Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಆರೋಗ್ಯ ಟಿಪ್ಸ್: ದಿನನಿತ್ಯ ಓಟ, ಖಿನ್ನತೆ ದೂರ ಬಲುದೂರ!
ಅಥ್ಲೆಟಿಕ್ಗಳನ್ನು ನೋಡಿದರೆ ಅವರು ಎಷ್ಟು ಫಿಟ್ ಇದ್ದಾರೆ ಎಂದು ನಿಮಗೆ ತಿಳಿಯುತ್ತದೆ. ಯಾವುದೇ ಕ್ರೀಡೆಯಾಗಲಿ ಫಿಟ್ ನೆಸ್ ತುಂಬಾ ಮುಖ್ಯವಾಗಿರುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ಕ್ರೀಡಾಳು ಗಂಟೆಗಟ್ಟಲೆ ಓಡಿ ತನ್ನ ಫಿಟ್ ನೆಸ್ ಕಾಪಾಡಿಕೊಳ್ಳುತ್ತಾನೆ.
ಓಡುವುದರಿಂದ ಕ್ರೀಡಾಳುಗಳಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ತುಂಬಾ ಉಪಯೋಗವಿದೆ. ಓಡುವುದರಿಂದ ರಕ್ತದೊತ್ತಡವು ಕಡಿಮೆಯಾಗಿ ಮೂಳೆ ಹಾಗೂ ಸ್ನಾಯು ನಷ್ಟವನ್ನು ತಪ್ಪಿಸುವುದು ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಡುವುದು. ನಿಧಾನವಾದ ಓಟ, ಮೆದುಳಿಗೆ ಊಟ, ಇದು ನಿತ್ಯದ ಪಾಠ!

ವಾರದಲ್ಲಿ ಕೆಲವು ದಿನ ಓಡಿದರೆ ನಿಮ್ಮ ಶಕ್ತಿಯು ಹೆಚ್ಚಾಗಿ ಹೃದಯ ಹಾಗೂ ಶ್ವಾಸಕೋಶವು ಬಲಿಷ್ಠವಾಗುವುದು. ಇಷ್ಟು ಮಾತ್ರವಲ್ಲದೆ ಖಿನ್ನತೆಯನ್ನು ನಿವಾರಿಸಲು ಓಡುವುದು ಒಳ್ಳೆಯ ವ್ಯಾಯಾಮ. ವ್ಯಕ್ತಿಯೂ ಒಂದೇ ರೀತಿಯಾಗಿ ಇರುವುದಿಲ್ಲ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ. ಕೆಲವರಿಗೆ ಖಿನ್ನತೆಯ ಸಮಸ್ಯೆ ಕಾಡುತ್ತಾ ಇರುತ್ತದೆ.
ಕೆಲವೊಂದು ಸಲ ನಮಗೆ ಎಲ್ಲವೂ ಖಾಲಿಯಿರುವಂತೆ ಮತ್ತು ತುಂಬಾ ಬೇಸರವಾದ ಭಾವನೆಯಾವುದು ಸಹಜ. ಇದು ಖಿನ್ನತೆಯ ಲಕ್ಷಣಗಳಲ್ಲಿ ಒಂದಾಗಿದೆ.
ಸಾಮಾನ್ಯವಾಗಿ ಖಿನ್ನತೆಯೆನ್ನುವುದು ಮನಶಾಸ್ತ್ರದ ಪರಿಸ್ಥಿತಿಗೆ ಸಂಬಂಧಿಸಿದ್ದಾಗಿದೆ. ಆದರೆ ಇದು ವ್ಯಕ್ತಿಯ ಪ್ರತಿಯೊಂದು ಚಟುವಟಿಕೆ ಮತ್ತು ಆತನ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಉಂಟು ಮಾಡುವುದು.
