Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ತ್ವಚೆ ಸೌಂದರ್ಯದ ರಕ್ಷಕ-ಕಸ್ತೂರಿ ಅರಿಶಿಣ
ಮುಖದಲ್ಲಿ ಮೊಡವೆ, ಅಲರ್ಜಿ ಉಂಟಾಗಿದೆಯೆಂದು ಹೇಳಿದಾಗ ಮನೆಯಲ್ಲಿ ಅಜ್ಜಿಯಿದ್ದರೆ ಅವರು "ಅರಿಶಿಣ ಹಚ್ಚು, ಕಡಿಮೆಯಾಗುವುದು " ಎಂದು ಹೇಳುವುದು ಸಹಜ. ತ್ವಚೆ ರಕ್ಷಣೆಯಲ್ಲಿ ಅರಿಶಿಣದ ಪಾತ್ರವನ್ನು ನಮ್ಮ ಹಿರಿಯರು ಬಹು ಕಾಲದ ಹಿಂದೆಯೇ ಅರಿತು ಕೊಂಡಿದ್ದಾರೆ. ಸಾರಿಗೆ ಬಳಸುವ ಅರಿಶಿಣಕ್ಕಿಂತ ಕಸ್ತೂರಿ ಅರಿಶಿಣ ಸೌಂದರ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕಸ್ತೂರಿ ಅರಿಶಿಣ ಸಾಮಾನ್ಯವಾಗಿ ಎಲ್ಲರ ತ್ವಚೆಗೆ ಹೊಂದುತ್ತದೆ. ಸಾಮಾನ್ಯ ಅರಿಶಿಣ ಹಚ್ಚಿದರೆ ಕೆಲವರಿಗೆ ಅಲರ್ಜಿ ಉಂಟಾಗುವುದು, ಆದರೆ ಈ ಅರಿಶಿಣದಿಂದ ಅಲರ್ಜಿ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ, ಅಲ್ಲದೆ ಇದನ್ನು ಹಚ್ಚಿ ತೊಳೆದರೆ ಮುಖದಲ್ಲಿ ಅರಿಶಿಣ ಬಣ್ಣ ಕಾಣುವುದಿಲ್ಲ. ಪ್ರತೀದಿನ ಕಸ್ತೂರಿ ಅರಿಶಿಣ ಹಚ್ಚಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

1. ಮುಖದ ಬಿಳುಪು ಹೆಚ್ಚುವುದು
ಕಸ್ತೂರಿ ಅರಿಶಿಣ ಹಚ್ಚುತ್ತಾ ಬಂದರೆ ಮುಖದ ಬಿಳುಪು ಹೆಚ್ಚಿ, ತ್ವಚೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಮುಖಕಾಂತಿ ಹೆಚ್ಚಿಸುವ ಈ ಅರಿಶಿಣದ ಗುಣ ಯಾವ ಕ್ರೀಮ್ ನಲ್ಲೂ ಇಲ್ಲ.
2. ಸನ್ ಟ್ಯಾನ್ ತೆಗೆಯಲು ಸಹಕಾರಿ
ಬಿಸಿಲಿಗೆ ಹೋದರೆ ಸಾಕು ಸನ್ ಟ್ಯಾನ್ ಉಂಟಾಗುತ್ತದೆ. ಕಸ್ತೂರಿ ಅರಿಶಿಣ ಹಚ್ಚುವವರಿಗೆ ಸನ್ ಟ್ಯಾನ್ ನ ಸಮಸ್ಯೆ ಕಾಡುವುದಿಲ್ಲ. ಅರಿಶಿಣವನ್ನು ಇಡೀ ಮೈಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮೈಕಾಂತಿ ಕೂಡ ಹಚ್ಚುವುದು.
3. ಮೊಡವೆ
ಮೊಡವೆಯನ್ನು ಹೋಗಲಾಡಿಸುವ ಸಾಮರ್ಥ್ಯ ಈ ಅರಿಶಿಣಕ್ಕೆ ಇದೆ. ಹದಿಹರೆಯದವರು ಇದನ್ನು ಹಚ್ಚುವುದರಿಂದ ಮೊಡವೆ ಬರುವುದನ್ನು ತಡೆಗಟ್ಟಬಹುದು.
4. ತ್ವಚೆ ಅಲರ್ಜಿಗೆ
ಅರಿಶಿಣ ಪುಡಿಯನ್ನು ತೆಂಗಿನೆಣ್ಣೆ ಮಿಶ್ರ ಮಾಡಿ ಹಚ್ಚಿದರೆ ತ್ವಚೆ ತುರಿಕೆ, ದೇಹದ ದುರ್ವಾಸೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
5. ಮುಖದಲ್ಲಿರುವ ಕೂದಲನ್ನು ಹೋಗಲಾಡಿಸಲು
ಹೆಣ್ಣು ಮಕ್ಕಳ ಮುಖದಲ್ಲಿ ಕೂದಲಿದ್ದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಇದನ್ನು ಹಚ್ಚುವುದರಿಂದ ಮುಖದಲ್ಲಿರುವ ಕೂದಲನ್ನು ಸ್ವಾಭಾವಿಕವಾಗಿ ಹೋಗಲಾಡಿಸಬಹುದು.



Click it and Unblock the Notifications