Latest Updates
-
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ!
ಮಳೆಗಾಲದಲ್ಲಿ ಸೌಂದರ್ಯದ ರಕ್ಷಣೆ
ಎಲ್ಲಾ ಕಾಲದಲ್ಲೂ ಒಂದಲ್ಲಾ ಒಂದು ಸೌಂದರ್ಯ ಸಮಸ್ಯೆ ಇದ್ದೇ ಇರುತ್ತದೆ. ಬಿಸಿಲಿನಲ್ಲಿ ಚರ್ಮ ಕಪ್ಪಾದರೆ, ಚಳಿಗಾಲದಲ್ಲಿ ಚರ್ಮ ಒಡೆಯುವ ಸಮಸ್ಯೆ ಕಂಡು ಬರುತ್ತದೆ. ಇನ್ನು ಮಳೆಗಾಲಕ್ಕೆ ಬಂದರೆ ಕೂದಲು ಒಣಗದಿರುವುದು, ಕೆಸರು ಕಜ್ಜಿ, ಚರ್ಮ ತನ್ನ ಕಾಂತಿಯನ್ನು ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ ಮಾತ್ರವಲ್ಲ ಸೌಂದರ್ಯದ ಕಡೆಗೂ ಗಮನವನ್ನು ನೀಡುವುದು ಒಳ್ಳೆಯದು. ಮಳೆಗಾಲದಲ್ಲಿ ಸೌಂದರ್ಯ ಕಾಪಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ಮಳೆಯಲ್ಲಿ ದಿನಾ ತಲೆ ಸ್ನಾನ ಮಾಡುವ ಅವಶ್ಯಕತೆಯಿಲ್ಲ, ವಾರದಲ್ಲಿ 3 ಬಾರಿ ಮಾಡಿದರೆ ಸಾಕು. ತಲೆ ಸ್ನಾನ ಮಾಡಿದ ನಂತರ ಕೂದಲನ್ನು ಚೆನ್ನಾಗಿ ಒಣಗಿಸಬೇಕು. ಆದರೆ ಕೂದಲು ಒಣಗಲು ಪ್ಯಾನ್ ಅಥವಾ ಹೇರ್ ಡ್ರೈಯರ್ ಬಳಸಬೇಡಿ. ಕೂದಲನ್ನು ಹಾಗೇ ಒಣಗಲು ಬಿಡಬೇಕು. ಮಳೆಯಲ್ಲಿ ತಲೆ ನೆನೆದರೆ ತಲೆಯನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು.
2. ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಬೇಕು. ಈ ರೀತಿ ಮಾಡಿದರೆ ಕೂದಲು ಕವಲೊಡೆಯುವುದಿಲ್ಲ. ಕೂದಲಿನ ಬುಡ ಕವಲೊಡೆದಿದ್ದರೆ ಕತ್ತರಿಸಬೇಕು.
3. ಹಾಲಿನ ಕೆನೆ ಚಳಿಗಾಲದಲ್ಲಿ ಮಾತ್ರವಲ್ಲ ಮಳೆಗಾಲದಲ್ಲೂ ಹಚ್ಚಿದರೆ ಕೂಡ ತ್ವಚೆಗೆ ತುಂಬಾ ಒಳ್ಳೆಯದು.
4. ಒಂದು ಚಮಚ ಕಡಲೆ ಹಿಟ್ಟು, ಒಂದು ಚಮಚ ಹೆಸರು ಹಿಟ್ಟು, ಅರ್ಧ ಚಮಚ ಬೇವಿನ ಪುಡಿ, ಕಾಲು ಚಮಚ ಅರಿಶಿಣ ಮತ್ತು ಕುಂಕುಮ ಕೇಸರಿ, ನಾಲ್ಕು ಹನಿ ನಿಂಬೆ ರಸ, ಒಂದು ಚಮಚ ಮೊಸರು ಹಾಕಿ ಮಿಶ್ರ ಮಾಡಿ ಮುಖ, ಕತ್ತು, ಕೈಗಳಿಗೆ ಹಚ್ಚಿ ಕೊಂಡು ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಲ್ಲಿ ತೊಳೆದರೆ ಚರ್ಮದ ಕಾಂತಿ ಹೆಚ್ಚುವುದು.
5. ಹಣ್ಣುಗಳಿಂದ ಕೂಡ ಫೇಶಿಯಲ್ ಮಾಡಬಹುದು, ಅದರಲ್ಲೂ ಪಪ್ಪಾಯಿ ಫೇಶಿಯಲ್ ಮಾಡಿದರೆ ಮುಖದಲ್ಲಿ ಮೊಡವೆ ಬರುವುದು ಕಡಿಮೆಯಾಗುತ್ತದೆ. ದಿನಾ ಅಥವಾ ಎರಡು ದಿನಕ್ಕೆ ಒಮ್ಮೆ ಜೇನು ಹಚ್ಚಿ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ ಮುಖ ತಾಜಾತನದಿಂದ ಹೊಳೆಯುತ್ತದೆ.
6. ಒಂದು ಚಮಚ ಆಲೀವ್ ಎಣ್ಣೆಗೆ ಸ್ವಲ್ಪ ಸಕ್ಕರೆ ಹಾಕಿ ವಾರಕ್ಕೆ ಎರಡು ಬಾರಿ ಸ್ಕ್ರಬ್ ಮಾಡುವುದು ಒಳ್ಳೆಯದು.
5. ಕೂದಲಿಗೆ ಕಂಡೀಷನರ್ ಆಗಿ ಮೆಹಂದಿ ಮತ್ತು ಮೊಸರನ್ನು ಬಳಸಿ, ಇದರಿಂದ ಕೂದಲು ಸೊಂಪಾಗಿ ಬೆಳೆಯುವುದು.
7. ಪ್ರತಿನಿತ್ಯ ಕಾಲುಗಳನ್ನು ಪ್ಯೂಮಿಕ್ ಕಲ್ಲು ಬಳಸಿ ಸ್ವಚ್ಛಗೊಳಿಸಬೇಕು.
8. ಕಾಲಿಗೆ ಎಣ್ಣೆ ಹಚ್ಚಿ ಪ್ರತಿದಿನ ಮಸಾಜ್ ಮಾಡಿದರೆ ಸುಂದರ ಪಾದಗಳನ್ನು ಪಡೆಯಬಹುದು.
9. ಮಳೆಗಾಲದಲ್ಲಿ ತುಂಬಾ ಮೇಕಪ್ ಮಾಡಬಾರದು, ಏಕೆಂದರೆ ಮಳೆ ಹನಿ ತಾಗಿದರೆ ಮೇಕಪ್ ಹರಡಿ ಅಸಹ್ಯವಾಗಿ ಕಾಣುವುದು. ಮೇಕಪ್ ಮಾಡುವುದಾದರೆ ವಾಟರ್ ಫ್ರೂಫ್ ಮೇಕಪ್ ಮಾಡುವುದು ಒಳ್ಳೆಯದು.



Click it and Unblock the Notifications