Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಈ ಕಾರಣಕ್ಕೆ ಹೇಳುವುದು ಚಿನ್ನದ ಕಾಲ್ಗೆಜ್ಜೆಯಾಗಲಿ, ಚಿನ್ನದ ಕಾಲುಂಗುರವಾಗಲಿ ಧರಿಸಲೇಬಾರದು
ಈಗೆಲ್ಲಾ ಚಿನ್ನದ ಕಾಲ್ಗೆಜ್ಜೆ, ಚಿನ್ನದ ಕಾಲುಂಗುರ ಧರಿಸುವ ಅನೇಕರನ್ನು ನೋಡುತ್ತೇವೆ, ಅಲ್ಲದೆ ಮಕ್ಕಳ ಸೊಂಟಕ್ಕೆ ಚಿನ್ನದ ಉಡಿದಾರ, ಕಾಲಿಗೆ ಚಿನ್ನದ ಕಾಲ್ಗೆಜ್ಜೆ ಹಾಕುವವರೂ ಇದ್ದಾರೆ. ಚಿನ್ನವನ್ನು ಹಾಕುವ ಮೂಲಕ ತಮ್ಮ ಪ್ರತಿಷ್ಠೆ ತೋರಿಸಲು ಇಷ್ಟಪಡುತ್ತಾರೆ, ಆದರೆ ಚಿನ್ನವನ್ನು ಹೊಕ್ಕಳಿನಿಂದ ಕೆಳಗಡೆ ಧರಿಸಭಾರದಂತೆ ಅದಕ್ಕೆ ಧಾರ್ಮಿಕ ಕಾರಣಗಳನ್ನೂ ಹೇಳಲಾಗುವುದು, ವೈಜ್ಞಾನಿಕ ಕಾರಣವೂ ಇದೆ, ಚಿನ್ನವನ್ನು ಹೊಕ್ಕಳ ಕೆಳಗಡೆ ಏಕೆ ಬಳಸಬಾರದು ಎಂದು ನೋಡೋಣ ಬನ್ನಿ:

ಧಾರ್ಮಿಕ ನಂಬಿಕೆಗಳು
ಚಿನ್ನದ ಕಾಲ್ಗೆಜ್ಜೆ ಧರಿಸುವುದರಿಂದ ಕೇತು ದೋಷ ಉಂಟಾಗುವುದು ಎಂದು ಹೇಳಲಾಗುವುದು, ಅದೇ ಬೆಳ್ಳಿಯ ಆಭರಣ ಧರಿಸಿದರೆ ತುಂಬಾನೇ ಒಳ್ಳೆಯದು ಇದು ಕೇತುವಮನ್ನು ಶಾಂತವಾಗಿಸುತ್ತದೆ ಎಂದು ಹೇಳಲಾಗುವುದು.
ಅಲ್ಲದೆ ಚಿನ್ನವನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗಿದೆ
ಚಿನ್ನವನ್ನು ಕಾಲಿಗೆ ಧರಿಸಬಾರದೆಂದು ಹೇಳಲಾಗುವುದು, ಸೊಂಟದ ಕೆಳಗಡೆ ಚಿನ್ನ ಧರಿಸುವುದು ಲಕ್ಷ್ಮಿಯನ್ನು ಅಪಮಾನ ಮಾಡಿದಂತೆ , ಹಾಗಾಗಿ ಚಿನ್ನವನ್ನು ಕಾಲುಂಗುರವಾಗಿ ಅಥವಾ ಕಾಲ್ಗೆಜ್ಜೆಯಾಗಿ ಧರಿಸಬಾರದೆಂದು ಹೇಳಲಾಗುವುದು.
ಶ್ರೀ ವಿಷ್ಣುವಿಗೆ ಅಗೌರವ ತೋರಿದಂತೆ
ಚಿನ್ನವನ್ನು ಕಾಲಿಗೆ ಧರಿಸುವುದು ಶ್ರೀ ವಿಷ್ಣುವಿಗೆ ತೋರಿಸುವ ಅಗೌರವದಂತೆ, ಇದರಿಂದ ಮನುಷ್ಯ ಆರ್ಥಿಕ ತೊಂದರೆಗಳನ್ನು ಅನುಭವಿಸುವಂತಾಗುವುದು ಎಂದು ಹೇಳಲಾಗುವುದು.
ಇವೆಲ್ಲಾ ಧಾರ್ಮಿಕ ಕಾರಣಗಳಾದರೆ ನಿಜವಾದ ಕಾರಣವೇನು?
