Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
90ರ ಹರೆಯದಲ್ಲಿ ಬೆನ್ನು ನೋವಿಗೆ ರೋಬೋಟಿಕ್ ಸರ್ಜರಿ ಮಾಡಿಸಿ ಆತ್ಮವಿಶ್ವಾಸ ಮರಳಿ ಪಡೆದ ದಂಪತಿ
ವಿಜ್ಞಾನ ಬೆಳೆದಂತೆ ವೈದ್ಯಕೀಯ ಕ್ಷೇತ್ರವು ತುಂಬಾನೇ ಅಡ್ವಾನ್ಸ್ ಆಗಿದೆ. ನೂರಾರು ಕಿ.ಮೀ ದೂರದಲ್ಲಿರುವ ವೈದ್ಯ ರೋಬೋಟಿಕ್ ತಂತ್ರಜ್ಞಾನ ಬಳಸಿ ರೋಗಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಎಂಬ ಸುದ್ದಿಗಳನ್ನು ಕೇಳುತ್ತಿದ್ದೇವೆ. ನಮ್ಮ ಭಾರತದಲ್ಲಿಯೂ ರೋಬೋಟಿಕ್ ತಂತ್ರಜ್ಞಾನ ಬಂದಿದೆ.

98 ವರ್ಷದ ವೃದ್ಧನಿಗೆ ರೋಬೋಟಿಕ್ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದು ಅದನ್ನು ನೋಡಿ ಅವರ ಪತ್ನಿ ಕೂಡ ತಮ್ಮನ್ನು ಕಾಡುತ್ತಿರುವ ಮೂಳೆಯ ಸಮಸ್ಯೆಗೆ ರೋಬೋಟಿಕ್ ಸರ್ಜರಿ ಮಾಡಿಸಿಕೊಂಡು ಈಗ ಗಂಡ-ಹೆಂಡತಿ ಇಬ್ಬರು ಆರಾಮವಾಗಿರುವ ಸಂಗತಿಯನ್ನು ಇವರಿಗೆ ರೋಬೋಟಿಕ್ ಶಸ್ತ್ರ ಚಿಕಿತ್ಸೆ ಮಾಡಿರುವ ಡಾ. ಎಸ್. ವಿದ್ಯಾಧರ( ಅಧ್ಯಕ್ಷರು ಮತ್ತು ಎಚ್ಒಡಿ - ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮತ್ತು ಸಲಹೆಗಾರರು - ರೋಬೋಟಿಕ್ ಸ್ಪೈನ್ ಸರ್ಜರಿ, ಮಣಿಪಾಲ್ ಆಸ್ಪತ್ರೆ ಹಳೆಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು) ನಮ್ಮೊಂದಿಗೆ ಹಂಚಿಕೊಂಡಿದ್ದಾರರೆ.
ವಯಸ್ಸಾದ ಮೇಲೆ ಮೂಳೆ ಶಸ್ತ್ರ ಚಿಕಿತ್ಸೆ ಕಷ್ಟ, ಆದರೆ ಈ ದಂಪತಿಗಳ ಕೇಸ್ನಲ್ಲಿ ಸುಳ್ಳಾಗಿದೆ
ವಯಸ್ಸಾದ ಮೇಲೆ ಮೂಳೆ ಶಸ್ತ್ರ ಚಿಕಿತ್ಸೆ ಮಾಡುವುದು ಕಷ್ಟ, ಅವರಿಗೆ ಈಗಾಗಲೇ ವಯಸ್ಸಾಗಿದೆ, ಶಸ್ತ್ರಚಿಕಿತ್ಸೆ ಅನಗತ್ಯ ಮತ್ತು ಅಪಾಯಕಾರಿ ಎಂದು ಹೇಳುವುದನ್ನು ಕೇಳುತ್ತೇವೆ, ಆದರೆ ವೈದ್ಯರು ಈ ಮನಸ್ಥಿತಿಯು ವಯಸ್ಸಾದವರ ಆರೋಗ್ಯದ ಚೇತರಿಕೆ, ಸುಧಾರಿತ ಜೀವನದ ಗುಣಮಟ್ಟ ಮತ್ತು ವಯಸ್ಸಿನ ಹೊರತಾಗಿಯೂ ಮುಂದುವರಿದ ಸ್ವಾತಂತ್ರ್ಯದ ಸಾಮರ್ಥ್ಯವನ್ನು ಕಡೆಗಣಿಸುತ್ತದೆ.
