Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಹನಿಮೂನ್ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದ ಪತಿ ಕರೆದುಕೊಂಡು ಹೋಗಿದ್ದು ಅಯೋಧ್ಯೆಗೆ : ವಿಚ್ಛೇದನ ಕೇಳಿದ ಪತ್ನಿ
ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಕಾರಣಕ್ಕೆ ವಿಚ್ಛೇದನ ಆಗುತ್ತಿದೆ, ಆದರೆ ಈ ವಿಚ್ಛೇದನಕ್ಕೆ ಕಾರಣ ಮಾತ್ರ ವಿಚಿತ್ರದಲ್ಲಿ ವಿಚಿತ್ರವಾಗಿದೆ. ಗಂಡ ಹನಿಮೂನ್ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದಕ್ಕೆ ಇವರ ದಾಂಪತ್ಯ ಜೀವನ ಕೋರ್ಟ್ ಕಟೆಕಟೆ ಹತ್ತಿದೆ, ಅಷ್ಟಕ್ಕೂ ಏನಿದು ಈ ಸಂಸಾರ ವಿಚಿತ್ರ ಕತೆ ವ್ಯಥೆ ನೋಡೋಣ ಮಾಡೋಣ ಬನ್ನಿ...

ಹನಿಮೂನ್ ಕನಸು ಚಮರಿದಾಗ
ಮದುವೆಯಾದ ಬಹುತೇಕ ಜೋಡಿಗೆ ಸ ಹನಿಮೂನ್ಗೆ ಹೋಗಬೇಕು ಎಂಬ ಆಸೆ ಇರುತ್ತದೆ, ಗಂಡ ನನ್ನನ್ನು ಯಾವುದಾದರು ಸ್ಥಳದ ಹೆಸರು ಹೇಳಿ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ ಎಂದಾಗ ನೂರಾರು ಕನಸುಗಳು ಗರಿಕೆದರುವುದು. ಹನಿಮೂನ್ಗಾಗಿ ಶಾಪಿಂಗ್ ಎಲ್ಲಾ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ಅಪ್ಲೋಟ್ ಮಾಡಬೇಕು ಎಂದೆಲ್ಲಾ ಕನಸು ಕಂಡಿರುತ್ತಾರೆ, ಅದೇ ಹನಿಮೂನ್ಗೆ ಹೋಗದೇ ಇದ್ದಾಗ ಬರುವ ಕೋಪ ಅಷ್ಟಿಷ್ಟಲ್ಲ, ಆದರೆ ಈಕೆ ಮಾತ್ರ ಒಂದು ಸ್ಟೆಪ್ ಮುಂದೆ ಹೋಗಿ ವಿಚ್ಛೇದನ ಬೇಕೆಂದು ಕೇಳಿದ್ದಾಳೆ.
ಮದುವೆಯಾಗಿ 5 ತಿಂಗಳಾಗಿತ್ತು ಅಷ್ಟೇ
ಈ ಜೋಡಿ 2023 ಆಗಸ್ಟ್ನಲ್ಲಿ ಮದುವೆಯಾಗಿದ್ದರು. ಭೋಪಲ್ನ ಪಿಪ್ಲಾನಿ ಎಂಬಲ್ಲಿ ವಾಸಿಸುತ್ತಿರುವವರು. ಗಂಡ ಹನಿಮೂನ್ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ, ಈಕೆಯೂ ಗೋವಾದಲ್ಲಿ ಬೀಚ್ನಲ್ಲಿ ಗಂಡನ ಕೈ ಕೈ ಹಿಡಿದು ನಡೆಯುವ ಕನಸು ಕಂಡಿದ್ದಳು, ಆದರೆ ಗಂಡ ಕರೆದುಕೊಂಡು ಹೋಗಿದ್ದು ಅಯೋಧ್ಯೆಗೆ!
ಕೈತುಂಬಾ ಸಂಬಳ ಪಡೆಯುತ್ತಿದ್ದ ಗಂಡ
ಗಂಡ ಐಟಿ ಕೆಲಸ ಮಾಡುತ್ತಿರುವುದರಿಂದ ಸಂಬಳ ಚೆನ್ನಾಗಿಯೇ ಇತ್ತು, ಮೊದಲಿಗೆ ಆಕೆ ವಿದೇಶಕ್ಕೆ ಟ್ರಿಪ್ ಹೋಗುವ ಆಸೆ ವ್ಯಕ್ತಪಡಿಸಿದ್ದಳು, ಅವನು ನನ್ನ ಪೋಷಕರಿಗೆ ಹುಷಾರಿಲ್ಲ ವಿದೇಶಕ್ಕೆ ಬೇಡ ಗೋವಾ, ದಕ್ಷಿಣ ಭಾರತಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ, ಆಕೆಯೂ ಒಪ್ಪಿಕೊಂಡಿದ್ದಳು, ಆದರೆ ಆತ ಕೊನೆಗೆ ತನ್ನ ಪ್ಲ್ಯಾನ್ ಚೇಂಜ್ ಮಾಡಿ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಬಂದವಳೇ ಸೀದಾ ಫ್ಯಾಮಿಲಿ ಕೋರ್ಟ್ಗೆ ಹೋಗಿ ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದಾಳೆ, ಇದೀಗ ಕೋರ್ಟ್ ಇವರಿಬ್ಬರಿಗೆ ಕೌನ್ಸಿಲಿಂಗ್ ನೀಡಿ ಮನವೊಲಿಸಲು ಪ್ರಯತ್ನ ಮಾಡಿದೆ.
ಹೊಂದಾಣಿಕೆಯೇ ಸಂಸಾರದ ಗುಟ್ಟು
ಇಬ್ಬರು ಒಬ್ಬರನ್ನೊಬ್ಬರು ಹೊಂದಿಕೊಂಡು ಹೋಗಲು ಪ್ರಯತ್ನಸಬೇಕು, ಅಲ್ಲದೆ ಆತ ಅಯೋಧ್ಯೆಗೆ ಕರೆದುಕೊಂಡು ಹೋಗುವ ಮುನ್ನ ಪತ್ನಿಯ ಮನವೊಲಿಸಬೇಕಿತ್ತು ಅಥವಾ ಅಯೋಧ್ಯೆಯಿಂದ ಬಂದ ತಕ್ಷಣ ಗೋವಾ ಪ್ಲ್ಯಾನ್ ಮಾಡಬೇಕಾಗಿತ್ತು, ಆದರೆ ಆತ ಅವಳ ಭಾವನೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾನೆ, ಆಕೆಗೆ ಅಯೋಧ್ಯೆಗೆ ಹೋದ ಬಗ್ಗೆ ಬೇಸರವಿರಲ್ಲ, ಬಹುಶಃ ಆತನ ವರ್ತನೆ ಬಗ್ಗೆ ಬೇಸರವಿದ್ದಿರಬೇಕು, ಹಾಗಾಗಿ ಅವಳ ವಿಚ್ಛೇದನ ಪಡೆಯಲು ಬಯಸಿರಬಹುದು.



Click it and Unblock the Notifications
