Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅಕಾಲಿಕ ನೆರಿಗೆ ತಡೆಗಟ್ಟಲು 6 ಸೂಪರ್ ಟಿಪ್ಸ್
ಅಕಾಲಿಕ ನೆರೆಗೂದಲಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ನೂರಕ್ಕೆ 80ರಷ್ಟು ಜನರಲ್ಲಿ ಕಂಡು ಬರುತ್ತಿದೆ. ಕೆಲವರಿಗಂತೂ ಬಾಲ್ಯದಲ್ಲಿಯೇ ಕೂದಲು ಬೆಳ್ಳಗಾಗುವುದು. ಕೆಮಿಕಲ್ ಇರುವ ಶ್ಯಾಂಪೂಗಳ ಬಳಕೆ, ಪೋಷಕಾಂಶದ ಕೊರತೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು ಈ ಎಲ್ಲಾ ಕಾರಣಗಳಿಂದ ಕೂದಲು ಬೆಳ್ಳಗಾಗುವುದು.
ಚಿಕ್ಕ ಪ್ರಾಯದಲ್ಲಿ ಕೂದಲು ಬೆಳ್ಳಗಾದರೆ ಮುಜುಗರ ಉಂಟಾಗುವುದು. ಹಾಗಂತ ಅದನ್ನು ಮರೆ ಮಾಚಲು ಕೂದಲಿಗೆ ಡೈ ಮಾಡುವುದು ಅಥವಾ ಬಣ್ಣ ಹಚ್ಚುವುದು ಈ ರೀತಿಯ ತಪ್ಪುಗಳನ್ನು ಮಾತ್ರ ಮಾಡಬೇಡಿ. ಏಕೆಂದರೆ ಈ ರೀತಿಯೆಲ್ಲಾ ಮಾಡಿದರೆ ಕೂದಲು ಮತ್ತಷ್ಟು ಬೆಳ್ಳಗಾಗುವುದು.
ಅಕಾಲಿಕ ನೆರಿಗೆಯನ್ನು ತಡೆಗಟ್ಟಿ, ಕೂದಲನ್ನು ಕಪ್ಪಗಾಗಿಸಲು ಈ ಕೆಳಗಿನ ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು:

ಮದರಂಗಿಯಿಂದ ಹೇರ್ ಪ್ಯಾಕ್
ಟೀ ಡಿಕಾಷನ್ ಗೆ ಮೆಹಂದಿ ಪುಡಿಯನ್ನು ಹಾಕಿ ಕಲೆಸಿ, ಅದಕ್ಕೆ ಸ್ವಲ್ಪ ರಸ ಹಿಂಡಿ 2-3 ಗಂಟೆಗಳ ಕಾಲ ಇಡಿ( ಒಂದು ರಾತ್ರಿ ಇಟ್ಟರೆ ಮತ್ತಷ್ಟು ಒಳ್ಳೆಯದು). ನಂತರ ಈ ಮೆಹಂದಿಯನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ತಲೆ ತೊಳೆಯಿರಿ. ತಲೆಯನ್ನು ಒಣಗಿಸಿದ ಬಳಿಕ ತಲೆಗೆ ಎಣ್ಣೆ ಹಚ್ಚಿ. ಈ ರೀತಿ ಮಾಡಿದರೆ ಕೂದಲು ಕಪ್ಪಾಗಿ ಕಾಣುವುದು.

ಬ್ಲ್ಯಾಕ್ ಟೀ
ಬ್ಲ್ಯಾಕ್ ಟೀ ಮಾಡಿ ಅದನ್ನು ಕೂದಲಿಗೆ ಹಚ್ಚಿ 1-2 ಗಂಟೆ ಇಟ್ಟು ನಂತರ ತೊಳೆಯಿರಿ. ಇದನ್ನು ಹಚ್ಚಿ ತಲೆ ತೊಳೆಯುವಾಗ ಶ್ಯಾಂಪೂ ಬಳಸಬೇಡಿ. ಈ ರೀತಿ ಮಾಡಿದರೆ ಕೂದಲು ಕಪ್ಪಗಾಗುವುದು, ಇತರ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ಕರಿಬೇವಿನ ಎಲೆ
ಕರಿಬೇವನ್ನು ಸಾರಿಗೆ ಹಾಕಿ ತಿನ್ನಿ. ಕರಿಬೇವನ್ನು ಎಣ್ಣೆಗೆ ಹಾಕಿ ಕಾಯಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುತ್ತಾ ಬಂದರೆ ಕೂದಲಿನ ಬುಡ ಸ್ಟ್ರಾಂಗ್ ಆಗುವುದು, ಅಕಾಲಿಕ ನೆರಿಗೆ ಕೂಡ ಉಂಟಾಗುವುದಿಲ್ಲ.

ಹೇರ್ ಆಯಿಲ್
ತೆಂಗಿನೆಣ್ಣೆಗೆ ಕರಿಬೇವಿನ ಎಲೆ ಮತ್ತು ನೆಲ್ಲಿಕಾಯಿ ಹಾಕಿ ಕುದಿಸಿ, ಅದರಿಂದ ಎಣ್ಣೆ ತಯಾರಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುತ್ತಾ ಬನ್ನಿ. ಈ ರೀತಿ ಮಾಡುತ್ತಾ ಬಂದರೆ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ದೊಡ್ಡ ಕೀರೆ ಸೊಪ್ಪು(ಅರಿವೆ ಸೊಪ್ಪು)
ಅರಿವೆ ಸೊಪ್ಪನ್ನು ಕೊಡಗಿನಲ್ಲಿ ಕೀರೆ ಸೊಪ್ಪು ಎಂದು ಕರೆಯುತ್ತಾರೆ. ಕೆಂಪು ಕೀರೆಯ ಸೊಪ್ಪು ಅಕಾಲಿಕ ನೆರಿಗೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಇದರ ರಸವನ್ನು ಹಿಂಡಿ ತಲೆಗೆ ಹಚ್ಚಿದರೆ ಒಳ್ಳೆಯದು.

ಆಮ್ಲ ಹೇರ್ ಪ್ಯಾಕ್(ನೆಲ್ಲಿಕಾಯಿಯ ಪುಡಿ)
ನೆಲ್ಲಿ ಕಾಯಿಯ ಪುಡಿಯ ಹೇರ್ ಪ್ಯಾಕ್ ದೊರೆಯುತ್ತದೆ. ನೆಲ್ಲಿಕಾಯಿ ಪುಡಿಯನ್ನು ಮೊಸರಿಗೆ ಹಾಕಿ ಕಲೆಸಿ ಕೂದಲಿಗೆ ಹಚ್ಚಿದರೆ ಅಕಾಲಿಕ ನೆರಿಗೆ ಬರುವುದನ್ನು ತಡೆಗಟ್ಟಬಹುದು.



Click it and Unblock the Notifications
