Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಪ್ರೀತಿ ಮುರಿದು ಬಿತ್ತು, ಜೀವನ ಏನೆಂಬುದು ಅರ್ಥವಾಯಿತು
ಪ್ರೀತಿ ಮುರಿದು ಬಿದ್ದಾಗ ಆಗುವಂತಹ ನೋವು ಸಹಿಸಲು ಅಸಾಧ್ಯ. ಕೆಲವೊಮ್ಮೆ ನೋವಿನಿಂದಾಗಿ ಖಿನ್ನತೆ ಕೂಡ ಕಾಡುವುದಿದೆ. ಆದರೆ ಒಂದು ಹಂತವನ್ನು ದಾಟಿದ ಬಳಿಕ ನಡೆದಿರುವುದು ಎಲ್ಲವೂ ಒಳ್ಳೆಯದೇ ಎನ್ನುವ ಭಾವನೆ ಮೂಡುತ್ತದೆ.
ಯೌವನದಲ್ಲಿ ಕೆಲವೊಮ್ಮೆ ನಾವು ನಮ್ಮದೇ ಆದ ಲೋಕದಲ್ಲಿರುತ್ತೇವೆ. ಜೀವನ ಹಾಗೂ ವೃತ್ತಿಯನ್ನು ಕಟ್ಟಿಕೊಳ್ಳುವಂತಹ ಸಂದರ್ಭದಲ್ಲಿ ಪ್ರೀತಿ ಪ್ರೇಮ ಎನ್ನುವ ಪಾಶಕ್ಕೆ ಸಿಲುಕಿ ಅದೇ ಲೋಕದಲ್ಲಿ ತೇಲುತ್ತಾ ಇರುತ್ತೇವೆ. ಕಾಲೇಜು ಹಾಗೂ ಕಚೇರಿಗಳಲ್ಲಿ ಮೂಡುವಂತಹ ಇಂತಹ ಪ್ರೇಮ ಸಂಬಂಧಗಳು ಮುರಿದು ಬೀಳುವುದೇ ಹೆಚ್ಚು.

ಸಂಬಂಧ ಮುರಿದು ಬಿದ್ದಾಗ ಆಗುವಂತಹ ನೋವು ಸಹಿಸಲು ಅಸಾಧ್ಯ. ಕೆಲವೊಮ್ಮೆ ನೋವಿನಿಂದಾಗಿ ಖಿನ್ನತೆ ಕೂಡ ಕಾಡುವುದಿದೆ. ಆದರೆ ಒಂದು ಹಂತವನ್ನು ದಾಟಿದ ಬಳಿಕ ನಡೆದಿರುವುದು ಎಲ್ಲವೂ ಒಳ್ಳೆಯದಕ್ಕೆ ಮತ್ತು ಇನ್ನು ನಡೆಯುವುದು ಎಲ್ಲವೂ ಒಳ್ಳೆಯದೇ ಎನ್ನುವ ಭಾವನೆ ಮೂಡುತ್ತದೆ. ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..!
ಪ್ರೀತಿಯ ಸಂಬಂಧ ಮುರಿದು ಬೀಳುವುದರಿಂದ ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿತುಕೊಳ್ಳುತ್ತೇವೆ. ಇಂತಹ ಕೆಲವು ಘಟನೆಗಳೇ ವ್ಯಕ್ತಿಯನ್ನು ಜೀವನದಲ್ಲಿ ಉನ್ನತಿಗೇರಿಸುತ್ತದೆ. ಪ್ರೀತಿಯ ಸಂಬಂಧ ಮುರಿದು ಹೃದಯ ಒಡೆಯುವುದರಿಂದ ಯಾವ ಪಾಠಗಳನ್ನು ಕಲಿತುಕೊಳ್ಳಬಹುದು ಎಂದು ತಿಳಿಯುವ.
