Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ! -
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ: ಸಂಗಾತಿಯೊಂದಿಗೆ ಟೆನ್ಷನ್ ಇಲ್ಲದೆ ಪ್ರಯಾಣಿಸುವುದು ಹೇಗೆ? -
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್: ಭಾರಿ ಮಳೆ ಮತ್ತು ಭೂಕುಸಿತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ದೆಹಲಿಯಲ್ಲಿ ಯೆಲ್ಲೋ ಅಲರ್ಟ್: ಮಳೆಗಾಲದಲ್ಲಿ ಕಚೇರಿಗೆ ಹೋಗುವವರು ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ -
ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್: ಹೊಸ ಫೋಲ್ಡಬಲ್ ಫೋನ್ಗಳ ಲಾಂಚ್ಗೆ ಕೌಂಟ್ಡೌನ್, ನೀವು ರೆಡಿನಾ? -
ಅಂತರಾಷ್ಟ್ರೀಯ ಚೆಸ್ ದಿನ: ಆಟದ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್!
ಅಕಾಲಿಕ ನೆರಿಗೆ ತಡೆಗಟ್ಟಲು 6 ಸೂಪರ್ ಟಿಪ್ಸ್
ಅಕಾಲಿಕ ನೆರೆಗೂದಲಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ನೂರಕ್ಕೆ 80ರಷ್ಟು ಜನರಲ್ಲಿ ಕಂಡು ಬರುತ್ತಿದೆ. ಕೆಲವರಿಗಂತೂ ಬಾಲ್ಯದಲ್ಲಿಯೇ ಕೂದಲು ಬೆಳ್ಳಗಾಗುವುದು. ಕೆಮಿಕಲ್ ಇರುವ ಶ್ಯಾಂಪೂಗಳ ಬಳಕೆ, ಪೋಷಕಾಂಶದ ಕೊರತೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು ಈ ಎಲ್ಲಾ ಕಾರಣಗಳಿಂದ ಕೂದಲು ಬೆಳ್ಳಗಾಗುವುದು.
ಚಿಕ್ಕ ಪ್ರಾಯದಲ್ಲಿ ಕೂದಲು ಬೆಳ್ಳಗಾದರೆ ಮುಜುಗರ ಉಂಟಾಗುವುದು. ಹಾಗಂತ ಅದನ್ನು ಮರೆ ಮಾಚಲು ಕೂದಲಿಗೆ ಡೈ ಮಾಡುವುದು ಅಥವಾ ಬಣ್ಣ ಹಚ್ಚುವುದು ಈ ರೀತಿಯ ತಪ್ಪುಗಳನ್ನು ಮಾತ್ರ ಮಾಡಬೇಡಿ. ಏಕೆಂದರೆ ಈ ರೀತಿಯೆಲ್ಲಾ ಮಾಡಿದರೆ ಕೂದಲು ಮತ್ತಷ್ಟು ಬೆಳ್ಳಗಾಗುವುದು.
ಅಕಾಲಿಕ ನೆರಿಗೆಯನ್ನು ತಡೆಗಟ್ಟಿ, ಕೂದಲನ್ನು ಕಪ್ಪಗಾಗಿಸಲು ಈ ಕೆಳಗಿನ ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು:

ಮದರಂಗಿಯಿಂದ ಹೇರ್ ಪ್ಯಾಕ್
ಟೀ ಡಿಕಾಷನ್ ಗೆ ಮೆಹಂದಿ ಪುಡಿಯನ್ನು ಹಾಕಿ ಕಲೆಸಿ, ಅದಕ್ಕೆ ಸ್ವಲ್ಪ ರಸ ಹಿಂಡಿ 2-3 ಗಂಟೆಗಳ ಕಾಲ ಇಡಿ( ಒಂದು ರಾತ್ರಿ ಇಟ್ಟರೆ ಮತ್ತಷ್ಟು ಒಳ್ಳೆಯದು). ನಂತರ ಈ ಮೆಹಂದಿಯನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ತಲೆ ತೊಳೆಯಿರಿ. ತಲೆಯನ್ನು ಒಣಗಿಸಿದ ಬಳಿಕ ತಲೆಗೆ ಎಣ್ಣೆ ಹಚ್ಚಿ. ಈ ರೀತಿ ಮಾಡಿದರೆ ಕೂದಲು ಕಪ್ಪಾಗಿ ಕಾಣುವುದು.

ಬ್ಲ್ಯಾಕ್ ಟೀ
ಬ್ಲ್ಯಾಕ್ ಟೀ ಮಾಡಿ ಅದನ್ನು ಕೂದಲಿಗೆ ಹಚ್ಚಿ 1-2 ಗಂಟೆ ಇಟ್ಟು ನಂತರ ತೊಳೆಯಿರಿ. ಇದನ್ನು ಹಚ್ಚಿ ತಲೆ ತೊಳೆಯುವಾಗ ಶ್ಯಾಂಪೂ ಬಳಸಬೇಡಿ. ಈ ರೀತಿ ಮಾಡಿದರೆ ಕೂದಲು ಕಪ್ಪಗಾಗುವುದು, ಇತರ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ಕರಿಬೇವಿನ ಎಲೆ
ಕರಿಬೇವನ್ನು ಸಾರಿಗೆ ಹಾಕಿ ತಿನ್ನಿ. ಕರಿಬೇವನ್ನು ಎಣ್ಣೆಗೆ ಹಾಕಿ ಕಾಯಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುತ್ತಾ ಬಂದರೆ ಕೂದಲಿನ ಬುಡ ಸ್ಟ್ರಾಂಗ್ ಆಗುವುದು, ಅಕಾಲಿಕ ನೆರಿಗೆ ಕೂಡ ಉಂಟಾಗುವುದಿಲ್ಲ.

ಹೇರ್ ಆಯಿಲ್
ತೆಂಗಿನೆಣ್ಣೆಗೆ ಕರಿಬೇವಿನ ಎಲೆ ಮತ್ತು ನೆಲ್ಲಿಕಾಯಿ ಹಾಕಿ ಕುದಿಸಿ, ಅದರಿಂದ ಎಣ್ಣೆ ತಯಾರಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುತ್ತಾ ಬನ್ನಿ. ಈ ರೀತಿ ಮಾಡುತ್ತಾ ಬಂದರೆ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ದೊಡ್ಡ ಕೀರೆ ಸೊಪ್ಪು(ಅರಿವೆ ಸೊಪ್ಪು)
ಅರಿವೆ ಸೊಪ್ಪನ್ನು ಕೊಡಗಿನಲ್ಲಿ ಕೀರೆ ಸೊಪ್ಪು ಎಂದು ಕರೆಯುತ್ತಾರೆ. ಕೆಂಪು ಕೀರೆಯ ಸೊಪ್ಪು ಅಕಾಲಿಕ ನೆರಿಗೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಇದರ ರಸವನ್ನು ಹಿಂಡಿ ತಲೆಗೆ ಹಚ್ಚಿದರೆ ಒಳ್ಳೆಯದು.

ಆಮ್ಲ ಹೇರ್ ಪ್ಯಾಕ್(ನೆಲ್ಲಿಕಾಯಿಯ ಪುಡಿ)
ನೆಲ್ಲಿ ಕಾಯಿಯ ಪುಡಿಯ ಹೇರ್ ಪ್ಯಾಕ್ ದೊರೆಯುತ್ತದೆ. ನೆಲ್ಲಿಕಾಯಿ ಪುಡಿಯನ್ನು ಮೊಸರಿಗೆ ಹಾಕಿ ಕಲೆಸಿ ಕೂದಲಿಗೆ ಹಚ್ಚಿದರೆ ಅಕಾಲಿಕ ನೆರಿಗೆ ಬರುವುದನ್ನು ತಡೆಗಟ್ಟಬಹುದು.



Click it and Unblock the Notifications