Latest Updates
-
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ!
ಪ್ರೇಮಿಗಳ ಬಗ್ಗೆ ಕವಿಗಳ ಸಾಲು..! ಕನ್ನಡದ ಫೇಮಸ್ ಕವನಗಳು ಇಲ್ಲಿವೆ..!
ಪ್ರೇಮಿಗಳ ದಿನಕ್ಕೆಂದೇ ಮೀಸಲಿರುವ ಒಂದು ದಿನ ಈ ಪ್ರೇಮಿಗಳ ದಿನ. ಈ ದಿನದಂದು ನಿಮ್ಮ ಗೆಳಯ ಅಥವಾ ಗೆಳತಿಗೆ ಅವರ ಮನಸ್ಸಿನಲ್ಲಿರುವ ಭಾವನೆಯನ್ನು ಹೇಳ ಬಸುಸುತ್ತಾರೆ. ಇಂದು ಎಲ್ಲಾ ಪ್ರೇಮಿಗಳು ತಮ್ಮ ಮನದ ಆಸೆಯನ್ನು ಹೊರಹಾಕುವ ದಿನವಾಗಿದೆ. ಈ ದಿನ ಹಲವು ಪ್ರೇಮಿಗಳು ವಿಶೇಷವಾಗಿರಿಸಲು ಇಷ್ಟಪಡುತ್ತಾರೆ. ಇಡೀ ದಿನ ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಲು ಇಷ್ಟಪಡುತ್ತಾರೆ.
ಇನ್ನು ಪ್ರೇಮಿಗಳಿ ಅಂದಕೂಡಲೇ ನಮಗೆ ಹಲವರ ಹೆಸರುಗಳು ನೆನೆಪಿಗೆ ಬರುತ್ತವೆ. ರೋಮಿಯೋ ಜೂಲಿಯೆಟ್, ಸಲೀಂ ಅನಾರ್ಕಲಿ, ದುಷ್ಯಂತ ಶಾಕುಂತಲೆ ಹೀಗೆ ಹಲವರು ಹೆಸರು ನೆನಪಿಗೆ ಬರುತ್ತದೆ. ಇನ್ನು ನಮ್ಮ ಕನ್ನಡ ಸಿನಿಮಾದಲ್ಲೂ ಕೆಲವು ಡೈಲಾಗ್ಗಳು, ಹಾಡುಗಳು ಪ್ರೇಮಿಗಳ ಕುರಿತು ಹೇಳಲಾಗಿದೆ. ಇವರಲ್ಲದೆ ನಮ್ಮ ಕವಿಗಳು ಸಹ ಪ್ರೀತಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ.
ಹಾಗಾದರೆ ನಾವಿಂದು ಕನ್ನಡದ ಕೆಲವು ಫೇಮಸ್ ಹಾಡುಗಳ ಸಾಲುಗಳು, ಸಿನಿಮಾ ಡೈಲಾಗ್ಗಳು ಹಾಗೂ ಪ್ರೇಮ ಕವಿಗಳು ಬರೆದಿರುವ ಕೆಲವು ಕವಿತೆಗಳ ಸಾಲನ್ನು ನೋಡೋಣ.

ನನ್ನಷ್ಟು ನಿಮ್ಮನ್ನ ಇಷ್ಟ ಪಡೋನು
ಈ ಭೂಮಿ ಮೇಲೆ ಇನ್ಯಾರು ಸಿಗಲ್ಲ ಕಂಡ್ರಿ
ಕಣ್ಣು ನೋಡಿ ಪ್ರೀತಿ ಶುರುವಾಯ್ತು ಅಂತಾರೆ,
ಆದ್ರೆ ನಾನು ನಿನ್ ಕಾಲು ನೀಡಿ ಪ್ರೀತಿ ಮಾಡಿದ್ದೀನಿ
ಮೈನಾ ನಂಗೆ ಈ ಜಗತ್ತಲ್ಲೇ ಅತೀ ಹೆಚ್ಚು ಸುಖ ಅಂದ್ರೆ ನಿನ್ ನಗು
ಅನಿಸುತ್ತಿದೆ ಯಾಕೋ ಇಂದು ನೀನೇನೆ ನನ್ನವಳೆಂದು,
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಯಾರದು ದೃಷ್ಟಿ ತಾಗಲ್ಲ ನಮಗೆಂದಿಗೂ
ಆಣೆ ಮಾಡಿ ಹೇಳುತ್ತೀನಿ
ನಿನ್ನ ಬಿಟ್ಟು ಹೋಗಲ್ಲ ಎಂದೆಂದಿಗೂ
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ"
ಕೆ.ಎಸ್.ನರಸಿಂಹಸ್ವಾಮಿ
ಹಾಲು, ಹೂವು, ಜೊನ್ನ, ಜೇನುಎಲ್ಲ ಸೇರಿಯಾದೆ ನೀನು!
ಹಾಲಿಗಿಂತ ಕೆನ್ನೆ ಸವಿ:
ಹೂವಿಗಿಂತ ಕಣ್ಣೆ ಸವಿ:
ಜೊನ್ನಕ್ಕಿಂತ ನಗೆಯೇ ಸವಿ;
ಜೇನಿಗಿಂತ ಮುತ್ತೆ ಸವಿ;
ಹಾಲು ಸವಿ, ಜೇನು ಸವಿ;
ಹಾಲು, ಜೇನುಗಳನು ಮೀರಿ
ನೀನೆ ನನಗೆ ಹೆಚ್ಚು ಸವಿ,
ಕುವೆಂಪು
ಅವಳು ನಾಕ;ಅವಳು ನರಕ;
ನಾಕ ಜೊತೆಯೊಳಿದ್ದರೆ,
ನರಕ ದೂರ ಹೋದರೆ
ಕುವೆಂಪು
ಪ್ರೀತಿ ಇಲ್ಲದ ಮೇಲೆ
ಹೂವು ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡನೆ ಕೆಳಗಿಳಿದು
ನೆಲಕ್ಕೆ ಹಸಿರು ಮೂಡಿತು ಹೇಗೆ?
ಜಿಎಸ್ ಶಿವರುದ್ರಪ್ಪ
ಬಲುದೂರ ದೂರ ನೀನಾಗಿ
ಹೊಂಗನಸ ನಡುವೆ ದನಿಯಾಗಿ
ಕಾದಿರಲು ನಾನು ನಿನಗಾಗಿ
ನೀ ಬರುವೆ ಚಲುವೆ ಹೊಳೆಯಾಗಿ
ಕೆ.ಎಸ್ ನರಸಿಂಹಸ್ವಾಮಿ
ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ ಕೆನ್ನೆ ತುಂಬಾ ಮುತ್ತು
ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗುತ್ತ ಜೀವಫಲವ ತುಟಿಗೆ ಹಾಲು-ಜೇನು
ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕೋ!
ದ.ರಾ. ಬೇಂದ್ರೆ



Click it and Unblock the Notifications





















