Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಗಾತಿಯಲ್ಲಿ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ನೀವೇನು ಮಾಡಬೇಕು?
ಇತ್ತೀಚೆಗೆ ಏಕೋ ನಿಮ್ಮ ಸಂಗಾತಿ ಮೊದಲಿನಂತೆ ಇಲ್ಲ. ತುಂಬಾ ಬೇಸರದಿಂದ ಇದ್ದಂತೆ ಕಾಣುತ್ತಾರೆ, ನೀವು ಏನಾದರೂ ಮಾತನಾಡಿದರೆ ಸಿಡುಕುತ್ತಾರೆ, ಚಿಕ್ಕ ವಿಷಯಕ್ಕೆ ಕಿರುಚಾಡಿ ದೊಡ್ಡ ರಂಪ ಮಾಡುತ್ತಾರೆ. ಕಾರಣವಿಲ್ಲದೆ ಅಳುತ್ತಾರೆ, ಯಾರ ಜೊತೆ ಬೆರೆಯುತ್ತಿಲ್ಲ ಈ ರೀತಿ ಸ್ವಭಾವದಲ್ಲಿ ತುಂಬಾ ಬದಲಾವಣೆ ಕಂಡು ಬಂದಾಗ ಅವರು ಏಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಸಿಟ್ಟಾಗಬೇಡಿ, ಈ ಸಮಯದಲ್ಲಿ ಅವರಿಗೆ ನಿಮ್ಮ ಅವಶ್ಯಕತೆ ತುಂಬಾನೇ ಇರುತ್ತದೆ, ಏಕೆಂದರೆ ಅವರು ಖಿನ್ನತೆಯಿಂದ ಬಳಲುತ್ತಿರಬಹುದು. ಅವರ ವರ್ತನೆ ನಿಮಗೆ ಕಿರಿಕಿರಿ ಆಯ್ತೆಂದು ನೀವು ಅವರನ್ನು ನಿರ್ಲಕ್ಷ್ಯ ಮಾಡಿದರೆ ಅವರು ಅವರು ಖಿನ್ನತೆಗೆ ಜಾರುವ ಸಾಧ್ಯತೆ ಹೆಚ್ಚುವುದು.
ಸಂಗಾತಿಯಲ್ಲಿ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ಈ ಪ್ರಯತ್ನ ಮಾಡಿದರೆ ಅವರನ್ನು ಖಿನ್ನತೆಯಿಂದ ಹೊರತರಬಹುದು, ನೀವಿಬ್ಬರು ಖುಷಿಯ ಜೀವನ ನಡೆಸಬಹುದು:

ಮೊದಲಿಗೆ ಖಿನ್ನತೆಯ ಬಗ್ಗೆ ತಿಳಿದುಕೊಳ್ಳಿ'
ಕೆಲವೊಮ್ಮೆ ಯಾವ ಕಾರಣದಿಂದ ಅವರು ಖಿನ್ನತೆಗೆ ಜಾರಿದ್ದಾರೆ ಎಂಬುವುದು ನಿಮಗೆ ತಿಳಿದಿರುತ್ತದೆ, ಇನ್ನು ಕೆಲವೊಮ್ಮೆ ನಿಖರ ಕಾರ್ಣ ನಿಮಗೆ ತಿಳಿದಿರುವುದಿಲ್ಲ, ಅವರು ಹೇಳಿರುವುದೂ ಇಲ್ಲಆದರೆ ಅವರು ಖಿನ್ನತೆಯಿಂದಲೇ ಬಳಲುತ್ತಿದ್ದಾರೆ ಎಂಬುವುದನ್ನು ಈ ಲಕ್ಷಣಗಳ ಮೂಲಕ ಕಂಡು ಹಿಡಿಯಬಹುದು
* ತುಂಬಾ ಬೇಸರದಿಂದ ಇರುವುದು, ಭರವಸೆ ಕಳೆದುಕೊಳ್ಳುವುದು
* ಹೊಟ್ಟೆ ಹಸಿವು ಇಲ್ಲದಿರುವುದು ಅಥವಾ ತುಂಬಾನೇ ತಿನ್ನುವುದು
* ನಿದ್ದೆ ಸರಿಯಾಗಿ ಮಾಡದಿರುವುದು
* ತಲೆಸುತ್ತು
* ಉದ್ವೇಗ
* ಅನಾವಶ್ಯಕವಾಗಿ ಕೋಪಗೊಳ್ಳುವುದು
* ಒಂದು ನಿರ್ಧಾರ ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗದಿರುವುದು
* ಸಾವಿನ ಬಗ್ಗೆ ಮಾತನಾಡುವುದು
* ದೈಹಿಕವಾಗಿ ಕೆಲವು ಬದಲಾವಣೆ ಕಂಡು ಬರುವುದು
ಅವರಿಗೆ ಬೆಂಬಲ ನೀಡಿ
ಅವರಿಗೆ ಈ ಸಮಯದಲ್ಲಿ ನಾನು ಒಂಟಿ ಎಂದು ಅನಿಸುತ್ತಿರುತ್ತದೆ, ನೀವು ಅವರಿಗೆ ಬೆಂಬಲ ನೀಡಿ. ನಿಮಗೆ ಅವರ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಧ್ಯವಾಗದಿರಬಹುದು, ಆದರೆ ಅವರ ಮಾತನ್ನು ಕೇಳಿ
* ಏನಾಯ್ತು, ನನ್ನ ಹತ್ರ ಹೇಳಿ
* ನನ್ನ ಜೀವನದಲ್ಲಿ ನೀವೇ ಎಲ್ಲ, ಏನೇ ಬರಲಿ ಜೊತೆಯಾಗಿ ಎದುರಿಸೋಣ
ಎಂಥದ್ದೇ ಪರಿಸ್ಥಿತಿ ಇರಲಿ ನಿಮ್ಮ ಜೊತೆ ಸದಾ ನಾನು ಇರುತ್ತೇನೆ ಎಂದು ಅವರಿಗೆ ಭರವಸೆ ನೀಡಿ.
