Latest Updates
-
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ!
ಇದ್ಯಾವ ನ್ಯಾಯ, ನ್ಯಾ.ನಿಟ್ಟೆ ಸಂತೋಷ್ ಹೆಗಡೆ ಅವರೇ, ಉತ್ತರಿಸಿ...

ಯುವರ್ ಆನರ್. ನನಗೆ ನಿಮ್ಮ ಬಗ್ಗೆಯೇ ಸ್ವಲ್ಪ ಸಂಶಯ ಮೂಡಿದೆ. ದಯವಿಟ್ಟು ಅದನ್ನು ದೂರ ಮಾಡಿ. ಅಲ್ಲ ನೀವೇ ಹೇಳಿದ್ದೀರಿ. ನೀವು ತನಿಖೆ ನಡೆಸಿದ ಅವಧಿಯಲ್ಲಿ ರಾಜ್ಯದಲ್ಲಿ 16,085 ಕೋಟಿ ರುಪಾಯಿ ಮೌಲ್ಯದ ಗಣಿ ಲೂಟಿ ಆಗಿದೆ ಎನ್ನುತ್ತಿದ್ದೀರಿ. ಅದರಲ್ಲಿ 'ಯಡಿಯೂರಪ್ಪ ಸಂಶಯಾಸ್ಪದ ರೀತಿಯಲ್ಲಿ 40 ಕೋಟಿ ರುಪಾಯಿ ಪಡೆದಿದ್ದಾರೆ' ಎಂದು ಹೇಳಿದ್ದೀರಿ.
ಸೋ, ಇಡೀ ವರದಿಯಲ್ಲಿ ನೀವು ಹೇಳುತ್ತಿರುವುದು ಯಡಿಯೂರಪ್ಪಗೆ ಅಕ್ರಮ ಗಣಿಯಿಂದ 40 ಕೋಟಿ ರು ಮಾತ್ರ ಸಂದಾಯವಾಗಿದೆ ಎಂದೇ? ಅಲ್ಲಿಗೆ ಯಡಿಯೂರಪ್ಪಗೆ 40 ಕೋಟಿ ಬಿಟ್ಟರೆ ಒಂದು ನಯಾ ಪೈಸೆಯೂ ಸಂದಾಯವಾಗಿಲ್ಲವೇ? ಅಂದರೆ ನಿಮ್ಮ 16,085 ಕೋಟಿ ರುಪಾಯಿ ಮೊತ್ತದಲ್ಲಿ ಯಡ್ಡಿ ಹೊಡೆದಿದ್ದು ಕೇವಲ 40 ಕೋಟಿ ಮಾತ್ರವೇ?
ಸ್ವಾಮಿ ಇಡೀ ಪ್ರಪಂಚಕ್ಕೆ ಗೊತ್ತಿರುವ ಗುಟ್ಟೊಂದನ್ನು ನಿಮಗೆ ಹೇಳುವೆ ಕೇಳಿಸಿಕೊಳ್ಳಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದುಕೊಂಡು 'ಗಣಿಗಾರಿಕೆ' ಯಿಂದ ಕೋಟ್ಯಂತರ ರುಪಾಯಿ ಗಳಿಸಿದ್ದಾರೆ. ಇದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಅಂತಹುದರಲ್ಲಿ ನೀವ್ಯಾಕೆ ಬರೀ 40 ಕೋಟಿ ಎಂದು ಹೇಳುತ್ತಿದ್ದೀರಿ.



Click it and Unblock the Notifications