Latest Updates
-
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ!
ಮಧುಮೇಹಕ್ಕಾಗಿ ಕಹಿ ಆಹಾರಗಳು : ಪ್ರಯೋಜನಗಳು
ಮಧುಮೇಹಿಗಳಿಗೆ ಸಕ್ಕರೆ ವರ್ಜ್ಯವಾಗಿರುವುದರಿಂದ ಕಹಿ ಪದಾರ್ಥವನ್ನೇ ಸಿಹಿಯಾಗಿಸಿಕೊಳ್ಳಬೇಕು. ಇವುಗಳು ಅವರ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇವಿಸುವುದರಿಂದ ನೀವು ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಕೆಳಗೆ ನೀಡಿರುವ ಕಹಿ ಪದಾರ್ಥಗಳು ಸಾಮಾನ್ಯವಾಗಿ ನಮಗೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದರ ನಿತ್ಯದ ಸೇವನೆ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ.
ಈ ಕಹಿ ಆಹಾರಗಳು ನಿಮ್ಮ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಹಿ ಪದಾರ್ಥಗಳು ನಿಮ್ಮ ಜೀವನದಲ್ಲಿ ಸಿಹಿಯ ಕ್ಷಣವನ್ನು ತರುವುದಂತೂ ಖಂಡಿತ.
ಇಂದು ನಿಮಗಾಗಿ ಕೆಲವೊಂದು ಕಹಿ ವಸ್ತುಗಳ ಪಟ್ಟಿಯನ್ನು ನಾವು ನೀಡುತ್ತಿದ್ದೇವೆ, ಅದರ ಬಳಕೆಯನ್ನು ಮಾಡಿಕೊಂಡು ಸಕ್ಕರೆ ಕಾಯಿಲೆಯನ್ನು ನಿಮ್ಮಿಂದ ದೂರವಿರಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಿಹಿ ಬಯಕೆ ನಿಯಂತ್ರಿಸಲು ಟಿಪ್ಸ್: ಡಯಾಬಿಟಿಸ್ ವಿಶೇಷ

ಹಾಗಲಕಾಯಿ:
ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗಿಸುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಇದನ್ನು ನೀವು ಬಳಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

ಕೋಸುಗಡ್ಡೆ:
ಎಲೆಗಳಿರುವ ಕಹಿ ಇರುವ ಕೋಸುಗಡ್ಡೆ ಸಕ್ಕರೆ ಕಾಯಿಲೆಗೆ ರಾಮಬಾಣವಾಗಿದೆ. ಇದು ರೋಗನಿರೋಧ ಶಕ್ತಿಯನ್ನು ವರ್ಧಿಸಿ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಮೆಂತೆ:
ಸಕ್ಕರೆ ಮಟ್ಟವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಮೆಂತೆ ಸಹಕಾರಿಯಾಗಿದೆ. ನೀವು ಮಧುಮೇಹಿಯಾಗಿದ್ದರೆ, ನಿಮ್ಮ ದೈನಂದಿನ ಆಹಾರದಲ್ಲಿ ಮೆಂತೆಯ ಪ್ರಮಾಣ ಹೆಚ್ಚಿರಲಿ.

ಅರ್ಗುಲಾ:
ನಿಮ್ಮ ಪಿತ್ತವನ್ನು ನಿಯಂತ್ರಣದಲ್ಲಿಡಲು ಈ ತರಕಾರಿ ಸಹಕಾರಿ. ಇದಲ್ಲದೆ ದೇಹದಲ್ಲಿರುವ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸಿ ನಿಮ್ಮನ್ನು ಆರೋಗ್ಯಗೊಳಿಸುತ್ತದೆ.

ದಾಂಡೆಲಿಯನ್ ಗ್ರೀನ್ಸ್:
ಸಕ್ಕರೆ ಪ್ರಮಾಣವನ್ನು ವೇಗವಾಗಿ ತಗ್ಗಿಸುವ ದಾಂಡೆಲಿಯನ್ ಗ್ರೀನ್ಸ್ ಮಧುಮೇಹಕ್ಕೆ ರಾಮಬಾಣವಾಗಿದೆ. ತೂಕವನ್ನು ನಿಯಂತ್ರಣದಲ್ಲಿರಿಸಿ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.

ಸಬ್ಬಸಿಗೆ:
ಸಬ್ಬಸಿಗೆ ಸೊಪ್ಪಿನಲ್ಲಿರುವ ಎಣ್ಣೆ ಅಂಶವು ಕಾರ್ವೋನ್ ಸಂಯುಕ್ತವನ್ನೊಳಗೊಂಡಿದೆ. ಮಧುಮೇಹಿಗಳಿಗಾಗಿ ಇದೊಂದು ಉತ್ತಮ ಸಿದ್ಧೌಷಧ.

ಎಳ್ಳಿನ ಬೀಜಗಳು:
ಎಳ್ಳಿನ ಬೀಜಗಳು ಹೇರಳವಾಗಿ ಪ್ರೋಟೀನ್, ಕಹಿ ಅಂಶವನ್ನು ಅಡಗಿಸಿಕೊಂಡಿವೆ. ಸಕ್ಕರೆ ಕಾಯಿಲೆಗೆ ಇದೊಂದು ಒಳ್ಳೆಯ ಔಷಧ.

ನುಗ್ಗೆಸೊಪ್ಪು:
ಮಧುಮೇಹವನ್ನು ನಿಯಂತ್ರಣದಲ್ಲಿಡುವ ಒಂದು ಸಾಂಪ್ರದಾಯಿಕ ಸಸ್ಯ ನುಗ್ಗೆಸೊಪ್ಪಾಗಿದೆ. ಇದನ್ನು ಬಳಸಿ ಸಲಾಡ್ ಮಾಡಿಕೊಂಡು ಅನ್ನದೊಂದಿಗೆ ಸವಿಯಿರಿ.

ಸ್ಪಿಂಚ್ / ಪಾಲಾಕ್
ಸಕ್ಕರೆ ಕಾಯಿಲೆ ವ್ಯಕ್ತಿಗಳು ಪಲಾಕ್ ಅನ್ನು ಸೇವಿಸಲೇಬೇಕು. ಪಾಲಾಕ್ ಸ್ವಲ್ಪ ಕಹಿಯಾಗಿರುತ್ತದೆ ಆದರೆ ಅದು ಒಳಗೊಂಡಿರುವ ಪ್ರೊಟೀನ್ ದೇಹಕ್ಕೆ ಉತ್ತಮ.

ಆರೆಂಜ್ ಸಿಪ್ಪೆ:
ಮಧುಮೇಹಿಗಳಿಗಾಗಿ ಒಂದು ಉತ್ತಮ ಕಹಿ ಹುಳಿ ಅಂಶವುಳ್ಳ ವಸ್ತುವಾಗಿದೆ ಆರೆಂಜ್ ಸಿಪ್ಪೆ. ಇದು ಮಧುಮೇಹ ನಿಯಂತ್ರಣಕ್ಕೆ ರಾಮಬಾಣವಾಗಿದೆ.



Click it and Unblock the Notifications