Latest Updates
-
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ -
ಹಸಿ ಬಟಾಣಿ ಬಳಸಿ ಖಸ್ತ ಪೂರಿ ಹೀಗೆ ಮಾಡಿ.. ಪ್ರತಿ ಪುರಿಯೂ ಹೂವಿನಂತೆ ಉಬ್ಬಿ ಬರುತ್ತೆ! ಸೂಪರ್ ರುಚಿ, 15 ನಿಮಿಷಗಳಲ್ಲಿ ರೆಡಿ! -
ಈ ದಿನ ಕೌಟುಂಬಿಕ ಸುಖ ಪ್ರಾಪ್ತಿ! ಪ್ರೇಮ ಜೀವನದಲ್ಲಿ ತೊಂದರೆಗಳು -
March 02 Horoscope: ಸಾಲದ ಕುರಿತಾದ ಚಿಂತೆಯೊಂದು ದೂರಾಗಲಿದೆ!
ಈ ಕಾರಣಕ್ಕೆ ಹೇಳುವುದು ಚಿನ್ನದ ಕಾಲ್ಗೆಜ್ಜೆಯಾಗಲಿ, ಚಿನ್ನದ ಕಾಲುಂಗುರವಾಗಲಿ ಧರಿಸಲೇಬಾರದು
ಈಗೆಲ್ಲಾ ಚಿನ್ನದ ಕಾಲ್ಗೆಜ್ಜೆ, ಚಿನ್ನದ ಕಾಲುಂಗುರ ಧರಿಸುವ ಅನೇಕರನ್ನು ನೋಡುತ್ತೇವೆ, ಅಲ್ಲದೆ ಮಕ್ಕಳ ಸೊಂಟಕ್ಕೆ ಚಿನ್ನದ ಉಡಿದಾರ, ಕಾಲಿಗೆ ಚಿನ್ನದ ಕಾಲ್ಗೆಜ್ಜೆ ಹಾಕುವವರೂ ಇದ್ದಾರೆ. ಚಿನ್ನವನ್ನು ಹಾಕುವ ಮೂಲಕ ತಮ್ಮ ಪ್ರತಿಷ್ಠೆ ತೋರಿಸಲು ಇಷ್ಟಪಡುತ್ತಾರೆ, ಆದರೆ ಚಿನ್ನವನ್ನು ಹೊಕ್ಕಳಿನಿಂದ ಕೆಳಗಡೆ ಧರಿಸಭಾರದಂತೆ ಅದಕ್ಕೆ ಧಾರ್ಮಿಕ ಕಾರಣಗಳನ್ನೂ ಹೇಳಲಾಗುವುದು, ವೈಜ್ಞಾನಿಕ ಕಾರಣವೂ ಇದೆ, ಚಿನ್ನವನ್ನು ಹೊಕ್ಕಳ ಕೆಳಗಡೆ ಏಕೆ ಬಳಸಬಾರದು ಎಂದು ನೋಡೋಣ ಬನ್ನಿ:

ಧಾರ್ಮಿಕ ನಂಬಿಕೆಗಳು
ಚಿನ್ನದ ಕಾಲ್ಗೆಜ್ಜೆ ಧರಿಸುವುದರಿಂದ ಕೇತು ದೋಷ ಉಂಟಾಗುವುದು ಎಂದು ಹೇಳಲಾಗುವುದು, ಅದೇ ಬೆಳ್ಳಿಯ ಆಭರಣ ಧರಿಸಿದರೆ ತುಂಬಾನೇ ಒಳ್ಳೆಯದು ಇದು ಕೇತುವಮನ್ನು ಶಾಂತವಾಗಿಸುತ್ತದೆ ಎಂದು ಹೇಳಲಾಗುವುದು.
ಅಲ್ಲದೆ ಚಿನ್ನವನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗಿದೆ
ಚಿನ್ನವನ್ನು ಕಾಲಿಗೆ ಧರಿಸಬಾರದೆಂದು ಹೇಳಲಾಗುವುದು, ಸೊಂಟದ ಕೆಳಗಡೆ ಚಿನ್ನ ಧರಿಸುವುದು ಲಕ್ಷ್ಮಿಯನ್ನು ಅಪಮಾನ ಮಾಡಿದಂತೆ , ಹಾಗಾಗಿ ಚಿನ್ನವನ್ನು ಕಾಲುಂಗುರವಾಗಿ ಅಥವಾ ಕಾಲ್ಗೆಜ್ಜೆಯಾಗಿ ಧರಿಸಬಾರದೆಂದು ಹೇಳಲಾಗುವುದು.
ಶ್ರೀ ವಿಷ್ಣುವಿಗೆ ಅಗೌರವ ತೋರಿದಂತೆ
ಚಿನ್ನವನ್ನು ಕಾಲಿಗೆ ಧರಿಸುವುದು ಶ್ರೀ ವಿಷ್ಣುವಿಗೆ ತೋರಿಸುವ ಅಗೌರವದಂತೆ, ಇದರಿಂದ ಮನುಷ್ಯ ಆರ್ಥಿಕ ತೊಂದರೆಗಳನ್ನು ಅನುಭವಿಸುವಂತಾಗುವುದು ಎಂದು ಹೇಳಲಾಗುವುದು.
