Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಕೂದಲನ್ನು ಸಮೃದ್ಧಿಗೊಳಿಸುವ ಹಳ್ಳಿಗಾಡಿನ ಶಾಂಪೂ!
ಕೂದಲ ಉದುರುವಿಕೆ ಒಂದು ಸಾಮಾನ್ಯ ಕ್ರಿಯೆಯಾಗಿದೆ. ಪ್ರತಿದಿನ ನಾವು ಕೆಲವು ಕೂದಲುಗಳನ್ನು ಕಳೆದುಕೊಂಡರೂ ಆ ಸ್ಥಾನದಲ್ಲಿ ಹೊಸ ಕೂದಲು ಹುಟ್ಟುವುದರಿಂದ ಕೂದಲು ಸೊಂಪಾಗಿಯೇ ಇರುತ್ತದೆ. ಒಂದು ವೇಳೆ ಹೊಸ ಕೂದಲು ಹುಟ್ಟದೇ ಇದ್ದಲ್ಲಿ ಮಾತ್ರ ಬಕ್ಕತಲೆಗೆ ಆಹ್ವಾನ ನೀಡಿದಂತಾಗುತ್ತದೆ. ಆದರೆ ಸಾಮಾನ್ಯ ಸಂಖ್ಯೆಗಿಂತಲೂ ಹೆಚ್ಚಿನ ಕೂದಲುಗಳು ಉದುರಿದರೆ ಮಾತ್ರ ಇದಕ್ಕೆ ಹಲವು ಕಾರಣಗಳಿರಬಹುದು.
ಊಟದಲ್ಲಿ ಅತಿಹೆಚ್ಚು ಉಪ್ಪು, ಗಡಸು ನೀರಿನಿಂದ ಸ್ನಾನ ಮಾಡಿಕೊಳ್ಳುವುದು, ಪ್ರಬಲ ರಾಸಾಯನಿಕಗಳಿರುವ ಶಾಂಪೂ ಬಳಸುವುದು, ಪ್ರಬಲ ಸೋಪು ಉಪಯೋಗಿಸುವುದು, ತಪ್ಪಾ ಆಯ್ಕೆಯ ಎಣ್ಣೆ, ಸೌಂದರ್ಯ ಪ್ರಸಾಧನಗಳು, ಅನಾರೋಗ್ಯಕರ ಆಹಾರ ವಿಧಾನ ಮೊದಲಾದವು ಕೂದಲು ಉದುರುವುದನ್ನು ಹೆಚ್ಚಿಸಬಹುದು. ಮನೆಯಲ್ಲಿಯೇ ತಯಾರಿಸಿದ ಶಾಂಪೂಗಳು ಸುರಕ್ಷಿತವಾಗಿದ್ದು ಕೂದಲು ಉದುರುವುದನ್ನು ನಿಲ್ಲಿಸಿ ಹೊಸಕೂದಲು ಹುಟ್ಟಲು ನೆರವಾಗುತ್ತದೆ. ಪರಿಣಾಮವಾಗಿ ಕೂದಲು ದಟ್ಟವಾಗತೊಡಗುತ್ತದೆ. ಸೊಂಪಾದ ಕೂದಲಿಗಾಗಿ ತಯಾರಿಸಿ- ನೈಸರ್ಗಿಕ ಹೇರ್ ಮಾಸ್ಕ್
ಉದಾಹರಣೆಗೆ ಲೋಳೆಸರದ ಶಾಂಪೂ ಬಳಕೆಯಿಂದ ಕೂದಲು ಉದುರುವುದು ನಿಲ್ಲುವುದು ಮಾತ್ರವಲ್ಲದೇ ಕೂದಲಿಗೆ ಹೊಳಪು ಸಹಾ ನೀಡುತ್ತದೆ. ಸೀಗೇಕಾಯಿ ಸಹಾ ಉತ್ತಮ ಆಯ್ಕೆಯಾಗಿದ್ದು ತಲೆಹೊಟ್ಟನ್ನು ನಿವಾರಿಸಲು ನೆರವಾಗುತ್ತದೆ. ಹಲವು ತಲೆಸ್ನಾನದ ಸೋಪುಗಳೂ ಕೂದಲ ಉದುರುವಿಕೆಯನ್ನು ನಿಲ್ಲಿಸುತ್ತವೆ. ಕೆಳಗಿನ ಸ್ಲೈಡ್ ಶೋ ಮೂಲಕ ಕೆಲವು ಉಪಯುಕ್ತ ವಿಧಾನಗಳನ್ನು ಸೂಚಿಸಲಾಗಿದೆ. ಸಾಸಿವೆ ಎಣ್ಣೆ: ಅಡುಗೆಗೂ ಸೈ, ಕೂದಲಿನ ಸಮಸ್ಯೆಗೂ ಜೈ!

