Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ತ್ವಚೆ ಸೌಂದರ್ಯದ ರಕ್ಷಕ-ಕಸ್ತೂರಿ ಅರಿಶಿಣ
ಮುಖದಲ್ಲಿ ಮೊಡವೆ, ಅಲರ್ಜಿ ಉಂಟಾಗಿದೆಯೆಂದು ಹೇಳಿದಾಗ ಮನೆಯಲ್ಲಿ ಅಜ್ಜಿಯಿದ್ದರೆ ಅವರು "ಅರಿಶಿಣ ಹಚ್ಚು, ಕಡಿಮೆಯಾಗುವುದು " ಎಂದು ಹೇಳುವುದು ಸಹಜ. ತ್ವಚೆ ರಕ್ಷಣೆಯಲ್ಲಿ ಅರಿಶಿಣದ ಪಾತ್ರವನ್ನು ನಮ್ಮ ಹಿರಿಯರು ಬಹು ಕಾಲದ ಹಿಂದೆಯೇ ಅರಿತು ಕೊಂಡಿದ್ದಾರೆ. ಸಾರಿಗೆ ಬಳಸುವ ಅರಿಶಿಣಕ್ಕಿಂತ ಕಸ್ತೂರಿ ಅರಿಶಿಣ ಸೌಂದರ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕಸ್ತೂರಿ ಅರಿಶಿಣ ಸಾಮಾನ್ಯವಾಗಿ ಎಲ್ಲರ ತ್ವಚೆಗೆ ಹೊಂದುತ್ತದೆ. ಸಾಮಾನ್ಯ ಅರಿಶಿಣ ಹಚ್ಚಿದರೆ ಕೆಲವರಿಗೆ ಅಲರ್ಜಿ ಉಂಟಾಗುವುದು, ಆದರೆ ಈ ಅರಿಶಿಣದಿಂದ ಅಲರ್ಜಿ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ, ಅಲ್ಲದೆ ಇದನ್ನು ಹಚ್ಚಿ ತೊಳೆದರೆ ಮುಖದಲ್ಲಿ ಅರಿಶಿಣ ಬಣ್ಣ ಕಾಣುವುದಿಲ್ಲ. ಪ್ರತೀದಿನ ಕಸ್ತೂರಿ ಅರಿಶಿಣ ಹಚ್ಚಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

1. ಮುಖದ ಬಿಳುಪು ಹೆಚ್ಚುವುದು
ಕಸ್ತೂರಿ ಅರಿಶಿಣ ಹಚ್ಚುತ್ತಾ ಬಂದರೆ ಮುಖದ ಬಿಳುಪು ಹೆಚ್ಚಿ, ತ್ವಚೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಮುಖಕಾಂತಿ ಹೆಚ್ಚಿಸುವ ಈ ಅರಿಶಿಣದ ಗುಣ ಯಾವ ಕ್ರೀಮ್ ನಲ್ಲೂ ಇಲ್ಲ.
2. ಸನ್ ಟ್ಯಾನ್ ತೆಗೆಯಲು ಸಹಕಾರಿ
ಬಿಸಿಲಿಗೆ ಹೋದರೆ ಸಾಕು ಸನ್ ಟ್ಯಾನ್ ಉಂಟಾಗುತ್ತದೆ. ಕಸ್ತೂರಿ ಅರಿಶಿಣ ಹಚ್ಚುವವರಿಗೆ ಸನ್ ಟ್ಯಾನ್ ನ ಸಮಸ್ಯೆ ಕಾಡುವುದಿಲ್ಲ. ಅರಿಶಿಣವನ್ನು ಇಡೀ ಮೈಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮೈಕಾಂತಿ ಕೂಡ ಹಚ್ಚುವುದು.
3. ಮೊಡವೆ
ಮೊಡವೆಯನ್ನು ಹೋಗಲಾಡಿಸುವ ಸಾಮರ್ಥ್ಯ ಈ ಅರಿಶಿಣಕ್ಕೆ ಇದೆ. ಹದಿಹರೆಯದವರು ಇದನ್ನು ಹಚ್ಚುವುದರಿಂದ ಮೊಡವೆ ಬರುವುದನ್ನು ತಡೆಗಟ್ಟಬಹುದು.
4. ತ್ವಚೆ ಅಲರ್ಜಿಗೆ
ಅರಿಶಿಣ ಪುಡಿಯನ್ನು ತೆಂಗಿನೆಣ್ಣೆ ಮಿಶ್ರ ಮಾಡಿ ಹಚ್ಚಿದರೆ ತ್ವಚೆ ತುರಿಕೆ, ದೇಹದ ದುರ್ವಾಸೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
5. ಮುಖದಲ್ಲಿರುವ ಕೂದಲನ್ನು ಹೋಗಲಾಡಿಸಲು
ಹೆಣ್ಣು ಮಕ್ಕಳ ಮುಖದಲ್ಲಿ ಕೂದಲಿದ್ದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಇದನ್ನು ಹಚ್ಚುವುದರಿಂದ ಮುಖದಲ್ಲಿರುವ ಕೂದಲನ್ನು ಸ್ವಾಭಾವಿಕವಾಗಿ ಹೋಗಲಾಡಿಸಬಹುದು.



Click it and Unblock the Notifications