ಇವೆಲ್ಲಾ ಧಾರ್ಮಿಕ ಕಾರಣಗಳಾದರೆ ನಿಜವಾದ ಕಾರಣವೇನು?
ಚಿನ್ನ ಧರಿಸುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುವುದು: ಚಿನ್ನವನ್ನು ಕಾಲಿಗೆ ಧರಿಸಿದರೆ ಮೈ ಉಷ್ಣಾಂಶ ಹೆಚ್ಚಾಗುವುದು, ಅದೇ ಬೆಳ್ಳಿ ಧರಿಸಿದರೆ ದೇಹವನ್ನು ತಂಪಾಗಿಸುತ್ತದೆ, ದೇಹದ ಉಷ್ಣಾಂಶದಲ್ಲಿ ಸಮತೋಲನ ಕಾಪಾಡಲು ಕಾಲಿಗೆ ಚಿನ್ನಕ್ಕಿಂತ ಬೆಳ್ಳಿಯ ಆಭರಣ ಒಳ್ಳೆಯದು.
ಬೆಳ್ಳಿ ಸೋಂಕಾಣುಗಳ ವಿರುದ್ಧ ಹೋರಾಡುತ್ತೆ
ಬೆಳ್ಳಿಗೆ ಸೋಂಕಾಣುಗಳ ವಿರುದ್ಧ ಹೋರಾಡುವ ಗುಣವಿದೆ, ಹಾಗಾಗಿ ಚಿನ್ನವನ್ನು ಕಾಲಿಗೆ ಹಾಕಬಾರದು, ಬೆಳ್ಳಿ ಮಾತ್ರ ಕಾಲಿಗೆ ಹಾಕಬೇಕು ಎಂದು ಹೇಳಲಾಗುವುದು.
ನಮ್ಮ ದೇಹಕ್ಕೆ ಚಿನ್ನವಾಗಲಿ, ಬೆಳ್ಳಿಯಾಗಲಿ ಅದರದ್ದೇ ಗುಣ ನೀಡುತ್ತದೆ, ಅವುಗಳು ನಮ್ಮ ಆರೋಗ್ಯ ವೃದ್ಧಿಸುವ ಆಭರಣ ಮಾತ್ರವಲ್ಲ, ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ಚಿನ್ನವನ್ನು ಹೊಕ್ಕಳ ಕೆಳಗಡೆ ಧರಿಸಬಾರದು, ಹಾಗೆ ಧರಿಸಿದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು, ಹೊಟ್ಟೆಯ ಭಾಗದಲ್ಲಿ ನಾವು ತಿಂದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗಿ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಒದಗಿಸುತ್ತದೆ, ಅದೇ ಚಿನ್ನ ಧರಿಸಿದರೆ ಉಷ್ಣಾಂಶ ಹೆಚ್ಚಾಗುವುದು, ಇನ್ನು ಸ್ವಾದಷ್ಟಿನಾ ಚಕ್ರ ಅಂದ್ರೆ ಕಿಬ್ಬೊಟ್ಟೆಯಿಂದ ಕೆಳಗಡೆ ಹಾಗೂ ಕಾಲಿನ ನಾಲ್ಕು ಬೆರಳುಗಳು ಈ ಭಾಗದಲ್ಲಿ ಚಿನ್ನವಿದ್ದರೆ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುತ್ತದೆ ಅಲ್ಲದೆ ಸುಸ್ತು, ಅಸಮಧಾನ ಈ ಬಗೆಯ ಅಸ್ವಸ್ಥತೆ ಉಂಟು ಮಾಡುತ್ತದೆ.
ಅದೇ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸಿದರೆ ಅದು ನೀಡುವ ಒತ್ತಡ ಮಹಿಳೆಯರ ಗರ್ಭಕೋಶಕ್ಕೆ ಒಳ್ಳೆಯದು, ಬೆಳ್ಳಿ ಮಾನಸಿಕ ಒತ್ತಡ ಕಡಿಮೆ ಮಾಡುವುದು ಎಂದು ಹೇಳಲಾಗುವುದು. ಬೇಸಿಗೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವುದು ಒಳ್ಳೆಯದು, ಇನ್ನು ಬಿಸಿಲಿನ ಧಗೆ ಅಧಿಕವಿರುವ ಕಡೆ ಬೆಳ್ಳಿಯ ಆಭರಣಗಳನ್ನು ಧರಿಸುವುದು ಒಳ್ಳೆಯದು.
ಹೀಗೆ ಚಿನ್ನ ಮತ್ತು ಬೆಳ್ಳಿಯ ಆಭರಣದಲ್ಲಿಇಷ್ಟೆಲ್ಲಾ ಸಂಗತಿಗಳಿವೆ.



Click it and Unblock the Notifications











