Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಹನಿಮೂನ್ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದ ಪತಿ ಕರೆದುಕೊಂಡು ಹೋಗಿದ್ದು ಅಯೋಧ್ಯೆಗೆ : ವಿಚ್ಛೇದನ ಕೇಳಿದ ಪತ್ನಿ
ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಕಾರಣಕ್ಕೆ ವಿಚ್ಛೇದನ ಆಗುತ್ತಿದೆ, ಆದರೆ ಈ ವಿಚ್ಛೇದನಕ್ಕೆ ಕಾರಣ ಮಾತ್ರ ವಿಚಿತ್ರದಲ್ಲಿ ವಿಚಿತ್ರವಾಗಿದೆ. ಗಂಡ ಹನಿಮೂನ್ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದಕ್ಕೆ ಇವರ ದಾಂಪತ್ಯ ಜೀವನ ಕೋರ್ಟ್ ಕಟೆಕಟೆ ಹತ್ತಿದೆ, ಅಷ್ಟಕ್ಕೂ ಏನಿದು ಈ ಸಂಸಾರ ವಿಚಿತ್ರ ಕತೆ ವ್ಯಥೆ ನೋಡೋಣ ಮಾಡೋಣ ಬನ್ನಿ...

ಹನಿಮೂನ್ ಕನಸು ಚಮರಿದಾಗ
ಮದುವೆಯಾದ ಬಹುತೇಕ ಜೋಡಿಗೆ ಸ ಹನಿಮೂನ್ಗೆ ಹೋಗಬೇಕು ಎಂಬ ಆಸೆ ಇರುತ್ತದೆ, ಗಂಡ ನನ್ನನ್ನು ಯಾವುದಾದರು ಸ್ಥಳದ ಹೆಸರು ಹೇಳಿ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ ಎಂದಾಗ ನೂರಾರು ಕನಸುಗಳು ಗರಿಕೆದರುವುದು. ಹನಿಮೂನ್ಗಾಗಿ ಶಾಪಿಂಗ್ ಎಲ್ಲಾ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ಅಪ್ಲೋಟ್ ಮಾಡಬೇಕು ಎಂದೆಲ್ಲಾ ಕನಸು ಕಂಡಿರುತ್ತಾರೆ, ಅದೇ ಹನಿಮೂನ್ಗೆ ಹೋಗದೇ ಇದ್ದಾಗ ಬರುವ ಕೋಪ ಅಷ್ಟಿಷ್ಟಲ್ಲ, ಆದರೆ ಈಕೆ ಮಾತ್ರ ಒಂದು ಸ್ಟೆಪ್ ಮುಂದೆ ಹೋಗಿ ವಿಚ್ಛೇದನ ಬೇಕೆಂದು ಕೇಳಿದ್ದಾಳೆ.
ಮದುವೆಯಾಗಿ 5 ತಿಂಗಳಾಗಿತ್ತು ಅಷ್ಟೇ
ಈ ಜೋಡಿ 2023 ಆಗಸ್ಟ್ನಲ್ಲಿ ಮದುವೆಯಾಗಿದ್ದರು. ಭೋಪಲ್ನ ಪಿಪ್ಲಾನಿ ಎಂಬಲ್ಲಿ ವಾಸಿಸುತ್ತಿರುವವರು. ಗಂಡ ಹನಿಮೂನ್ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ, ಈಕೆಯೂ ಗೋವಾದಲ್ಲಿ ಬೀಚ್ನಲ್ಲಿ ಗಂಡನ ಕೈ ಕೈ ಹಿಡಿದು ನಡೆಯುವ ಕನಸು ಕಂಡಿದ್ದಳು, ಆದರೆ ಗಂಡ ಕರೆದುಕೊಂಡು ಹೋಗಿದ್ದು ಅಯೋಧ್ಯೆಗೆ!
ಕೈತುಂಬಾ ಸಂಬಳ ಪಡೆಯುತ್ತಿದ್ದ ಗಂಡ
ಗಂಡ ಐಟಿ ಕೆಲಸ ಮಾಡುತ್ತಿರುವುದರಿಂದ ಸಂಬಳ ಚೆನ್ನಾಗಿಯೇ ಇತ್ತು, ಮೊದಲಿಗೆ ಆಕೆ ವಿದೇಶಕ್ಕೆ ಟ್ರಿಪ್ ಹೋಗುವ ಆಸೆ ವ್ಯಕ್ತಪಡಿಸಿದ್ದಳು, ಅವನು ನನ್ನ ಪೋಷಕರಿಗೆ ಹುಷಾರಿಲ್ಲ ವಿದೇಶಕ್ಕೆ ಬೇಡ ಗೋವಾ, ದಕ್ಷಿಣ ಭಾರತಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ, ಆಕೆಯೂ ಒಪ್ಪಿಕೊಂಡಿದ್ದಳು, ಆದರೆ ಆತ ಕೊನೆಗೆ ತನ್ನ ಪ್ಲ್ಯಾನ್ ಚೇಂಜ್ ಮಾಡಿ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಬಂದವಳೇ ಸೀದಾ ಫ್ಯಾಮಿಲಿ ಕೋರ್ಟ್ಗೆ ಹೋಗಿ ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದಾಳೆ, ಇದೀಗ ಕೋರ್ಟ್ ಇವರಿಬ್ಬರಿಗೆ ಕೌನ್ಸಿಲಿಂಗ್ ನೀಡಿ ಮನವೊಲಿಸಲು ಪ್ರಯತ್ನ ಮಾಡಿದೆ.
ಹೊಂದಾಣಿಕೆಯೇ ಸಂಸಾರದ ಗುಟ್ಟು
ಇಬ್ಬರು ಒಬ್ಬರನ್ನೊಬ್ಬರು ಹೊಂದಿಕೊಂಡು ಹೋಗಲು ಪ್ರಯತ್ನಸಬೇಕು, ಅಲ್ಲದೆ ಆತ ಅಯೋಧ್ಯೆಗೆ ಕರೆದುಕೊಂಡು ಹೋಗುವ ಮುನ್ನ ಪತ್ನಿಯ ಮನವೊಲಿಸಬೇಕಿತ್ತು ಅಥವಾ ಅಯೋಧ್ಯೆಯಿಂದ ಬಂದ ತಕ್ಷಣ ಗೋವಾ ಪ್ಲ್ಯಾನ್ ಮಾಡಬೇಕಾಗಿತ್ತು, ಆದರೆ ಆತ ಅವಳ ಭಾವನೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾನೆ, ಆಕೆಗೆ ಅಯೋಧ್ಯೆಗೆ ಹೋದ ಬಗ್ಗೆ ಬೇಸರವಿರಲ್ಲ, ಬಹುಶಃ ಆತನ ವರ್ತನೆ ಬಗ್ಗೆ ಬೇಸರವಿದ್ದಿರಬೇಕು, ಹಾಗಾಗಿ ಅವಳ ವಿಚ್ಛೇದನ ಪಡೆಯಲು ಬಯಸಿರಬಹುದು.



Click it and Unblock the Notifications