Just In
Don't Miss
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೂಕ ಇಳಿಸಿಕೊಳ್ಳಲು ನೈಸರ್ಗಿಕ ಜ್ಯೂಸ್, ಪ್ರಯತ್ನಿಸಿ ನೋಡಿ
ದಢೂತಿ ದೇಹಿಗಳನ್ನು ನೋಡಿದರೆ ಯಾಕಪ್ಪಾ ಇವರು ಇಷ್ಟು ತಿಂದು ದೇಹ ಬೆಳೆಸಿಕೊಂಡಿದ್ದಾರೆ ಎಂದು ನಮಗೆ ಅನಿಸಬಹುದು. ಆದರೆ ಅನುವಂಶೀಯತೆ, ಕೆಲವೊಂದು ವೈದ್ಯಕೀಯ ಚಿಕಿತ್ಸೆ ಹಾಗೂ ಕೆಟ್ಟ ಆಹಾರ ಕ್ರಮದಿಂದ ದಢೂತಿ ದೇಹ ಬೆಳೆಸಿಕೊಳ್ಳುತ್ತಾರೆ. ಕೆಲವರು ಆರಂಭದಲ್ಲೇ ನಿಯಂತ್ರಣ ಮಾಡಿದರೆ ಇದನ್ನು ತಡೆಯಬಹುದು. ಕೆಲವರು ಮತ್ತಷ್ಟು ಬಾಯಿಗೆ ಹಾಕಿಕೊಂಡು ಚಪ್ಪರಿಸಿ ತಮ್ಮ ದೇಹದವನ್ನು ತಾವೇ ವಿಕಾರಗೊಳಿಸುತ್ತಾರೆ.
ದೇಹದ ಬೆಳೆಸುವುದು ಕಷ್ಟವಲ್ಲದರೆ ಇರಬಹುದು. ಅದನ್ನು ಮತ್ತೆ ಹಿಂದಿನ ಸ್ಥಿತಿಗೆ ತರುವುದು ಮಾತ್ರ ತುಂಬಾ ತ್ರಾಸದಾಯಕ. ತೂಕ ಕಳೆದುಕೊಳ್ಳಲು ಕಠಿಣ ಆಹಾರಕ್ರಮ ಮತ್ತು ವ್ಯಾಯಾಮ ಮಾಡುತ್ತಿರಬೇಕು. ಇದು ಕೆಲವರಿಗೆ ಕಷ್ಟವಾಗಬಹುದು. ಇಂತವರಿಗಾಗಿ ನಾವು ಒಂದು ಪಾನೀಯವನ್ನು ನಿಮಗಾಗಿ ತಂದಿದ್ದೇವೆ. ಇದನ್ನು ಕುಡಿದರೆ ದೇಹದ ತೂಕವನ್ನು ನೈಸರ್ಗಿಕವಾಗಿ ಕಳೆದುಕೊಳ್ಳಬಹುದು. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹದ ಕೊಬ್ಬನ್ನು ಕರಗಿಸುತ್ತದೆ. ಈ ಪಾನೀಯವನ್ನು ಮಾಡಲು ಬೇಕಾಗಿರುವ ಮುಖ್ಯ ಮೂರು ಸಾಮಗ್ರಿಗಳೆಂದರೆ ನಿಂಬೆ, ಸೌತೆಕಾಯಿ ಮತ್ತು ಪುದೀನಾ. ಸೌತೆಕಾಯಿಯಲ್ಲಿ ಉರಿಯೂತ ಶಮನಕಾರಿ ಮತ್ತು ಯೂರಿಕ್ ಆ್ಯಸಿಡ್ ನ್ನು ಕಡಿಮೆ ಮಾಡುವ ಗುಣಗಳಿವೆ.
ಲಿಂಬೆ ಹಣ್ಣು ಆ್ಯಸಿಡ್ ಒಳಗೊಂಡಿರುವ ಹಣ್ಣು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಪಡಿಸುವುದು ಮತ್ತು ಕೊಬ್ಬನ್ನು ಕರಗಿಸುವುದು. ಪುದೀನಾವು ಪೋಷಕಾಂಶಗಳನ್ನು ಹೀರಿಕೊಂಡು ಹೊಟ್ಟೆಯ ಆ್ಯಸಿಡ್ ನ್ನು ಕಡಿಮೆ ಮಾಡುವುದು. ಇದೆಲ್ಲವೂ ಜೀರ್ಣಕ್ರಿಯೆಗೆ ಉತ್ತಮವಾದ ಸಾಮಗ್ರಿಗಳು. ಇವುಗಳು ಜತೆಯಾದಾಗ ಅದ್ಭುತವಾದ ಕೆಲಸವನ್ನೇ ಮಾಡುತ್ತದೆ. ಇವು ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕಿ ತೂಕ ಕಳೆದುಕೊಳ್ಳುವ ಪ್ರಕ್ರಿಯೆಗೆ ನೆರವಾಗುವುದು.
ಈ
ಪಾನೀಯ
ಮಾಡಲು
ಬೇಕಾಗುವ
ಸಾಮಗ್ರಿಗಳು
ಮತ್ತು
ಮಾಡುವ
ವಿಧಾನ
ತಿಳಿದುಕೊಳ್ಳಿ
*ಬೇಕಾಗುವ
ಸಾಮಗ್ರಿಗಳು
*ಅರ್ಧ
ಸೌತೆಕಾಯಿ
*ಒಂದು
ಲಿಂಬೆ
*10
ಪುದೀನಾ
ಎಲೆಗಳು
*ಒಂದು
ಲೀಟರ್
ನೀರು
ಮೈ
ತೂಕ
ಹೆಚ್ಚಾಗಬೇಕೆ?
ಈ
ಆಹಾರ
ತಿನ್ನಿ
ತಯಾರಿಸುವ
ವಿಧಾನ
*ಅರ್ಧ
ಸೌತೆಕಾಯಿ,
ಹತ್ತು
ಪುದೀನಾ
ಎಲೆ
ಮತ್ತು
ಒಂದು
ಲೀಟರ್
ನೀರನ್ನು
ಜತೆಯಾಗಿ
ಜ್ಯೂಸರ್ಗೆ
ಹಾಕಿ
ರುಬ್ಬಿ.
ಇದಕ್ಕೆ
ಲಿಂಬೆ
ಹಣ್ಣಿನ
ನೀರನ್ನು
ಹಾಕಿ.
ಕೆಲವೊಂದು
ಐಸ್
ತುಂಡುಗಳನ್ನು
ಹಾಕಿದರೆ
ಕುಡಿಯಲು
ತಂಪಾಗಿರುವುದು.
*ನಿಯಮಿತವಾಗಿ ಕುಡಿದರೆ ನಿಮಗೆ ಫಲಿತಾಂಶ ಸಿಗಲಿದೆ. ನಿಮ್ಮ ನಿತ್ಯ ಆಹಾರಕ್ರಮದಲ್ಲಿ ಇದನ್ನು ಸೇರ್ಪಡೆಗೊಳಿಸಿದರೆ ನೈಸರ್ಗಿಕವಾಗಿ ತೂಕ ಕಳೆದುಕೊಳ್ಳಲು ಇದು ನೆರವಾಗುವುದು. ಇದನ್ನು ತಯಾರಿಸುವುದು ಸುಲಭ ಮತ್ತು ಕುಡಿಯಲು ಚೆನ್ನಾಗಿರುವುದರಿಂದ ತೂಕ ಕಳೆದುಕೊಳ್ಳಲು ಸಹಕಾರಿ.