*ಜೀವನದಲ್ಲಿ ವ್ಯಕ್ತಿಯೊಬ್ಬ ನಿಮ್ಮಿಂದ ದೂರವಾದಾಗ ಅಲ್ಲಿಗೆ ಜೀವನ ಅಂತ್ಯವಾಯಿತೆಂದು ನೀವು ಭಾವಿಸಬಾರದು. ನೀವು ಇನ್ನು ಜೀವನ ಸಾಗಿಸಬಹುದಾಗಿದೆ. ಹೃದಯ ಒಡೆದು ಹೋಗುವುದರಿಂದ ವಾಸ್ತವವನ್ನು ಅರಿತುಕೊಳ್ಳಲು ನಿಮಗೆ ನೆರವಾಗುತ್ತದೆ ಮತ್ತು ನೀವು ವಿಶೇಷವಾದವರಲ್ಲ ಎನ್ನುವುದನ್ನು ಅರಿತುಕೊಳ್ಳುವಂತೆ ಮಾಡುವುದು. ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?
*ಹೃದಯ ಒಡೆದು ಹೋಗುವುದರಿಂದ ನಿಮ್ಮ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಯಾವುದೇ ವ್ಯಕ್ತಿ ನಮಗೆ ಆಘಾತ ನೀಡುವ ತನಕ ನಾವು ನಮ್ಮೊಳಗೆ ನೋಡುವುದೇ ಇಲ್ಲ ಮತ್ತು ಹಲವಾರು ಬದಲಾವಣೆ ಮಾಡಿಕೊಳ್ಳುತ್ತೇವೆ. ಹೃದಯ ಒಡೆಯುವುದರಿಂದ ನಾವು ಪ್ರೌಢ ಹಾಗೂ ಬುದ್ಧಿವಂತರಾಗುತ್ತೇವೆ. ಇದು ನಿಮ್ಮನ್ನು ಭಿನ್ನ ವ್ಯಕ್ತಿಯನ್ನಾಗಿ ಮಾಡುತ್ತದೆ.
*ಘಟನೆ ಬಳಿಕ ನೀವು ಸಮಾಜವನ್ನು ಬೇರೆ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ. ಪ್ರೀತಿಯಲ್ಲಿ ಮುಳುಗಿದ್ದಾಗ ನಿಮಗೆ ಅದರ ಅನುಭವವೇ ಶ್ರೇಷ್ಠ ಎಂದೆನಿಸುತ್ತದೆ. ಆದರೆ ಹೃದಯ ಒಡೆದ ಬಳಿಕ ನೈಜ ಸಂತೋಷ ಎಲ್ಲಿದೆಯೆಂದು ನಿಮಗೆ ತಿಳಿಯುತ್ತದೆ. ಸುಳ್ಳು ಅಭಿಲಾಷೆ ಹಾಗೂ ನಿರೀಕ್ಷೆಗಳನ್ನು ನೀವು ನಿಲ್ಲಿಸುತ್ತೀರಿ. ಪ್ರೀತಿ-ಕಾಮ, ಒಂದೇ ನಾಣ್ಯದ ಎರಡು ಮುಖವಿದ್ದಂತೆ...
*ಯಾರನ್ನೂ ಕೂಡ ಹೆಚ್ಚಾಗಿ ಹಚ್ಚಿಕೊಳ್ಳಬಾರದು ಎಂದು ಹೃದಯ ಒಡೆದು ಹೋಗುವುದರಿಂದ ತಿಳಿಯುತ್ತದೆ. ಪ್ರೀತಿ ಮತ್ತು ಒಬ್ಬರನ್ನು ಹಚ್ಚಿಕೊಳ್ಳುವುದು ತುಂಬಾ ಭಿನ್ನ. ನಿಮ್ಮ ಎಲ್ಲಾ ಕಲ್ಪನೆಗಳನ್ನು ಇದು ಬುಡಮೇಲು ಮಾಡುತ್ತದೆ.
*ನಿಮ್ಮ ಜತೆಗಾರ/ಜತೆಗಾರ್ತಿ ನಿಮ್ಮನ್ನು ಬಿಟ್ಟು ಬದುಕಲ್ಲ ಎಂದು ಭಾವಿಸಿ ಇರುತ್ತೀರಿ. ನಿಮ್ಮನ್ನು ಬಿಟ್ಟ ಬಳಿಕ ಯಾವುದೇ ಸಮಸ್ಯೆಯಿಲ್ಲದೆ ಜೀವಿಸಲು ಆರಂಭಿಸಿದಾಗ ಎಲ್ಲಾ ಸತ್ಯ ನಿಮಗೆ ಅರ್ಥವಾಗುತ್ತದೆ.



Click it and Unblock the Notifications
















