಿ ಎದುರಾಗಿರುವುದು ಸಹ ನಾವು ನೋಡಿದ್ದೇವೆ. ಈಗಲೂ ಅಲ್ಲೊಂದು ಇಲ್ಲೊಂದು ಇಲಿ ಜ್ವರದ ಪ್ರಕರಣ ನೋಡುತ್ತಿರುತ್ತೇವೆ.
ಆದ್ರೆ ಈ ಇಲಿಗಳು ಕಚ್ಚಿದರೆ ಕೂಡ ಅನಾರೋಗ್ಯ ಕಾಡುತ್ತದೆ. ಇಲಿ ಜ್ವರ ವೈರಸ್ ಮೂಲಕ ಹರಡುತ್ತದೆ. ಆದ್ರೆ ಇಲಿಗಳು ಕಚ್ಚಿದರೆ ನಮಗೆ ಅನಾರೋಗ್ಯ ಉಂಟಾಗುತ್ತದೆ. ಇಲಿಗಳು ಅತ್ಯಂತ ಅಪಾಯಕಾರಿ ವೈರಸ್ಗಳ ಉಂಟುಮಾಡುತ್ತದೆ. ಇಲಿಗಳಿಂದ ಕಡಿತಕ್ಕೊಳಗಾದ ಅದೆಷ್ಟೊ ಮಂದಿ ಮೃತಪಟ್ಟಿರುವುದು ಸಹ ನಾವು ನೋಡಿದ್ದೇವೆ.

ಆದ್ರೆ ಈ ಇಲಿಗಳು ಕಚ್ಚಿದಾಗ ಅದಕ್ಕೆ ಚಿಕಿತ್ಸೆ ಯಾವುದು? ಇಲಿಗಳ ಕಡಿತದಿಂದ ದೂರ ಉಳಿಯುವುದು ಹೇಗೆ? ಇಲಿ ಕಚ್ಚಿದರೆ ಯಾವ ರೀತಿಯ ಲಕ್ಷಣ ಕಂಡುಬರಲಿದೆ. ಯಾವ ಚಿಕಿತ್ಸೆ ಮೂಲಕ ಇಲಿ ಕಚ್ಚಚುವಿಕೆಯ ಅಪಾಯ ಕಡಿಮೆ ಮಾಡಬಹುದು. ಆಯುರ್ವೇದದಲ್ಲಿ ಯಾವ ಚಿಕಿತ್ಸೆ ಹೇಳಲಾಗಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲಿಗೆ ಇಲಿ ಕಚ್ಚುವಾಗ ನಿಮಗೆ ಅದರ ಅರಿವಿಗೆ ಬರದೆ ಇರಬಹುದು. ಏಕೆಂದರೆ ಇಲಿಗಳು ಅತ್ಯಂತ ನಾಜೂಕಾಗಿ ಸಣ್ಣ ಇರುವೆಗಳಂತೆ ಕಚ್ಚುತ್ತವೆ. ಆದರೆ ಇರುವೆ ಕಚ್ಚಿದ ಒಂದೇ ದಿನದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ನೀವು, ಅಂಗ ಊದಿಕೊಳ್ಳುವುದು, ಕೀಲು ನೋವು, ಜ್ವರ ಸಹ ಕಾಣಿಸಿಕೊಳ್ಳುತ್ತದೆ.
ಇಲಿ ಕಚ್ಚಿದರೆ ವೈದ್ಯರನ್ನು ಕಾಣುವುದು ಒಳ್ಳೆಯದು. ಇಲಿ ಕಚ್ಚಿದ 10 ದಿನಗಳ ಬಳಿಕ ಜ್ವರ ಕಾಣಿಸಿಕೊಳ್ಳಬಹುದು, ಗಾಯ ಒಣಗಿದ್ದರೂ ಜ್ವರ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ವೈದ್ಯರನ್ನು ಕಾಣುವುದು ಒಳ್ಳೆಯದು.
ಇಲಿ ಕಡಿತಕ್ಕೆ ಪ್ರಥಮ ಚಿಕಿತ್ಸೆ ಏನು?