ಚಿನ್ನ ಧರಿಸುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುವುದು: ಚಿನ್ನವನ್ನು ಕಾಲಿಗೆ ಧರಿಸಿದರೆ ಮೈ ಉಷ್ಣಾಂಶ ಹೆಚ್ಚಾಗುವುದು, ಅದೇ ಬೆಳ್ಳಿ ಧರಿಸಿದರೆ ದೇಹವನ್ನು ತಂಪಾಗಿಸುತ್ತದೆ, ದೇಹದ ಉಷ್ಣಾಂಶದಲ್ಲಿ ಸಮತೋಲನ ಕಾಪಾಡಲು ಕಾಲಿಗೆ ಚಿನ್ನಕ್ಕಿಂತ ಬೆಳ್ಳಿಯ ಆಭರಣ ಒಳ್ಳೆಯದು.
ಬೆಳ್ಳಿ ಸೋಂಕಾಣುಗಳ ವಿರುದ್ಧ ಹೋರಾಡುತ್ತೆ
ಬೆಳ್ಳಿಗೆ ಸೋಂಕಾಣುಗಳ ವಿರುದ್ಧ ಹೋರಾಡುವ ಗುಣವಿದೆ, ಹಾಗಾಗಿ ಚಿನ್ನವನ್ನು ಕಾಲಿಗೆ ಹಾಕಬಾರದು, ಬೆಳ್ಳಿ ಮಾತ್ರ ಕಾಲಿಗೆ ಹಾಕಬೇಕು ಎಂದು ಹೇಳಲಾಗುವುದು.
ನಮ್ಮ ದೇಹಕ್ಕೆ ಚಿನ್ನವಾಗಲಿ, ಬೆಳ್ಳಿಯಾಗಲಿ ಅದರದ್ದೇ ಗುಣ ನೀಡುತ್ತದೆ, ಅವುಗಳು ನಮ್ಮ ಆರೋಗ್ಯ ವೃದ್ಧಿಸುವ ಆಭರಣ ಮಾತ್ರವಲ್ಲ, ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ಚಿನ್ನವನ್ನು ಹೊಕ್ಕಳ ಕೆಳಗಡೆ ಧರಿಸಬಾರದು, ಹಾಗೆ ಧರಿಸಿದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು, ಹೊಟ್ಟೆಯ ಭಾಗದಲ್ಲಿ ನಾವು ತಿಂದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗಿ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಒದಗಿಸುತ್ತದೆ, ಅದೇ ಚಿನ್ನ ಧರಿಸಿದರೆ ಉಷ್ಣಾಂಶ ಹೆಚ್ಚಾಗುವುದು, ಇನ್ನು ಸ್ವಾದಷ್ಟಿನಾ ಚಕ್ರ ಅಂದ್ರೆ ಕಿಬ್ಬೊಟ್ಟೆಯಿಂದ ಕೆಳಗಡೆ ಹಾಗೂ ಕಾಲಿನ ನಾಲ್ಕು ಬೆರಳುಗಳು ಈ ಭಾಗದಲ್ಲಿ ಚಿನ್ನವಿದ್ದರೆ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುತ್ತದೆ ಅಲ್ಲದೆ ಸುಸ್ತು, ಅಸಮಧಾನ ಈ ಬಗೆಯ ಅಸ್ವಸ್ಥತೆ ಉಂಟು ಮಾಡುತ್ತದೆ.
ಅದೇ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸಿದರೆ ಅದು ನೀಡುವ ಒತ್ತಡ ಮಹಿಳೆಯರ ಗರ್ಭಕೋಶಕ್ಕೆ ಒಳ್ಳೆಯದು, ಬೆಳ್ಳಿ ಮಾನಸಿಕ ಒತ್ತಡ ಕಡಿಮೆ ಮಾಡುವುದು ಎಂದು ಹೇಳಲಾಗುವುದು. ಬೇಸಿಗೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವುದು ಒಳ್ಳೆಯದು, ಇನ್ನು ಬಿಸಿಲಿನ ಧಗೆ ಅಧಿಕವಿರುವ ಕಡೆ ಬೆಳ್ಳಿಯ ಆಭರಣಗಳನ್ನು ಧರಿಸುವುದು ಒಳ್ಳೆಯದು.
ಹೀಗೆ ಚಿನ್ನ ಮತ್ತು ಬೆಳ್ಳಿಯ ಆಭರಣದಲ್ಲಿಇಷ್ಟೆಲ್ಲಾ ಸಂಗತಿಗಳಿವೆ.



Click it and Unblock the Notifications