Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅಕಾಲಿಕ ನೆರಿಗೆ ತಡೆಗಟ್ಟಲು 6 ಸೂಪರ್ ಟಿಪ್ಸ್
ಅಕಾಲಿಕ ನೆರೆಗೂದಲಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ನೂರಕ್ಕೆ 80ರಷ್ಟು ಜನರಲ್ಲಿ ಕಂಡು ಬರುತ್ತಿದೆ. ಕೆಲವರಿಗಂತೂ ಬಾಲ್ಯದಲ್ಲಿಯೇ ಕೂದಲು ಬೆಳ್ಳಗಾಗುವುದು. ಕೆಮಿಕಲ್ ಇರುವ ಶ್ಯಾಂಪೂಗಳ ಬಳಕೆ, ಪೋಷಕಾಂಶದ ಕೊರತೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು ಈ ಎಲ್ಲಾ ಕಾರಣಗಳಿಂದ ಕೂದಲು ಬೆಳ್ಳಗಾಗುವುದು.
ಚಿಕ್ಕ ಪ್ರಾಯದಲ್ಲಿ ಕೂದಲು ಬೆಳ್ಳಗಾದರೆ ಮುಜುಗರ ಉಂಟಾಗುವುದು. ಹಾಗಂತ ಅದನ್ನು ಮರೆ ಮಾಚಲು ಕೂದಲಿಗೆ ಡೈ ಮಾಡುವುದು ಅಥವಾ ಬಣ್ಣ ಹಚ್ಚುವುದು ಈ ರೀತಿಯ ತಪ್ಪುಗಳನ್ನು ಮಾತ್ರ ಮಾಡಬೇಡಿ. ಏಕೆಂದರೆ ಈ ರೀತಿಯೆಲ್ಲಾ ಮಾಡಿದರೆ ಕೂದಲು ಮತ್ತಷ್ಟು ಬೆಳ್ಳಗಾಗುವುದು.
ಅಕಾಲಿಕ ನೆರಿಗೆಯನ್ನು ತಡೆಗಟ್ಟಿ, ಕೂದಲನ್ನು ಕಪ್ಪಗಾಗಿಸಲು ಈ ಕೆಳಗಿನ ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು:

ಮದರಂಗಿಯಿಂದ ಹೇರ್ ಪ್ಯಾಕ್
ಟೀ ಡಿಕಾಷನ್ ಗೆ ಮೆಹಂದಿ ಪುಡಿಯನ್ನು ಹಾಕಿ ಕಲೆಸಿ, ಅದಕ್ಕೆ ಸ್ವಲ್ಪ ರಸ ಹಿಂಡಿ 2-3 ಗಂಟೆಗಳ ಕಾಲ ಇಡಿ( ಒಂದು ರಾತ್ರಿ ಇಟ್ಟರೆ ಮತ್ತಷ್ಟು ಒಳ್ಳೆಯದು). ನಂತರ ಈ ಮೆಹಂದಿಯನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ತಲೆ ತೊಳೆಯಿರಿ. ತಲೆಯನ್ನು ಒಣಗಿಸಿದ ಬಳಿಕ ತಲೆಗೆ ಎಣ್ಣೆ ಹಚ್ಚಿ. ಈ ರೀತಿ ಮಾಡಿದರೆ ಕೂದಲು ಕಪ್ಪಾಗಿ ಕಾಣುವುದು.

ಬ್ಲ್ಯಾಕ್ ಟೀ
ಬ್ಲ್ಯಾಕ್ ಟೀ ಮಾಡಿ ಅದನ್ನು ಕೂದಲಿಗೆ ಹಚ್ಚಿ 1-2 ಗಂಟೆ ಇಟ್ಟು ನಂತರ ತೊಳೆಯಿರಿ. ಇದನ್ನು ಹಚ್ಚಿ ತಲೆ ತೊಳೆಯುವಾಗ ಶ್ಯಾಂಪೂ ಬಳಸಬೇಡಿ. ಈ ರೀತಿ ಮಾಡಿದರೆ ಕೂದಲು ಕಪ್ಪಗಾಗುವುದು, ಇತರ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ಕರಿಬೇವಿನ ಎಲೆ
ಕರಿಬೇವನ್ನು ಸಾರಿಗೆ ಹಾಕಿ ತಿನ್ನಿ. ಕರಿಬೇವನ್ನು ಎಣ್ಣೆಗೆ ಹಾಕಿ ಕಾಯಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುತ್ತಾ ಬಂದರೆ ಕೂದಲಿನ ಬುಡ ಸ್ಟ್ರಾಂಗ್ ಆಗುವುದು, ಅಕಾಲಿಕ ನೆರಿಗೆ ಕೂಡ ಉಂಟಾಗುವುದಿಲ್ಲ.

ಹೇರ್ ಆಯಿಲ್
ತೆಂಗಿನೆಣ್ಣೆಗೆ ಕರಿಬೇವಿನ ಎಲೆ ಮತ್ತು ನೆಲ್ಲಿಕಾಯಿ ಹಾಕಿ ಕುದಿಸಿ, ಅದರಿಂದ ಎಣ್ಣೆ ತಯಾರಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುತ್ತಾ ಬನ್ನಿ. ಈ ರೀತಿ ಮಾಡುತ್ತಾ ಬಂದರೆ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ದೊಡ್ಡ ಕೀರೆ ಸೊಪ್ಪು(ಅರಿವೆ ಸೊಪ್ಪು)
ಅರಿವೆ ಸೊಪ್ಪನ್ನು ಕೊಡಗಿನಲ್ಲಿ ಕೀರೆ ಸೊಪ್ಪು ಎಂದು ಕರೆಯುತ್ತಾರೆ. ಕೆಂಪು ಕೀರೆಯ ಸೊಪ್ಪು ಅಕಾಲಿಕ ನೆರಿಗೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಇದರ ರಸವನ್ನು ಹಿಂಡಿ ತಲೆಗೆ ಹಚ್ಚಿದರೆ ಒಳ್ಳೆಯದು.

ಆಮ್ಲ ಹೇರ್ ಪ್ಯಾಕ್(ನೆಲ್ಲಿಕಾಯಿಯ ಪುಡಿ)
ನೆಲ್ಲಿ ಕಾಯಿಯ ಪುಡಿಯ ಹೇರ್ ಪ್ಯಾಕ್ ದೊರೆಯುತ್ತದೆ. ನೆಲ್ಲಿಕಾಯಿ ಪುಡಿಯನ್ನು ಮೊಸರಿಗೆ ಹಾಕಿ ಕಲೆಸಿ ಕೂದಲಿಗೆ ಹಚ್ಚಿದರೆ ಅಕಾಲಿಕ ನೆರಿಗೆ ಬರುವುದನ್ನು ತಡೆಗಟ್ಟಬಹುದು.



Click it and Unblock the Notifications