Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪ್ರೀತಿ ಮುರಿದು ಬಿತ್ತು, ಜೀವನ ಏನೆಂಬುದು ಅರ್ಥವಾಯಿತು
ಪ್ರೀತಿ ಮುರಿದು ಬಿದ್ದಾಗ ಆಗುವಂತಹ ನೋವು ಸಹಿಸಲು ಅಸಾಧ್ಯ. ಕೆಲವೊಮ್ಮೆ ನೋವಿನಿಂದಾಗಿ ಖಿನ್ನತೆ ಕೂಡ ಕಾಡುವುದಿದೆ. ಆದರೆ ಒಂದು ಹಂತವನ್ನು ದಾಟಿದ ಬಳಿಕ ನಡೆದಿರುವುದು ಎಲ್ಲವೂ ಒಳ್ಳೆಯದೇ ಎನ್ನುವ ಭಾವನೆ ಮೂಡುತ್ತದೆ.
ಯೌವನದಲ್ಲಿ ಕೆಲವೊಮ್ಮೆ ನಾವು ನಮ್ಮದೇ ಆದ ಲೋಕದಲ್ಲಿರುತ್ತೇವೆ. ಜೀವನ ಹಾಗೂ ವೃತ್ತಿಯನ್ನು ಕಟ್ಟಿಕೊಳ್ಳುವಂತಹ ಸಂದರ್ಭದಲ್ಲಿ ಪ್ರೀತಿ ಪ್ರೇಮ ಎನ್ನುವ ಪಾಶಕ್ಕೆ ಸಿಲುಕಿ ಅದೇ ಲೋಕದಲ್ಲಿ ತೇಲುತ್ತಾ ಇರುತ್ತೇವೆ. ಕಾಲೇಜು ಹಾಗೂ ಕಚೇರಿಗಳಲ್ಲಿ ಮೂಡುವಂತಹ ಇಂತಹ ಪ್ರೇಮ ಸಂಬಂಧಗಳು ಮುರಿದು ಬೀಳುವುದೇ ಹೆಚ್ಚು.

ಸಂಬಂಧ ಮುರಿದು ಬಿದ್ದಾಗ ಆಗುವಂತಹ ನೋವು ಸಹಿಸಲು ಅಸಾಧ್ಯ. ಕೆಲವೊಮ್ಮೆ ನೋವಿನಿಂದಾಗಿ ಖಿನ್ನತೆ ಕೂಡ ಕಾಡುವುದಿದೆ. ಆದರೆ ಒಂದು ಹಂತವನ್ನು ದಾಟಿದ ಬಳಿಕ ನಡೆದಿರುವುದು ಎಲ್ಲವೂ ಒಳ್ಳೆಯದಕ್ಕೆ ಮತ್ತು ಇನ್ನು ನಡೆಯುವುದು ಎಲ್ಲವೂ ಒಳ್ಳೆಯದೇ ಎನ್ನುವ ಭಾವನೆ ಮೂಡುತ್ತದೆ. ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..!
ಪ್ರೀತಿಯ ಸಂಬಂಧ ಮುರಿದು ಬೀಳುವುದರಿಂದ ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿತುಕೊಳ್ಳುತ್ತೇವೆ. ಇಂತಹ ಕೆಲವು ಘಟನೆಗಳೇ ವ್ಯಕ್ತಿಯನ್ನು ಜೀವನದಲ್ಲಿ ಉನ್ನತಿಗೇರಿಸುತ್ತದೆ. ಪ್ರೀತಿಯ ಸಂಬಂಧ ಮುರಿದು ಹೃದಯ ಒಡೆಯುವುದರಿಂದ ಯಾವ ಪಾಠಗಳನ್ನು ಕಲಿತುಕೊಳ್ಳಬಹುದು ಎಂದು ತಿಳಿಯುವ.
