ಇದ್ಯಾವ ನ್ಯಾಯ, ನ್ಯಾ.ನಿಟ್ಟೆ ಸಂತೋಷ್ ಹೆಗಡೆ ಅವರೇ, ಉತ್ತರಿಸಿ...

By * ಶಂಭೋ ಶಂಕರ, ಬಸವನಗುಡಿ

illegal mining report by Santosh Hegde
ಬೆಂಗಳೂರು, ಜುಲೈ 28: ಅಂತೂ ಲೋಕಾಯುಕ್ತ 'ಗಣಿಗಾರಿಕೆ' ವರದಿಯಿಂದ ರಾಜ್ಯದ ಮುಖ್ಯಮಂತ್ರಿ ಪದವಿ ತ್ಯಾಗದ ಹಂತಕ್ಕೆ ಬಂದಿದ್ದಾರೆ. ಅದೆಲ್ಲ ಓಕೆ. ಯಡಿಯೂರಪ್ಪ ನಿರ್ಗಮಿಸಿದ್ದರೆ ಇಲ್ಲಿ ಯಾರೂ ಕಣ್ಣೀರು ಹಾಕುವುದಿಲ್ಲ, ಕೆಲವರನ್ನು ಬಿಟ್ಟು. ಅವರ ಪಾಪದ ಕೊಡ ತುಂಬಿತ್ತು. ಭ್ರಷ್ಟ, ಕೋಪಿಷ್ಠ ಮುಖ್ಯಮಂತ್ರಿ ತೊಲಗಿದರು ಎಂದೇ ಸಂಭ್ರಮಿಸುತ್ತಿದ್ದಾರೆ.

ಯುವರ್ ಆನರ್. ನನಗೆ ನಿಮ್ಮ ಬಗ್ಗೆಯೇ ಸ್ವಲ್ಪ ಸಂಶಯ ಮೂಡಿದೆ. ದಯವಿಟ್ಟು ಅದನ್ನು ದೂರ ಮಾಡಿ. ಅಲ್ಲ ನೀವೇ ಹೇಳಿದ್ದೀರಿ. ನೀವು ತನಿಖೆ ನಡೆಸಿದ ಅವಧಿಯಲ್ಲಿ ರಾಜ್ಯದಲ್ಲಿ 16,085 ಕೋಟಿ ರುಪಾಯಿ ಮೌಲ್ಯದ ಗಣಿ ಲೂಟಿ ಆಗಿದೆ ಎನ್ನುತ್ತಿದ್ದೀರಿ. ಅದರಲ್ಲಿ 'ಯಡಿಯೂರಪ್ಪ ಸಂಶಯಾಸ್ಪದ ರೀತಿಯಲ್ಲಿ 40 ಕೋಟಿ ರುಪಾಯಿ ಪಡೆದಿದ್ದಾರೆ' ಎಂದು ಹೇಳಿದ್ದೀರಿ.

ಸೋ, ಇಡೀ ವರದಿಯಲ್ಲಿ ನೀವು ಹೇಳುತ್ತಿರುವುದು ಯಡಿಯೂರಪ್ಪಗೆ ಅಕ್ರಮ ಗಣಿಯಿಂದ 40 ಕೋಟಿ ರು ಮಾತ್ರ ಸಂದಾಯವಾಗಿದೆ ಎಂದೇ? ಅಲ್ಲಿಗೆ ಯಡಿಯೂರಪ್ಪಗೆ 40 ಕೋಟಿ ಬಿಟ್ಟರೆ ಒಂದು ನಯಾ ಪೈಸೆಯೂ ಸಂದಾಯವಾಗಿಲ್ಲವೇ? ಅಂದರೆ ನಿಮ್ಮ 16,085 ಕೋಟಿ ರುಪಾಯಿ ಮೊತ್ತದಲ್ಲಿ ಯಡ್ಡಿ ಹೊಡೆದಿದ್ದು ಕೇವಲ 40 ಕೋಟಿ ಮಾತ್ರವೇ?

ಸ್ವಾಮಿ ಇಡೀ ಪ್ರಪಂಚಕ್ಕೆ ಗೊತ್ತಿರುವ ಗುಟ್ಟೊಂದನ್ನು ನಿಮಗೆ ಹೇಳುವೆ ಕೇಳಿಸಿಕೊಳ್ಳಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದುಕೊಂಡು 'ಗಣಿಗಾರಿಕೆ' ಯಿಂದ ಕೋಟ್ಯಂತರ ರುಪಾಯಿ ಗಳಿಸಿದ್ದಾರೆ. ಇದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಅಂತಹುದರಲ್ಲಿ ನೀವ್ಯಾಕೆ ಬರೀ 40 ಕೋಟಿ ಎಂದು ಹೇಳುತ್ತಿದ್ದೀರಿ.

English summary

Digging the Loyakuta report by Santosh Hegde, ಇದ್ಯಾವ ನ್ಯಾಯ ನ್ಯಾ. ನಿಟ್ಟೆ ಸಂತೋಷ್ ಹೆಗಡೆ ಅವರೇ, ಉತ್ತರಿಸಿ...

Digging the Loyakuta report by Santosh Hegde. Yes, our reader Shambo Shankara from Basavangudi has some quiries about illegal mining report submitted by Lokayukta Justice Santosh Hegde.
X
Desktop Bottom Promotion