Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ತೂಕ ಇಳಿಸಿಕೊಳ್ಳಲು ನೈಸರ್ಗಿಕ ಜ್ಯೂಸ್, ಪ್ರಯತ್ನಿಸಿ ನೋಡಿ
ದಢೂತಿ ದೇಹಿಗಳನ್ನು ನೋಡಿದರೆ ಯಾಕಪ್ಪಾ ಇವರು ಇಷ್ಟು ತಿಂದು ದೇಹ ಬೆಳೆಸಿಕೊಂಡಿದ್ದಾರೆ ಎಂದು ನಮಗೆ ಅನಿಸಬಹುದು. ಆದರೆ ಅನುವಂಶೀಯತೆ, ಕೆಲವೊಂದು ವೈದ್ಯಕೀಯ ಚಿಕಿತ್ಸೆ ಹಾಗೂ ಕೆಟ್ಟ ಆಹಾರ ಕ್ರಮದಿಂದ ದಢೂತಿ ದೇಹ ಬೆಳೆಸಿಕೊಳ್ಳುತ್ತಾರೆ. ಕೆಲವರು ಆರಂಭದಲ್ಲೇ ನಿಯಂತ್ರಣ ಮಾಡಿದರೆ ಇದನ್ನು ತಡೆಯಬಹುದು. ಕೆಲವರು ಮತ್ತಷ್ಟು ಬಾಯಿಗೆ ಹಾಕಿಕೊಂಡು ಚಪ್ಪರಿಸಿ ತಮ್ಮ ದೇಹದವನ್ನು ತಾವೇ ವಿಕಾರಗೊಳಿಸುತ್ತಾರೆ.
ದೇಹದ ಬೆಳೆಸುವುದು ಕಷ್ಟವಲ್ಲದರೆ ಇರಬಹುದು. ಅದನ್ನು ಮತ್ತೆ ಹಿಂದಿನ ಸ್ಥಿತಿಗೆ ತರುವುದು ಮಾತ್ರ ತುಂಬಾ ತ್ರಾಸದಾಯಕ. ತೂಕ ಕಳೆದುಕೊಳ್ಳಲು ಕಠಿಣ ಆಹಾರಕ್ರಮ ಮತ್ತು ವ್ಯಾಯಾಮ ಮಾಡುತ್ತಿರಬೇಕು. ಇದು ಕೆಲವರಿಗೆ ಕಷ್ಟವಾಗಬಹುದು. ಇಂತವರಿಗಾಗಿ ನಾವು ಒಂದು ಪಾನೀಯವನ್ನು ನಿಮಗಾಗಿ ತಂದಿದ್ದೇವೆ. ಇದನ್ನು ಕುಡಿದರೆ ದೇಹದ ತೂಕವನ್ನು ನೈಸರ್ಗಿಕವಾಗಿ ಕಳೆದುಕೊಳ್ಳಬಹುದು. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹದ ಕೊಬ್ಬನ್ನು ಕರಗಿಸುತ್ತದೆ. ಈ ಪಾನೀಯವನ್ನು ಮಾಡಲು ಬೇಕಾಗಿರುವ ಮುಖ್ಯ ಮೂರು ಸಾಮಗ್ರಿಗಳೆಂದರೆ ನಿಂಬೆ, ಸೌತೆಕಾಯಿ ಮತ್ತು ಪುದೀನಾ. ಸೌತೆಕಾಯಿಯಲ್ಲಿ ಉರಿಯೂತ ಶಮನಕಾರಿ ಮತ್ತು ಯೂರಿಕ್ ಆ್ಯಸಿಡ್ ನ್ನು ಕಡಿಮೆ ಮಾಡುವ ಗುಣಗಳಿವೆ.

ಲಿಂಬೆ ಹಣ್ಣು ಆ್ಯಸಿಡ್ ಒಳಗೊಂಡಿರುವ ಹಣ್ಣು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಪಡಿಸುವುದು ಮತ್ತು ಕೊಬ್ಬನ್ನು ಕರಗಿಸುವುದು. ಪುದೀನಾವು ಪೋಷಕಾಂಶಗಳನ್ನು ಹೀರಿಕೊಂಡು ಹೊಟ್ಟೆಯ ಆ್ಯಸಿಡ್ ನ್ನು ಕಡಿಮೆ ಮಾಡುವುದು. ಇದೆಲ್ಲವೂ ಜೀರ್ಣಕ್ರಿಯೆಗೆ ಉತ್ತಮವಾದ ಸಾಮಗ್ರಿಗಳು. ಇವುಗಳು ಜತೆಯಾದಾಗ ಅದ್ಭುತವಾದ ಕೆಲಸವನ್ನೇ ಮಾಡುತ್ತದೆ. ಇವು ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕಿ ತೂಕ ಕಳೆದುಕೊಳ್ಳುವ ಪ್ರಕ್ರಿಯೆಗೆ ನೆರವಾಗುವುದು.
ಈ ಪಾನೀಯ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ತಿಳಿದುಕೊಳ್ಳಿ
*ಬೇಕಾಗುವ ಸಾಮಗ್ರಿಗಳು
*ಅರ್ಧ ಸೌತೆಕಾಯಿ
*ಒಂದು ಲಿಂಬೆ
*10 ಪುದೀನಾ ಎಲೆಗಳು
*ಒಂದು ಲೀಟರ್ ನೀರು ಮೈ ತೂಕ ಹೆಚ್ಚಾಗಬೇಕೆ? ಈ ಆಹಾರ ತಿನ್ನಿ
ತಯಾರಿಸುವ ವಿಧಾನ
*ಅರ್ಧ ಸೌತೆಕಾಯಿ, ಹತ್ತು ಪುದೀನಾ ಎಲೆ ಮತ್ತು ಒಂದು ಲೀಟರ್ ನೀರನ್ನು ಜತೆಯಾಗಿ ಜ್ಯೂಸರ್ಗೆ ಹಾಕಿ ರುಬ್ಬಿ. ಇದಕ್ಕೆ ಲಿಂಬೆ ಹಣ್ಣಿನ ನೀರನ್ನು ಹಾಕಿ. ಕೆಲವೊಂದು ಐಸ್ ತುಂಡುಗಳನ್ನು ಹಾಕಿದರೆ ಕುಡಿಯಲು ತಂಪಾಗಿರುವುದು.
*ನಿಯಮಿತವಾಗಿ ಕುಡಿದರೆ ನಿಮಗೆ ಫಲಿತಾಂಶ ಸಿಗಲಿದೆ. ನಿಮ್ಮ ನಿತ್ಯ ಆಹಾರಕ್ರಮದಲ್ಲಿ ಇದನ್ನು ಸೇರ್ಪಡೆಗೊಳಿಸಿದರೆ ನೈಸರ್ಗಿಕವಾಗಿ ತೂಕ ಕಳೆದುಕೊಳ್ಳಲು ಇದು ನೆರವಾಗುವುದು. ಇದನ್ನು ತಯಾರಿಸುವುದು ಸುಲಭ ಮತ್ತು ಕುಡಿಯಲು ಚೆನ್ನಾಗಿರುವುದರಿಂದ ತೂಕ ಕಳೆದುಕೊಳ್ಳಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
