Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಈ ಕಾರಣಕ್ಕೆ ಹೇಳುವುದು ಚಿನ್ನದ ಕಾಲ್ಗೆಜ್ಜೆಯಾಗಲಿ, ಚಿನ್ನದ ಕಾಲುಂಗುರವಾಗಲಿ ಧರಿಸಲೇಬಾರದು
ಈಗೆಲ್ಲಾ ಚಿನ್ನದ ಕಾಲ್ಗೆಜ್ಜೆ, ಚಿನ್ನದ ಕಾಲುಂಗುರ ಧರಿಸುವ ಅನೇಕರನ್ನು ನೋಡುತ್ತೇವೆ, ಅಲ್ಲದೆ ಮಕ್ಕಳ ಸೊಂಟಕ್ಕೆ ಚಿನ್ನದ ಉಡಿದಾರ, ಕಾಲಿಗೆ ಚಿನ್ನದ ಕಾಲ್ಗೆಜ್ಜೆ ಹಾಕುವವರೂ ಇದ್ದಾರೆ. ಚಿನ್ನವನ್ನು ಹಾಕುವ ಮೂಲಕ ತಮ್ಮ ಪ್ರತಿಷ್ಠೆ ತೋರಿಸಲು ಇಷ್ಟಪಡುತ್ತಾರೆ, ಆದರೆ ಚಿನ್ನವನ್ನು ಹೊಕ್ಕಳಿನಿಂದ ಕೆಳಗಡೆ ಧರಿಸಭಾರದಂತೆ ಅದಕ್ಕೆ ಧಾರ್ಮಿಕ ಕಾರಣಗಳನ್ನೂ ಹೇಳಲಾಗುವುದು, ವೈಜ್ಞಾನಿಕ ಕಾರಣವೂ ಇದೆ, ಚಿನ್ನವನ್ನು ಹೊಕ್ಕಳ ಕೆಳಗಡೆ ಏಕೆ ಬಳಸಬಾರದು ಎಂದು ನೋಡೋಣ ಬನ್ನಿ:

ಧಾರ್ಮಿಕ ನಂಬಿಕೆಗಳು
ಚಿನ್ನದ ಕಾಲ್ಗೆಜ್ಜೆ ಧರಿಸುವುದರಿಂದ ಕೇತು ದೋಷ ಉಂಟಾಗುವುದು ಎಂದು ಹೇಳಲಾಗುವುದು, ಅದೇ ಬೆಳ್ಳಿಯ ಆಭರಣ ಧರಿಸಿದರೆ ತುಂಬಾನೇ ಒಳ್ಳೆಯದು ಇದು ಕೇತುವಮನ್ನು ಶಾಂತವಾಗಿಸುತ್ತದೆ ಎಂದು ಹೇಳಲಾಗುವುದು.
ಅಲ್ಲದೆ ಚಿನ್ನವನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗಿದೆ
ಚಿನ್ನವನ್ನು ಕಾಲಿಗೆ ಧರಿಸಬಾರದೆಂದು ಹೇಳಲಾಗುವುದು, ಸೊಂಟದ ಕೆಳಗಡೆ ಚಿನ್ನ ಧರಿಸುವುದು ಲಕ್ಷ್ಮಿಯನ್ನು ಅಪಮಾನ ಮಾಡಿದಂತೆ , ಹಾಗಾಗಿ ಚಿನ್ನವನ್ನು ಕಾಲುಂಗುರವಾಗಿ ಅಥವಾ ಕಾಲ್ಗೆಜ್ಜೆಯಾಗಿ ಧರಿಸಬಾರದೆಂದು ಹೇಳಲಾಗುವುದು.
ಶ್ರೀ ವಿಷ್ಣುವಿಗೆ ಅಗೌರವ ತೋರಿದಂತೆ
ಚಿನ್ನವನ್ನು ಕಾಲಿಗೆ ಧರಿಸುವುದು ಶ್ರೀ ವಿಷ್ಣುವಿಗೆ ತೋರಿಸುವ ಅಗೌರವದಂತೆ, ಇದರಿಂದ ಮನುಷ್ಯ ಆರ್ಥಿಕ ತೊಂದರೆಗಳನ್ನು ಅನುಭವಿಸುವಂತಾಗುವುದು ಎಂದು ಹೇಳಲಾಗುವುದು.
ಇವೆಲ್ಲಾ ಧಾರ್ಮಿಕ ಕಾರಣಗಳಾದರೆ ನಿಜವಾದ ಕಾರಣವೇನು?
ಚಿನ್ನ ಧರಿಸುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುವುದು: ಚಿನ್ನವನ್ನು ಕಾಲಿಗೆ ಧರಿಸಿದರೆ ಮೈ ಉಷ್ಣಾಂಶ ಹೆಚ್ಚಾಗುವುದು, ಅದೇ ಬೆಳ್ಳಿ ಧರಿಸಿದರೆ ದೇಹವನ್ನು ತಂಪಾಗಿಸುತ್ತದೆ, ದೇಹದ ಉಷ್ಣಾಂಶದಲ್ಲಿ ಸಮತೋಲನ ಕಾಪಾಡಲು ಕಾಲಿಗೆ ಚಿನ್ನಕ್ಕಿಂತ ಬೆಳ್ಳಿಯ ಆಭರಣ ಒಳ್ಳೆಯದು.
ಬೆಳ್ಳಿ ಸೋಂಕಾಣುಗಳ ವಿರುದ್ಧ ಹೋರಾಡುತ್ತೆ
ಬೆಳ್ಳಿಗೆ ಸೋಂಕಾಣುಗಳ ವಿರುದ್ಧ ಹೋರಾಡುವ ಗುಣವಿದೆ, ಹಾಗಾಗಿ ಚಿನ್ನವನ್ನು ಕಾಲಿಗೆ ಹಾಕಬಾರದು, ಬೆಳ್ಳಿ ಮಾತ್ರ ಕಾಲಿಗೆ ಹಾಕಬೇಕು ಎಂದು ಹೇಳಲಾಗುವುದು.
ನಮ್ಮ ದೇಹಕ್ಕೆ ಚಿನ್ನವಾಗಲಿ, ಬೆಳ್ಳಿಯಾಗಲಿ ಅದರದ್ದೇ ಗುಣ ನೀಡುತ್ತದೆ, ಅವುಗಳು ನಮ್ಮ ಆರೋಗ್ಯ ವೃದ್ಧಿಸುವ ಆಭರಣ ಮಾತ್ರವಲ್ಲ, ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ಚಿನ್ನವನ್ನು ಹೊಕ್ಕಳ ಕೆಳಗಡೆ ಧರಿಸಬಾರದು, ಹಾಗೆ ಧರಿಸಿದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು, ಹೊಟ್ಟೆಯ ಭಾಗದಲ್ಲಿ ನಾವು ತಿಂದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗಿ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಒದಗಿಸುತ್ತದೆ, ಅದೇ ಚಿನ್ನ ಧರಿಸಿದರೆ ಉಷ್ಣಾಂಶ ಹೆಚ್ಚಾಗುವುದು, ಇನ್ನು ಸ್ವಾದಷ್ಟಿನಾ ಚಕ್ರ ಅಂದ್ರೆ ಕಿಬ್ಬೊಟ್ಟೆಯಿಂದ ಕೆಳಗಡೆ ಹಾಗೂ ಕಾಲಿನ ನಾಲ್ಕು ಬೆರಳುಗಳು ಈ ಭಾಗದಲ್ಲಿ ಚಿನ್ನವಿದ್ದರೆ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುತ್ತದೆ ಅಲ್ಲದೆ ಸುಸ್ತು, ಅಸಮಧಾನ ಈ ಬಗೆಯ ಅಸ್ವಸ್ಥತೆ ಉಂಟು ಮಾಡುತ್ತದೆ.
ಅದೇ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸಿದರೆ ಅದು ನೀಡುವ ಒತ್ತಡ ಮಹಿಳೆಯರ ಗರ್ಭಕೋಶಕ್ಕೆ ಒಳ್ಳೆಯದು, ಬೆಳ್ಳಿ ಮಾನಸಿಕ ಒತ್ತಡ ಕಡಿಮೆ ಮಾಡುವುದು ಎಂದು ಹೇಳಲಾಗುವುದು. ಬೇಸಿಗೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವುದು ಒಳ್ಳೆಯದು, ಇನ್ನು ಬಿಸಿಲಿನ ಧಗೆ ಅಧಿಕವಿರುವ ಕಡೆ ಬೆಳ್ಳಿಯ ಆಭರಣಗಳನ್ನು ಧರಿಸುವುದು ಒಳ್ಳೆಯದು.
ಹೀಗೆ ಚಿನ್ನ ಮತ್ತು ಬೆಳ್ಳಿಯ ಆಭರಣದಲ್ಲಿಇಷ್ಟೆಲ್ಲಾ ಸಂಗತಿಗಳಿವೆ.



Click it and Unblock the Notifications
