Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಪ್ರೇಮಿಗಳ ಬಗ್ಗೆ ಕವಿಗಳ ಸಾಲು..! ಕನ್ನಡದ ಫೇಮಸ್ ಕವನಗಳು ಇಲ್ಲಿವೆ..!
ಪ್ರೇಮಿಗಳ ದಿನಕ್ಕೆಂದೇ ಮೀಸಲಿರುವ ಒಂದು ದಿನ ಈ ಪ್ರೇಮಿಗಳ ದಿನ. ಈ ದಿನದಂದು ನಿಮ್ಮ ಗೆಳಯ ಅಥವಾ ಗೆಳತಿಗೆ ಅವರ ಮನಸ್ಸಿನಲ್ಲಿರುವ ಭಾವನೆಯನ್ನು ಹೇಳ ಬಸುಸುತ್ತಾರೆ. ಇಂದು ಎಲ್ಲಾ ಪ್ರೇಮಿಗಳು ತಮ್ಮ ಮನದ ಆಸೆಯನ್ನು ಹೊರಹಾಕುವ ದಿನವಾಗಿದೆ. ಈ ದಿನ ಹಲವು ಪ್ರೇಮಿಗಳು ವಿಶೇಷವಾಗಿರಿಸಲು ಇಷ್ಟಪಡುತ್ತಾರೆ. ಇಡೀ ದಿನ ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಲು ಇಷ್ಟಪಡುತ್ತಾರೆ.
ಇನ್ನು ಪ್ರೇಮಿಗಳಿ ಅಂದಕೂಡಲೇ ನಮಗೆ ಹಲವರ ಹೆಸರುಗಳು ನೆನೆಪಿಗೆ ಬರುತ್ತವೆ. ರೋಮಿಯೋ ಜೂಲಿಯೆಟ್, ಸಲೀಂ ಅನಾರ್ಕಲಿ, ದುಷ್ಯಂತ ಶಾಕುಂತಲೆ ಹೀಗೆ ಹಲವರು ಹೆಸರು ನೆನಪಿಗೆ ಬರುತ್ತದೆ. ಇನ್ನು ನಮ್ಮ ಕನ್ನಡ ಸಿನಿಮಾದಲ್ಲೂ ಕೆಲವು ಡೈಲಾಗ್ಗಳು, ಹಾಡುಗಳು ಪ್ರೇಮಿಗಳ ಕುರಿತು ಹೇಳಲಾಗಿದೆ. ಇವರಲ್ಲದೆ ನಮ್ಮ ಕವಿಗಳು ಸಹ ಪ್ರೀತಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ.
ಹಾಗಾದರೆ ನಾವಿಂದು ಕನ್ನಡದ ಕೆಲವು ಫೇಮಸ್ ಹಾಡುಗಳ ಸಾಲುಗಳು, ಸಿನಿಮಾ ಡೈಲಾಗ್ಗಳು ಹಾಗೂ ಪ್ರೇಮ ಕವಿಗಳು ಬರೆದಿರುವ ಕೆಲವು ಕವಿತೆಗಳ ಸಾಲನ್ನು ನೋಡೋಣ.

ನನ್ನಷ್ಟು ನಿಮ್ಮನ್ನ ಇಷ್ಟ ಪಡೋನು
ಈ ಭೂಮಿ ಮೇಲೆ ಇನ್ಯಾರು ಸಿಗಲ್ಲ ಕಂಡ್ರಿ
ಕಣ್ಣು ನೋಡಿ ಪ್ರೀತಿ ಶುರುವಾಯ್ತು ಅಂತಾರೆ,
ಆದ್ರೆ ನಾನು ನಿನ್ ಕಾಲು ನೀಡಿ ಪ್ರೀತಿ ಮಾಡಿದ್ದೀನಿ
ಮೈನಾ ನಂಗೆ ಈ ಜಗತ್ತಲ್ಲೇ ಅತೀ ಹೆಚ್ಚು ಸುಖ ಅಂದ್ರೆ ನಿನ್ ನಗು
ಅನಿಸುತ್ತಿದೆ ಯಾಕೋ ಇಂದು ನೀನೇನೆ ನನ್ನವಳೆಂದು,
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಯಾರದು ದೃಷ್ಟಿ ತಾಗಲ್ಲ ನಮಗೆಂದಿಗೂ
ಆಣೆ ಮಾಡಿ ಹೇಳುತ್ತೀನಿ
ನಿನ್ನ ಬಿಟ್ಟು ಹೋಗಲ್ಲ ಎಂದೆಂದಿಗೂ
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ"
ಕೆ.ಎಸ್.ನರಸಿಂಹಸ್ವಾಮಿ
ಹಾಲು, ಹೂವು, ಜೊನ್ನ, ಜೇನುಎಲ್ಲ ಸೇರಿಯಾದೆ ನೀನು!
ಹಾಲಿಗಿಂತ ಕೆನ್ನೆ ಸವಿ:
ಹೂವಿಗಿಂತ ಕಣ್ಣೆ ಸವಿ:
ಜೊನ್ನಕ್ಕಿಂತ ನಗೆಯೇ ಸವಿ;
ಜೇನಿಗಿಂತ ಮುತ್ತೆ ಸವಿ;
ಹಾಲು ಸವಿ, ಜೇನು ಸವಿ;
ಹಾಲು, ಜೇನುಗಳನು ಮೀರಿ
ನೀನೆ ನನಗೆ ಹೆಚ್ಚು ಸವಿ,
ಕುವೆಂಪು
ಅವಳು ನಾಕ;ಅವಳು ನರಕ;
ನಾಕ ಜೊತೆಯೊಳಿದ್ದರೆ,
ನರಕ ದೂರ ಹೋದರೆ
ಕುವೆಂಪು
ಪ್ರೀತಿ ಇಲ್ಲದ ಮೇಲೆ
ಹೂವು ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡನೆ ಕೆಳಗಿಳಿದು
ನೆಲಕ್ಕೆ ಹಸಿರು ಮೂಡಿತು ಹೇಗೆ?
ಜಿಎಸ್ ಶಿವರುದ್ರಪ್ಪ
ಬಲುದೂರ ದೂರ ನೀನಾಗಿ
ಹೊಂಗನಸ ನಡುವೆ ದನಿಯಾಗಿ
ಕಾದಿರಲು ನಾನು ನಿನಗಾಗಿ
ನೀ ಬರುವೆ ಚಲುವೆ ಹೊಳೆಯಾಗಿ
ಕೆ.ಎಸ್ ನರಸಿಂಹಸ್ವಾಮಿ
ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ ಕೆನ್ನೆ ತುಂಬಾ ಮುತ್ತು
ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗುತ್ತ ಜೀವಫಲವ ತುಟಿಗೆ ಹಾಲು-ಜೇನು
ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕೋ!
ದ.ರಾ. ಬೇಂದ್ರೆ



Click it and Unblock the Notifications





















