Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಪ್ರೇಮಿಗಳ ಬಗ್ಗೆ ಕವಿಗಳ ಸಾಲು..! ಕನ್ನಡದ ಫೇಮಸ್ ಕವನಗಳು ಇಲ್ಲಿವೆ..!
ಪ್ರೇಮಿಗಳ ದಿನಕ್ಕೆಂದೇ ಮೀಸಲಿರುವ ಒಂದು ದಿನ ಈ ಪ್ರೇಮಿಗಳ ದಿನ. ಈ ದಿನದಂದು ನಿಮ್ಮ ಗೆಳಯ ಅಥವಾ ಗೆಳತಿಗೆ ಅವರ ಮನಸ್ಸಿನಲ್ಲಿರುವ ಭಾವನೆಯನ್ನು ಹೇಳ ಬಸುಸುತ್ತಾರೆ. ಇಂದು ಎಲ್ಲಾ ಪ್ರೇಮಿಗಳು ತಮ್ಮ ಮನದ ಆಸೆಯನ್ನು ಹೊರಹಾಕುವ ದಿನವಾಗಿದೆ. ಈ ದಿನ ಹಲವು ಪ್ರೇಮಿಗಳು ವಿಶೇಷವಾಗಿರಿಸಲು ಇಷ್ಟಪಡುತ್ತಾರೆ. ಇಡೀ ದಿನ ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಲು ಇಷ್ಟಪಡುತ್ತಾರೆ.
ಇನ್ನು ಪ್ರೇಮಿಗಳಿ ಅಂದಕೂಡಲೇ ನಮಗೆ ಹಲವರ ಹೆಸರುಗಳು ನೆನೆಪಿಗೆ ಬರುತ್ತವೆ. ರೋಮಿಯೋ ಜೂಲಿಯೆಟ್, ಸಲೀಂ ಅನಾರ್ಕಲಿ, ದುಷ್ಯಂತ ಶಾಕುಂತಲೆ ಹೀಗೆ ಹಲವರು ಹೆಸರು ನೆನಪಿಗೆ ಬರುತ್ತದೆ. ಇನ್ನು ನಮ್ಮ ಕನ್ನಡ ಸಿನಿಮಾದಲ್ಲೂ ಕೆಲವು ಡೈಲಾಗ್ಗಳು, ಹಾಡುಗಳು ಪ್ರೇಮಿಗಳ ಕುರಿತು ಹೇಳಲಾಗಿದೆ. ಇವರಲ್ಲದೆ ನಮ್ಮ ಕವಿಗಳು ಸಹ ಪ್ರೀತಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ.
ಹಾಗಾದರೆ ನಾವಿಂದು ಕನ್ನಡದ ಕೆಲವು ಫೇಮಸ್ ಹಾಡುಗಳ ಸಾಲುಗಳು, ಸಿನಿಮಾ ಡೈಲಾಗ್ಗಳು ಹಾಗೂ ಪ್ರೇಮ ಕವಿಗಳು ಬರೆದಿರುವ ಕೆಲವು ಕವಿತೆಗಳ ಸಾಲನ್ನು ನೋಡೋಣ.

ನನ್ನಷ್ಟು ನಿಮ್ಮನ್ನ ಇಷ್ಟ ಪಡೋನು
ಈ ಭೂಮಿ ಮೇಲೆ ಇನ್ಯಾರು ಸಿಗಲ್ಲ ಕಂಡ್ರಿ
ಕಣ್ಣು ನೋಡಿ ಪ್ರೀತಿ ಶುರುವಾಯ್ತು ಅಂತಾರೆ,
ಆದ್ರೆ ನಾನು ನಿನ್ ಕಾಲು ನೀಡಿ ಪ್ರೀತಿ ಮಾಡಿದ್ದೀನಿ
ಮೈನಾ ನಂಗೆ ಈ ಜಗತ್ತಲ್ಲೇ ಅತೀ ಹೆಚ್ಚು ಸುಖ ಅಂದ್ರೆ ನಿನ್ ನಗು
ಅನಿಸುತ್ತಿದೆ ಯಾಕೋ ಇಂದು ನೀನೇನೆ ನನ್ನವಳೆಂದು,
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಯಾರದು ದೃಷ್ಟಿ ತಾಗಲ್ಲ ನಮಗೆಂದಿಗೂ
ಆಣೆ ಮಾಡಿ ಹೇಳುತ್ತೀನಿ
ನಿನ್ನ ಬಿಟ್ಟು ಹೋಗಲ್ಲ ಎಂದೆಂದಿಗೂ
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ"
ಕೆ.ಎಸ್.ನರಸಿಂಹಸ್ವಾಮಿ
ಹಾಲು, ಹೂವು, ಜೊನ್ನ, ಜೇನುಎಲ್ಲ ಸೇರಿಯಾದೆ ನೀನು!
ಹಾಲಿಗಿಂತ ಕೆನ್ನೆ ಸವಿ:
ಹೂವಿಗಿಂತ ಕಣ್ಣೆ ಸವಿ:
ಜೊನ್ನಕ್ಕಿಂತ ನಗೆಯೇ ಸವಿ;
ಜೇನಿಗಿಂತ ಮುತ್ತೆ ಸವಿ;
ಹಾಲು ಸವಿ, ಜೇನು ಸವಿ;
ಹಾಲು, ಜೇನುಗಳನು ಮೀರಿ
ನೀನೆ ನನಗೆ ಹೆಚ್ಚು ಸವಿ,
ಕುವೆಂಪು
ಅವಳು ನಾಕ;ಅವಳು ನರಕ;
ನಾಕ ಜೊತೆಯೊಳಿದ್ದರೆ,
ನರಕ ದೂರ ಹೋದರೆ
ಕುವೆಂಪು
ಪ್ರೀತಿ ಇಲ್ಲದ ಮೇಲೆ
ಹೂವು ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡನೆ ಕೆಳಗಿಳಿದು
ನೆಲಕ್ಕೆ ಹಸಿರು ಮೂಡಿತು ಹೇಗೆ?
ಜಿಎಸ್ ಶಿವರುದ್ರಪ್ಪ
ಬಲುದೂರ ದೂರ ನೀನಾಗಿ
ಹೊಂಗನಸ ನಡುವೆ ದನಿಯಾಗಿ
ಕಾದಿರಲು ನಾನು ನಿನಗಾಗಿ
ನೀ ಬರುವೆ ಚಲುವೆ ಹೊಳೆಯಾಗಿ
ಕೆ.ಎಸ್ ನರಸಿಂಹಸ್ವಾಮಿ
ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ ಕೆನ್ನೆ ತುಂಬಾ ಮುತ್ತು
ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗುತ್ತ ಜೀವಫಲವ ತುಟಿಗೆ ಹಾಲು-ಜೇನು
ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕೋ!
ದ.ರಾ. ಬೇಂದ್ರೆ



Click it and Unblock the Notifications










