Latest Updates
-
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು!
ನಿರ್ಜೀವ ತ್ವಚೆಗೆ ನವಚೈತನ್ಯ ತುಂಬುವುದು ಹೇಗೆ?

ನಿರ್ಜೀವ ತ್ವಚೆಗೆ ನವಚೈತನ್ಯ ತುಂಬುವುದು ಹೇಗೆ?
* ಬಿಸಿ ನೀರಿನೊಂದಿಗೆ ಎಣ್ಣೆ ಮಸಾಜ್: ಉಗುರು ಬಿಸಿ ನೀರಿನೊಂದಿಗೆ ಯಾವುದಾದರೂ ಹೂವಿನ ಎಣ್ಣೆಯನ್ನು ಬೆರೆಸಿ ಮಸಾಜ್ ಮಾಡಿಕೊಂಡರೆ ಮುಖಕ್ಕೆ ತಕ್ಷಣವೇ ಹೊಳಪು ನೀಡುತ್ತದೆ. ಅಷ್ಟೇ ಅಲ್ಲ, ನಿಮ್ಮ ಮನಸ್ಸನ್ನೂ ತಕ್ಷಣವೇ ರಿಲ್ಯಾಕ್ಸ್ ಗೊಳಿಸುತ್ತದೆ.
* ಕೇಸರಿ ಮತ್ತು ತೆಂಗಿನ ಹಾಲು: ಕೇಸರಿ ಅತಿ ಪ್ರಾಚೀನ ಕಾಲದ ಸೌಂದರ್ಯವರ್ಧಕ. ತೆಂಗಿನ ಹಾಲಿಗೆ ಸ್ವಲ್ಪ ಕೇಸರಿ ಬೆರೆಸಿ 5 ನಿಮಿಷ ಕಾಯಿಸಿ ತಣ್ಣಗಾಗಿ ಸ್ವಲ್ಪ ಗಟ್ಟಿಯಾದ ನಂತರ ಹಚ್ಚಿಕೊಳ್ಳಬಹುದು.
* ಸೌತೆಕಾಯಿ, ಕಲ್ಲಂಗಡಿ ಮತ್ತು ಕೆನೆ: ಕೆಲವು ಬಾರಿ ಉಷ್ಣಾಂಶ ತ್ವಚೆಯಲ್ಲಿ ಉಂಟಾಗಿ ಮುಖ ನಿರ್ಜೀವದಂತೆ ಕಾಣುತ್ತದೆ. ಆದ್ದರಿಂದ ತ್ವಚೆಯಿಂದ ಉಷ್ಣಾಂಶದ ಅಂಶವನ್ನು ತೆಗೆಯಲು ಸೌತೆಕಾಯಿ, ಕಲ್ಲಂಗಡಿ ಮತ್ತು ಕೆನೆಯನ್ನು ಬೆರೆಸಿ ಹಚ್ಚಿಕೊಂಡು 10 ನಿಮಿಷ ಬಿಟ್ಟು ತೊಳೆದುಕೊಳ್ಳಬಹುದು.
* ಬಾಳೆಹಣ್ಣು, ಜೇನಿನ ಪ್ಯಾಕ್: ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಿದೆ. ಇದು ತ್ವಚೆಯಲ್ಲಿ ನೀರಿನಂಶ ಹೆಚ್ಚಿಸುತ್ತದೆ. ಬಾಳೆಹಣ್ಣನ್ನು ಎರಡು ಚಮಚ ಜೇನಿನೊಂದಿಗೆ ಬೆರೆಸಿ ಬಳಲಿದ ಮುಖಕ್ಕೆ ಹಚ್ಚಿಕೊಂಡರೆ ಚೈತನ್ಯ ತುಂಬುತ್ತದೆ.
* ಆಲೂಗಡ್ಡೆ, ನಿಂಬೆ ಮತ್ತು ಮೊಸರು: ಒಂದು ಚಮಚ ಆಲೂಗಡ್ಡೆ ರಸಕ್ಕೆ ನಿಂಬೆರಸ ಹಿಂಡಿ ಒಂದು ಚಮಚ ಮೊಸರನ್ನು ಬೆರೆಸಿ ಹಚ್ಚಿಕೊಂಡರೆ ತ್ವಚೆ ತಾಜಾ ಆಗಿರುತ್ತದೆ ಮತ್ತು ಬೆಳ್ಳಗಾಗುತ್ತದೆ.



Click it and Unblock the Notifications











