Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕಾರ್ತಿಕ ಮಾಸದಲ್ಲಿ ಜನಿಸಿದರೆ ಕುಂಡಲಿಯಲ್ಲಿ ಕಾರ್ತಿಕ ದೋಷ, ಇದಕ್ಕೆ ಪರಿಹಾರವೇನು?
ಕಾರ್ತಿಕ ಮಾಸ ನಡೆಯುತ್ತಿದೆ, ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುವುದು. ಆದರೆ ಈ ತಿಂಗಳಿನಲ್ಲಿ ಜನಿಸಿದರೆ ಕುಂಡಲಿಯಲ್ಲಿ ಕಾರ್ತಿಕ ದೋಷ ಉಂಟಾಗುವುದು.
* ಕಾರ್ತಿಕ ಮಾಸದಲ್ಲಿ ಜನಿಸಿದರೆ ಆಡಳಿತದಲ್ಲಿ ಅವರ ಪ್ರಭಾವ ಕಡಿಮೆ ಇರುತ್ತದೆ
* ಸಂಬಂಧದಲ್ಲಿ ಜವಾಬ್ದಾರಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ
* ತಂದೆ ಅಥವಾ ಮಾವನ ಜೊತೆ ಉತ್ತಮ ಸಂಬಂಧ ಹೊಂದಿರುವುದಿಲ್ಲ
* ಆರೋಗ್ಯ ಸಮಸ್ಯೆಯಿಂದಾಗಿ ಸಂಬಂಧದಲ್ಲಿ ಸಮಸ್ಯೆ ಉಂಟಾಗುವುದು
* ಮಾತು ತುಂಬಾ ಕಠೋರವಾಗುವುದು

ಕಾರ್ತಿಕ ದೋಷಕ್ಕೆ ಪರಿಹಾರವೇನು?
* ಪ್ರತಿದಿನ ಬೆಳಗ್ಗೆ ಸೂರ್ಯನ ಪ್ರಾರ್ಥಿಸಬೇಕು
* ಪ್ರತಿ ಭಾನುವಾರ ನವಗ್ರಹ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ
* ಕಾರ್ತಿಕ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ
* ಭಾನುವಾರ ಸೂರ್ಯ ಮಂತ್ರವನ್ನು ತಪ್ಪದೆ ಪಠಿಸಿ
ಕಾರ್ತಿಕ ಸೋಮವಾರ
ಕಾರ್ತಿಕ ಸೋಮವಾರದಂದು ವಿಶೇಷ ಪೂಜೆ ಸಲ್ಲಿಸಿ. ಸಾಮಾನ್ಯವಾಗಿ ಕಾರ್ತಿಕ ಮಾಸದ ಸೋಮವಾರ ಪೂಜೆ ಸಲ್ಲಿಸುವುದು ಒಳ್ಳೆಯದು, ಅದರಲ್ಲೂ ಕಾರ್ತಿಕ ಸೋಮವಾರದಂದು ಶಿವನಿಗೆ ಆರಾಧನೆ ಮಾಡಿದರೆ ಇನ್ನೂ ಒಳ್ಳೆಯದು.
ಕಾರ್ತಿಕ ಸೋಮವಾರ ದಿನಾಂಕಗಳು
ನವೆಂಬರ್ 20
ನವೆಂಬರ್ 27
ಡಿಸೆಂಬರ್ 4
ಡಿಸೆಂಬರ್ 11
ಕಾರ್ತಿಕ ದೀಪ
ಈ ತಿಂಗಳಿನಲ್ಲಿ ಮನೆಯ ತುಳಸಿ ಕಟ್ಟೆಗೆ ಹಾಗೂ ಮನೆ ಮುಂದೆ ದೀಪವನ್ನು ಹಚ್ಚಿಡಲಾಗುವುದು. ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತಕ್ಕಿಂತ ಸ್ವಲ್ಪ ಮುನ್ನ ದೀಪಗಳನ್ನು ಹಚ್ಚಿಡಿ.
ಕಾರ್ತಿಕ ಪೂರ್ಣಿಮಾ
ಕಾರ್ತಿಕ ಪೂರ್ಣಿಮಾ ದಿನದಂದು ನದಿಯಲ್ಲಿ ಸ್ನಾನ ಮಾಡಿ, ನಂತರ ಶಿವ, ವಿಷ್ಣುವನ್ನು ಆರಾಧಿಸಿ.
* ಸಮೀಪದ ಶಿವ ದೇವಾಲಯಕ್ಕೆ ಹೋಗಿ.
ಈ ರೀತಿ ಮಾಡುವುದರಿಂದ ಕಾರ್ತಿಕ ದೋಷ ದೂರಾಗುವುದು.
ಕಾರ್ತಿಕ ಮಾಸದ ಮಹತ್ವ
ಚಂದ್ರಮಾನ ಕ್ಯಾಲೆಂಡರ್ನಲ್ಲಿ ದಕ್ಷಿಣಾಯನ, ಉತ್ತರಾಯಣ ಎಂದು ವಿಂಗಡಿಸಲಾಗಿದೆ. ಕಾರ್ತಿಕ ಮಾಸ ದಕ್ಷಿಣಾಯನ ಕಾಲದಲ್ಲಿ ಬರುತ್ತದೆ. ಈ ತಿಂಗಳು ದೇವರ ಕಾರ್ಯಗಳಿಗೆ ಮೀಸಲಾದ ತಿಂಗಳಾಗಿದೆ. ಪದ್ಮ ಪುರಾಣದ ಮತ್ತು ಸ್ಕಂದ ಪುರಾಣದ ಪ್ರಕಾರ ಕಾರ್ತಿಕ ಮಾಸ ಆಚರಣೆ ಮಾಡುವುದರಿಂದ ಧಾರ್ಮಿಕವಾಗಿ ತುಂಬಾ ಒಳ್ಳೆಯದು, ಇದರಿಂದ ದೇವರ ಕೃಪೆಗೆ ಪಾತ್ರರಾಗಬಹುದು, ದೇವರ ಕೃಪೆಯಿಂದ ಆರ್ಥಿಕ, ಜ್ಞಾನ ದೊರೆಯುವುದು, ಸೌಕರ್ಯಗಳು ದೊರೆಯುವುದು, ಬದುಕು ತುಂಬಾನೇ ಉತ್ತಮವಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications