Just In
- 1 hr ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 4 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 13 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 14 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News ನೇಹಾ ಕೊಲೆಗೆ ಸಿಎಂ ತೀವ್ರ ಖಂಡನೆ: ಕೊಲೆಗಾರನಿಗೆ ಶಿಕ್ಷೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
- Automobiles Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
26 ವರ್ಷಗಳ ದಕ್ಷ ಸೇವೆ: 'ಸೊಸೈಟಿ' ಸ್ವಾಮಿ ಹೆಗ್ಗಳಿಕೆ
ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಅಗಸನಪುರದಲ್ಲಿ ಮುಗಿಸಿದ ನಾಗರಾಜಸ್ವಾಮಿ, ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಕನಕಪುರ ತಾಲೂಕಿನ ಮರಳೇಗವಿ ಮಠದಲ್ಲಿ ಪೂರೈಸಿದರು. ಬಳಿಕ ಅವರು ಕಾಲೇಜು ವಿದ್ಯಾಭ್ಯಾಸವನ್ನು ಮದ್ದೂರು ತಾಲೂಕಿನ ಭಾರತೀನಗರದ ಭಾರತೀ ಕಾಲೇಜಿನಲ್ಲಿ ಮಾಡಿದರು.
ಇವರು ವಾಣಿಜ್ಯ ಪದವಿಯನ್ನು 1984ರಲ್ಲಿ ಮುಗಿಸಿ ಉದ್ಯೋಗಕ್ಕಾಗಿ ಬೆಂಗಳೂರಿಗೆ 1985ರಲ್ಲಿ ಬಂದು, ಹೈಗ್ರೌಂಡ್ಸ್ನಲ್ಲಿರುವ ಬಸವ ಸಮಿತಿಯಲ್ಲಿ ಬೆರಳಚ್ಚುಗಾರನಾಗಿ ಆರು ತಿಂಗಳು ಸೇವೆ ಸಲ್ಲಿಸಿದ್ದಾರೆ.
1985ರ ಜುಲೈ 29ರಂದು ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಎರಡನೇ ದರ್ಜೆ ಸಹಾಯಕ ಹುದ್ದೆಗೆ ಸೇರಿಕೊಂಡರು. 7 ವರ್ಷಗಳ ಸೇವೆಯಲ್ಲಿ ಇವರ ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಪರಿಗಣಿಸಿದ ಆಡಳಿತ ಮಂಡಳಿ, 1992ರಲ್ಲಿ ಸಹಾಯಕ ಹುದ್ದೆಗೆ ಬಡ್ತಿ ನೀಡಿತು.
ಉತ್ತಮ
ಕಾರ್ಯನಿರ್ವಹಣಾಧಿಕಾರಿ:
ಆ
ಹುದ್ದೆಯಲ್ಲಿ
ಮೂರು
ವರ್ಷ
ಪೂರೈಸುವಷ್ಟರಲ್ಲಿ
1995ರ
ಜುಲೈನಲ್ಲಿ
ಇವರ
ಕಾರ್ಯದಕ್ಷತೆ
ಪರಿಗಣಿಸಿ
ಆಡಳಿತ
ಮಂಡಳಿ
ಮತ್ತೊಂದು
ಬಡ್ತಿ
ನೀಡಿತು.
ಅದು
ಸಹಕಾರ
ಸಂಘದ
ಅತ್ಯುನ್ನತ
ಹುದ್ದೆಯಾದ
ಕಾರ್ಯದರ್ಶಿ.
ಇದೀಗ
ಅವರು
ಪೂರೈಸಿರುವ
ಸೇವಾವಧಿ
26
ವರ್ಷಗಳು.
2010ರ
ಸೆಪ್ಟಂಬರ್
ತಿಂಗಳಲ್ಲಿ
ಅವರ
25
ವರ್ಷಗಳ
ಅನುಪಮ
ಸೇವೆಯನ್ನು
ಪರಿಗಣಿಸಿ
ಅಡಳಿತ
ಮಂಡಳಿ
ಸಂಘದ
ಸರ್ವಸದಸ್ಯರ
ಸಭೆಯಲ್ಲಿ
ಆತ್ಮೀಯವಾಗಿ
ಅಭಿನಂದಿಸಿದೆ.
2006ರ ನವೆಂಬರ್ ತಿಂಗಳಲ್ಲಿ ಸರ್ಕಾರದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಲ ನಿಯಮಿತವು ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ನಾಗರಾಜಸ್ವಾಮಿ ಅವರಿಗೆ ಉತ್ತಮ ಕಾರ್ಯನಿರ್ವಹಣಾಧಿಕಾರಿ ಎಂದು ಗೌರವಿಸಿದೆ.
ಕ.ಪ.ಸ.ಸಂಘ ಇಂದು ಸ್ವಂತ ಕಟ್ಟಡ ಹೊಂದಿದ್ದು, ಅಗಾಧವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಸದಸ್ಯರಿಂದ ಸಾಮಾನ್ಯ ಸದಸ್ಯರವರೆಗೆ ಆಡಳಿತ ಮಂಡಳಿ ಶ್ರಮದ ಜೊತೆ ಜೊತೆಗೆ ನಾಗರಾಜಸ್ವಾಮಿ ಅವರ ಪಾತ್ರವನ್ನು ಎಲ್ಲರೂ ಮುಕ್ತ ಕಂಠದಿಂದ ಹೊಗಳುತ್ತಾರೆ.
ಆಡಳಿತದಲ್ಲಿ ಕನ್ನಡ ಎಂಬ ಘೋಷವಾಕ್ಯವನ್ನು ಕನ್ನಡ ಪ್ರೇಮಿಯಾದ ನಾಗರಾಜಸ್ವಾಮಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಅಕ್ಷರಶಃ ಜಾರಿಗೆ ತಂದಿದ್ದಾರೆ.