*ಜೀವನದಲ್ಲಿ ವ್ಯಕ್ತಿಯೊಬ್ಬ ನಿಮ್ಮಿಂದ ದೂರವಾದಾಗ ಅಲ್ಲಿಗೆ ಜೀವನ ಅಂತ್ಯವಾಯಿತೆಂದು ನೀವು ಭಾವಿಸಬಾರದು. ನೀವು ಇನ್ನು ಜೀವನ ಸಾಗಿಸಬಹುದಾಗಿದೆ. ಹೃದಯ ಒಡೆದು ಹೋಗುವುದರಿಂದ ವಾಸ್ತವವನ್ನು ಅರಿತುಕೊಳ್ಳಲು ನಿಮಗೆ ನೆರವಾಗುತ್ತದೆ ಮತ್ತು ನೀವು ವಿಶೇಷವಾದವರಲ್ಲ ಎನ್ನುವುದನ್ನು ಅರಿತುಕೊಳ್ಳುವಂತೆ ಮಾಡುವುದು. ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?
*ಹೃದಯ ಒಡೆದು ಹೋಗುವುದರಿಂದ ನಿಮ್ಮ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಯಾವುದೇ ವ್ಯಕ್ತಿ ನಮಗೆ ಆಘಾತ ನೀಡುವ ತನಕ ನಾವು ನಮ್ಮೊಳಗೆ ನೋಡುವುದೇ ಇಲ್ಲ ಮತ್ತು ಹಲವಾರು ಬದಲಾವಣೆ ಮಾಡಿಕೊಳ್ಳುತ್ತೇವೆ. ಹೃದಯ ಒಡೆಯುವುದರಿಂದ ನಾವು ಪ್ರೌಢ ಹಾಗೂ ಬುದ್ಧಿವಂತರಾಗುತ್ತೇವೆ. ಇದು ನಿಮ್ಮನ್ನು ಭಿನ್ನ ವ್ಯಕ್ತಿಯನ್ನಾಗಿ ಮಾಡುತ್ತದೆ.
*ಘಟನೆ ಬಳಿಕ ನೀವು ಸಮಾಜವನ್ನು ಬೇರೆ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ. ಪ್ರೀತಿಯಲ್ಲಿ ಮುಳುಗಿದ್ದಾಗ ನಿಮಗೆ ಅದರ ಅನುಭವವೇ ಶ್ರೇಷ್ಠ ಎಂದೆನಿಸುತ್ತದೆ. ಆದರೆ ಹೃದಯ ಒಡೆದ ಬಳಿಕ ನೈಜ ಸಂತೋಷ ಎಲ್ಲಿದೆಯೆಂದು ನಿಮಗೆ ತಿಳಿಯುತ್ತದೆ. ಸುಳ್ಳು ಅಭಿಲಾಷೆ ಹಾಗೂ ನಿರೀಕ್ಷೆಗಳನ್ನು ನೀವು ನಿಲ್ಲಿಸುತ್ತೀರಿ. ಪ್ರೀತಿ-ಕಾಮ, ಒಂದೇ ನಾಣ್ಯದ ಎರಡು ಮುಖವಿದ್ದಂತೆ...
*ಯಾರನ್ನೂ ಕೂಡ ಹೆಚ್ಚಾಗಿ ಹಚ್ಚಿಕೊಳ್ಳಬಾರದು ಎಂದು ಹೃದಯ ಒಡೆದು ಹೋಗುವುದರಿಂದ ತಿಳಿಯುತ್ತದೆ. ಪ್ರೀತಿ ಮತ್ತು ಒಬ್ಬರನ್ನು ಹಚ್ಚಿಕೊಳ್ಳುವುದು ತುಂಬಾ ಭಿನ್ನ. ನಿಮ್ಮ ಎಲ್ಲಾ ಕಲ್ಪನೆಗಳನ್ನು ಇದು ಬುಡಮೇಲು ಮಾಡುತ್ತದೆ.
*ನಿಮ್ಮ ಜತೆಗಾರ/ಜತೆಗಾರ್ತಿ ನಿಮ್ಮನ್ನು ಬಿಟ್ಟು ಬದುಕಲ್ಲ ಎಂದು ಭಾವಿಸಿ ಇರುತ್ತೀರಿ. ನಿಮ್ಮನ್ನು ಬಿಟ್ಟ ಬಳಿಕ ಯಾವುದೇ ಸಮಸ್ಯೆಯಿಲ್ಲದೆ ಜೀವಿಸಲು ಆರಂಭಿಸಿದಾಗ ಎಲ್ಲಾ ಸತ್ಯ ನಿಮಗೆ ಅರ್ಥವಾಗುತ್ತದೆ.



Click it and Unblock the Notifications