ಬೇಸರ, ಅಪರಾಧಿ ಭಾವನೆ, ನಿರಾಸಕ್ತಿ, ಅತಿಯಾಗಿ ತಿನ್ನುವುದು, ನಿದ್ರಾಹೀನತೆ, ಆತ್ಮಹತ್ಯೆಗೆ ಪ್ರಯತ್ನಿಸುವುದು ಇವುಗಳು ಖಿನ್ನತೆಯ ಕೆಲವೊಂದು ಲಕ್ಷಣಗಳಾಗಿವೆ.
ಓಡುವುದರಿಂದ ಯಾವ ರೀತಿಯ ಲಾಭಗಳು ಆಗಲಿದೆ ಎಂದು ತಿಳಿದುಕೊಳ್ಳಬೇಕಾದರೆ ಖಿನ್ನತೆ ಇರುವ ವ್ಯಕ್ತಿಗಳು ಸುಮಾರು 10 ಕಿ.ಮೀ. ತನಕ ಓಡಬೇಕು. ಇದರಿಂದ ಅವರ ವ್ಯಕ್ತಿತ್ವ ಕೂಡ ಒಳ್ಳೆಯದಾಗುತ್ತದೆ. ಖಿನ್ನತೆಗೆ ಮತ್ತೊಂದು ಕಾರಣವೆಂದರೆ ಎಂಡ್ರೋಫಿನ್ಸ್ ಎನ್ನುವ ಹಾರ್ಮೋನುಗಳು ಸರಿಯಾಗಿ ಬಿಡುಗಡೆಯಾಗದೆ ಇರುವುದು. ಜಾಗಿಂಗ್ ಮಾಡುವವರಿಗೆ ಮಾತ್ರ ಈ ಬಂಪರ್ ಕೊಡುಗೆ
ದೇಹದಲ್ಲಿ ಎಂಡ್ರೋಫಿನ್ಸ್ ಹಾರ್ಮೋನುಗಳು ಬಿಡುಗಡೆಯಾದರೆ ಭಾವನೆಗಳು ಉತ್ತಮವಾಗುವುದು. ಇದು ನೈಸರ್ಗಿಕ ಶಮನಕಾರಿಯಂತೆ ಕೆಲಸ ಮಾಡಿ ಮನಸ್ಸಿನ ನೋವನ್ನು ನಿವಾರಣೆ ಮಾಡುವುದು. ಇದು ವಯಸ್ಸಾಗುವುದನ್ನು ನಿಧಾನಗೊಳಿಸುವುದು ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಎಂದು ತಿಳಿದುಬಂದಿದೆ. ಖಿನ್ನತೆಯಿಂದ ಹೊರಬರಲು ಟಿಪ್ಸ್
ಆದರೆ ಯಾವ ಕಾರಣದಿಂದಾಗಿ ಇದು ಬಿಡುಗಡೆಯಾಗುತ್ತದೆ ಎಂದು ವಿಜ್ಞಾನಿಗಳಿಗೆ ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ದೀರ್ಘವಾದ ವ್ಯಾಯಾಮ, ಚಾಕಲೇಟ್ ಈ ಹಾರ್ಮೋನುಗಳನ್ನು ಬಿಡುಗಡೆ ಮಾಡುವುದು.
ಹೆಚ್ಚಿನ ವ್ಯಾಯಮ ಮತ್ತು ಓಡುವುದರಿಂದ ದೇಹದಲ್ಲಿ ಎಂಡ್ರೋಫಿನ್ಸ್ ಹಾರ್ಮೋನು ಬಿಡುಗಡೆ ಹೆಚ್ಚಾಗುವುದು. ಆದರೆ ಓಡುವುದರಿಂದ ಖಿನ್ನತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಆದರೆ ಓಡುವುದರಿಂದ ಖಿನ್ನತೆಗೆ ತಾತ್ಕಾಲಿಕ ಶಮನ ಸಿಗಬಹುದು. ಖಿನ್ನತೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ ಅವರಿಗೆ ಸ್ವಲ್ಪ ಮಟ್ಟಿನ ಆರಾಮ ಸಿಗುವುದು ಖಚಿತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



