Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಡಿ. 8ಕ್ಕೆ ಉತ್ಪನ್ನ ಏಕಾದಶಿ: ಕಾರ್ತಿಕ ಏಕಾದಶಿಯಂದು ಈ ಪರಿಹಾರ ಮಾಡಿದರೆ ನಿಮ್ಮ ಜೀವನದಲ್ಲಿನ ಕಷ್ಟಗಳೆಲ್ಲಾ ದೂರಾಗುವುದು
ಏಕಾದಶಿ ಶ್ರೀವಿಷ್ಣುವನ್ನು ಪೂಜಿಸಲು ಇರುವ ಅತ್ಯಂತ ಶ್ರೇಷ್ಠ ದಿನ. ಸನಾತನ ಧರ್ಮದಲ್ಲಿ ಏಕಾದಶಿ ಉಪವಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಉಪವಾಸವಿದ್ದು ಏಕಾದಶಿ ವ್ರತ ಮಾಡುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುವುದು. ಡಿಸೆಂಬರ್ 8ಕ್ಕೆ ಉತ್ಪನ್ನ ಏಕಾದಶಿ ಆಚರಿಸಲಾಗುವುದು. ಈ ದಿನ ಕೆಲವೊಂದು ಪರಿಹಾರ ಮಾಡಿದರೆ ಜೀವನದ ಅನೇಕ ಸಮಸ್ಯೆಗಳು ತಕ್ಷಣವೇ ಕೊನೆಗೊಳ್ಳುತ್ತವೆ , ಆ ಪರಿಹಾರಗಳೇನು ಎಂದು ನೊಡೋಣ ಬನ್ನಿ:

ಏಕಾದಶಿಯಂದು ದಾನ ಮಾಡಿ
ಉತ್ಪನ್ನ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ದಿನದಂದು ದಾನ ಮಾಡಿದರೆ ಆ ಭಕ್ತರ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಈ ಮಂಗಳಕರ ದಿನದಂದು ಧಾನ್ಯಗಳನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು.
ನಿರ್ಗತಿಕರಿಗೆ ದಾನ ಮಾಡಿ
ಉತ್ಪನ್ನ ಏಕಾದಶಿಯ ದಿನದಂದು ನಿರ್ಗತಿಕರಿಗೆ ಆಹಾರವನ್ನು ನೀಡಿ, ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆಗಳು ನಿವಾರಣೆಯಾಗುವುದು. ಆದುದರಿಂದ ಈ ದಿನ ನಿಮ್ಮ ಕೈಯಲ್ಲಾದ ಸಹಾಯ ಮಾಡಿ.
ಉತ್ಪನ್ನ ಏಕಾದಶಿಯ ದಿನದಂದು ಶ್ರೀ ಹರಿವಿಷ್ಣುವಿಗೆ ದಕ್ಷಿಣಾವ್ರತಿ ಶಂಖದಿಂದ ದೇವಸ್ಥಾನದಲ್ಲಿ ಶ್ರೀವಿಷ್ಣುವಿಗೆ ಅಭಿಷೇಕ ಮಾಡಿದರೆ ಕುಟುಂಬದಲ್ಲಿ ಸದಾ ಸೌಹಾರ್ದತೆ ನೆಲೆಸಿರುತ್ತದೆ.
* ಈ ದಿನ ಕಪ್ಪು ಬಟ್ಟೆ ಧರಿಸಬೇಡಿ
ಉತ್ಪನ್ನ ಏಕಾದಶಿಯಂದು ಕಪ್ಪು ಬಟ್ಟೆಗಳನ್ನು ಧರಿಸಬೇಡಿ.
ಈ ದಿನ ಸುದರ್ಶನ ಹೋಮ ಮಾಡಿ
ಕಾರ್ತಿಕ ಮಾಸದ ಕೊನೆಯ ಏಕಾದಶಿ ಉತ್ಪನ್ನ ಏಕಾದಶಿ, ಈ ಏಕಾದಶಿಯಂದು ಸುದರ್ಶನ ಹೋಮ ಮಾಡಿದರೆ ತುಂಬಾನೇ ಶುಭ.
ಉತ್ಪನ್ನ ಏಕಾದಶಿ
* ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯಾಗಿದೆ
* ಈ ದಿನ ಶ್ರೀ ವಿಷ್ಣುವಿಗೆ ಜಲಾಭಿಷೇಕ ಮಾಡಿದರೆ ತುಂಬಾ ಒಳ್ಳೆಯದು
* ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸಂಕಲ್ಪ ತೆಗೆದುಕೊಳ್ಳಿ, ಆ ಸಂಕಲ್ಪ ನೆರವೇರುವುದು.
* ನಂತರ ಗಣೇಶನನ್ನು ಆರಾಧಿಸಿ. ಗಣೇಶನಿಗೆ ಜೋಡಿ ತೆಂಗಿನಕಾಯೊ ಒಡೆದು ಪೂಜೆ ಮಾಡಿ.
* ನಂತರ ವಿಷ್ಣುವಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ದೇವರಿಗೆ ಬಟ್ಟೆಯಿಂದ ಅಲಂಕರಿಸಿ. ನಂತರ ಆಭರಣಗಳನ್ನು ಹಾಕಿ, ಪವಿತ್ರ ದಾರವನ್ನು ಹಾಕಿ. ನಂತರ ಶ್ರೀವಿಷ್ಣುವಿಗೆ ಹೂಗಳನ್ನು ಅರ್ಪಿಸಿ, ಹಳದಿ ಬಣ್ಣದ ಹೂಗಳನ್ನು ಅರ್ಪಿಸಿ, ಹಣ್ಣುಗಳನ್ನು ಅರ್ಪಿಸಿ.
* ಧೂಪದ್ರವ್ಯ ಮತ್ತು ದೀಪಗಳನ್ನು ಬೆಳಗಿಸಿ ನೀವು ತುಳಸಿದಳವನ್ನು ಅರ್ಪಿಸಿ
* ದೇವರಿಗೆ ತುಪ್ಪದ ದೀಪವನ್ನು ಹಚ್ಚಿ.
* ಶ್ರೀ ವಿಷ್ಣುವಿಗೆ ಹಸಿ ಹಾಲಿಗೆ ಸ್ವಲ್ಪ ಕೇಸರಿ ಹಾಕಿ ಅರ್ಪಿಸಿ.
* ಉಪವಾಸವಿದ್ದು ದೇವರ ಪೂಜೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಉತ್ಪನ್ನ ಏಕಾದಶಿ: ಡಿಸೆಂಬರ್ 8
ಪಾರಣ ಸಮಯ: ಡಿಸೆಂಬರ್ 9 ಮಧ್ಯಾಹ್ನ 1:20ರಿಂದ 3:33ರವರೆಗೆ
ಏಕಾದಶಿ ತಿಥಿ ಪ್ರಾರಂಭ ಡಿಸೆಂಬರ್ 8 ಬೆಳಗ್ಗೆ 07:06ರಿಂದ ಡಿಸೆಂಬರ್ 9 ಬೆಳಗ್ಗೆ 06:31ರವರೆಗೆ ಇರಲಿದೆ.
ವೈಷ್ಣವ ಉತ್ಪನ್ನ ಏಕಾದಶಿಯನ್ನು ಡಿಸೆಂಬರ್ 9ರಂದು ಆಚರಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications