Latest Updates
-
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ!
ಇದ್ಯಾವ ನ್ಯಾಯ, ನ್ಯಾ.ನಿಟ್ಟೆ ಸಂತೋಷ್ ಹೆಗಡೆ ಅವರೇ, ಉತ್ತರಿಸಿ...

ಯುವರ್ ಆನರ್. ನನಗೆ ನಿಮ್ಮ ಬಗ್ಗೆಯೇ ಸ್ವಲ್ಪ ಸಂಶಯ ಮೂಡಿದೆ. ದಯವಿಟ್ಟು ಅದನ್ನು ದೂರ ಮಾಡಿ. ಅಲ್ಲ ನೀವೇ ಹೇಳಿದ್ದೀರಿ. ನೀವು ತನಿಖೆ ನಡೆಸಿದ ಅವಧಿಯಲ್ಲಿ ರಾಜ್ಯದಲ್ಲಿ 16,085 ಕೋಟಿ ರುಪಾಯಿ ಮೌಲ್ಯದ ಗಣಿ ಲೂಟಿ ಆಗಿದೆ ಎನ್ನುತ್ತಿದ್ದೀರಿ. ಅದರಲ್ಲಿ 'ಯಡಿಯೂರಪ್ಪ ಸಂಶಯಾಸ್ಪದ ರೀತಿಯಲ್ಲಿ 40 ಕೋಟಿ ರುಪಾಯಿ ಪಡೆದಿದ್ದಾರೆ' ಎಂದು ಹೇಳಿದ್ದೀರಿ.
ಸೋ, ಇಡೀ ವರದಿಯಲ್ಲಿ ನೀವು ಹೇಳುತ್ತಿರುವುದು ಯಡಿಯೂರಪ್ಪಗೆ ಅಕ್ರಮ ಗಣಿಯಿಂದ 40 ಕೋಟಿ ರು ಮಾತ್ರ ಸಂದಾಯವಾಗಿದೆ ಎಂದೇ? ಅಲ್ಲಿಗೆ ಯಡಿಯೂರಪ್ಪಗೆ 40 ಕೋಟಿ ಬಿಟ್ಟರೆ ಒಂದು ನಯಾ ಪೈಸೆಯೂ ಸಂದಾಯವಾಗಿಲ್ಲವೇ? ಅಂದರೆ ನಿಮ್ಮ 16,085 ಕೋಟಿ ರುಪಾಯಿ ಮೊತ್ತದಲ್ಲಿ ಯಡ್ಡಿ ಹೊಡೆದಿದ್ದು ಕೇವಲ 40 ಕೋಟಿ ಮಾತ್ರವೇ?
ಸ್ವಾಮಿ ಇಡೀ ಪ್ರಪಂಚಕ್ಕೆ ಗೊತ್ತಿರುವ ಗುಟ್ಟೊಂದನ್ನು ನಿಮಗೆ ಹೇಳುವೆ ಕೇಳಿಸಿಕೊಳ್ಳಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದುಕೊಂಡು 'ಗಣಿಗಾರಿಕೆ' ಯಿಂದ ಕೋಟ್ಯಂತರ ರುಪಾಯಿ ಗಳಿಸಿದ್ದಾರೆ. ಇದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಅಂತಹುದರಲ್ಲಿ ನೀವ್ಯಾಕೆ ಬರೀ 40 ಕೋಟಿ ಎಂದು ಹೇಳುತ್ತಿದ್ದೀರಿ.



Click it and Unblock the Notifications