Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಗುರುವಾರ ಏನೆಲ್ಲ ನಡೆಯಿತು, ಗೊತ್ತಾ?

ಕೆಬಿಸಿ ನಿನ್ನೆಗೆ ಯಶಸ್ವಿಯಾಗಿ ಮೊದಲ ವಾರ ಪೂರೈಸಿದೆ. 'ಕೌನ್ ಬನೇಗಾ ಕರೋಡ್ ಪತಿ'ಯ ಅಧಿಪತಿ ಅಮಿತಾಬ್ ಬಚ್ಚನ್ ಸಾಮಾನ್ಯವಾಗಿ ದಕ್ಷಿಣ ಭಾರತದವರನ್ನು ಹಾಟ್ ಸೀಟ್ ಸಮೀಪಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂಬ ಅಪವಾದದ ನಡುವೆಯೂ ಮೊದಲ ವಾರದಲ್ಲಿ ಕನ್ನಡತಿ ರಾಜಲಕ್ಷ್ಮಿ ಕುಮಾರ್ 6.4 ಲಕ್ಷ ರುಪಾಯಿ ಗೆದ್ದುಕೊಂಡಿದ್ದಾರೆ. ರಾಜಲಕ್ಷ್ಮಿ ಪ್ರಸ್ತುತ ಗುಜರಾತಿನ ವಾಪಿಯಲ್ಲಿ ಪತಿ ಮತ್ತು ಪುತ್ರನೊಂದಿಗೆ ವಾಸವಾಗಿದ್ದಾರೆ.
3ನೇ ಪ್ರಶ್ನೆಯ ವೇಳೆಗೇ ರಾಜಲಕ್ಷ್ಮಿ 'ಆಡಿಯನ್ಸ್ ಪೋಲ್ ಲೈಫ್ ಲೈನ್' ನೆರವು ಪಡೆದರು. ಅದೂ ಪ್ರಶ್ನೆ ಯಾವುದರ ಬಗ್ಗೆ ಅಂತ ಕೇಳ್ತೀರಾ? ನಮ್ಮ ನಿಮ್ಮ ಅಚ್ಚುಮೆಚ್ಚಿನ ಉಪ್ಪಿಟ್ಟು ಬಗ್ಗೆ ಕಣ್ರಿ. ಈ ಪ್ರಶ್ನೆಯ ಮೂಲಕ ಮಹಾನ್ ತಿಂಡಿಯಾದ ಉಪ್ಪಿಟ್ಟಿನ ಬಗ್ಗೆ ಮಹಾನ್ ನಟ ಅಮಿತಾಬ್ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸಿದರು. ಉಪ್ಪು ಮತ್ತು ಹಿಟ್ಟು ಸೇರಿದರೆ ಉಪ್ಪಿಟ್ಟು ಆಗುತ್ತದೆ. ಆದರೆ ಇದನ್ನು ತಮಿಳಿನಲ್ಲಿ ಕೇಳಿದ್ದರಿಂದ ರಾಜಲಕ್ಷ್ಮಿ ಸ್ವಲ್ಪ ಎಡವಿದರು. ಅಮಿತಾಬ್ ರ ಪ್ರಶ್ನೆಗೆ ಡಿ. ಉಪ್ಪಮಾ ರೈಟ್ ಆನ್ಸರ್ ಆಗಿತ್ತು!
ಇರ್ಲಿ ಬಿಡಿ ಮುಂದೇನಾಯಿತು ಕೇಳಿ: ಮತ್ತೊಂದು ಪ್ರಶ್ನೆಗೆ ಕನ್ನಡದವರೇ ಆದ ಡಾ. ಅಜಿತ್ ರಾನಡೆ ಅವರು 'ಎಕ್ಸ್ ಪರ್ಟ್ ಒಪೀನಿಯನ್' ನೀಡಿ ರಾಜಲಕ್ಷ್ಮಿ ಅವರನ್ನು ಪಾರು ಮಾಡಿದರು. ಹೀಗೇ ಪ್ರಶ್ನಾವಳಿ ಸಾಗಿದ್ದಾಗ ಸ್ಪರ್ಧಾಳು ಒಂದು ಕಡೆ ಬಂತು ಥಟ್ಟನೆ ನಿಂತುಬಿಟ್ಟರು. ಆಗ ಅವರಿಗೆ ಥಟ್ಟಂತ ಜ್ಞಾಪಕಕ್ಕೆ ಬಂದಿದ್ದು ಮತ್ತೊಬ್ಬ ಕನ್ನಡಿಗ. 'ಕನ್ನಡದ ಕ್ವಿಜ್ ಮಾಸ್ಟರ್' ಅಮಿತಾಭ್ ಅಥವಾ ಸಿದ್ಧಾರ್ಥ ಬಸು ಎಂದೂ ಇವರನ್ನು ಕರೆಯಬಹುದು. ಅವರೇ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಮೂಲಕ ಇತಿಹಾಸ ನಿರ್ಮಿಸಿರುವ ಡಾ. ನಾ. ಸೋಮೇಶ್ವರ್ ಅವರು.
ಯಾಕೋ ನಾ. ಸೋಮೇಶ್ವರ್ ಅವರೂ ಎಡವಿದರು. ಅದರೊಂದಿಗೆ ರಾಜಲಕ್ಷ್ಮಿ ಅವರು 6.4 ಲಕ್ಷ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾರ್ಯಕ್ರಮದಲ್ಲಿ ಉತ್ತಮ ಸ್ಪರ್ಧೆ ನೀಡಿದ ರಾಜಲಕ್ಷ್ಮಿಗೆ ಶುಭಾಶಯಗಳು.



Click it and Unblock the Notifications
