Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಇದ್ಯಾವ ನ್ಯಾಯ, ನ್ಯಾ.ನಿಟ್ಟೆ ಸಂತೋಷ್ ಹೆಗಡೆ ಅವರೇ, ಉತ್ತರಿಸಿ...

ಯುವರ್ ಆನರ್. ನನಗೆ ನಿಮ್ಮ ಬಗ್ಗೆಯೇ ಸ್ವಲ್ಪ ಸಂಶಯ ಮೂಡಿದೆ. ದಯವಿಟ್ಟು ಅದನ್ನು ದೂರ ಮಾಡಿ. ಅಲ್ಲ ನೀವೇ ಹೇಳಿದ್ದೀರಿ. ನೀವು ತನಿಖೆ ನಡೆಸಿದ ಅವಧಿಯಲ್ಲಿ ರಾಜ್ಯದಲ್ಲಿ 16,085 ಕೋಟಿ ರುಪಾಯಿ ಮೌಲ್ಯದ ಗಣಿ ಲೂಟಿ ಆಗಿದೆ ಎನ್ನುತ್ತಿದ್ದೀರಿ. ಅದರಲ್ಲಿ 'ಯಡಿಯೂರಪ್ಪ ಸಂಶಯಾಸ್ಪದ ರೀತಿಯಲ್ಲಿ 40 ಕೋಟಿ ರುಪಾಯಿ ಪಡೆದಿದ್ದಾರೆ' ಎಂದು ಹೇಳಿದ್ದೀರಿ.
ಸೋ, ಇಡೀ ವರದಿಯಲ್ಲಿ ನೀವು ಹೇಳುತ್ತಿರುವುದು ಯಡಿಯೂರಪ್ಪಗೆ ಅಕ್ರಮ ಗಣಿಯಿಂದ 40 ಕೋಟಿ ರು ಮಾತ್ರ ಸಂದಾಯವಾಗಿದೆ ಎಂದೇ? ಅಲ್ಲಿಗೆ ಯಡಿಯೂರಪ್ಪಗೆ 40 ಕೋಟಿ ಬಿಟ್ಟರೆ ಒಂದು ನಯಾ ಪೈಸೆಯೂ ಸಂದಾಯವಾಗಿಲ್ಲವೇ? ಅಂದರೆ ನಿಮ್ಮ 16,085 ಕೋಟಿ ರುಪಾಯಿ ಮೊತ್ತದಲ್ಲಿ ಯಡ್ಡಿ ಹೊಡೆದಿದ್ದು ಕೇವಲ 40 ಕೋಟಿ ಮಾತ್ರವೇ?
ಸ್ವಾಮಿ ಇಡೀ ಪ್ರಪಂಚಕ್ಕೆ ಗೊತ್ತಿರುವ ಗುಟ್ಟೊಂದನ್ನು ನಿಮಗೆ ಹೇಳುವೆ ಕೇಳಿಸಿಕೊಳ್ಳಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದುಕೊಂಡು 'ಗಣಿಗಾರಿಕೆ' ಯಿಂದ ಕೋಟ್ಯಂತರ ರುಪಾಯಿ ಗಳಿಸಿದ್ದಾರೆ. ಇದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಅಂತಹುದರಲ್ಲಿ ನೀವ್ಯಾಕೆ ಬರೀ 40 ಕೋಟಿ ಎಂದು ಹೇಳುತ್ತಿದ್ದೀರಿ.



Click it and Unblock the Notifications