90ರ ಹರೆಯದ ದಂಪತಿಗೆ ರೋಬೋಟಿಕ್ ಸರ್ಜರಿ
ಶ್ರೀ ಹನುಮಂತ ರಾಯರು ಮತ್ತು ಅವರ ಪತ್ನಿ ಶ್ರೀಮತಿ ಗಂಗಮ್ಮ ಅವರು ತೊಂಬತ್ತರ ಹರೆಯದ ಆಸುಪಾಸಿನಲ್ಲಿರುವವರು, ಈ ವಯಸ್ಸಿನಲ್ಲೂ ರೋಬೋಟಿಕ್ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ತಮ್ಮ ಕುಟುಂಬದ ಮೇಲೆ ಅವಲಂಬಿತರಾಗದೆ ಆರೋಗ್ಯಕರ, ಸಕ್ರಿಯ ಜೀವನವನ್ನು ನಡೆಸುತ್ತಿದ್ದಾರೆ.
98 ನೇ ವಯಸ್ಸಿನಲ್ಲಿ, ಶ್ರೀ ಹನುಮಂತ ರಾಯರು ಗೌರವಾನ್ವಿತ ಕನ್ನಡ ಉಪನ್ಯಾಸಕರಾಗಿ ಮತ್ತು ಸಮರ್ಪಿತ ಆಯುರ್ವೇದ ಔಷಧಿ ತಯಾರಕರಾಗಿ ಜೀವನದಲ್ಲಿ ಸಾಕಷ್ಟು ಸಾಧಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಬೀಳುವ ಸರಣಿಯು ಅವನ ಸ್ಥಿತಿಸ್ಥಾಪಕತ್ವವನ್ನು ಪರೀಕ್ಷಿಸಿತು. ಎರಡು ಸೊಂಟ ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಅವರು ಪಟ್ಟುಬಿಡದ ಮಧ್ಯ-ಬೆನ್ನು ನೋವಿನಿಂದ ಬಳಲುತ್ತಿದ್ದರು, ಅದು ನೋವಿನ ಔಷಧಿ, ಮಸಾಜ್ ಮತ್ತು ಫಿಸಿಯೋಥೆರಪಿಯಿಂದ ಕಡಿಮೆಯಾಗಲಿಲ್ಲ.
ತಮ್ಮ ಜೀವನದ ಗುಣಮಟ್ಟವನ್ನು ಮರಳಿ ಪಡೆಯಲು ನಿರ್ಧರಿಸಿದ ಶ್ರೀ ಹನುಮಂತ ರಾಯರು 26ನೇ ಸೆಪ್ಟೆಂಬರ್ 2023 ರಂದು ಶಸ್ತ್ರಚಿಕಿತ್ಸೆಗೆ ಮುಂದಾದರು. ಶಸ್ತ್ರಚಿಕಿತ್ಸೆಯ ನಂತರ, ಅವರು ಈಗ ಆರಾಮವಾಗಿದ್ದಾರೆ, ಆವಾಗ ಅವರ ಪತ್ನಿಯು ಬಿದ್ದು ಬೆನ್ನು ಮೂಳೆಗೆ ಪೆಟ್ಟಾಗುತ್ತೆ, ಎಷ್ಟೇ ನೋವಿನ ಮಾತ್ರೆ ನುಂಗಿದರೂ, ಮಸಾಜ್ ಪಡೆದರೂ ಕಡಿಮೆಯಾಗಲ್ಲ. ಪತಿ ಆರೋಗ್ಯದಲ್ಲಿನ ಬದಲಾವಣೆ ನೋಡಿ ಪತ್ನಿಯೂ ಈ ಚಿಕಿತ್ಸೆಗೆ ಒಳಗಾಗುತ್ತಾರೆ, ಈಗ ಇಬ್ಬರು ಬೆನ್ನು ನೋವಿನ ಸಮಸ್ಯೆಯಿಂದ ಮುಕ್ತರಾಗಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.
ವಯಸ್ಸಾದ ಮೇಲೆ ಮೂಳೆಯ ಶಸ್ತ್ರ ಚಿಕಿತ್ಸೆ ಮಾಡಿದರೆ ಪ್ರಯೋಜನವಿಲ್ಲ ಎಂದು ಭಾವಿಸುವುದೇ ತಪ್ಪು, ವಿಜ್ಞಾನ ತುಂಬಾ ಮುಂದುವರೆದಿದೆ. ವಯಸ್ಸಾದ ಮೇಲೆ ಬಹುತೇಕ ಜನರಿಗೆ ಮೂಳೆ ಸಂಬಂಧಿ ನೋವು ಕಾಣಿಸುತ್ತದೆ, ಆದರೆ ಇದಕ್ಕೆ ಚಿಕಿತ್ಸೆಯೇ ಇಲ್ಲ ಎಂದು ಭಾವಿಸುವುದು ಮಾತ್ರ ತಪ್ಪು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications