Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
ತ್ವಚೆ ಸೌಂದರ್ಯದ ರಕ್ಷಕ-ಕಸ್ತೂರಿ ಅರಿಶಿಣ
ಮುಖದಲ್ಲಿ ಮೊಡವೆ, ಅಲರ್ಜಿ ಉಂಟಾಗಿದೆಯೆಂದು ಹೇಳಿದಾಗ ಮನೆಯಲ್ಲಿ ಅಜ್ಜಿಯಿದ್ದರೆ ಅವರು "ಅರಿಶಿಣ ಹಚ್ಚು, ಕಡಿಮೆಯಾಗುವುದು " ಎಂದು ಹೇಳುವುದು ಸಹಜ. ತ್ವಚೆ ರಕ್ಷಣೆಯಲ್ಲಿ ಅರಿಶಿಣದ ಪಾತ್ರವನ್ನು ನಮ್ಮ ಹಿರಿಯರು ಬಹು ಕಾಲದ ಹಿಂದೆಯೇ ಅರಿತು ಕೊಂಡಿದ್ದಾರೆ. ಸಾರಿಗೆ ಬಳಸುವ ಅರಿಶಿಣಕ್ಕಿಂತ ಕಸ್ತೂರಿ ಅರಿಶಿಣ ಸೌಂದರ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕಸ್ತೂರಿ ಅರಿಶಿಣ ಸಾಮಾನ್ಯವಾಗಿ ಎಲ್ಲರ ತ್ವಚೆಗೆ ಹೊಂದುತ್ತದೆ. ಸಾಮಾನ್ಯ ಅರಿಶಿಣ ಹಚ್ಚಿದರೆ ಕೆಲವರಿಗೆ ಅಲರ್ಜಿ ಉಂಟಾಗುವುದು, ಆದರೆ ಈ ಅರಿಶಿಣದಿಂದ ಅಲರ್ಜಿ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ, ಅಲ್ಲದೆ ಇದನ್ನು ಹಚ್ಚಿ ತೊಳೆದರೆ ಮುಖದಲ್ಲಿ ಅರಿಶಿಣ ಬಣ್ಣ ಕಾಣುವುದಿಲ್ಲ. ಪ್ರತೀದಿನ ಕಸ್ತೂರಿ ಅರಿಶಿಣ ಹಚ್ಚಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

1. ಮುಖದ ಬಿಳುಪು ಹೆಚ್ಚುವುದು
ಕಸ್ತೂರಿ ಅರಿಶಿಣ ಹಚ್ಚುತ್ತಾ ಬಂದರೆ ಮುಖದ ಬಿಳುಪು ಹೆಚ್ಚಿ, ತ್ವಚೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಮುಖಕಾಂತಿ ಹೆಚ್ಚಿಸುವ ಈ ಅರಿಶಿಣದ ಗುಣ ಯಾವ ಕ್ರೀಮ್ ನಲ್ಲೂ ಇಲ್ಲ.
2. ಸನ್ ಟ್ಯಾನ್ ತೆಗೆಯಲು ಸಹಕಾರಿ
ಬಿಸಿಲಿಗೆ ಹೋದರೆ ಸಾಕು ಸನ್ ಟ್ಯಾನ್ ಉಂಟಾಗುತ್ತದೆ. ಕಸ್ತೂರಿ ಅರಿಶಿಣ ಹಚ್ಚುವವರಿಗೆ ಸನ್ ಟ್ಯಾನ್ ನ ಸಮಸ್ಯೆ ಕಾಡುವುದಿಲ್ಲ. ಅರಿಶಿಣವನ್ನು ಇಡೀ ಮೈಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮೈಕಾಂತಿ ಕೂಡ ಹಚ್ಚುವುದು.
3. ಮೊಡವೆ
ಮೊಡವೆಯನ್ನು ಹೋಗಲಾಡಿಸುವ ಸಾಮರ್ಥ್ಯ ಈ ಅರಿಶಿಣಕ್ಕೆ ಇದೆ. ಹದಿಹರೆಯದವರು ಇದನ್ನು ಹಚ್ಚುವುದರಿಂದ ಮೊಡವೆ ಬರುವುದನ್ನು ತಡೆಗಟ್ಟಬಹುದು.
4. ತ್ವಚೆ ಅಲರ್ಜಿಗೆ
ಅರಿಶಿಣ ಪುಡಿಯನ್ನು ತೆಂಗಿನೆಣ್ಣೆ ಮಿಶ್ರ ಮಾಡಿ ಹಚ್ಚಿದರೆ ತ್ವಚೆ ತುರಿಕೆ, ದೇಹದ ದುರ್ವಾಸೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
5. ಮುಖದಲ್ಲಿರುವ ಕೂದಲನ್ನು ಹೋಗಲಾಡಿಸಲು
ಹೆಣ್ಣು ಮಕ್ಕಳ ಮುಖದಲ್ಲಿ ಕೂದಲಿದ್ದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಇದನ್ನು ಹಚ್ಚುವುದರಿಂದ ಮುಖದಲ್ಲಿರುವ ಕೂದಲನ್ನು ಸ್ವಾಭಾವಿಕವಾಗಿ ಹೋಗಲಾಡಿಸಬಹುದು.



Click it and Unblock the Notifications