ಇಲಿ ಕಡಿತದ ನಂತರ ಗಾಯವನ್ನು ಸ್ವಚ್ಛಗೊಳಿಸಿ, ಗಾಯವನ್ನು ಸೋಪಿನಿಂದ ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿಕೊಳ್ಳಿ. ಈ ಗಾಯಕ್ಕೆ ಡ್ರೆಸ್ಸಿಂಗ್ ಮಾಡಿಕೊಳ್ಳಬೇಕು. ಮುಲಾಮುಗಳು, ಟಿಂಚರ್ ಯಾವುದಾದ್ರು ಇದ್ದರೆ ಹಚ್ಚಿಕೊಳ್ಳಬೇಕು. ನಂತರ
ಇಲಿಯಿಂದ ಸೋಂಕು ಹರಡುವ ಸಂಭವ ಹೆಚ್ಚಿರುವುದರಿಂದ ವೈದ್ಯರ ಭೇಟಿ ಮಾಡಬೇಕು. ಇಲಿ ಕಡಿತ ಪ್ರಾಣಕ್ಕೆ ಅಪಾಯವಾಗುತ್ತದೆ.
ಇಲಿ ಕಡಿತಕ್ಕೆ ಯಾವ ಗಿಡಮೂಲಿಕೆ ಔಷಧಿ?
ಎಲ್ಲಾ ಸಮಸ್ಯೆಗೂ ಆಯುರ್ವೇದದಲ್ಲಿ ಪರಿಹಾರ ಇರುವಂತೆ ಈ ಇಲಿ ಕಡಿತಕ್ಕೂ ಗಿಡಮೂಲಿಕೆಯಲ್ಲಿ ಚಿಕಿತ್ಸೆ ಹೇಳಲಾಗಿದೆ. ಪರಿಹಾರವೇನು ನೋಡಿ
ಎಕ್ಕದ ಹಾಲು/ ಎಲೆ
ನೀವು ಎಕ್ಕದ ಗಿಡ ನೋಡಿರಬಹುದು. ಆ ಗಿಡದ ಎಲೆ ಮುರಿದರೆ ಬಿಳಿ ಬಣ್ಣದ ಹಾಲಿನ ರೀತಿಯ ಸೊನೆ ಬರುತ್ತದೆ. ಈ ಎಕ್ಕದ ಗಿಡದ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಅರಿದುಕೊಂಡು ಅದನ್ನು ಇಲಿ ಗಾಯದ ಮೇಲೆ ಹಚ್ಚಿಕೊಂಡು ಬಟ್ಟೆ ಕಟ್ಟಬೇಕು. ಹೀಗೆ ಮಾಡೋದ್ರಿಂದ ಬ್ಯಾಕ್ಟೀರಿಯಾ ಹರಡದಂತೆ ತಡೆಯುತ್ತದೆ.
ಉಪ್ಪು ಮತ್ತು ಅರಶಿನ
ಇಲ್ಲಿ ಕಚ್ಚಿದ ಜಾಗಕ್ಕೆ ಉಪ್ಪು ಹಾಗೂ ಅರಶಿನ ಹಚ್ಚುವುದು ಉತ್ತಮವಂತೆ. ಅರಶಿಣ ಬ್ಯಾಕ್ಟೀರಿಯಾ ಹರಡದಂತೆ ಹಾಗೂ ನಂಜು ನಿವಾರಕವಾಗಿದ್ದು, ಪ್ರಥಮ ಚಿಕಿತ್ಸೆಯಾಗಿ ಇವುಗಳನ್ನು ಬಳಸಬಹುದು.
ಉತ್ತರಾಣಿ ಸೊಪ್ಪಿನ (Achyranthus aspera) ಐದು ಎಲೆಗಳನ್ನು ತಿನ್ನಬೇಕು, ಸೇವಿಸುವುದು ಇಲಿ ಕಡಿತದಿಂದ ಉಂಟಾಗುವ ವೈರಸ್ ಹರಡುವಿಕೆ ಹಾಗೂ ಅದರ ಪರಿಣಾಮವನ್ನು ಕಡಿಮೆ ಮಾಡಲಿದೆ. ಇದಿಷ್ಟೇ ಅಲ್ಲ ಈಶ್ವರಿ ಬೇರನ್ನು (Aristolochia indiaca) ನಿಂಬೆರಸದಲ್ಲಿ ತೇದು ಇಲಿ ಕಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಕಚ್ಚಿದ ಜಾಗ ಬೇಗ ವಾಸಿಯಾಗುವುದಲ್ಲದೆ ನೋವು ಸಹ ನಿವಾರಣೆಯಾಗಲಿದೆ.
ಆದ್ರೆ ಇದೆಲ್ಲದಕ್ಕಿಂತಲೂ ನೀವು ವೈದ್ಯರ ಭೇಟಿ ಮಾಡುವುದೇ ಉತ್ತಮವಾದ ಕೆಲಸವಾಗುತ್ತದೆ. ಈ ಮೇಲಿನ ಎಲ್ಲಾ ಮಾದರಿಯೂ ಪ್ರಥಮ ಚಿಕಿತ್ಸೆಯಾಗಿ ಮಾತ್ರ ಬಳಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
