Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಮಾನ್ಸೂನ್ನಲ್ಲಿ ಈ 5 ಕಾರಣಕ್ಕೆ ಮೀನು ಒಳ್ಳೆಯದು ಅಲ್ವೇ ಅಲ್ಲ
ಮಳೆಗಾಲದಲ್ಲಿ ಮೀನು ತಿನ್ನುವುದು ಸರಿಯಾದ ಆಯ್ಕೆ ಅಲ್ವೇ ಅಲ್ಲ. ಮೀನು ಬದಲಿಗೆ ಚಿಕನ್, ಮಟನ್, ಮತ್ತಿತರ ಮಾಂಸಾಹಾರ ಸೇವನೆ ಒಳ್ಳೆಯದು. ಮಳೆಗಾಲದಲ್ಲಿ ಮೀನನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಪರಿಸರಕ್ಕೂ ಒಳ್ಳೆಯದಲ್ಲ, ಈ 5 ಕಾರಣಗಳಿಂದ ಮಳೆಗಾಲದಲ್ಲಿ ಮೀನು ಸೇವಿಸದಿರುವುದು ಒಳ್ಳೆಯದು.
ಮೀನುಗಳು ಮೊಟ್ಟೆ ಹಾಕುವ ಸಮಯ
ನೀವು ಮೀನು ಪ್ರಿಯರಾದರೆ ಗಮನಿಸಿರಬಹುದು, ಜೂನ್-ಜುಲೈ ತಿಂಗಳಿನಲ್ಲಿ ಮಾರುಕಟ್ಟೆಗೆ ಫ್ರೆಷ್ ಮೀನುಗಳು ಬರಲ್ಲ. ಈಗಾಗಲೇ ಫ್ರೀಝರ್ನಲ್ಲಿಟ್ಟ ಮೀನುಗಳನ್ನು ತಂದು ಮಾರಲಾಗುವುದು. ಮುಂಗಾರಿನ ಸಮಯದಲ್ಲಿ ಮೀನುಗಳು ಮೊಟ್ಟೆ ಹಾಕಿ ಮರಿ ಮಾಡುವ ಸಮಯ, ಈ ಕಾರಣದಿಂದಾಗಿ ಸಮುದ್ರದಲ್ಲಿ ಮೀನು ಹಿಡಿಯಲು ಬಿಡುವುದಿಲ್ಲ, ಅಲ್ಲದೆ ಮಳೆ-ಗಾಳಿ ಅಧಿಕವಿದ್ದಾಗಲೂ ಮೀನುಗಾರರಿಗೆ ಬೋಟ್ ತೆಗೆದುಕೊಂಡು ಹೋಗಲು ಕಷ್ಟವಾಗಿರುವುದರಿಂದ ತಾಜಾ ಮೀನುಗಳು ಮಾರುಕಟ್ಟೆಗೆ ಬರುವುದಿಲ್ಲ, ಈಗಾಗಲೇ ಸಂಗ್ರಹಿಸಿಟ್ಟ ಮೀನುಗಳನ್ನು ಮಾರುತ್ತಿರುತ್ತಾರೆ. ಅವುಗಳಲ್ಲಿ ರಾಸಾಯನಿಕಗಳನ್ನು ಬಳಸಿರುತ್ತಾರೆ. ಅಲ್ಲದೆ ಮೊಟ್ಟೆಯಿರುವ ಮೀನುಗಳನ್ನು ತಿನ್ನುವುದರಿಂದ ಫುಡ್ ಪಾಯಿಸನ್, ಹೊಟ್ಟೆ ನೋವು, ವಾಂತಿ-ಬೇಧಿ ಉಂಟಾಗುವುದು.

ಮೀನುಗಳು ಬೇಗನೆ ಕೊಳೆಯಲಾರಂಭಿಸುತ್ತದೆ
ಮೊಟ್ಟೆ ಇರುವ ಮೀನುಗಳು ಬೇಗನೆ ಕೊಳೆಯಲಾರಂಭಿಸುತ್ತದೆ, ಮಾರಾಟಗಾರರು ತಮ್ಮ ಲಾಭಕ್ಕಾಗಿ ಮೀನು ತಾಜಾವಾಗಿ ಕಾಣಲು ಕೆಮಿಕಲ್ ಬಳಸುತ್ತಾರೆ. ಇಂಥ ಮೀನುಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು. ಆದ್ದರಿಂದ ಈ ಸಮಯದಲ್ಲಿ ಚಿಕನ್ ಬೆಸ್ಟ್.
ರುಚಿ ಕಡಿಮೆ
ತುಂಬಾ ಸಮಯ ಫ್ರೀಝರ್ನಲ್ಲಿಟ್ಟ ಮೀನು ಬಳಸಿದರೆ ರುಚಿಯೂ ಇರುವುದಿಲ್ಲ, ಮೀನಿನ ಗುಣಮಟ್ಟ ಕಳಪೆಯಾಗುವುದು. ಇಂಥ ಮೀನು ಬಾಯಿಗೆ ರುಚಿ ನೀಡುವುದಿಲ್ಲ. ಮೀನು ತಾಜಾವಾಗಿದ್ದರೆ ಮಾತ್ರ ರುಚಿ, ಅಲ್ಲದೆ ಕೆಮಿಕಲ್ ಅಧಿಕ ಹಾಕಿರುವ ಮೀನು ತಿನ್ನುವಾಗಲೇ ರುಚಿ ಇಷ್ಟವಾಗಲ್ಲ.
ಕಾಯಿಲೆ ಬೇಗನೆ ಹರಡುತ್ತದೆ
ಮಳೆಗಾಲದಲ್ಲಿ ಕಲುಷಿತ ನೀರು ಕೂಡ ನದಿ, ಸಮುದ್ರವನ್ನು ಸೇರುತ್ತದೆ. ಈ ನೀರಿನಲ್ಲಿ ಮೀನುಗಳು ಮೊಟ್ಟೆ ಹಾಕುತ್ತವೆ, ಈ ಕಲುಷಿತ ನೀರಿನಲ್ಲಿರುವ ಮೀನುಗಳನ್ನು ಹಿಡಿದು ತಿನ್ನುವುದರಿಂದ ಟೈಫಾಯ್ಡ್, ಅರಿಶಿಣ ಕಾಮಲೆ, ಬೇಧಿ ಮುಂತಾದ ಕಾಯಿಲೆ ಹರಡುವುದು. ಮಕ್ಕಳಿಗಂತು ನೀಡಲೇಬೇಡಿ.
ಸಲ್ಫೇಟ್, ಪಾಲಿಫಾಸ್ಪೇಟ್ಸ್ ರಾಸಾಯನಿಕ ಬಳಸಲಾಗುವುದು
ಮಾರುಕಟ್ಟೆಯಲ್ಲಿ ಹಳೆಯ ಮೀನುಗಳು ತಾಜಾವಾಗಿ ಕಾಣಬೇಕೆಂದು ಸಲ್ಫೇಟ್, ಪಾಲಿಫಾಸ್ಪೇಟ್ಸ್ (sulphates and polyphosphates ) ಬಳಸುತ್ತಾರೆ. ಇ
ಈ ಕಾರಣಗಳಿಂದ ಮಾನ್ಸೂನ್ನಲ್ಲಿ ಮೀನು ಬದಲಿಗೆ ಮಾಂಸಾಹಾರ ಬೆಸ್ಟ್.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications