Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಹರೆಯದಲ್ಲಿ ಮುಪ್ಪಾಗಿಸುವ ನೆರೆ ಕೂದಲಿಗೆ ಸುಲಭ ಪರಿಹಾರ

ಅಕಾಲಿಕ ನೆರೆ ಕೂದಲು ಬರಲು ಕಾರಣ:
ಕೂದಲಿನ ಬುಡದಲ್ಲಿ ಮೆಲಾನಿನ್ ಉತ್ಪತ್ತಿಯಾಗುತ್ತದೆ. ಕೂದಲಿನ ಬಣ್ಣದಲ್ಲಿ ವ್ಯತ್ಯಾಸ ಉಂಟಾಗಲು ಮೆಲಾಲಿನ್ ಕಾರಣ. ಇದರ ಉತ್ಪತ್ತಿ ಕಡಿಮೆಯಾದಂತೆ ಕೂದಲು ಬಿಳಿ ಬಣ್ಣವನ್ನು ಹೊಂದುವುದು.
ನೈಸರ್ಗಿಕ ಡೈ ಬಳಕೆ ಸೂಕ್ತ:
ರಾಸಾಯನಿಕಗಳನ್ನು ಬಳಸಿ ತಯಾರಿಸಿರುವ ಹೇರ್ ಡೈ ಬಳಸುವುದಕ್ಕಿಂತ ನೈಸರ್ಗಿಕ ಡೈ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ರಾಸಾಯನಿಕಗಳನ್ನು ಬಳಸಿ ತಯಾರಿಸದ ಹೇರ್ ಡೈ ಬಳಸಿದರೆ ತಲೆಬುಡದಲ್ಲಿ ತುರಿಕೆ, ಕೂದಲು ಕವಲೊಡೆಯುವುದು, ಹೊಟ್ಟಿನ ಸಮಸ್ಯೆ ಉಂಟಾಗುತ್ತದೆ.
ನೈಸರ್ಗಿಕ ಡೈ ಬಳಸುವ ವಿಧಾನ:
1. ಮೆಹಂದಿ ಎಲೆಯನ್ನು ಸೌತೆಕಾಯಿ ಜೊತೆ ಅರೆದು ತಲೆಗೆ ಹಚ್ಚಿದರೆ ನೆರೆ ಕೂದಲು ಮಾಯವಾಗುವುದು. ಇದರಿಂದ ಕೂದಲು ಮತ್ತಷ್ಟು ಆರೋಗ್ಯಕರವಾಗಿ ಬೆಳೆಯುತ್ತದೆ.
2. ಟೀ ಜೊತೆ ಮೆಹಂದಿ ಎಲೆಯನ್ನು ಹಾಕಿ ಕುದಿಸಿ ಅದು ಆರಿದ ನಂತರ ಆ ಮಿಶ್ರಣವನ್ನು ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಈ ರೀತಿ ಮಾಡುವಾಗ ಅಂಗಡಿಗಳಲ್ಲಿ ದೊರೆಯುವ ಮೆಹಂದಿ ಪುಡಿಗಿಂತ ಮನೆಯಲ್ಲಿಯೆ ದೊರೆಯುವ ಮೆಹಂದಿ ಎಲೆಯನ್ನು ಬಳಸುವುದು ಸೂಕ್ತ.
3. ಹರ್ಬಲ್ ಬ್ಯುಟಿ ಸಲೂನ್ ಗಳಲ್ಲಿ ಸಿಗುವ ಹೇರ್ ಡೈ ಕೂಡ ಹಚ್ಚಿ ಕೊಳ್ಳಬಹುದು. ಈ ಡೈ ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ಬಳಿಕ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು ಕಪ್ಪಾಗುವುದರ ಜೊತೆಗೆ ತುಂಬಾ ಕಾಲದವರೆಗೆ ಹೊಳಪನ್ನು ಹೊಂದಿರುತ್ತದೆ.
4. ಮಕ್ಕಳಲ್ಲಿ ಅಕಾಲಿಕ ನೆರೆಯನ್ನು ತಡೆಗಟ್ಟಲು ಹಾಗಲಕಾಯಿ, ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಬೀಟ್ ರೂಟ್ ರಸ, ಟೀ ಮತ್ತು ಮೆಹಂದಿ ಬೆರೆಸಿ ಹಚ್ಚಿದರೆ ಕೂದಲು ಕಪ್ಪಾಗುವುದರ ಜೊತೆಗೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ.



Click it and Unblock the Notifications