Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಗುರುವಾರ ಏನೆಲ್ಲ ನಡೆಯಿತು, ಗೊತ್ತಾ?

ಕೆಬಿಸಿ ನಿನ್ನೆಗೆ ಯಶಸ್ವಿಯಾಗಿ ಮೊದಲ ವಾರ ಪೂರೈಸಿದೆ. 'ಕೌನ್ ಬನೇಗಾ ಕರೋಡ್ ಪತಿ'ಯ ಅಧಿಪತಿ ಅಮಿತಾಬ್ ಬಚ್ಚನ್ ಸಾಮಾನ್ಯವಾಗಿ ದಕ್ಷಿಣ ಭಾರತದವರನ್ನು ಹಾಟ್ ಸೀಟ್ ಸಮೀಪಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂಬ ಅಪವಾದದ ನಡುವೆಯೂ ಮೊದಲ ವಾರದಲ್ಲಿ ಕನ್ನಡತಿ ರಾಜಲಕ್ಷ್ಮಿ ಕುಮಾರ್ 6.4 ಲಕ್ಷ ರುಪಾಯಿ ಗೆದ್ದುಕೊಂಡಿದ್ದಾರೆ. ರಾಜಲಕ್ಷ್ಮಿ ಪ್ರಸ್ತುತ ಗುಜರಾತಿನ ವಾಪಿಯಲ್ಲಿ ಪತಿ ಮತ್ತು ಪುತ್ರನೊಂದಿಗೆ ವಾಸವಾಗಿದ್ದಾರೆ.
3ನೇ ಪ್ರಶ್ನೆಯ ವೇಳೆಗೇ ರಾಜಲಕ್ಷ್ಮಿ 'ಆಡಿಯನ್ಸ್ ಪೋಲ್ ಲೈಫ್ ಲೈನ್' ನೆರವು ಪಡೆದರು. ಅದೂ ಪ್ರಶ್ನೆ ಯಾವುದರ ಬಗ್ಗೆ ಅಂತ ಕೇಳ್ತೀರಾ? ನಮ್ಮ ನಿಮ್ಮ ಅಚ್ಚುಮೆಚ್ಚಿನ ಉಪ್ಪಿಟ್ಟು ಬಗ್ಗೆ ಕಣ್ರಿ. ಈ ಪ್ರಶ್ನೆಯ ಮೂಲಕ ಮಹಾನ್ ತಿಂಡಿಯಾದ ಉಪ್ಪಿಟ್ಟಿನ ಬಗ್ಗೆ ಮಹಾನ್ ನಟ ಅಮಿತಾಬ್ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸಿದರು. ಉಪ್ಪು ಮತ್ತು ಹಿಟ್ಟು ಸೇರಿದರೆ ಉಪ್ಪಿಟ್ಟು ಆಗುತ್ತದೆ. ಆದರೆ ಇದನ್ನು ತಮಿಳಿನಲ್ಲಿ ಕೇಳಿದ್ದರಿಂದ ರಾಜಲಕ್ಷ್ಮಿ ಸ್ವಲ್ಪ ಎಡವಿದರು. ಅಮಿತಾಬ್ ರ ಪ್ರಶ್ನೆಗೆ ಡಿ. ಉಪ್ಪಮಾ ರೈಟ್ ಆನ್ಸರ್ ಆಗಿತ್ತು!
ಇರ್ಲಿ ಬಿಡಿ ಮುಂದೇನಾಯಿತು ಕೇಳಿ: ಮತ್ತೊಂದು ಪ್ರಶ್ನೆಗೆ ಕನ್ನಡದವರೇ ಆದ ಡಾ. ಅಜಿತ್ ರಾನಡೆ ಅವರು 'ಎಕ್ಸ್ ಪರ್ಟ್ ಒಪೀನಿಯನ್' ನೀಡಿ ರಾಜಲಕ್ಷ್ಮಿ ಅವರನ್ನು ಪಾರು ಮಾಡಿದರು. ಹೀಗೇ ಪ್ರಶ್ನಾವಳಿ ಸಾಗಿದ್ದಾಗ ಸ್ಪರ್ಧಾಳು ಒಂದು ಕಡೆ ಬಂತು ಥಟ್ಟನೆ ನಿಂತುಬಿಟ್ಟರು. ಆಗ ಅವರಿಗೆ ಥಟ್ಟಂತ ಜ್ಞಾಪಕಕ್ಕೆ ಬಂದಿದ್ದು ಮತ್ತೊಬ್ಬ ಕನ್ನಡಿಗ. 'ಕನ್ನಡದ ಕ್ವಿಜ್ ಮಾಸ್ಟರ್' ಅಮಿತಾಭ್ ಅಥವಾ ಸಿದ್ಧಾರ್ಥ ಬಸು ಎಂದೂ ಇವರನ್ನು ಕರೆಯಬಹುದು. ಅವರೇ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಮೂಲಕ ಇತಿಹಾಸ ನಿರ್ಮಿಸಿರುವ ಡಾ. ನಾ. ಸೋಮೇಶ್ವರ್ ಅವರು.
ಯಾಕೋ ನಾ. ಸೋಮೇಶ್ವರ್ ಅವರೂ ಎಡವಿದರು. ಅದರೊಂದಿಗೆ ರಾಜಲಕ್ಷ್ಮಿ ಅವರು 6.4 ಲಕ್ಷ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾರ್ಯಕ್ರಮದಲ್ಲಿ ಉತ್ತಮ ಸ್ಪರ್ಧೆ ನೀಡಿದ ರಾಜಲಕ್ಷ್ಮಿಗೆ ಶುಭಾಶಯಗಳು.



Click it and Unblock the Notifications