Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಕಾರಣಕ್ಕೆ ಹೇಳುವುದು ಚಿನ್ನದ ಕಾಲ್ಗೆಜ್ಜೆಯಾಗಲಿ, ಚಿನ್ನದ ಕಾಲುಂಗುರವಾಗಲಿ ಧರಿಸಲೇಬಾರದು
ಈಗೆಲ್ಲಾ ಚಿನ್ನದ ಕಾಲ್ಗೆಜ್ಜೆ, ಚಿನ್ನದ ಕಾಲುಂಗುರ ಧರಿಸುವ ಅನೇಕರನ್ನು ನೋಡುತ್ತೇವೆ, ಅಲ್ಲದೆ ಮಕ್ಕಳ ಸೊಂಟಕ್ಕೆ ಚಿನ್ನದ ಉಡಿದಾರ, ಕಾಲಿಗೆ ಚಿನ್ನದ ಕಾಲ್ಗೆಜ್ಜೆ ಹಾಕುವವರೂ ಇದ್ದಾರೆ. ಚಿನ್ನವನ್ನು ಹಾಕುವ ಮೂಲಕ ತಮ್ಮ ಪ್ರತಿಷ್ಠೆ ತೋರಿಸಲು ಇಷ್ಟಪಡುತ್ತಾರೆ, ಆದರೆ ಚಿನ್ನವನ್ನು ಹೊಕ್ಕಳಿನಿಂದ ಕೆಳಗಡೆ ಧರಿಸಭಾರದಂತೆ ಅದಕ್ಕೆ ಧಾರ್ಮಿಕ ಕಾರಣಗಳನ್ನೂ ಹೇಳಲಾಗುವುದು, ವೈಜ್ಞಾನಿಕ ಕಾರಣವೂ ಇದೆ, ಚಿನ್ನವನ್ನು ಹೊಕ್ಕಳ ಕೆಳಗಡೆ ಏಕೆ ಬಳಸಬಾರದು ಎಂದು ನೋಡೋಣ ಬನ್ನಿ:

ಧಾರ್ಮಿಕ ನಂಬಿಕೆಗಳು
ಚಿನ್ನದ ಕಾಲ್ಗೆಜ್ಜೆ ಧರಿಸುವುದರಿಂದ ಕೇತು ದೋಷ ಉಂಟಾಗುವುದು ಎಂದು ಹೇಳಲಾಗುವುದು, ಅದೇ ಬೆಳ್ಳಿಯ ಆಭರಣ ಧರಿಸಿದರೆ ತುಂಬಾನೇ ಒಳ್ಳೆಯದು ಇದು ಕೇತುವಮನ್ನು ಶಾಂತವಾಗಿಸುತ್ತದೆ ಎಂದು ಹೇಳಲಾಗುವುದು.
ಅಲ್ಲದೆ ಚಿನ್ನವನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗಿದೆ
ಚಿನ್ನವನ್ನು ಕಾಲಿಗೆ ಧರಿಸಬಾರದೆಂದು ಹೇಳಲಾಗುವುದು, ಸೊಂಟದ ಕೆಳಗಡೆ ಚಿನ್ನ ಧರಿಸುವುದು ಲಕ್ಷ್ಮಿಯನ್ನು ಅಪಮಾನ ಮಾಡಿದಂತೆ , ಹಾಗಾಗಿ ಚಿನ್ನವನ್ನು ಕಾಲುಂಗುರವಾಗಿ ಅಥವಾ ಕಾಲ್ಗೆಜ್ಜೆಯಾಗಿ ಧರಿಸಬಾರದೆಂದು ಹೇಳಲಾಗುವುದು.
ಶ್ರೀ ವಿಷ್ಣುವಿಗೆ ಅಗೌರವ ತೋರಿದಂತೆ
ಚಿನ್ನವನ್ನು ಕಾಲಿಗೆ ಧರಿಸುವುದು ಶ್ರೀ ವಿಷ್ಣುವಿಗೆ ತೋರಿಸುವ ಅಗೌರವದಂತೆ, ಇದರಿಂದ ಮನುಷ್ಯ ಆರ್ಥಿಕ ತೊಂದರೆಗಳನ್ನು ಅನುಭವಿಸುವಂತಾಗುವುದು ಎಂದು ಹೇಳಲಾಗುವುದು.
ಇವೆಲ್ಲಾ ಧಾರ್ಮಿಕ ಕಾರಣಗಳಾದರೆ ನಿಜವಾದ ಕಾರಣವೇನು?
ಚಿನ್ನ ಧರಿಸುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುವುದು: ಚಿನ್ನವನ್ನು ಕಾಲಿಗೆ ಧರಿಸಿದರೆ ಮೈ ಉಷ್ಣಾಂಶ ಹೆಚ್ಚಾಗುವುದು, ಅದೇ ಬೆಳ್ಳಿ ಧರಿಸಿದರೆ ದೇಹವನ್ನು ತಂಪಾಗಿಸುತ್ತದೆ, ದೇಹದ ಉಷ್ಣಾಂಶದಲ್ಲಿ ಸಮತೋಲನ ಕಾಪಾಡಲು ಕಾಲಿಗೆ ಚಿನ್ನಕ್ಕಿಂತ ಬೆಳ್ಳಿಯ ಆಭರಣ ಒಳ್ಳೆಯದು.
ಬೆಳ್ಳಿ ಸೋಂಕಾಣುಗಳ ವಿರುದ್ಧ ಹೋರಾಡುತ್ತೆ
ಬೆಳ್ಳಿಗೆ ಸೋಂಕಾಣುಗಳ ವಿರುದ್ಧ ಹೋರಾಡುವ ಗುಣವಿದೆ, ಹಾಗಾಗಿ ಚಿನ್ನವನ್ನು ಕಾಲಿಗೆ ಹಾಕಬಾರದು, ಬೆಳ್ಳಿ ಮಾತ್ರ ಕಾಲಿಗೆ ಹಾಕಬೇಕು ಎಂದು ಹೇಳಲಾಗುವುದು.
ನಮ್ಮ ದೇಹಕ್ಕೆ ಚಿನ್ನವಾಗಲಿ, ಬೆಳ್ಳಿಯಾಗಲಿ ಅದರದ್ದೇ ಗುಣ ನೀಡುತ್ತದೆ, ಅವುಗಳು ನಮ್ಮ ಆರೋಗ್ಯ ವೃದ್ಧಿಸುವ ಆಭರಣ ಮಾತ್ರವಲ್ಲ, ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ಚಿನ್ನವನ್ನು ಹೊಕ್ಕಳ ಕೆಳಗಡೆ ಧರಿಸಬಾರದು, ಹಾಗೆ ಧರಿಸಿದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು, ಹೊಟ್ಟೆಯ ಭಾಗದಲ್ಲಿ ನಾವು ತಿಂದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗಿ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಒದಗಿಸುತ್ತದೆ, ಅದೇ ಚಿನ್ನ ಧರಿಸಿದರೆ ಉಷ್ಣಾಂಶ ಹೆಚ್ಚಾಗುವುದು, ಇನ್ನು ಸ್ವಾದಷ್ಟಿನಾ ಚಕ್ರ ಅಂದ್ರೆ ಕಿಬ್ಬೊಟ್ಟೆಯಿಂದ ಕೆಳಗಡೆ ಹಾಗೂ ಕಾಲಿನ ನಾಲ್ಕು ಬೆರಳುಗಳು ಈ ಭಾಗದಲ್ಲಿ ಚಿನ್ನವಿದ್ದರೆ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುತ್ತದೆ ಅಲ್ಲದೆ ಸುಸ್ತು, ಅಸಮಧಾನ ಈ ಬಗೆಯ ಅಸ್ವಸ್ಥತೆ ಉಂಟು ಮಾಡುತ್ತದೆ.
ಅದೇ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸಿದರೆ ಅದು ನೀಡುವ ಒತ್ತಡ ಮಹಿಳೆಯರ ಗರ್ಭಕೋಶಕ್ಕೆ ಒಳ್ಳೆಯದು, ಬೆಳ್ಳಿ ಮಾನಸಿಕ ಒತ್ತಡ ಕಡಿಮೆ ಮಾಡುವುದು ಎಂದು ಹೇಳಲಾಗುವುದು. ಬೇಸಿಗೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವುದು ಒಳ್ಳೆಯದು, ಇನ್ನು ಬಿಸಿಲಿನ ಧಗೆ ಅಧಿಕವಿರುವ ಕಡೆ ಬೆಳ್ಳಿಯ ಆಭರಣಗಳನ್ನು ಧರಿಸುವುದು ಒಳ್ಳೆಯದು.
ಹೀಗೆ ಚಿನ್ನ ಮತ್ತು ಬೆಳ್ಳಿಯ ಆಭರಣದಲ್ಲಿಇಷ್ಟೆಲ್ಲಾ ಸಂಗತಿಗಳಿವೆ.



Click it and Unblock the Notifications