* ಚಿಕಿತ್ಸೆಗೆ ಕರೆದುಕೊಂಡು ಹೋಗಿ
ಅವರು ಚಿಕಿತ್ಸೆಗೆ ಬರಲು ಒಪ್ಪುವುದಿಲ್ಲ, ಆದರೆ ನೀವು ಮನವೊಲಿಸಿ, ಅವರಿಗೆ ಈ ಸಮಯದಲ್ಲಿ ಚಿಕಿತ್ಸೆ ನೀಡಬೇಕಾಗಿರುವುದು ಅನಿವಾರ್ಯ.
* ಅವರ ಜೊತೆ ಮಾತನಾಡಿ, ಅವರ ಔಷಧಗಳನ್ನು ಸರಿಯಾದ ಸಮಯಕ್ಕೆ ನೀಡಿ.
ಮನೆಯ ವಾತಾವರಣ ಲವಲವಿಕೆಯಿಂದ ಕೂಡಿರಲಿ
* ಮನೆಯ ವಾತಾವರಣವನ್ನು ಖುಷಿಯಿಂದ ಇಡಿ, ಅವರು ಬೇಸರದಲ್ಲಿದ್ದಾಗ ನೀವು ಬೇಸರದಿಂದ ಇರಬೇಡಿ, ಅವರಿಗೆ ಖುಷಿಯಾಗುವಂತೆ ನಡೆದುಕೊಳ್ಳಿ
* ವ್ಯಾಯಾಮ ಮಾಡಿಸಿ
* ಅವರಿಗೆ ಆರೋಗ್ಯಕರ ಆಹಾರ ನೀಡಿ
* ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ.
* ಜೊತೆಯಾಗಿ ಭವಿಷ್ಯದ ಪ್ಲ್ಯಾನ್ ಮಾಡಿ
* ಅವರ ಜೊತೆ ಇರುವವರಿಗೂ ಅವರನ್ನು ಖುಷಿಯಾಗಿ ಇರುವಂತೆ ನೋಡಿಕೊಳ್ಳಲು ಹೇಳಿ. ಈ ಸಮಯದಲ್ಲಿ ಅವರ ಸ್ನೇಹಿತರ ಸಹಾಯ ಮಾಡಿ. ಎಷ್ಟೋ ಬಾರಿ ನಿಮ್ಮ ಬಳಿ ಹಂಚಿಕೊಳ್ಳದ ವಿಷಯ ಅವರ ಬಳಿ ಹಂಚಿಕೊಂಡು ಮನಸ್ಸು ಹಗುರ ಮಾಡಬಹುದು.
ಇವೆಲ್ಲಾ ಆತ್ಮಹತ್ಯೆಯ ಸೂಚನೆಗಳು, ಆದ್ದರಿಂದ ನಿರ್ಲಕ್ಷ್ಯ ಮಾಡಬೇಡಿ
* ಆತ್ಮಹತ್ಯೆಯ ಮಾತು ಬರುವುದು
* ಆತ್ಮಹತ್ಯೆಗೆ ಯತ್ನಿಸುವುದು
* ಸಾಮಾಜಿಕವಾಗಿ ಬೆರೆಯದೆ ಇರುವುದು
* ಅವರ ದಿನಚರಿಯಲ್ಲಿ ಬದಲಾವಣೆ ಕಂಡು ಬರುವುದು
* ಅತಿಯಾಗಿ ಕುಡಿಯುವುದು ಅಥವಾ ಸ್ವನಾಶದ ಮಾರ್ಗ ಅನುಸರಿಸುವುದು
* ತನ್ನ ವಸ್ತುಗಳ ಕಡೆ ಗಮನಹರಿಸದಿರುವುದು
* ನಾನು ಇಲ್ಲದಿದ್ದಾಗ ಏನಾಗಬೇಕೆಂಬ ಸಿದ್ಧತೆ ಮಾಡಿಕೊಳ್ಳುವುದು
ಅವರಲ್ಲಿನ ಖಿನ್ನತೆ ಹೋಗಲಾಡಿಸುವುದು ಹೇಗೆ?
* ಚಿಕಿತ್ಸೆಯ ಜೊತೆಗೆ ಅವರ ಮಾತುಗಳನ್ನು ಕೇಳಿ
* ಅವರ ಮಾತಿಗೆ ವಿರುದ್ಧವಾಗಿ ಏನನ್ನೂ ಹೇಳಲು ಹೋಗಬೇಡಿ
* ಅವರನ್ನು ಸಮಧಾನ ಪಡಿಸಿ
* ಅವರ ಜೊತೆ ಸದಾ ನೀವು ಇರುತ್ತೀರಿ ಎಂಬ ಬೆಂಬಲ ನೀಡಿ
* ಅವರ ಜೊತೆ ಪ್ರೀತಿಯಿಂದ ವರ್ತಿಸಿ
* ಅವರನ್ನು ಮೊದಲಿಗಿಂತಲೂ ಹೆಚ್ಚಾಗಿ ಆರೈಕೆ ಮಾಡಿ. ಹೀಗೆ ಮಾಡುವುದರಿಂದ ಅವರನ್ನು ಖಿನ್ನತೆಯಿಂದ ಹೊರಬರಲು ಸಹಾರ ಮಾಡಿ.



Click it and Unblock the Notifications