Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅ. 14ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಯಾವ ಸಮಯದಲ್ಲಿ ಶ್ರಾದ್ಧ ಮಾಡಿದರೆ ಒಳ್ಳೆಯದು?
ಪಿತೃಪಕ್ಷ ಹಿಂದೂಗಳಿಗೆ ತುಂಬಾ ಪ್ರಮುಖವಾದ ದಿನಗಳಾಗಿವೆ. ಸೆಪ್ಟೆಂಬರ್ 29ರಿಂದ -ಅಕ್ಟೋಬರ್ 14ರವರೆಗೆ ಪಿತೃಪಕ್ಷ ಆಚರಿಸಲಾಗುವುದು. ಪಿತೃ ಪಕ್ಷದಲ್ಲಿ ಶ್ರಾದ್ಧಕಾರ್ಯ ಮಾಡಿದರೆ ತಿರಿ ಹೋದವರ ಆತ್ಮಕ್ಕೆ ಶಾಂತಿ ಸಿಗುವುದು, ಅವರಿಗೆ ಮೋಕ್ಷ ಸಿಗುವುದರಿಂದ ಸಂತುಷ್ಟರಾಗಿ ಆಶೀರ್ವದಿಸುತ್ತಾರೆ . ಪಿತೃ ಪಕ್ಷದ 15 ದಿನಗಳ ಅವಧಿಯಲ್ಲಿ, ಪೂರ್ವಜರು ಭೂಮಿಯ ಮೇಲೆರುತ್ತಾರೆ. ಆದ್ದರಿಂದ ಈ ಸಮಯ ಶ್ರಾದ್ಧಕಾರ್ಯಕ್ಕೆ ಒಳ್ಳೆಯದು ಎಂದು ಭಾವಿಸಲಾಗುವುದು.

ಅಕ್ಟೋಬರ್ 14ಕ್ಕೆ ಪಿತೃಪಕ್ಷ ಕೊನೆಯಾಗಲಿದೆ, 14ನೇ ದಿನದಂದು ಸರ್ವ ಪಿತೃ ಅಮಾವಾಸ್ಯೆ ಆಚರಿಸಿಲಾಗುವುದು. ಮರಣದ ದಿನಾಂಕ ತಿಳಿದಿಲ್ಲದಿದ್ದರೆ ನಮಗೆ ಗೊತ್ತಿಲ್ಲದೆ ಇರುವ ಹಿರಿಯರು ಅಂದ್ರೆ ನಮಗೆ ನಮ್ಮ ಅಜ್ಜ-ಅಜ್ಜಿ ಗೊತ್ತಿರುತ್ತದೆ, ಆದರೆ ಅವರ ಹಿರಿಯರು ಗೊತ್ತಿರುವುದಿಲ್ಲ, ಅವರಿಗೆಲ್ಲಾ ಸೇರಿಸಿ ಈ ದಿನ ತರ್ಪಣ ನೀಡಲಾಗುವುದು. ಸರ್ವಪಿತೃ ಅಮವಾಸ್ಯೆಯಂದು ಶ್ರಾದ್ಧ ಕಾರ್ಯಮಾಡಿದರೆ ಹಿರಿಯರ ಆಶೀರ್ವಾದ ದೊರೆಯುವುದರಿಂದ ಪಿತೃದೋಷ ದೂರಾಗುವುದು. 16 ದಿನಗಳಲ್ಲಿ ಈ ದಿನಕ್ಕೆ ತುಂಬಾನೇ ಮಹತ್ವ.
ಸರ್ವಪಿತೃಅಮಾವಾಸ್ಯೆಯಂದು ಈ ಶುಭ ಸಮಯದಲ್ಲಿ ತರ್ಪಣ ನೀಡಿ
ಅಶ್ವಿನ್ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನಾಂಕ: 13 ಅಕ್ಟೋಬರ್ 2023, ರಾತ್ರಿ 09:50 ಕ್ಕೆ
ಅಶ್ವಿನ್ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನಾಂಕ: 14 ಅಕ್ಟೋಬರ್ 2023, ರಾತ್ರಿ 11:24 ಕ್ಕೆ
ಉದಯ ತಿಥಿಯ ಪ್ರಕಾರ, ಈ ವರ್ಷ ಸರ್ವ ಪಿತೃ ಅಮವಾಸ್ಯೆಯನ್ನು 14 ಅಕ್ಟೋಬರ್ 2023 ರಂದು ಆಚರಿಸಲಾಗುತ್ತದೆ. ಸರ್ವಪಿತೃ ಅಮಾವಾಸ್ಯೆಯ ದಿನದಂದು ತರ್ಪಣಕ್ಕೆ 3 ಶುಭ ಮುಹೂರ್ತಗಳಿವೆ.
ಮಂಗಳಕರ ಸಮಯ
ಕುಟುಪ್ ಮುಹೂರ್ತ - 11:44 ರಿಂದ 12:30 ರವರೆಗೆ
ರೋಹಿಣ ಮುಹೂರ್ತ - ಮಧ್ಯಾಹ್ನ 12:30 ರಿಂದ 01:16 ರವರೆಗೆ
ಮಧ್ಯಾಹ್ನ 01:16 ರಿಂದ 03:35ರವರೆಗೆ
ಈ ಸಮಯಗಳಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ನೀಡಬಹುದು.
ಸರ್ವಪಿತೃ ಅಮವಾಸ್ಯೆ
ಪಿತೃ ಪಕ್ಷದ 16 ದಿನಗಳಲ್ಲಿ ದಿನಾಂಕದ ಪ್ರಕಾರ ಶ್ರಾದ್ಧವನ್ನು ಮಾಡಲಾಗುತ್ತದೆ. ಆದರೆ ಸರ್ವಪಿತೃ ಅಮಾವಾಸ್ಯೆಯ ದಿನ, ಅಮವಾಸ್ಯೆಯ ತಿಥಿ, ಪೂರ್ಣಿಮಾ ತಿಥಿ ಮತ್ತು ಚತುರ್ದಶಿ ತಿಥಿಗಳಲ್ಲಿ ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಶ್ರಾದ್ಧವನ್ನು ಮಾಡಲಾಗುವುದು.ಧಾರ್ಮಿಕ ನಂಬಿಕೆಯ ಪ್ರಕಾರ, ಅಮಾವಾಸ್ಯೆಯ ತಿಥಿಯಂದು ಆಚರಿಸುವ ಶ್ರಾದ್ಧವು ಕುಟುಂಬದ ಎಲ್ಲಾ ಪೂರ್ವಜರ ಆತ್ಮಗಳಿಗೆ ಮೋಕ್ಷ ನಿಡುವುದು. ಆದ್ದರಿಂದ ಈ ದಿನ ಹೆಚ್ಚಿನವರು ಶ್ರಾದ್ದಕಾರ್ಯ ಮಾಡುತ್ತಾರೆ. ಸರ್ವ ಆತ್ಮಗಳಿಗೆ ಮೋಕ್ಷ ಸಿಗುವುದರಿಂದ ಮನೆಯ ಮೇಲೆ ಹಿರಿಯರ ಶಾಪ ಇರುವುದಿಲ್ಲ, ಅವರ ಆಶೀರ್ವಾದ ಸಿಗುವುದರಿಂದ ಮನೆಗೆ ಒಳಿತಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











