Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಗುರುವಾರ ಏನೆಲ್ಲ ನಡೆಯಿತು, ಗೊತ್ತಾ?

ಕೆಬಿಸಿ ನಿನ್ನೆಗೆ ಯಶಸ್ವಿಯಾಗಿ ಮೊದಲ ವಾರ ಪೂರೈಸಿದೆ. 'ಕೌನ್ ಬನೇಗಾ ಕರೋಡ್ ಪತಿ'ಯ ಅಧಿಪತಿ ಅಮಿತಾಬ್ ಬಚ್ಚನ್ ಸಾಮಾನ್ಯವಾಗಿ ದಕ್ಷಿಣ ಭಾರತದವರನ್ನು ಹಾಟ್ ಸೀಟ್ ಸಮೀಪಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂಬ ಅಪವಾದದ ನಡುವೆಯೂ ಮೊದಲ ವಾರದಲ್ಲಿ ಕನ್ನಡತಿ ರಾಜಲಕ್ಷ್ಮಿ ಕುಮಾರ್ 6.4 ಲಕ್ಷ ರುಪಾಯಿ ಗೆದ್ದುಕೊಂಡಿದ್ದಾರೆ. ರಾಜಲಕ್ಷ್ಮಿ ಪ್ರಸ್ತುತ ಗುಜರಾತಿನ ವಾಪಿಯಲ್ಲಿ ಪತಿ ಮತ್ತು ಪುತ್ರನೊಂದಿಗೆ ವಾಸವಾಗಿದ್ದಾರೆ.
3ನೇ ಪ್ರಶ್ನೆಯ ವೇಳೆಗೇ ರಾಜಲಕ್ಷ್ಮಿ 'ಆಡಿಯನ್ಸ್ ಪೋಲ್ ಲೈಫ್ ಲೈನ್' ನೆರವು ಪಡೆದರು. ಅದೂ ಪ್ರಶ್ನೆ ಯಾವುದರ ಬಗ್ಗೆ ಅಂತ ಕೇಳ್ತೀರಾ? ನಮ್ಮ ನಿಮ್ಮ ಅಚ್ಚುಮೆಚ್ಚಿನ ಉಪ್ಪಿಟ್ಟು ಬಗ್ಗೆ ಕಣ್ರಿ. ಈ ಪ್ರಶ್ನೆಯ ಮೂಲಕ ಮಹಾನ್ ತಿಂಡಿಯಾದ ಉಪ್ಪಿಟ್ಟಿನ ಬಗ್ಗೆ ಮಹಾನ್ ನಟ ಅಮಿತಾಬ್ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸಿದರು. ಉಪ್ಪು ಮತ್ತು ಹಿಟ್ಟು ಸೇರಿದರೆ ಉಪ್ಪಿಟ್ಟು ಆಗುತ್ತದೆ. ಆದರೆ ಇದನ್ನು ತಮಿಳಿನಲ್ಲಿ ಕೇಳಿದ್ದರಿಂದ ರಾಜಲಕ್ಷ್ಮಿ ಸ್ವಲ್ಪ ಎಡವಿದರು. ಅಮಿತಾಬ್ ರ ಪ್ರಶ್ನೆಗೆ ಡಿ. ಉಪ್ಪಮಾ ರೈಟ್ ಆನ್ಸರ್ ಆಗಿತ್ತು!
ಇರ್ಲಿ ಬಿಡಿ ಮುಂದೇನಾಯಿತು ಕೇಳಿ: ಮತ್ತೊಂದು ಪ್ರಶ್ನೆಗೆ ಕನ್ನಡದವರೇ ಆದ ಡಾ. ಅಜಿತ್ ರಾನಡೆ ಅವರು 'ಎಕ್ಸ್ ಪರ್ಟ್ ಒಪೀನಿಯನ್' ನೀಡಿ ರಾಜಲಕ್ಷ್ಮಿ ಅವರನ್ನು ಪಾರು ಮಾಡಿದರು. ಹೀಗೇ ಪ್ರಶ್ನಾವಳಿ ಸಾಗಿದ್ದಾಗ ಸ್ಪರ್ಧಾಳು ಒಂದು ಕಡೆ ಬಂತು ಥಟ್ಟನೆ ನಿಂತುಬಿಟ್ಟರು. ಆಗ ಅವರಿಗೆ ಥಟ್ಟಂತ ಜ್ಞಾಪಕಕ್ಕೆ ಬಂದಿದ್ದು ಮತ್ತೊಬ್ಬ ಕನ್ನಡಿಗ. 'ಕನ್ನಡದ ಕ್ವಿಜ್ ಮಾಸ್ಟರ್' ಅಮಿತಾಭ್ ಅಥವಾ ಸಿದ್ಧಾರ್ಥ ಬಸು ಎಂದೂ ಇವರನ್ನು ಕರೆಯಬಹುದು. ಅವರೇ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಮೂಲಕ ಇತಿಹಾಸ ನಿರ್ಮಿಸಿರುವ ಡಾ. ನಾ. ಸೋಮೇಶ್ವರ್ ಅವರು.
ಯಾಕೋ ನಾ. ಸೋಮೇಶ್ವರ್ ಅವರೂ ಎಡವಿದರು. ಅದರೊಂದಿಗೆ ರಾಜಲಕ್ಷ್ಮಿ ಅವರು 6.4 ಲಕ್ಷ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾರ್ಯಕ್ರಮದಲ್ಲಿ ಉತ್ತಮ ಸ್ಪರ್ಧೆ ನೀಡಿದ ರಾಜಲಕ್ಷ್ಮಿಗೆ ಶುಭಾಶಯಗಳು.



Click it and Unblock the Notifications











