Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಗುರುವಾರ ಏನೆಲ್ಲ ನಡೆಯಿತು, ಗೊತ್ತಾ?

ಕೆಬಿಸಿ ನಿನ್ನೆಗೆ ಯಶಸ್ವಿಯಾಗಿ ಮೊದಲ ವಾರ ಪೂರೈಸಿದೆ. 'ಕೌನ್ ಬನೇಗಾ ಕರೋಡ್ ಪತಿ'ಯ ಅಧಿಪತಿ ಅಮಿತಾಬ್ ಬಚ್ಚನ್ ಸಾಮಾನ್ಯವಾಗಿ ದಕ್ಷಿಣ ಭಾರತದವರನ್ನು ಹಾಟ್ ಸೀಟ್ ಸಮೀಪಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂಬ ಅಪವಾದದ ನಡುವೆಯೂ ಮೊದಲ ವಾರದಲ್ಲಿ ಕನ್ನಡತಿ ರಾಜಲಕ್ಷ್ಮಿ ಕುಮಾರ್ 6.4 ಲಕ್ಷ ರುಪಾಯಿ ಗೆದ್ದುಕೊಂಡಿದ್ದಾರೆ. ರಾಜಲಕ್ಷ್ಮಿ ಪ್ರಸ್ತುತ ಗುಜರಾತಿನ ವಾಪಿಯಲ್ಲಿ ಪತಿ ಮತ್ತು ಪುತ್ರನೊಂದಿಗೆ ವಾಸವಾಗಿದ್ದಾರೆ.
3ನೇ ಪ್ರಶ್ನೆಯ ವೇಳೆಗೇ ರಾಜಲಕ್ಷ್ಮಿ 'ಆಡಿಯನ್ಸ್ ಪೋಲ್ ಲೈಫ್ ಲೈನ್' ನೆರವು ಪಡೆದರು. ಅದೂ ಪ್ರಶ್ನೆ ಯಾವುದರ ಬಗ್ಗೆ ಅಂತ ಕೇಳ್ತೀರಾ? ನಮ್ಮ ನಿಮ್ಮ ಅಚ್ಚುಮೆಚ್ಚಿನ ಉಪ್ಪಿಟ್ಟು ಬಗ್ಗೆ ಕಣ್ರಿ. ಈ ಪ್ರಶ್ನೆಯ ಮೂಲಕ ಮಹಾನ್ ತಿಂಡಿಯಾದ ಉಪ್ಪಿಟ್ಟಿನ ಬಗ್ಗೆ ಮಹಾನ್ ನಟ ಅಮಿತಾಬ್ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸಿದರು. ಉಪ್ಪು ಮತ್ತು ಹಿಟ್ಟು ಸೇರಿದರೆ ಉಪ್ಪಿಟ್ಟು ಆಗುತ್ತದೆ. ಆದರೆ ಇದನ್ನು ತಮಿಳಿನಲ್ಲಿ ಕೇಳಿದ್ದರಿಂದ ರಾಜಲಕ್ಷ್ಮಿ ಸ್ವಲ್ಪ ಎಡವಿದರು. ಅಮಿತಾಬ್ ರ ಪ್ರಶ್ನೆಗೆ ಡಿ. ಉಪ್ಪಮಾ ರೈಟ್ ಆನ್ಸರ್ ಆಗಿತ್ತು!
ಇರ್ಲಿ ಬಿಡಿ ಮುಂದೇನಾಯಿತು ಕೇಳಿ: ಮತ್ತೊಂದು ಪ್ರಶ್ನೆಗೆ ಕನ್ನಡದವರೇ ಆದ ಡಾ. ಅಜಿತ್ ರಾನಡೆ ಅವರು 'ಎಕ್ಸ್ ಪರ್ಟ್ ಒಪೀನಿಯನ್' ನೀಡಿ ರಾಜಲಕ್ಷ್ಮಿ ಅವರನ್ನು ಪಾರು ಮಾಡಿದರು. ಹೀಗೇ ಪ್ರಶ್ನಾವಳಿ ಸಾಗಿದ್ದಾಗ ಸ್ಪರ್ಧಾಳು ಒಂದು ಕಡೆ ಬಂತು ಥಟ್ಟನೆ ನಿಂತುಬಿಟ್ಟರು. ಆಗ ಅವರಿಗೆ ಥಟ್ಟಂತ ಜ್ಞಾಪಕಕ್ಕೆ ಬಂದಿದ್ದು ಮತ್ತೊಬ್ಬ ಕನ್ನಡಿಗ. 'ಕನ್ನಡದ ಕ್ವಿಜ್ ಮಾಸ್ಟರ್' ಅಮಿತಾಭ್ ಅಥವಾ ಸಿದ್ಧಾರ್ಥ ಬಸು ಎಂದೂ ಇವರನ್ನು ಕರೆಯಬಹುದು. ಅವರೇ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಮೂಲಕ ಇತಿಹಾಸ ನಿರ್ಮಿಸಿರುವ ಡಾ. ನಾ. ಸೋಮೇಶ್ವರ್ ಅವರು.
ಯಾಕೋ ನಾ. ಸೋಮೇಶ್ವರ್ ಅವರೂ ಎಡವಿದರು. ಅದರೊಂದಿಗೆ ರಾಜಲಕ್ಷ್ಮಿ ಅವರು 6.4 ಲಕ್ಷ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾರ್ಯಕ್ರಮದಲ್ಲಿ ಉತ್ತಮ ಸ್ಪರ್ಧೆ ನೀಡಿದ ರಾಜಲಕ್ಷ್ಮಿಗೆ ಶುಭಾಶಯಗಳು.



Click it and Unblock the Notifications