ಸೀಗೆಪುಡಿ
ಸೀಗೆಪುಡಿಯನ್ನು ನೇರವಾಗಿ ಅಥವಾ ಸೌಮ್ಯ ಶಾಂಪೂವಿನೊಂದಿಗೆ ಮಿಶ್ರಣ ಮಾಡಿ ಉಪಯೋಗಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಒಂದು ವೇಳೆ ತಲೆಹೊಟ್ಟಿದ್ದರೆ ಸೀಗೆಪುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಕೂದಲ ಬುಡಕ್ಕೆ ದಪ್ಪನಾಗಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಅಂಟುವಾಳ ಕಾಯಿ ಉಪಯೋಗಿಸಿ
ಅಂಟುವಾಳ ಅಥವಾ (Soap Nut, reetha) ಎಂದು ಕರೆಯಲ್ಪಡುವ ಕಾಯಿಗಳು ಒಣಗಿದ ಪುಡಿಯ ರೂಪದಲ್ಲಿ ಅಥವ ಕಾಯಿಯ ರೂಪದಲ್ಲಿ ದೊರಕುತ್ತದೆ. ಬಳಸಬಹುದು. ಪುಡಿಯಾಗಿದ್ದರೆ ನೀರಿನಲ್ಲಿ ನೆನೆಸಿ ಈಗತಾನೇ ಒದ್ದೆಯಾಗಿಸಿದ ಕೂದಲಿಗೆ ಹಚ್ಚಿ ಕೊಂಚ ಕಾಲ ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಕಾಯಿಯಾಗಿದ್ದರೆ ಪುಡಿಮಾಡಿ ಕೊಂಚಕಾಲ ನೆನೆಸಿಟ್ಟು ಬಳಿಕ ಕೂದಲಿಗೆ ಹಚ್ಚಿ ಕೊಂಚ ಕಾಲ ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. . ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ.

ಲೋಳೆಸರದ ದ್ರವ
ಈಗತಾನೇ ಕೊಯ್ದ ಲೋಳೆಸರದ ಕೋಡೊಂದನ್ನು ನೇರವಾಗಿ ಅದರ ದ್ರವ ಕೂದಲ ಬುಡಕ್ಕೆ ತಲುಪುವಂತೆ ನಯವಾಗಿ ಉಚ್ಚಿ. ಕೋಡನ್ನು ಒತ್ತಿ ದ್ರವ ಒಸರುವಂತೆ ಮಾಡಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ದಿನಂಪ್ರತಿ ಉಪಯೋಗಿಸಿದರೆ ಒಂದೇ ವಾರದಲ್ಲಿ ಪರಿಣಾಮ ಕಂಡುಬರುತ್ತದೆ.

ನೆಲ್ಲಿಕಾಯಿ
ಒಂದು ಅಥವಾ ಎರದು ನೆಲ್ಲಿಕಾಯಿಗಳ ಬೀಜ ತೆಗೆದು ನುಣ್ಣಗೆ ಅರೆಯಿರಿ. ಇದಕ್ಕೆ ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಇದರಲ್ಲಿರುವ ಪ್ರೋಟೀನು ಮತ್ತು ವಿಟಮಿನ್ ಸಿ ಕೂದಲು ಉದುರುವುದನ್ನು ತಡೆಯುತ್ತವೆ. ಜೊತೆಗೇ ಪರಿಮಳದಿಂದಲೂ ಕೂಡಿರುತ್ತದೆ.

ಅಡುಗೆ ಸೋಡಾ
ಮೂರು ದೊಡ್ಡಚಮಚ ಅಡುಗೆ ಸೋಡಾ ವನ್ನು ಕೊಂಚ ನೀರಿನೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ದ್ರವವನ್ನು ಈಗತಾನೇ ತೊಳೆದ ಕೂದಲಿಗೆ ಹಚ್ಚಿ ಕೊಂಚಕಾಲದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದೇ ವಾರದಲ್ಲಿ ಇದರ ಪರಿಣಾಮವನ್ನು ಪಡೆಯಬಹುದು.



Click it and Unblock the Notifications